ಅಂತ್ಯೇಷ್ಟಿ/ ಶ್ರಾದ್ಧಕ್ಕೆ ಮಗನೇ ಏಕೆ ?
ಸಾಮಾನ್ಯವಾಗಿ ಯಾರನ್ನಾದರೂ ಭೇಟಿಯಾದಾಗ ನಮಸ್ಕಾರ ಹೇಳಿ, ಆರಾಮಾನಾ / ಚೆನ್ನಾಗಿದ್ದೀರಾ ಎಂದು ಕೇಳುವುದು ವಾಡಿಕೆ. ಅದರಲ್ಲೂ ಬೆಳಗಿನ ವಾಕಿಂಗ್ ಸಮಯದಲ್ಲಿ ಮುಂದುವರಿದು ಈಗ ಬಂದ್ರಾ / ಎಷ್ಟು ಸುತ್ತು ಆಯಿತು ಎಂದು ಕೇಳಿ... ಅವರ ಹಾಜರಾತಿಯ ವಿಷಯಕ್ಕೆ ಬಂದು... ಏನು ಎರಡು ದಿವಸದಿಂದ ಕಾಣಲಿಲ್ಲ ಎಂಬ ಪ್ರಶ್ನೆ ತಾನಾಗಿ ಬರುತ್ತದೆ. ಇಂಥ ಒಂದು ಪ್ರಶ್ನೆಯನ್ನು ಮೊನ್ನೆ ನಾನು ಲಕ್ಷ್ಮೀನಾರಾಯಣ ಹಾಗೂ ಜಯಶ್ರೀ ದಂಪತಿಯನ್ನು ಕೇಳಿದೆ. ಅದಕ್ಕೆ ನಮ್ಮತ್ತೆಯ ಶ್ರಾದ್ದ ಇತ್ತು ಎಂದು ಹೇಳಿದವರು ಲಕ್ಷ್ಮಿ ನಾರಾಯಣ ಅವರು. ತಮ್ಮ ಬಂದಿದ್ನಾ ಎಂದು ಜಯಶ್ರೀ ಅವರನ್ನು ಕೇಳಿದಾಗ, ಅವನೆಲ್ಲಿ ಬರ್ತಾನೆ ಅಷ್ಟು ದೂರದಿಂದ... ನಾನೇ ಮಾಡ್ತೀನಿ ಎಂದು ಹೇಳಿದ್ದು ಕೇಳಿ, ಒಂದು ತರಹ ಖುಷಿ / ಆಶ್ಚರ್ಯ/ ಕುತೂಹಲದ ಭಾವ ಮನಸ್ಸಿನಲ್ಲಿ ಮೂಡಿತು. ಮುಂದುವರಿದು ಅವರು ಹೇಳಿದ್ದು, ನಾನೇ ಅಡಿಗೆ ಮಾಡುತ್ತೇನೆ.. ಪಿಂಡಪ್ರದಾನ ಮಾಡುವುದನ್ನು ಬಿಟ್ಟು, ತರ್ಪಣ ಬಿಡುವವರೆಗೆ ಎಲ್ಲವನ್ನು ನಾನೇ ಮಾಡುತ್ತೇನೆ. ಇವರು ಬಡಿಸುವುದಕ್ಕೆ ಸಹಾಯ ಮಾಡುತ್ತಾರೆ. ಇಂದಿನ ದಿನಮಾನದ ಹೆಂಗಸರ ಮನಸ್ಥಿತಿಯನ್ನು ನೆನೆದಾಗ ಮೇಲಿನ ಎರಡು ಕೆಲಸಗಳು ವಿಶೇಷ ಎನ್ನಿಸಿದವು. ಅವರ ಅಮ್ಮ ಸತ್ತಾಗ, ತಮ್ಮ, ತುಂಬಾ ಚಿಕ್ಕವನಲ್ಲದಿದ್ದರೂ... ಅವನ ಭಯವನ್ನು/ ಹಿಂಜರಿಕೆಯನ್ನು ಗಮನಿಸಿ, ಅವನೋಡನೆ ಸರಿಸಮನಾಗಿ ನಿಂತು, ಅಂತ್ಯ ಸಂಸ್ಕಾರದ ಎಲ್ಲ ವಿಧಿಗಳನ್ನು ಪೂರೈಸಿ ಚಿತೆಗೆ ಅಗ...