Posts

ಅಮ್ಮನ ಮಡಿಲು.. ಅಪ್ಪನ ಹೆಗಲು

Image
 ಅಮ್ಮನ ಮಡಿಲು.. ಅಪ್ಪನ ಹೆಗಲು ಬುಧವಾರ ಸುಮಾರು 12 ಗಂಟೆ ಸಮಯದಲ್ಲಿ ಮನೆಗೆ ಬರ್ತಾ ಇದ್ದೆ. ಸಣ್ಣಗೆ ಹನಿ ಹಾಕ್ತಾ ಇತ್ತು.... ಕೆಂಪು ದೀಪ ಅಡ್ಡ ಬಂತು ಅಂತ ನನ್ನ ಗಾಡಿಯನ್ನು ನಿಲ್ಲಿಸ್ದೆ.... ಪಕ್ಕದಲ್ಲಿ ಸ್ಕೂಟರ್ ನ ಮುಂದಿನ ಜಾಗದಲ್ಲಿ ನಿಂತಿದ್ದ ಮಗುವಿನ ಕಣ್ಣಲ್ಲಿ ನೀರು ಹರೀತಿತ್ತು.... ಮನಸ್ಸು ತಡೆಯದೆ ಕೇಳಿದೆ ' ಯಾಕೋ ಮರಿ ಅಳ್ತಾ ಇದ್ದೀಯಾ'  ಅಂತ. ಉತ್ತರ ಕೊಟ್ಟಿದ್ದು ಮಗುವಿನ ಅಮ್ಮ... ನೋಡಿ ಹನಿ ಬರ್ತಾ ಇದೆ ತಲೆ ಮೇಲೆ ಟೋಪಿ ಹಾಕು ಅಂದ್ರೆ ಬೇಡ ಅಂತ ಹಠ ಮಾಡ್ತಾಳೆ.... ಕೋಪ ಬಂತು ತಲೆ ಮೇಲೆ ಮಟಕ್ದೆ.. ಅದಕ್ಕೆ ಅಳು.    ಮಗು ಅಮ್ಮನ ತೊಡೇನ ತಬ್ಬಿ ಕೊಳ್ತು, ಅಮ್ಮ ಮಗುನ ಮುದ್ದು ಮಾಡಿ ಕಣ್ಣೀರು ಒರೆಸಿದ್ಲು ಅಷ್ಟರಲ್ಲಿ ಹಸಿರು ದೀಪ ಬಂತು ನನ್ನ ದಾರಿ ನಾನು ಹಿಡಿದೆ.   ಅಮ್ಮನಿಂದನೆ ನೋವಾಗಿದ್ರು, ಅಮ್ಮನ ಪ್ರೀತಿಯ ಅಪ್ಪುಗೆ ಆ ಮಗುವಿಗೆ ಸಮಾಧಾನ ಕೊಡ್ತು... ಅದೇ ಅಲ್ವಾ ಅಮ್ಮನ ಅಪ್ಪುಗೆಯ ವಿಶೇಷತೆ. "ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು... ನಿನ್ನ ಸಂಗ ಆಡಲೆಂದು ಬಂದೆ ನಾನು...." ಕಪ್ಪು ಬಿಳುಪು ಚಿತ್ರದ ಈ ಹಾಡಿನ ದೃಶ್ಯದಲ್ಲಿ ಕಲ್ಪನಾ ಅವರ ಅಭಿನಯ ನೋಡಿದಾಗ ಅಮ್ಮನ ತೋಳಿನ ಹಿತವಾದ ಅನುಭವದ ಕಲ್ಪನೆ ತಾನಾಗಿ ನಮ್ಮ ಮುಂದೆ ಬರುತ್ತದೆ ಮನೆಯಲ್ಲಿ ಹೆಂಡತಿ ಇರಲಿಲ್ಲ, ನಾನೊಬ್ಬನೇ... ಸಂಜೆಯಾದರೆ ಮತ್ತೆ ಜಿಟಿ ಜಿಟಿ ಮಳೆ, ಮಬ್ಬು ಬೆಳಕಿನ ವಾತಾವರಣ.. ತಿನ್ನಕ್ಕೆ ಏನಾದರೂ ಬಿಸಿ ಬಿಸಿ ...

ಘ್ನಾನಪೀಠ...

Image
 ಘ್ನಾನಪೀಠ... ಶೀರ್ಷಿಕೆಯಲ್ಲಿ ಕಾಗುಣಿತ ತಪ್ಪು ಅನಿಸ್ತಾ ಇದೆಯಾ?  ನಿಮ್ಮ ಯೋಚನೆ ತಕ್ಕಮಟ್ಟಿಗೆ ಸರಿ ಇದೆ, ಚಿತ್ರಕ್ಕೂ ಶೀರ್ಷಿಕೆಗೂ ಅರ್ಥಾರ್ಥಕ್ಕೆ ಸಂಭಂದ ಇಲ್ಲ ಅನ್ಸತ್ತಾ? ನೀವು ನೂರಕ್ಕೆ ನೂರು ಸರಿ.  ಆದರೆ ಸ್ವಲ್ಪ ತಾಳಿ ನಾನು ಯೋಚನೆ ಮಾಡಿಯೇ ಬರೆದಿದ್ದೇನೆ... ಅದಕ್ಕೂ ಮೊದಲು ನಾನು ನನ್ನೆಲ್ಲಾ ಓದುಗರಿಗೆ ಸಪ್ರೇಮ ನಮಸ್ಕಾರಗಳನ್ನ ತಿಳಿಸುತ್ತೇನೆ. ಯಾಕೆ ಗೊತ್ತಾ... ಹೊಸ ದಾರಿಯಲ್ಲಿ ನಿಮ್ಮನ್ನು ಮುಟ್ಟಿದ ನನ್ನ ಬ್ಲಾಗ್  " ಎಂಟು ವರ್ಷಕ್ಕೆ ಮಗ ದಂಟು ಅಂದ"  ಅನ್ನು ನನ್ನ ಊಹೆಗೂ ಮೀರಿ ನೋಡಿ, ಅಭಿಪ್ರಾಯಗಳನ್ನು ತಿಳಿಸಿದ್ದಕ್ಕಾಗಿ.  ಅದರಲ್ಲೂ ನನ್ನ ಪುಟ್ಟ ನಾದಿನಿ ಮನಸಿ  (ಡಾ// H R ಮನಸ್ವಿನಿ  MD (Ayu) , MSc, DFSM) ...ಮಾಡಿದ  "ನಿಮ್ಮಿಂದ ಸ್ಪೂರ್ತಿ ಪಡೆದು ನಾನು ಬ್ಲಾಗ್ ಬರೀತೀನೀ ಅಂತ ನೀವ್ಯಾಕೆ ಬರೀಲಿಲ್ಲ"  ಅನ್ನುವ ಆಕ್ಷೇಪಣೆ... ನನಗೂ ಸಂತೋಷ ಆಯ್ತು... ನನ್ನಿಂದ ಅವಳಿಗೆ ಸ್ಪೂರ್ತಿ ಸ್ಪುರಿಸಿತಲ್ಲ ಅಂತ.   ಮನಸ್ವಿನಿಯ ಬರವಣಿಗೆ ಚೆನ್ನಾಗಿ ಮುಂದುವರೆಯಲಿ ಎಂದು ಆಶಿಸುತ್ತಾ.... ವಿಷಯಾಂತರ ಆಗಿದ್ದಕ್ಕೆ ಕ್ಷಮೆ ಇರಲಿ ಮತ್ತೆ ನನ್ನ ವಿಷಯಕ್ಕೆ ಬರ್ತೀನಿ... ಘ್ನಾನಪೀಠ.. ಕನ್ನಡಪ್ರಭದಲ್ಲಿ ಬರುವ ಒಂದು ಪ್ರಶ್ನೋತ್ತರ ಅಂಕಣ... ಆ ಅಂಕಣದ ಲೋಗೋ ಸರಿಸುಮಾರು ಇಂತಿದೆ. ಅದನ್ನು ನೋಡಿದಾಗೆಲ್ಲಾ  ನನಗನಿಸೋದು " ಉತ್ತರ ಹೊಳಿಯಕ್ಕೆ ಅದು...

