Posts

ಗೋವಿಂದಾ... ಗೋ....ವಿಂದ

Image
ಬೆಳಗಿನ ವಾಕಿಂಗ್ ಸಮಯ.. ಇದ್ದಕ್ಕಿದ್ದಂತೆ ಒಂದು ಮೂಲೆಯಿಂದ ಕೇಳುತ್ತಿದ್ದ ಗೋವಿಂದಾ ಎಂಬ ಕೂಗು... ಅದಕ್ಕೆ ಇನ್ನೊಂದು ಕಡೆಯಿಂದ ಬರುತ್ತಿದ್ದ ಪ್ರತಿಕ್ರಿಯೆ ಗೋ...ವಿಂದ, ಮತ್ತೊಮ್ಮೆ ಇನ್ನೊಂದು ಗೋವಿಂದ ಮತ್ತದಕ್ಕೆ ಪ್ರತಿಕ್ರಿಯೆ. ಹೀಗೆ ಸಾಕಷ್ಟು ಜನರ ಬಾಯಲ್ಲಿನ ಗೋವಿಂದನಾಮ, ಅದಕ್ಕೆ ಪ್ರತಿಕ್ರಿಯಿಸುತ್ತಿದ್ದವರು ಒಬ್ಬರೇ ಎಂದು ತಿಳಿಯಿತು. ಅವರ ಧ್ವನಿ ಪರಿಚಿತವಾಗಿದ್ದರೂ, ಮುಖತಃ ನೋಡಿರಲಿಲ್ಲ. ಈಚೆಗೆ ಅವರ ದರ್ಶನವಾಯಿತು. ನಮಸ್ಕರಿಸಿದೆ.  ಹಣೆಯಲ್ಲಿ ದುಂಡು ಕುಂಕುಮವಿದ್ದ, ಸಾತ್ವಿಕ ವರ್ಚಸ್ಸಿನ ಹಿರಿಯರು. ಇನ್ನೂ ನನಗೆ ಪರಿಚಯವಾಗಿಲ್ಲ. ಗೋವಿಂದ ನಾಮದ ಮೂಲಕವೇ ಎಲ್ಲರೂ ಅವರನ್ನು ನಮಸ್ಕರಿಸುತ್ತಿದ್ದದ್ದು. ಅದು ಅವರ ವೈಶಿಷ್ಟ್ಯತೆ. ಗೋವಿಂದ ಪದವನ್ನು ಕೇಳಿದಾಗ ಮನಸ್ಸಿಗೆ ಬರುವುದೇ ತಿರುಪತಿ, ಜೊತೆ ಜೊತೆಗೆ ಬಿಳಿ ಕೆಂಪಿನ ದೊಡ್ಡ ನಾಮ. ಅದು ತಿರುಪತಿಯ ಹೆಗ್ಗುರುತು. ತಿರುಪತಿಯ ಬೆಟ್ಟವನ್ನು ಹತ್ತುವಾಗ, ಇಳಿಯುವಾಗ ಸತತವಾಗಿ ಕೇಳುವುದೇ ಗೋವಿಂದಾ... ಗೋ...ವಿಂದ ಎನ್ನುವ ನಾಮಸ್ಮರಣೆ. ಬೆಟ್ಟದ ಮೇಲೆ ಕಣ್ಣಿಗೆ ಕಾಣುವುದು, ಲಿಂಗ ಭೇದವಿಲ್ಲದ, ವಯಸ್ಸಿನ ಅಂತರ ಲೆಕ್ಕಕ್ಕೆ ಇಲ್ಲದ ಬೋಡು ಗುಂಡುಗಳು, ಹಣೆಯ ಮೇಲಿನ ನಾಮಗಳು.  ಗೋವಿಂದ ಪದದ ಹುಟ್ಟಿನ ಹಿಂದೆ ಒಂದು ಕುತೂಹಲಕಾರಿ ಕಥೆ ಇದೆ. ಭೂಮಿಯಲ್ಲಿ ವಾಸ ಮಾಡಲು ಬಂದ ವಿಷ್ಣು, ಸನ್ಯಾಸಿಯ ರೂಪದಲ್ಲಿ ಅಗಸ್ತ್ಯ ಋಷಿಗಳ ಆಶ್ರಮಕ್ಕೆ ಬಂದು ತನ್ನ ಉಪಯೋಗಕ್ಕಾಗಿ ಒಂದು ಹಸುವನ್ನು...