ಕಣ್ಣು.. ಅದ ಮಾಡದಿರಿ ಮಣ್ಣು

Image
ಕಣ್ಣು.. ಅದ ಮಾಡದಿರಿ ಮಣ್ಣು  ಪಂಚೇಂದ್ರಿಯಗಳು ನಮ್ಮ ದೇಹದ sensor ಗಳು. ನಮ್ಮ ಎಲ್ಲ ದೈನಂದಿನ ಕೆಲಸಗಳಲ್ಲಿ ಪೂರಕವಾಗಿ ಇರುವ ಈ sensor ಗಳು ಬಹು ಪ್ರಾಮುಖ್ಯತೆ ಪಡೆದಿವೆ. ಎಲ್ಲ ಇಂದ್ರಿಯಗಳಿಗೂ ಅದರದೇ ಸ್ಥಾನವಿದೆ, ಅದರಲ್ಲೂ  ಕಣ್ಣು ಪಂಚೇಂದ್ರಿಯಗಳಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ. ನಮ್ಮ ಸುತ್ತಲಿನ ಎಲ್ಲ ಆಗುಹೋಗುಗಳನ್ನು ಮೊದಲು ಗಮನಿಸುವುದು ಕಣ್ಣು.... ಕಣ್ಣು ಸುತ್ತಲಿನ ಸೌಂದರ್ಯವನ್ನು ನೋಡಲಷ್ಟೇ ಅಲ್ಲ, ಅದು ನಮ್ಮ ಸೌಂದರ್ಯವನ್ನು ಹೆಚ್ಚಿಸುವ ಅಂಗ. ಸೌಂದರ್ಯ ಎನ್ನುವ ಪದ ಬಂದ ಕೂಡಲೇ ಅದರ ಜೊತೆ ಬರುವುದು ಹೆಣ್ಣು. ಹೆಣ್ಣಿಗೂ ಕಣ್ಣಿಗೂ ಅವಿನಾಭಾವ ಸಂಬಂಧ. ಹೆಣ್ಣು ಸಂಸಾರದ ಕಣ್ಣು ಎಂದಾಗ, ಕಣ್ಣಿಗಿರುವ ಪ್ರಾಶಸ್ತ್ಯ ಸಂಸಾರದಲ್ಲಿ ಹೆಣ್ಣಿಗೂ ಇದೆ ಎಂದು ಹೇಳಿದೆ.  ಕವಿಗಳು ಕಾದಂಬರಿ ಕಾರರು ಹೆಣ್ಣಿನ ವರ್ಣನೆಯಲ್ಲಿ ಕಣ್ಣಿಗೆ ಮೊದಲ ಸ್ಥಾನವನ್ನು ಕೊಟ್ಟಿದ್ದಾರೆ. ಇನ್ನು ಕಣ್ಣಿನ ಶಕ್ತಿಯ ವಿಷಯಕ್ಕೆ ಬಂದಾಗ " ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ" , ನಮ್ಮ ರಾಜಕುಮಾರ ಹಾಡಿದ ಹಾಡಿಗಿನ್ನ ಬೇಕೆ? " ಹೆಣ್ಣಿನ ಮೇಲೆ ಕಣ್ಣಿಡುವಾಗ ನಿಗಾ ತುಂಬಬೇಕು, ಕಣ್ಣಲ್ಲಿ ಕಣ್ಣಿಡಬೇಕು ಛಲಬೇಕು"   " ಕಣ್ಣು ಕಣ್ಣು ....."  ಇಂದ ಶುರುವಾಗುವ ಕೆಲ ಹಾಡುಗಳು,  ಇವೆಲ್ಲಾ ಕಣ್ಣಿನ ಬಣ್ಣನೆ. ಹೆಣ್ಣಿನ ಕಣ್ಣೀರು ಎಂಥ ಕಲ್ಲು ಹೃದಯದ ಗಂಡಸರನ್ನು ಕರಗಿಸುತ್ತದೆ ಎನ್ನುವುದು ಸ್ವಲ್ಪ ಉತ್ಪ್ರೇಕ್ಷೆಯ...

ಎಂಟು ವರ್ಷಕ್ಕೆ ಮಗ... ದಂಟು ಅಂದ

Image
 ಎಂಟು ವರ್ಷಕ್ಕೆ ಮಗ... ದಂಟು ಅಂದ ಏನಿದು ಶೀರ್ಷಿಕೆ ಅನಿಸ್ತಾ?   ಹೌದು ರೀ.. ನನ್ನ ಪರಿಸ್ಥಿತೀನು ಈಗ ಹಾಗೆ ಇದೆ. ಇದು ನನ್ನ 48ನೇ ಬ್ಲಾಗ್. ... ಎಂಟು ಅಂತ ಕೊನೆಗೆ ಬಂದಾಗ ನನಗೆ ನೆನಪಾಗಿದ್ದೇ ಈ ಶೀರ್ಷಿಕೆ... ವರ್ಷ ಎಂಟಕ್ಕೆ ಅಂದ ಮಗ ದಂಟು 48 ಮುಟ್ಟಕ್ಕೆ ನಾ ತಗೊಂಡೆ ತಿಂಗಳು 68...  ಸ್ವಂತ ಮನೆ ಕಟ್ಟಿದಾಗ ನನ್ನ ವಯಸ್ಸು 48 ಈಗ ತಕ್ಕಮಟ್ಟಿಗೆ ಅರ್ಥ ಆಯ್ತಾ ಯಾಕೆ ಈ ಶೀರ್ಷಿಕೆ ಅಂತ... 48 ಸಂಭ್ರಮಿಸಲು ಯಾವ ಮಾನದಂಡ? ಸಾಮಾನ್ಯವಾಗಿ 25, 50, 60, 75, 100 ಹೀಗೆ ಸಂಭ್ರಮಿಸುವ ಘಟ್ಟಗಳು.... ನನ್ನ ಮೆಚ್ಚಿನ ಲೇಖಕರು ಬೀchi ಹೇಳಿದಂತೆ.....60 ವರ್ಷಕ್ಕೆ ಸಂಭ್ರಮಿಸಲಿಕ್ಕೆ ಏನಿದೆ ರೀ...59ಕ್ಕೆ ಸಾಯ್ಲಿಲ್ಲ ಅದಕ್ಕೆ 60 ಆಗಿದೆ.. ಅದರಲ್ಲಿ ಏನು ವಿಶೇಷ ಇಲ್ಲ....  ಅಂಥಹವರ ಮಾತನ್ನ ಇಟ್ಕೊಂಡು ನಾನು 48 ನ್ನ ಗುರ್ತಿಸ್ದೆ, ಹೌದಲ್ಲ ಅನ್ನಿಸ್ತು... ಅಷ್ಟೇ.. 48 ಬ್ಲಾಗ್ ಬರ್ದಿದಿನಿ ಅಂತ  ಜಂಭ ಕೊಚ್ಕೊಳ್ತಿದೀನ... ಗೊತ್ತಾಗ್ತಾ ಇಲ್ಲ... ಯೋಚನೆ ಮಾಡಿದಾಗ ದೊಡ್ಡವರು ಹೇಳಿದ್ದ ಮಾತು ನೆನಪಿಗೆ ಬಂತು... ಒಂದು - ನಿನ್ನ ಬಗ್ಗೆ ನೀನೇ ಹೆಚ್ಚಿಗೆ ಹೇಳಬೇಡ.. ನಿನ್ನ ಕೆಲಸ ಹೇಳ್ಬೇಕು ಅದನ್ನ ಬೇರೆಯವರು ಮೆಚ್ಚಿ ಹೇಳ್ಬೇಕು..  ಇನ್ನೊಂದು ಮಾತು  - ನಿನ್ನ ಶಕ್ತಿ / ಪ್ರತಿಭೆ ಬಗ್ಗೆ ನೀನೇ ಹೇಳದಿದ್ದರೆ ನಿನ್ನ ಪರವಾಗಿ ಬೇರೆಯವರು ಯಾಕೆ ಹೇಳ್ತಾರೆ... ಸ್ವಲ್ಪ ತುತ್ತೂರಿ ಊದಬೇಕು.. ಆ ...

ಯೋಗ ದಿನದ ಆಚರಣೆ @ ಅಶಕ್ತ ಪೋಷಕ ಸಭಾ

Image
 ಯೋಗ ದಿನದ ಆಚರಣೆ @ ಅಶಕ್ತ ಪೋಷಕ ಸಭಾ ನೆನ್ನೆಯ ದಿನದ ಕಾರ್ಯಕ್ರಮದ ಗುಂಗಿನಲ್ಲೇ ಬೆಳಗ್ಗೆ ಎದ್ದೆ... ಈಗೀಗ ಎದ್ದು ಬೆಳಗಿನ ಶುಚಿ ಕಾರ್ಯ ಕ್ರಮಗಳು ಮುಗಿದ ಕೂಡಲೇ ಫೋನ್ ಕೈಗೆತ್ತಿಕೊಳ್ಳುವುದು ಒಂದು ಚಟವೇ ಆಗಿದೆ. ಎಂದಿನಂತೆ ಫೋನ್ ಕೈಗೆತ್ತಿಕೊಂಡಾಗ ಅದರ ವಾಟ್ಸಪ್ ಮೆಸೇಜುಗಳ ಒಂದು ಪಟ್ಟಿ.. ಅಶಕ್ತ ಪೋಷಕ ಸಭಾ ಸಮೂಹ ಎಂಬ ಗ್ರೂಪ್ನಲ್ಲಿ ಚಿತ್ರಗಳು ಹಾಗೂ ವೀಡಿಯೋಗಳ ಸುರಿಮಳೆ... ಈ ಚಿತ್ರಗಳು ಹಾಗೂ ವಿಡಿಯೋಗಳು ನೆನ್ನೆಯ ದಿನ ಅಶಕ್ತ ಪೋಷಕ ಸಭಾ ದಲ್ಲಿ ನಡೆದ ಯೋಗ ದಿನದ ಕಾರ್ಯಕ್ರಮಕ್ಕೆ ಸಂಬಂಧ ಪಟ್ಟಿದ್ದು.... ಅದನ್ನು ನೋಡುತ್ತಾ ಸಭಾದ ನಿವಾಸಿಗಳು ನಡೆಸಿಕೊಟ್ಟ ಕಾರ್ಯಕ್ರಮ... ಹಾಗೂ ಅವರಲ್ಲಿ ಆದ ಬದಲಾವಣೆಗಳ ನೆನಪಿನ ಓಟ ಮನಸ್ಸಿನಲ್ಲಿ ಮೂಡಿತು. ಅಶಕ್ತ ಪೋಷಕ ಸಭಾ ಒಂದು ವೃದ್ಧಾಶ್ರಮ, ಬೆಂಗಳೂರಿನ ವಿಶ್ವೇಶ್ವರಪುರ ದಲ್ಲಿ ಇದೆ. ಇದು ಶತಮಾನ ಕಂಡಿರುವ ಒಂದು ಸಂಸ್ಥೆ. ಇದರಲ್ಲಿ 120ಕ್ಕೂ ಹೆಚ್ಚು ಜನ ನಿವಾಸಿಗಳಿದ್ದಾರೆ. ಎಲ್ಲವೂ ಅಚ್ಚುಕಟ್ಟು ಹಾಗೂ ಎಲ್ಲವೂ ಉಚಿತ.... ಇದು ಈ ಸಂಸ್ಥೆಯ ವಿಶೇಷತೆ. ಒಂದು ಸಂಸ್ಥೆ ಒಂದು ಶತಮಾನದ ಕಾಲ ನಡೆದು ಬಂದಿದೆ ಎನ್ನುವುದೇ ಒಂದು ವಿಶೇಷ... ಇದಕ್ಕೆ ಮೂಲತಃ ಅಡಿಪಾಯ ಹಾಕಿದ ಮಹನೀಯರ ಧ್ಯೇಯ, ನಿಸ್ವಾರ್ಥ ಮನೋಭಾವ ಹಾಗೂ ಬದ್ಧತೆ... ಅದನ್ನು ಉಳಿಸಿ ಪೋಷಿಸಿ ಬೆಳೆಸಿದ ಮುಂದಿನ ತಲೆಮಾರಿನ ಮಹನೀಯರು ಹಾಗೂ ಇಂದಿನ ಆಡಳಿತ ವರ್ಗ ಹಾಗೂ ಸಿಬ್ಬಂದಿಯ ಮುಂದುವರಿದ ಅದೇ ಧ್ಯೇಯ, ನಿಸ್ವಾರ್ಥ ಮನೋಭಾವ ಹಾಗ...