ರೂಪಾಂತರ - metamorphasis

Image
  ಬೆಳಗಿನ ವಾಕಿಂಗ್ ಸಮಯದಲ್ಲಿ ಪರಿಚಯವಾಗಿ, ಭೇಟಿಯಾಗುವ ಹಿರಿಯರು, ರಾಮಣ್ಣನವರು. ಅವರು ಯಾವಾಗಲೂ ಶುಭ್ರವಾದ ಬಿಳಿಯ ಪ್ಯಾಂಟ್ ಮತ್ತು ಅರ್ಧ ತೋಳಿನ ಬಿಳಿಯ ಶರ್ಟ್ ನಲ್ಲಿ ಕಾಣಿಸುತ್ತಿದ್ದವರು. ಬೆಳ್ಳಿಯ ಕೂದಲಿನ, ಬಿಳಿ ಬಣ್ಣದ,    ಬಿಳಿಯ ಉಡುಗೆ ತೊಡುಗೆಯ ರಾಮಣ್ಣನವರನ್ನು ಬಣ್ಣ ಬಣ್ಣದ ಪ್ಯಾಂಟ್ ಮತ್ತು ಟೀ ಶರ್ಟ್ ನಲ್ಲಿ ಕಂಡಾಗ ಆಶ್ಚರ್ಯ ಹಾಗೂ ಸಂತೋಷ ಒಟ್ಟಿಗೆ ಆಯ್ತು. smart young man ತರ ಕಾಣ್ತೀರ ಅಂತ ಮೆಚ್ಚುಗೆಯನ್ನು ಸೂಚಿಸಿದೆ. ಈಚೆಗೆ ಜಪಾನ್ ಗೆ ಹೋಗಿ ಬಂದ ರಾಮಣ್ಣನವರಿಗೆ, ಅಲ್ಲಿ ಉಪಯೋಗಿಸಲು, ಮಗಳು ತಂದುಕೊಟ್ಟ ಐದಾರು ಜೊತೆ ಬಣ್ಣ ಬಣ್ಣದ ಬಟ್ಟೆಗಳನ್ನು, ಸವೆಸುವ/ ಅನುಭವಿಸುವ ಅವಕಾಶ. ಹೆಣ್ಣು ಮಕ್ಕಳ ಈ ಪ್ರೀತಿಯನ್ನು ಅನುಭವಿಸುವುದೇ ಒಂದು ಆನಂದ.  ಈ ಸಮಯದಲ್ಲಿ ಜ್ಞಾಪಕಕ್ಕೆ ಬಂದದ್ದೇ metamorphasis ಪದ. ಚಿಟ್ಟೆಯ ಜೀವನಚಕ್ರ ಪಾಠದಲ್ಲಿ,   ಹೈಸ್ಕೂಲಿನಲ್ಲಿ ಓದಿದ್ದು. ಕಂಬಳಿ ಹುಳುವಿನಿಂದ ಚಿಟ್ಟೆಯಾಗಿ ರೂಪಾಂತರಗೊಂಡು.. ಮೊಟ್ಟೆ ಇಟ್ಟು ಮತ್ತೆ ಕಂಬಳಿ ಹುಳು ಆಗುವ ಜೀವನಚಕ್ರ. ಹಳ್ಳಿಯಲ್ಲಿ ದಿನ ದಿನವೂ ಕಣ್ಣಿಗೆ ಬೀಳುತ್ತಿದ್ದ ಮುಟ್ಟಿದರೆ ಚುಚ್ಚಿ ಕೈ ನವೆ ಆಗುತ್ತಿದ್ದ ಕಂಬಳಿ ಹುಳ ಹಾಗೂ ಕೈಯಲ್ಲಿ ಹಿಡಿಯಲು ಇಷ್ಟಪಟ್ಟು, ಪ್ರಯತ್ನಿಸುತ್ತಿದ್ದ ಬಣ್ಣ ಬಣ್ಣದ ಚಿಟ್ಟೆಗಳ ಮಧ್ಯೆ ಇಂಥ ಒಂದು ಸಂಕೀರ್ಣ ಸಂಬಂಧ ಇದೆ ಎಂದು ತಿಳಿದಾಗ ಆಶ್ಚರ್ಯವಾದದ್ದು ಸಹಜವೇ ಅಲ್ಲವೇ? ಶರ್ವ ( ನನ್ನ ನ...

ಗೆಳೆತನ ಅಂದ್ರೆ. ...

Image
 ವಿದ್ಯಾರ್ಥಿ ಜೀವನದ ಪ್ರಸಂಗಗಳು ಲೇಖನಕ್ಕೆ ಬಂದ ಒಂದು ಪ್ರತಿಕ್ರಿಯೆ ಇದು. ಓದಿದ ಕೂಡಲೇ ಖುಷಿಯಾಯಿತು, ಇದನ್ನು ಬರೆದಿರುವುದು ಪ್ರೇಮನೇ (ಭದ್ರಾವತಿಯ ಪ್ರೇಮ್ ಕುಮಾರ್... ಪ್ರೇಮ್) ಎಂದು ಖಚಿತವಾಯಿತು. ತಕ್ಷಣ ಅವನಿಗೆ ಫೋನ್ ಮಾಡಿದೆ... ಸಂತೋಷದ ತರಂಗಗಳು ನಮ್ಮಿಬ್ಬರ ಮಧ್ಯೆ ಹರಿದಾಡಿದವು. ಸುಮಾರು 10 ನಿಮಿಷಗಳ ಕಾಲದಲ್ಲಿ ಏನೆಲ್ಲ ಮಾತಾಡಿ, ಹಳೆಯದನ್ನು ನೆನಪಿಸಿಕೊಂಡು, ಭೇಟಿ ಮಾಡುವ ನಿರ್ಧಾರ ಮಾಡಿದ್ದಾಯ್ತು.  ಈ ಪ್ರೇಮ ವಿಶಿಷ್ಟ ವ್ಯಕ್ತಿ. ಅವನನ್ನು ಪ್ರೇಮ್... ಅಂದರೆ ಗಂಡಸು ಎಂದು ಕರೆಸಿಕೊಳ್ಳುವ ಇಚ್ಛೆ.... ಆದರೆ ಮೋತಿ ಕರೆಯುತ್ತಿದ್ದದ್ದು ಪ್ರೇಮ ಎಂದು, ಸಹಜವಾಗಿ ನಾನೂ ಅದನ್ನೆ ಉಪಯೋಗಿಸಿದೆ. ನನ್ನ ನೆನಪಿನಲ್ಲಿರುವಂತೆ,  ಇದುವರೆಗೆ 4 ಸಲ ಭೇಟಿ ಮಾಡಿರಬಹುದೇನೋ.. ಅದರಲ್ಲಿ ಒಂದು ಬಾರಿ ಮಾತ್ರ ಒಂದು ವಾರಕ್ಕೂ ಹೆಚ್ಚು, ಜೊತೆ ಜೊತೆಯಲ್ಲೇ ಕಳೆದದ್ದು. ಇಷ್ಟು ಕಡಿಮೆ ಒಡನಾಟದಲ್ಲಿ, ಅದೆಷ್ಟು ಬಾಂಧವ್ಯ ಬೆಳೆದಿದೆ ಎಂದರೆ.. ಆ ಆತ್ಮೀಯತೆ ಅನುಭವಿಸಿಯೇ ತೀರಬೇಕು. ಆ ವಯಸ್ಸಿನ ಪ್ರಭಾವವೋ, ಗೆಳೆತನಕ್ಕೆ ಬಿದ್ದ ಭದ್ರ ಬುನಾದಿಯೋ.. ಇಂದಿಗೂ ಚೆನ್ನಾಗಿದೆ.    ಅವನು ನೆನಪಿಸಿದ ಬಿದರಗೂಡಿನ ಪ್ರವಾಸ ಈ ಲೇಖನದ ತಿರುಳು. ಅದು 1968 - 69 ರ ಸಮಯ . ಓದು ಮುಗಿಸಿ, ಸರಿಯಾದ, ಪೂರ್ಣ ಪ್ರಮಾಣದ  ಕೆಲಸವಿಲ್ಲದ ದಿನಗಳು. ಸುಮಾರು 12 ರ ತನಕ Bangalore Institute of Engineering ನಲ್ಲಿ ಪಾಠ ಮಾಡಿ ...