ಹಣ್ಣುಗಳ ರಾಜ - ಮಾವು

Image
 ಹಣ್ಣುಗಳ ರಾಜ - ಮಾವು ಇದು ಮಾವಿನ ಹಣ್ಣಿನ ಕಾಲ... ಎಲ್ಲಿ ನೋಡಿದರೂ ರಾಶಿ ರಾಶಿ ವಿಧವಿಧವಾದ ಮಾವಿನ ಹಣ್ಣುಗಳು. ನೋಡಲು ಚೆನ್ನ ತಿನ್ನಲ್ಲಂತೂ ಬಹು ಚೆನ್ನ. ಮಾವಿನ ಹಣ್ಣನ್ನ ಹಣ್ಣುಗಳ ರಾಜ ಅಂತ ಹೇಳ್ತಾರೆ. ಎಲ್ಲ ಹಣ್ಣುಗಳು ತಿನ್ನಲು ಅದರದೇ ಆದ ವಿಶೇಷ ರುಚಿಯನ್ನು ಹೊಂದಿದ್ದರೂ, ನನಗೆ ಅನ್ನಿಸಿದ ಹಾಗೆ ಮಾವಿನ ಕಾಯಿ ಹಾಗೂ ಮಾವಿನ ಹಣ್ಣುಗಳಲ್ಲಿ ಮಾಡುವ ವೈವಿಧ್ಯ ತಿನಿಸುಗಳು ಮಾವಿನ ಹಣ್ಣಿನ ಸ್ಥಾನಕ್ಕೆ ಒಂದು ಮೆಟ್ಟಿಲು ಮೇಲೆ ಕೊಟ್ಟಿರಬಹುದು. ಈ ವೈವಿಧ್ಯ ಹೇಳಲು ಒಂದು ಆರು ಸಾಲಿನ ಪದ್ಯ ನನಗೆ ತೋಚಿದ್ದು... ಗೀಚಿದ್ದು.. (ಬೀchiಯವರ ಮಾತಿನಂತೆ ತೋಚಿದ್ದು ಬೀಚಿದ್ದು) ನಿಮಗಾಗಿ.. ಚಿತ್ರಾನ್ನದ ಜೊತೆ ಹಣ್ಣಿನ ಪಾಯಸ,  ರುಚಿ ರುಚಿ ಹಣ್ಣು ಅದರದ್ದೇ ರಸ ಅಪ್ಪೆಸಾರು ಉಪ್ಪಿನಕಾಯಿ ಕೋಸಂಬರಿಗೆ ಮಾವಿನಕಾಯಿ  ಚಟ್ಣೀ ಗೊಜ್ಜು ಸಿಕರಣೆ ದೇವರೇ ನಿನಗೆ ಆರೋಗಣೆ ನಾನು ಹಳ್ಳಿಯಲ್ಲಿ ತಿಂದಂಥ ಒಂದೆರಡು ವಿಧವಾದ ಮಾವಿನ ಹಣ್ಣು ಹೊರತುಪಡಿಸಿದರೆ, ಈಗಿರುವ ವೈವಿಧ್ಯ ಮಾವಿನ ಹಣ್ಣಿನ ತಳಿಗಳು ನಿಜವಾಗಲೂ ಗೊತ್ತಾದದ್ದು ಬಹಳ ತಡವಾಗಿ, ಕೆಲವಂತೂ ಈಚೀಚೆಗೆ.... ಯಾವುದರ ರುಚಿ ಹೇಗೆ ಎನ್ನುವ ಸಂಪೂರ್ಣ ಅರಿವಿಲ್ಲ.  ಬೇಸಿಗೆಯ ರಜ, ನಮಗೆಲ್ಲ ಈಜುವ, ಆಟವಾಡುವ ಹಾಗೂ ಸಿಕ್ಕಸಿಕ್ಕ ಹಣ್ಣುಗಳನ್ನು( ಕಾಯಿ, ಪಿಂದೆ, ದೊರೆಗಾಯಿ, ಹಣ್ಣು ಎಲ್ಲವೂ ಸೇರಿ) ತಿನ್ನುವುದೇ ಒಂದು ಮೋಜು. ಯಾವಾಗಲೂ ನಮ್ಮ ಚಡ್ಡಿಯ ಜೇಬಿನಲ್ಲಿ ಉಪ್ಪು ಮೆಣಸಿನ ಪುಡಿ...

ಒಡಪು - ವೈಯಾರ- ಹೆಸರು

Image
ಇದೇನಿದು ಶೀರ್ಷಿಕೆಯೇ ಒಂದಕ್ಕೊಂದು ಸಂಬಂಧವಿಲ್ಲದಂಗೆ ಇದೆಯೆಂದು ಯೋಚಿಸುತ್ತಿದ್ದೀರಾ? ಬನ್ನಿ ನೋಡೋಣ.  ಒಡಪು ಎಂದರೆ ಒಗಟು ಸಹ, ಸಮಸ್ಯೆ ಎಂಬ ಅರ್ಥವೂ ಇದೆ. ಇನ್ನು ವೈಯಾರಕ್ಕೆ ಬಂದರೆ.. ಹಾವ ಭಾವಗಳು, ನಡೆ ನುಡಿ, ಮಾತಿನ ಶೈಲಿ ಎಲ್ಲವೂ ಮಿಳಿತವಾದ ಹೆಣ್ಣಿನ ಸೌಂದರ್ಯವನ್ನು ವರ್ಣಿಸುವಾಗ ಉಪಯೋಗಿಸುವ ಪದ ವಯ್ಯಾರ.. ಹಾಗಾಗಿ ವೈಯಾರಗಿತ್ತಿ / ಬಿನ್ನಾಣಗಿತ್ತಿ ಎಂದು ಹೇಳುವ ವಾಡಿಕೆ. ಇನ್ನು ಹೆಸರಿನ ಬಗ್ಗೆ ನಾನು ಹೇಳುವುದು ಏನೂ ಇಲ್ಲ... ನಿಮಗೆಲ್ಲ ತಿಳಿದಿರುವಂತೆ ಗುರುತಿಸಲು ಉಪಯೋಗಿಸುವ ಒಂದು ಪದ, ನಾಮಪದ. ಬಹು ಪಾಲು ಉತ್ತರ ಕರ್ನಾಟಕದ ಹೆಂಗಸರು ಸಂತೋಷ ಸಮಾರಂಭಗಳಲ್ಲಿ ಅದರಲ್ಲೂ ಮದುವೆಯಂತಹ ಕಾರ್ಯಕ್ರಮಗಳಲ್ಲಿ,  ಗಂಡನ ಹೆಸರು ಹೇಳುವಾಗ ಪದ ವಯ್ಯಾರದಿಂದ, ಪ್ರಾಸ ಬದ್ಧವಾಗಿ, ಪ್ರಾಸಂಗಿಕವಾಗಿ, ಹಾಸ್ಯ ರೂಪದಲ್ಲಿ, ಬಹು ಪಾಲು ಸೂಚ್ಯವಾಗಿ ಹೇಳುವ ವಿಧಾನವನ್ನು ವಡಪು ಎಂದು ಹೇಳುತ್ತಾರೆ. ಪದಗಳ ಉಪಯೋಗ ಅವರೋಹಣ ಕ್ರಮದಲ್ಲಿ ಇದೆ ಬಿಟ್ಟರೆ ಎಲ್ಲವನ್ನು ಹೇಳಿದ್ದೇನೆ ಎನ್ನುವ ನಂಬಿಕೆ ನನ್ನದು. ಹಾಯ್.. ದಿಸ್ ಇಸ್ ಮುಳ್ (ಮುಳ್ಳು?) ಎಂದುತನ್ನ  ಭಾವೀ ಪತಿ ಮುರಳಿಧರನನ್ನು ಪರಿಚಯಿಸುವ ಅತ್ಯಾಧುನಿಕ ಹುಡುಗಿಯೂ ಸಹ ಮದುವೆ ಮನೆಯಲ್ಲಿ ನಾಚಿಕೊಂಡು ಹೀಗೆ ಹೇಳಬಹುದೇನೋ... ಹೆಸರಾಗೇನದೇ ಬರೀ ಐದಕ್ಷರ ಕೂಗಿದ ಕೂಡಲೇ ಓ ಅಂತಾರಾ ಕಡೆಗಣ್ಣಲ್ಲೇ ಹುಡುಗೀರ್ನ ನೋಡ್ತಾರ ನನ್ನವ ಕೃಷ್ಣನ ಅಪರಾವತಾರ ಕಲ್ಪನೆಗೆ, ಕ್ರಿಯಾಶೀಲತ್ವಕ್ಕೆ, ಪ...

ಕಾರ್.ಕಾರ್..ಕಾರ್ ಪುರಾಣ

Image
" ಏ....ತಾತ ಸುಮ್ನೆ ಮನೇಲಿ ಇರೋಕೆ ಆಗಲ್ವಾ.... ಎಲ್ಲಾ ಬೀದಿಗಿಳೀತಾರೆ... ಕಾರ್ ಓಡಿಸಿಕೊಂಡು..." ಇದು ಇತ್ತೀಚೆಗೆ ಒಬ್ಬ angry young man ನನಗೆ ಕೊಟ್ಟ ಉಡುಗೊರೆ.... ಸಿಗ್ನಲ್ ನಲ್ಲಿ ಹಸಿರು ದೀಪ ಬರುವ ಕೆಲ ಕ್ಷಣಗಳ ಮುಂಚೆ ಹಾರ್ನ್ ಮಾಡಿ.. ಅದಕ್ಕೆ ನಾನು ಸ್ಪಂದಿಸದೆ ಇದ್ದಾಗ ದೊರೆತದ್ದು. ಇನ್ನು ಕೆಲವರು ಕೆಲ ಸಮಯದಲ್ಲಿ ನನ್ನ ಮುಖವನ್ನು ತಾತ್ಸಾರದಿಂದ ನೋಡಿರಬಹುದು ಎನ್ನುವ ಅನಿಸಿಕೆ ನನ್ನದು. ಕಾರಣ ನನಗೆ ಗೊತ್ತು... ನಾನು ಈ ದಿನಗಳಲ್ಲಿ ಕಾರ್ ಡ್ರೈವ್ ಮಾಡುವಾಗ ನನ್ನ reflexes ಕಡಿಮೆ ಯಾಗಿರುವುದು. ಅದು ವಯೋ ಸಹಜವೂ ಆಗಿರಬಹುದು, ಸ್ವಲ್ಪ ನನ್ನ ಮನಸ್ಸಿನ ಪ್ರಭಾವವು ಇರಬಹುದು. ಈಗೀಗ ನನಗೆ ಕಾರನ್ನು ಓಡಿಸುವ ಉತ್ಸಾಹ ಸಾಕಷ್ಟು ಕಡಿಮೆಯಾಗಿದೆ. ರಸ್ತೆಯಲ್ಲಿ ಓಡಾಡಲು ಅಥವಾ ಕಾರು ನಡೆಸಲು ಜಾಗವೇ ಇಲ್ಲವೇನೋ ಅನ್ನುವಷ್ಟು ವಾಹನಗಳ ದಟ್ಟಣೆ. ಎಲ್ಲರಿಗೂ ಅದೇನೋ ಧಾವಂತ. ತಮ್ಮ ಗುರಿ ಮುಟ್ಟಲು ಎಲ್ಲಿಲ್ಲದ ಅವಸರ. ಹಾಗಾಗಿ ಒಂದು ಸೆಕೆಂಡ್ ಸಹ ಕಾಯುವ ತಾಳ್ಮೆ ಇಲ್ಲ. ಹಾರನ್ ಬಾರಿಸುವುದು, ಸಂದಿಯಲ್ಲಿ ನುಗ್ಗಿ ಮುನ್ನಡೆಯುವುದು, ಯಾವ ಕಡೆಯಿಂದ ಬೇಕಾದರೂ ನಮ್ಮನ್ನು ಹಿಂದಕ್ಕಿ ಓಡುವ ಸಾಹಸಿಗರು, ಅದರಲ್ಲೂ ದ್ವಿಚಕ್ರವಾಹನಗಳ ಯುವ ಜನಾಂಗ ಶರವೇಗದಲ್ಲಿ ಮುನ್ನುಗುವ ಪರಿ ನನಗೆ ಗಾಬರಿ ಹುಟ್ಟಿಸುವಂತದ್ದು. ಎಷ್ಟೋ ಸಲ... ನಾನು ಬೇರೆಯವರಿಗೆ ಡಿಕ್ಕಿ ಹೊಡೆದು ಬಿಟ್ಟೆನೇನೋ ಎಂದು ಭಯ ಪಟ್ಟದ್ದಿದೆ. ಆ ಸನ್ನಿವೇಶಗಳನ್ನು ನಿಭಾಯ...

ನನ್ನಮ್ಮ...