ಅಪ್ಪಂದಿರ ದಿನ

Image
 ಒಂದು ಕಾರ್ಯಕ್ರಮದ ನಿಮಿತ್ತ ನನ್ನ ಹೆಂಡತಿ ಬೆಳಿಗ್ಗೆ 9:00 ಗಂಟೆಗೆ ಮನೆಯಿಂದ ಹೊರಟಳು. ಒಂಟಿಯಾಗಿದ್ದೆ... ಏನು ತೋಚದೆ.. ಹಾಗೆ ಮಲಗಿದೆ... ಯಾವಾಗಿನಂತೆ ಸುಖ ನಿದ್ರೆಗೆ ಜಾರಿದೆ. ಟೆಲಿಫೋನ್  ಕರೆಯ ಶಬ್ದ ಎಲ್ಲೋ ಕೇಳಿಸಿದಂತಾಗಿ, ಅರೆ ನಿದ್ರೆಯಲ್ಲಿಯೇ ಕಿವಿಯ ಬಳಿ ಇಟ್ಟೆ... " ಏನ್ ಮಾಡ್ತಾ ಇದ್ದೀಯಾ?" ಆ ಕಡೆಯಿಂದ ಧ್ವನಿ... ಇಷ್ಟು ಗತ್ತಿನಿಂದ ಕೇಳುವ ಒಂದೇ ವ್ಯಕ್ತಿ ಅದು ನನ್ನ ಮಗಳು ಚೈತ್ರ " ನಿದ್ದೆ..." " ಸೋಮಾರಿ ಕಟ್ಟೆ" ನನ್ನ ಬೈಗುಳವೇ ನನಗೆ ತಿರುಗುಬಾಣವಾಯಿತು "thank you..." " ತಿಂಡಿ ಏನ್ ತಿಂದೆ" " ಇನ್ನೂ ಸ್ನಾನನೂ ಮಾಡಿಲ್ಲ, ಯೋಚನೇನು ಮಾಡಿಲ್ಲ" " ಇಲ್ ಕೇಳಿಸ್ಕೋ... ನೀನು ಏನೂ ಮಾಡಕ್ಕೆ ಹೋಗ್ಬೇಡ, ನಾನು, ನೀನು, ವಿಸ್ಮಯ ಊಟಕ್ಕೆ ಹೋಗೋಣ... ಬಾಳೆ ಎಲೆ ಊಟ... ನಾನ್ ಬುಕ್ ಮಾಡ್ತೀನಿ..ಹನ್ನೆರಡೂವರೇಗೆ ಬರ್ತೀನಿ.. ನೀನ್ ರೆಡಿಯಾಗಿರು.. ನನ್ ಗಾಡಿಲ್ಲೇ ಕರ್ಕೊಂಡು ಹೋಗ್ತೀನಿ" " ಅಯ್ಯೋ.. ಬೇಡ ಕಣೆ ಆಟೋದಲ್ಲಿ ಹೋಗೋಣ" " ಸುಮ್ನೆ ಆಟೋ ಯಾಕೆ..." " ಹಾಗಾದ್ರೆ ನನ್ ಗಾಡಿಯಲ್ಲಿ ನಾನು.. ನಿನ್ ಗಾಡೀಲಿ ನೀನು ನಿನ್ ಮಗಳು ಹೋಗೋಣ" " ಎರಡೆರಡು ಗಾಡಿ ಯಾಕೆ.. ಒಂದೇ ಸಾಕು..." " ಹಾಗಾದ್ರೆ ನನ್ ಗಾಡಿಲಿ ಹೋಗೋಣ..."  " ಆಯ್ತು... ಬೇಗ ರೆಡಿಯಾಗು..." ಫ...

ವಿದ್ಯಾರ್ಥಿ ಜೀವನದ ಪ್ರಸಂಗಗಳು

Image
ಲಾರೆಲ್ ಅಂಡ್ ಹಾರ್ಡಿ: ಡಿಪ್ಲೋಮಾ ಓದುವ ಕಾಲ. ಸಿನಿಮಾ ನೋಡುವ ಹುಚ್ಚು. ನನ್ನ ಸ್ನೇಹಿತ ಶಂಕರನ ತಂದೆ ಸಂಯುಕ್ತ ಕರ್ನಾಟಕ ಪತ್ರಿಕೆಯ ಅಡ್ವರ್ಟೈಸ್ಮೆಂಟ್ ಮ್ಯಾನೇಜರ್. ಅವರಿಗೆ ಸಿನಿಮಾ ಗೆ ಫ್ರೀ ಪಾಸ್ ಸಿಗುತ್ತಿತ್ತು... ಅದನ್ನು ನಾವುಗಳು ಉಪಯೋಗಿಸುತ್ತಿದ್ದೆವು. ಜೊತೆಗೆ ವಿಜಯಲಕ್ಷ್ಮಿ ಟಾಕೀಸ್ ನಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ. ಅಲ್ಲಿ ಬರುತ್ತಿದ್ದದ್ದು ಬರೀ ಇಂಗ್ಲಿಷ್ ಚಿತ್ರಗಳು.  ಲಾರೆಲ್ ಅಂಡ್ ಹಾರ್ಡಿ ಚಿತ್ರಗಳು ನಮಗೆ ಬಲು ಪ್ರಿಯ. ಅರ್ಥವಾಗದ ಮಾತು.. ಆದರೆ ನಟನೆ ಮಾತ್ರ ನಗೆ ಹೆಚ್ಚಿಸುತ್ತಿತ್ತು. ಹೀಗೊಂದು ದಿನ ಲಾರೆಲ್ ಅಂಡ್ ಹಾರ್ಡಿ ಯ ಚಿತ್ರವನ್ನು ನೋಡಿ ನಾನು ಮತ್ತು ನನ್ನ ಸ್ನೇಹಿತ ಶಿವ ( ಕೆ ಎನ್ ಶಿವಶಂಕರ್) ನಮ್ಮ ಮನೆಗೆ ಬಂದೆವು.  ನಮ್ಮ ಮನೆಯಲ್ಲೊಂದು ಆರಾಮ ಕುರ್ಚಿ ಇತ್ತು. ಕೂರಲು ಬಟ್ಟೆಯ ಆಸನ. ಬಟ್ಟೆಯ ಮೇಲೆ ಏನೋ ಕಸ ಇದ್ದು, ಅದನ್ನು ತೆಗೆಯಲು, ಬಟ್ಟೆಯನ್ನು ಒದರಿದೆ. ಪಕ್ಕದ ಕುರ್ಚಿಯ ಮೇಲೆ ಕೂತಿದ್ದ ಶಿವನ ಬಟ್ಟೆಯ ಮೇಲೆ ಬಿದ್ದಿರಬಹುದು.. ನಾನು ಕೂರುವ ತನಕ ಕಾದಿದ್ದ ಶಿವ ಎದ್ದು ನಿಂತು, ಒಂದು ಮಾತಿಲ್ಲದೆ, ತನ್ನ ಶರಟನ್ನು ನನ್ನ ಮೇಲೆ ನಿಧಾನವಾಗಿ ಒದರಿ, ತನ್ನ ಕುರ್ಚಿಯ ಮೇಲೆ ಕೂತ. ಇಬ್ಬರು ಜೋರಾಗಿ ನಕ್ಕೆವು... ಇದು ಲಾರೆಲ್ ಅಂಡ್ ಹಾರ್ಡಿ ಚಿತ್ರದ ಪ್ರಭಾವ. ಆ ಕ್ಷಣದ ಶಿವನ ನಟನೆ ಇಂದಿಗೂ ನೆನಪಿದೆ. ಹೆಸರು ಹನುಮಂತರಾಯ: ಅದೇ ಕಾಲಘಟ್ಟದಲ್ಲಿ ಓದುತ್ತಿದ್ದದ್ದು ಶ್ರೀ ಜಯ ಚಾಮರಾಜೇಂ...