Image
ಇವತ್ತು ನನ್ನ ಆತ್ಮೀಯ ಪದ್ಮನಾಭ ಅವರ ಮೊಮ್ಮಗನ ಮದುವೆಯ ಮನೆಯ ಊಟ. ಪಾಯಸದ ವಿಚಾರಣೆ ಸಮಯ. ನಾನು ಪಾಯಸವನ್ನು ಸ್ವಲ್ಪವೇ ಹಾಕಿ ಅಂತ ಕೇಳಿದೆ... ಅದಕ್ಕೆ ಬಡಿಸುವವರು  ಎರಡೇ ತೊಟ್ಟು ಬೀಳುವಂತೆ ಬಡಿಸಿ ತಮಾಷೆಯಾಗಿ ಸಾಕ ಸರ್ ಅಂದರು... ತುಂಬಾ ಖುಷಿಯಾಯಿತು ಅವರ ಹಾಸ್ಯ ಪ್ರಜ್ಞೆಯಿಂದ. ಪಕ್ಕದ ಸ್ನೇಹಿತ ಕೇಳಿದ ಅಷ್ಟೇ ಹಾಕಿಸಿಕೊಳ್ಳುವ ಅವಶ್ಯಕತೆ ಏನಿತ್ತು ಎಂದು ? ಅದಕ್ಕೆ ನನ್ನ ಉತ್ತರ  "ಅಮ್ಮ " .  ಹೌದು ನಾನು ಎಲ್ಲೇ  ಊಟ ಮಾಡಲಿ, ಪಾಯಸ ಬಂದಾಗ ಬೇಡ ಅನ್ನುವುದೇ ಇಲ್ಲ... ಇದಕ್ಕೆ ಕಾರಣ ನನ್ನಮ್ಮ.  ಯಾವ ಸಮಯದಲ್ಲಿ ಹೇಳಿದ್ದೋ ಗೊತ್ತಿಲ್ಲ ಆದರೆ ಅದು ನನ್ನಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ. " ಪಾಯಸ ಬೇಡ್ವಾ , ಅಮ್ಮನ ಮೇಲೆ ಪ್ರೀತಿ ಇಲ್ವಾ, ಪಾಯಸ ಬೇಡ ಅಂದ್ರೆ ನಿಮ್ಮಮ್ಮ ಸತ್ತೋಗ್ತಾಳೆ" ಯಾಕೆ ಹಾಗೆ ಹೇಳಿದಳೋ... ಪ್ರಾಯಶಃ ಮಗ ಪಾಯಸ ತಿನ್ನಲಿ ಎಂದಿರಬೇಕು.... ನನಗೆ ಕೋಪ ಬಂದಿತ್ತು, ದುಃಖ ಆಗಿತ್ತು, ಪಾಯಸ ಹಾಕಿಸಿಕೊಂಡು ತಿಂದದ್ದು ನೆನಪಿದೆ. ಕೋಪ ಮತ್ತು ದುಃಖ ಅಳುವಿನ ರೂಪದಲ್ಲಿ ಅಮ್ಮನ ಮುಂದೆ ಹೊರಹಾಕಿದ್ದು, ಅಮ್ಮ ಮುದ್ದು ಮಾಡಿದ್ದು ಸಹ ನೆನಪಿದೆ... ಇದು ಪಾಯಸದ ಹಿಂದಿನ ಪ್ರಸಂಗ. ಮಾತು ಮುಂದುವರಿದು ಇವತ್ತು mother's day ಅನ್ನುವ ವಿಚಾರ ಹೊರಕ್ಕೆ ಬಂತು. ನನಗೆ ವರ್ಷಕ್ಕೊಮ್ಮೆ ಆಚರಣೆ ಮಾಡುವ ಇಂತಹ ದಿನಗಳು ಅಷ್ಟೇನೂ ಪ್ರಭಾವ ಬೀರಿಲ್ಲ. ಹಾಗಂತ ನಾನು ವಿರೋಧಿಯಲ್ಲ. ಹಾಗಾಗಿ ಅಮ್ಮನ ನೆನಪುಗಳ ಈ...

ಮತದಾನ ನಮ್ಮ ಹಕ್ಕು ಮತ್ತು ಕರ್ತವ್ಯ

Image
  ಇದು ಚುನಾವಣೆಯ ಸಮಯ ಎಲ್ಲೆಲ್ಲೂ ಅದೇ ವಿಷಯ. ಟಿವಿಯಲ್ಲಿ ಅಂತೂ 24 ಗಂಟೆಯೂ ಅದರ ಬಗ್ಗೆಯೇ ಮಾತುಕತೆ. ಇನ್ನು ಜನಸಾಮಾನ್ಯರ ಮಾತಿನಲ್ಲಿ ಚುನಾವಣೆಯ ವಿಚಾರ ಬರದೇ ಇರುವುದು ಸಾಧ್ಯವೇ ಇಲ್ಲ. ರಾಜ ಯಾರಾದರೇನು ರಾಗಿ ಬೀಸುವುದು ತಪ್ಪಲಿಲ್ಲ ಎನ್ನುವುದು ಒಂದು ನಾಣ್ಣುಡಿ... ಆದರೆ ಪ್ರಜಾಪ್ರಭುತ್ವದಲ್ಲಿ ರಾಜನನ್ನು ಆರಿಸುವುದು ನಮ್ಮ ಜವಾಬ್ದಾರಿ.  ಈಚೆಗೆ ಸ್ನೇಹ ಸೇವಾ ಟ್ರಸ್ಟ್ ನಡೆಸಿದ ಮಕ್ಕಳಿಗಾಗಿ ಬೇಸಿಗೆ ಶಿಬಿರದಲ್ಲೂ ಸಹ ಚುನಾವಣೆಯ ವಿಷಯ ರಿಂಗಣಿಸಿತು.  ಆದರೆ ಮಕ್ಕಳು ಮಾಡಿದ್ದು ಚುನಾವಣೆಯ ಬಗ್ಗೆ ಜಾಗೃತಿ. ಮಕ್ಕಳಿಗೆ ಈ ವರ್ಷವೂ ಒಂದು ಕಿರು ನಾಟಕವನ್ನು ಮಾಡಲು ಉಮೇದು. ಕಿರು ನಾಟಕದ ವಿಷಯ " ಮತದಾನ ನಮ್ಮ ಹಕ್ಕು ಮತ್ತು ಕರ್ತವ್ಯ,  ಆಮಿಷಕ್ಕೆ ಒಳಗಾಗಿ ಮತದಾನ ಮಾಡಬಾರದು".  ದಿವ್ಯ ಮತ್ತು ಅಶ್ವಿನಿ ಪಿಯುಸಿ ಓದುತ್ತಿರುವ ಹುಡುಗಿಯರು, ಈ ವಿಷಯವನ್ನು ತಮ್ಮದೇ ರೀತಿಯಲ್ಲಿ ರೂಪ ಕೊಟ್ಟು ಮಕ್ಕಳನ್ನು ತಯಾರಿ ಮಾಡಿದರು.  ಮಕ್ಕಳ ಉತ್ಸಾಹ ಹೇಳತಿರದು. ಒಂದು ವಾರದ ಅವಧಿಯಲ್ಲಿ ಅವರು ಮಾಡಿದ ಪ್ರಯತ್ನ ಯಶಸ್ವಿ ಆಯಿತು ಎಂದು ಹೇಳಲೇಬೇಕು. ಆದರೆ ಈ ವಿಷಯ ಎಷ್ಟು ಜನದ ಮೇಲೆ ಪ್ರಭಾವ ಬೀರಿ ಬದಲಾವಣೆ ತರಲಿದೆ ಎನ್ನುವುದು ಮಾತ್ರ ಆಶಾಭಾವ. ಈ ಕಿರು ನಾಟಕ ನನ್ನ ಹಳ್ಳಿಯ ದಿನಗಳನ್ನು ನೆನಪಿಸಿತು. ನಾನು ಓದುತ್ತಿದ್ದದ್ದು 5ನೇ ತರಗತಿಯಲ್ಲಿ (1957 ರ ಸಾರ್ವತ್ರಿಕ ಚುನಾವಣೆ ಅಂತ ಈಗ ಹೇಳಬಲ್ಲೆ). ನಮ್ಮೂರಲ್ಲೂ ಚ...