Mission ಮುಳಬಾಗಿಲು

Image
Mission ಮುಳಬಾಗಿಲುವಿನ ಗುರಿ: 1. Mission ನ ದಿನಾಂಕ: 09 ಜೂನ್ 2026 2. ಮುಳಬಾಗಿಲು ಆಂಜನೇಯನ ದರ್ಶನ 3. ಮುಳಬಾಗಿಲು ದೋಸೆ ತಿನ್ನುವುದು 4. ಸಾರ್ವಜನಿಕ ಸಾರಿಗೆ ಮಾತ್ರ ಉಪಯೋಗಿಸುವುದು ಈ ಮಿಷನ್ ನ ರೂಪುರೇಷೆ  ತರಾತುರಿಯಲ್ಲಿ ನಿರ್ಧಾರವಾಗಿದ್ದು, ಜೂನ್ ಎಂಟರ ರಾತ್ರಿ ಸುಮಾರು 10 ಗಂಟೆಗೆ.  9ರ ದಿನಾಂಕ ನಿರ್ಧಾರವಾಗಲು ಬಹು ಗಂಭೀರ ಕಾರಣ ಇತ್ತು.. ಅಂದು ನನ್ನ ಹೆಂಡತಿ ವಿಜಯಳ ಸ್ನೇಹಿತೆಯರ ಗುಂಪು, ಅಧಿಕ ಮಾಸದ ಕಾರ್ಯಕ್ರಮಕ್ಕಾಗಿ ನಮ್ಮ ಮನೆಯಲ್ಲಿ ಸೇರುವುದಿತ್ತು. ಅಧಿಕಾಧಿಕ ವಿಶೇಷ ಕಾರ್ಯಕ್ರಮಗಳು ಸಂಜೆಯವರೆಗೂ ರೂಪಿಸಿದ್ದ ಕಾರಣ, ನಾನು ಮನೆಯಲ್ಲಿರುವುದು ಅಷ್ಟು ಸಮಂಜಸವೆನಿಸಲಿಲ್ಲ. ಮನೆಯ ಕೋಣೆಯಲ್ಲಿ ಬಂದಿಯಾಗಿರುವ ಬದಲು, ಹೊರಹೋಗುವ ನಿರ್ಧಾರಮಾಡಿದೆ. ಮುಂದಿನ ಪ್ರಶ್ನೆ ಮುಳಬಾಗಿಲೇ ಏಕೆ? ಹಿಂದೆ ಒಂದು ಬಾರಿ ಮುಳಬಾಗಿಲಿಗೆ ಹೋಗಿದ್ದಾಗ, ಸಮಯಕ್ಕೆ ಸರಿಯಾಗಿ ಹೋಗಲಿಲ್ಲವೆಂದು ಮುನಿಸಿಕೊಂಡು ಮುನಿಆಂಜನೇಯನಾದ ಕಾರಣ ನಮಗೆ ದರುಶನವನ್ನೇ ನೀಡಿರಲಿಲ್ಲ. ಹಾಗಾಗಿ ಆತನ ದರುಶನ ಭಾಗ್ಯ ಪಡೆಯೋಣವೆಂದು ಅಲ್ಲಿಗೆ ಹೋಗಲು ನಿರ್ಧರಿಸಿದ್ದು. 9ರ ಬೆಳಿಗ್ಗೆ, ಉತ್ಸಾಹದಿಂದ ತಯಾರಾಗಿ, ಬಿಸಿ ಬಿಸಿ ಉಪ್ಪಿಟ್ಟನ್ನು ತಿಂದು, ಮನೆಯ ಹತ್ತಿರದ ಬಸ್ ಸ್ಟಾಪ್ ಹತ್ತಿರ ಬರುತ್ತಿದ್ದಂತೆ ಕಂಡದ್ದು ಮೇಜೆಸ್ಟಿಕ್ ಗೆ ಹೋಗುವ ಬಸ್.  ವಾಹ್... ಎಂಥ ಪ್ರಾರಂಭ.  ಬಸ್ ಹತ್ತಿ, ಕೂಡಲು ಜಾಗವೂ ಸಿಕ್ಕಿದಾಗ ನನ್ನ ಸಂತೋಷ ಮೇರೆ ಮೀರಿತ್ತು...

Toilet ನ ಸುತ್ತ

Image
ಹೋದ ಶನಿವಾರ ಬೆಳಿಗ್ಗೆಯಿಂದ ಸೋಮವಾರ ಮಧ್ಯಾಹ್ನದ ತನಕ, ಮನೆಯ ಮುಂದೆ ಹರಿಯುತ್ತಿದ್ದ ಕೊಳಚೆಯ ನೀರು ಮೂಗು ಮುಚ್ಚಿಕೊಂಡು ಹೋಗುವಂತೆ ಮಾಡಿತ್ತು. ಸರಿ ಹೋಯಿತು ಎಂದು ಸಂತೋಷಪಟ್ಟು ರಾತ್ರಿ ನಿದ್ದೆ ಮಾಡಿ ಬೆಳಿಗ್ಗೆ ಏಳುವಷ್ಟರಲ್ಲಿ ಮತ್ತೆ ಕೊಳಚೆನೀರಿನ ಹರಿವು ಪ್ರಾರಂಭವಾಗಿತ್ತು. ಅಂತೂ BWSSB ಯವರು ಮಧ್ಯಾಹ್ನದ ಹೊತ್ತಿಗೆ ಸರಿ ಮಾಡಿದ್ದಾರೆ... ಅದಕ್ಕೆ ಇರಬೇಕು ಕಕ್ಕಸು ಎಂದಾಕ್ಷಣ, ಗಲೀಜು, ಕೊಳಕು ಎಂದು ಮೂಗು ಮುಚ್ಚಿಕೊಳ್ಳುವುದು / ಮೂಗು ಮುರಿಯುವುದು ಸಾಮಾನ್ಯ.  ಮಕ್ಕಳ ಒಂದು ಸಾಮಾನ್ಯ ಚಟುವಟಿಕೆಯನ್ನು ಗಮನಿಸಿ.. ಅವರು ಮಾಡಿದ ಕಕ್ಕದೊಡನೆ ಆಟವಾಡುವಾಗ ಅವರಿಗೆ ಏನೋ ಸಂತೋಷ. ಅದಕ್ಕೆ ಆ ವಯಸ್ಸಿನಲ್ಲಿ ಕಕ್ಕ.. ಗಲೀಜು ಎಂದು ತಲೆಯಲ್ಲಿ ತುಂಬಿದ ಕಾರಣವೋ ಏನೋ, ಈ ಭಾವ ಎಲ್ಲಾ ಮನುಷ್ಯರಲ್ಲೂ ಕಂಡುಬರುತ್ತದೆ ಯಾಕೋ ವಿಷಯ ವಾಸನಾಯುಕ್ತವಾಗಿದೆ ಎಂದನಿಸುತ್ತದೆಯೇ?  ವಾಸನೆ ಎಂಬ ಪದಕ್ಕೆ ಹಿಂದಿನ ನೆನಪುಗಳು, ಜನ್ಮಾಂತರದ ಘಟನೆಗಳ ನೆನಪುಗಳು ಎಂಬ ಅರ್ಥವೂ ಉಂಟು. ಹಾಗಾಗಿ ಇದು ನೀವಂದುಕೊಂಡಂಥ ಬರೀ ವಾಸನೆಯ ವಿಷಯವಲ್ಲ.. ಹಳೆಯ ನೆನಪುಗಳ ಜೊತೆ ಥಳುಕು ಹಾಕಿಕೊಂಡ ಹೊಸ ವಿಷಯಗಳೂ ಉಂಟು.   ನನ್ನ ನೆನಪಿನಲ್ಲಿರುವಂತೆ, ನಮ್ಮ ಹಳ್ಳಿ ಮನೆಯ  ಹಿತ್ತಿಲ  ಬಯಲು ಮೊದಲ ಕಕ್ಕಸು.   ಮನೆಯಲ್ಲಿ ಅದಕ್ಕಾಗಿ ಜಾಗವಿದ್ದರೂ, ಆ ಗುಂಡಿಯಲ್ಲಿ ಬೀಳುವ ಭಯದಿಂದ ಅಲ್ಲಿಗೆ ಹೋಗುತ್ತಿರಲಿಲ್ಲ. ಆದರೆ ವರ್ಷಕ್ಕೊಮ್ಮೆ, ...