ಅನ್ನಂ ನ ನಿಂದ್ಯಾತ್..ತದ್ ವ್ರತಂ

Image
  ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂದು ಹೇಳಿದ್ದಾರೆ ದಾಸ ವರೇಣ್ಯ ಪುರಂದರ ದಾಸರು. ಹೊಟ್ಟೆಗೆ ಮೊದಲ ಆದ್ಯತೆ.. ಹೊಟ್ಟೆ ತುಂಬಲು ಬೇಕು ಅನ್ನ / ಆಹಾರ.  ಅಗುಳು, ಅಗುಳಿನ ಮೇಲು ತಿನ್ನುವವನ ಹೆಸರು ಬರೆದಿದೆ ಎನ್ನುವುದು ಒಂದು ಜಾಣ್ನುಡಿ.  ಅನ್ನಂ ಪರಬ್ರಹ್ಮ ಎಂದು ಹೇಳಿದ್ದಾರೆ ಹಿರಿಯರು.. ಅನ್ನ ನಮ್ಮ ಜೀವನಕ್ಕೆ ಬೇಕಾದ ಶಕ್ತಿಯನ್ನು ಕೊಡುವ ಮೂಲವಸ್ತು ಹಾಗಾಗಿ ಅದನ್ನು ದೇವರಿಗೆ ಹೋಲಿಸಿದ್ದಾರೆ.  ಜೊತೆಗೆ ಅನ್ನಂ  ನ ನಿಂದ್ಯಾತ್..ತದ್ ವ್ರತಂ... ಅಂತಲೂ ಹೇಳಿದ್ದಾರೆ... ಅಂದರೆ ಅನ್ನಕ್ಕೆ       ಅಗೌರವ ತೋರಿಸಬೇಡ, ಹಾಳು ಮಾಡಬೇಡ... ಅದೊಂದು ವ್ರತ. ನಾನು ಚಿಕ್ಕವನಿದ್ದಾಗ ಊಟ ಮಾಡುವಾಗ ತಟ್ಟೆಯಲ್ಲಿ ಅನ್ನವನ್ನು/ ತಿನ್ನುವ ಪದಾರ್ಥವನ್ನು ಬಿಟ್ಟರೆ ಅದನ್ನು ನನ್ನ ತಲೆಗೆ ಕಟ್ಟುತ್ತೇನೆ ಎಂದು ನಮ್ಮಪ್ಪ ಹೇಳುತ್ತಿದ್ದರು ... ಹಾಗಾಗಿ ನನಗೆ ಆಹಾರ ಪದಾರ್ಥವನ್ನು ಚೆಲ್ಲಬಾರದು ಎಂಬ ಮಾತು ಮನಸ್ಸಿನಲ್ಲಿ ಭದ್ರವಾಗಿ ಮೂಡಿದೆ. ಅಕ್ಕಿಗೆ ಕಷ್ಟವಾಗಿದ್ದ ಕಾಲ.. ಆಗ ಮನೆಯಲ್ಲಿ ಹೇಳುತ್ತಿದ್ದ ಒಂದು ಮಾತು “ಹೊಟ್ಟೆ ತುಂಬಾ ಹಿಟ್ಟು, ಬಾಯಿ ತುಂಬಾ ಅನ್ನ" . ಅಂದಿನ ದಿನಗಳಲ್ಲಿ, ಯಾವ ಕಾರಣಕ್ಕೂ ಅನ್ನವನ್ನು ಬೀದಿಗೆ ಎಸೆಯುತ್ತಿರಲಿಲ್ಲ.... ಕಲಗಚ್ಚಿನ ಬಾನಿಯಲ್ಲಿ ಹಾಕಿದರೆ ಅದನ್ನು ಹಸು ಎಮ್ಮೆಗಳು ಕುಡಿಯುತ್ತಿದ್ದವು. ಭತ್ತಕುಟ್ಟಿದಾಗ, ಹೊಟ್ಟನ್ನು ಜರಡಿ ಮಾಡಿ ಉಳಿದ ...

ನಾಟಕದ ಪ್ರಸಂಗಗಳು....

Image
  ನಾಲ್ಕಾರು ದಿನಗಳ ಹಿಂದೆ ನನ್ನ ಮಗಳು ಹಳೆಯ ಫೋಟೋ ಆಲ್ಬಮ್ ಹರಡಿಕೊಂಡು ಖುಷಿಪಡುತ್ತಿದ್ದಳು, ನನ್ನನ್ನು ಕರೆದು ಒಂದು ವಿಶೇಷ ಆಲ್ಬಮ್ ಅನ್ನು ಕೊಟ್ಟಳು.... ಅದು ಸುಮಾರು ಹತ್ತು ವರ್ಷಕ್ಕೂ ಹಿಂದಿನದು, ನಾವು ಮಾಡಿದ ಒಂದು ನಾಟಕದ ಚಿತ್ರಗಳು. ನನ್ನ ಗೆಳೆಯ ವಾಸುವಿನ  "ಮಾವಿನಕೆರೆ ಬಬ್ಬೂರು ಕಮ್ಮೆ ಅಸೋಸಿಯೇಷನ್" ಅವರ ಒಂದು ಮಿಲನದ ಸಂದರ್ಭ.  ಅಮೆರಿಕದಲ್ಲಿ ವಾಸವಾಗಿರುವ ಶ್ರೀ ಶಂಕರನಾರಾಯಣ್,  ಶ್ರೀ ಪ್ರಸಾದ್  ಹಾಗೂ ನಮ್ಮ ವಾಕಿಂಗ್ ಗೆಳೆಯರು ಸೇರಿ ಮಾಡಿದ ಒಂದು ನಾಟಕ "ಶ್ರೀಕೃಷ್ಣ ಸಂಧಾನ". ಆ ದಿನಗಳು ತುಂಬಾ ಸಂತೋಷದಾಯಕವಾಗಿತ್ತು. ಆ ಫೋಟೋಗಳನ್ನು ನೋಡುತ್ತಾ ನನ್ನ ಮನಸ್ಸು ಹಳೆಯ ಕಾಲದ ನಾಟಕಗಳ ಸಂದರ್ಭಗಳನ್ನು ನೆನೆಸಿಕೊಳ್ಳಲು ಪೂರಕವಾಗಿತ್ತು... ಮುದ ಕೊಟ್ಟಿತ್ತು. ಆ ನೆನಪುಗಳ ಸರಮಾಲೆಯನ್ನು ಅಕ್ಷರ ರೂಪದಲ್ಲಿ ಇಳಿಸುವ ಪ್ರಯತ್ನ ನನ್ನದು. " ಮೂರುವರೆ ನಾಟಕದ ಕಲಾವಿದರು" ಎಂಬ ಹೆಸರು ಪಡೆದ ನಮ್ಮ ಶಹಾಬಾದ್ ಬ್ರಹ್ಮಚಾರಿಗಳ ತಂಡ. ನಮ್ಮ ತಂಡ ಶಹಾಬಾದಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಮಾಡಬೇಕೆಂದು ನಿರ್ಧರಿಸಿ ಪ್ರತಿ ವರ್ಷ ನಾಟಕ ಮತ್ತಿತರ ಮನರಂಜನೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದೆವು. ಹೀಗಿದ್ದಾಗ ಶಹಾಬಾದಿನ ಪಟ್ಟಣದ ನಾಡಹಬ್ಬದ ಕಾರ್ಯಕ್ರಮದಲ್ಲಿ ನಮ್ಮ ತಂಡಕ್ಕೆ ಭಾಗವಹಿಸಲು ಹೇಗೋ ಒಂದು ಅವಕಾಶ ಸಿಕ್ಕಿತ್ತು. ನಮಗೆ ಅತಿ ಉತ್ಸಾಹ, ಜನಸ್ತೋಮ ನೋಡಿ ಆ ಉತ್ಸಾಹಕ್ಕೆ ಮತ್ತಷ್ಟು ಇ...

ಬೇವು - ಬೆಲ್ಲ... ಜೀವನವೆಲ್ಲ

Image
  ಯುಗ ಯುಗಾದಿ ಕಳೆದರೂ,  ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ  ಹೊಸತು ಹೊಸತು ತರುತಿದೆ..... ಬೇಂದ್ರೆ ಅಜ್ಜನ ಈ ಹಾಡು ಎಷ್ಟೋ ಯುಗಾದಿಗಳಿಂದ ಕೇಳುತ್ತಿದ್ದೇನೆ, ಅದು ಯುಗಾದಿಯಂತೆಯೇ ಹೊಸತು ಹೊಸದಾಗಿಯೇ ಇದೆ. ಯುಗಾದಿ ಕನ್ನಡಿಗರಿಗೆ ಹೊಸ ವರ್ಷದ ಹಬ್ಬ. ವಸಂತ ಋತುವಿನಲ್ಲಿನ ಬಹು ಮುಖ್ಯ ಹಬ್ಬ. ವಸಂತ ... ಋತುಗಳ ರಾಜ... ಎಲ್ಲೆಲ್ಲಿಯೂ ಹಸಿರು ಚಿಗುರು ಒಡೆದು ಮರ-ಗಿಡಗಳೆಲ್ಲಾ ನಳನಳಿಸುವ ಸಮಯ. ಅದರಲ್ಲೂ ಮಾವಿನ ಮತ್ತು ಅರಳಿ ಮರದ ಚಿಗುರು ಎಲೆಗಳ ಕೆಂಪು ಮಿಶ್ರಿತ ಬಣ್ಣ ಚಿಕ್ಕಂದಿನಿಂದಲೂ ನನಗೆ ಬಲುಮೆಚ್ಚುಗೆ. ಯುಗಾದಿಗೆ ಹೊಸ ಬಟ್ಟೆ ಒಂದು ಸಂಭ್ರಮ.... ನನಗಂತೂ ವಿಶೇಷ ಸಂಭ್ರಮ... ನಾನು ಹುಟ್ಟಿದ್ದು ಯುಗಾದಿಯ ಆಸು ಪಾಸಿನಲ್ಲಿ.. ಹಾಗಾಗಿ ನನ್ನ ಹುಟ್ಟಿದ ಹಬ್ಬ ಆಚರಿಸುವ ದಿನ ಯುಗಾದಿ.  ಹೇಗೂ ಮನೆಯಲ್ಲಿ ಒಬ್ಬಟ್ಟು ಮಾಡಿರುತ್ತದೆ, ಎಣ್ಣೆ ನೀರು ಹಾಕಿಕೊಂಡು, ದೇವರಿಗೆ ನಮಸ್ಕರಿಸಿ, ಒಂದು ಲೋಟ ಹಾಲು ಕುಡಿದರೆ ಅದು ಹುಟ್ಟಿದ ಹಬ್ಬದ ಆಚರಣೆ. ಮನೆ ತುಂಬಾ ಮಕ್ಕಳು ಜೊತೆಗೆ ಒಂದಷ್ಟು ಬಡತನ, ಹೀಗಿರುವಾಗ ಮಕ್ಕಳ ಹುಟ್ಟಿದ ಹಬ್ಬದ ಸಂಭ್ರಮ ಎಲ್ಲಿ ಬರಬೇಕು.. ಜೊತೆಗೆ ಅದೊಂದು ದೊಡ್ಡ ಸಂಗತಿ ಏನೂ ಆಗಿರಲಿಲ್ಲ.. ಅಂದಿನ ಕಾಲಕ್ಕೆ. ಹೊಸ ಬಟ್ಟೆ ಎಂದರೆ ಸಾಮಾನ್ಯವಾಗಿ ನಮ್ಮೂರಿನ ಪರಿಣತ ಟೈಲರ್ ಆಗಿದ್ದ ಅಚ್ಚಪ್ಪನವರು ಹೊಲಿದುಕೊಟ್ಟದ್ದು . ಬಟ್ಟೆ ಅಂಗಡಿಗೆ ಹೋದಾಗ ಸಾಮಾನ್ಯವಾದ ಮಾತು- ಸ್ವಲ್ಪ ದೊಡ್ಡ ದೊಡ್...