ಕುರುಡು ಪ್ರೀತಿ ತಂದ ಫಜೀತಿ

Image
ಬುಧವಾರ ಸಂಜೆ ಆಪ್ತಸಮಾಲೋಚನೆಯ ಸಮಯ. ಪ್ರಸನ್ನ ಆಪ್ತ ಸಲಹಾ ಕೇಂದ್ರಕ್ಕೆ ಹೊರಡಲು ತಯಾರಿ ಮಾಡಿಕೊಳ್ಳುತ್ತಿದ್ದೆ... ಆಗ ಬಂದದ್ದು ದೂರವಾಣಿ ಕರೆ... ಅತ್ತ ಕಡೆಯಿಂದ ನಮಸ್ಕಾರದ ನಂತರ ಕೇಳಿದ್ದು ಎಷ್ಟು ಹೊತ್ತಿಗೆ ಬರುತ್ತೀರಾ? ಮಾತಿನಿಂದ ಅರ್ಥವಾಯಿತು ಇದು ಆಪ್ತ ಸಲಹೆ ವಿಚಾರಕ್ಕಾಗಿ ಎಂದು. ಇನ್ನೇನು  ಹೊರಟಿದ್ದೇನೆ, 20 ನಿಮಿಷದಲ್ಲಿ ಅಲ್ಲಿರುತ್ತೇನೆ, ಎಂದು ಹೇಳಿ ಮಾತು ಮುಗಿಸಿದೆ. ಪ್ರಸನ್ನ ಆಪ್ತ  ಸಲಹಾ ಕೇಂದ್ರದ ಬಾಗಿಲು ಹೊಕ್ಕಂತೆಯೇ ಎದುರಾದದ್ದು ಮಧ್ಯ ವಯಸ್ಸಿನ ಇಬ್ಬರು ಗಂಡಸರು, ನನಗಾಗಿ ಕಾಯುತ್ತಿದ್ದವರು. ಪರಿಚಯದ ನಂತರ ಮಾತು ಪ್ರಾರಂಭ ಮಾಡುವ ಸಮಯ " ಮೀರು ಚಪ್ಪಂಡ ಸರ್..." ಎಂಬ ಮಾತು ಹೇಳಿದ್ದು ನಂತರ ತಿಳಿದಂತೆ ಹುಡುಗಿಯ ಅಪ್ಪ. ಅವರೊಂದಿಗಿನ ಮಾತಿನ ಸಾರಾಂಶ: ಇಬ್ಬರು ಬೀಗರುಗಳು. ಮಕ್ಕಳ ಮದುವೆಯಾಗಿ ಇನ್ನೂ ವರ್ಷ ಕಳೆದಿಲ್ಲ. ಚಿಕ್ಕವಯಸ್ಸಿನ  ಮಕ್ಕಳಿಗೆ ತಮ್ಮ ಇಚ್ಛೆಗೆ ವಿರುದ್ಧ, ಆದರೆ   ಅನಿವಾರ್ಯವಾಗಿ ಮದುವೆ  ಮಾಡಿ ಮುಗಿಸಿದ್ದಾರೆ. ಎರಡು ಕುಟುಂಬಗಳ ಹಣಕಾಸಿನ ಪರಿಸ್ಥಿತಿ ಹೊಂದಾಣಿಕೆಯಾಗದಿರುವುದೇ ದೊಡ್ಡ ವಿಚಾರ. ಹುಡುಗಿಯ ಮನೆಯವರು ಉಳ್ಳವರು, ಹುಡುಗನ ಮನೆಯವರು ಮಧ್ಯಮ ವರ್ಗದ ಕುಟುಂಬ. ಸದ್ಯದ ಪರಿಸ್ಥಿತಿಯಲ್ಲಿ, ಮಗಳು ತವರು ಮನೆಗೆ ಬಂದಿದ್ದಾಳೆ.. ಗಂಡನ ಮನೆಗೆ ಹೋಗಲು ಮನಸ್ಸಿಲ್ಲ. ಯಾವ ವಿಷಯವನ್ನು ಮಾತನಾಡುತ್ತಿಲ್ಲ.  ಈ ಕಡೆ ಮಗನ ಮನೆಯಲ್ಲೂ ಬಿಗು ವಾತಾವರಣ, ಹುಡುಗನ...

ಪದವಿ - ಜ್ಞಾನ - ಸ್ಥಾನಮಾನ

Image
  ಹಳ್ಳಿಯಿಂದ ಬೆಂಗಳೂರಿಗೆ ಹೈಸ್ಕೂಲ್ ಸೇರಲು ಬಂದ ಸಮಯ. ಹಳ್ಳಿಯಲ್ಲಿ ಓದಿದ್ದು ಕನ್ನಡ ಮೀಡಿಯಂ... ಇಲ್ಲಿ ಬಂದು ಸೇರಿದ್ದು ಇಂಗ್ಲಿಷ್ ಮೀಡಿಯಂ. ಉಪಾಧ್ಯಾಯರುಗಳೆಲ್ಲ ಕನ್ನಡದಲ್ಲಿ ಮಾತನಾಡುತ್ತಿದ್ದರೂ... ಪುಸ್ತಕಗಳು, ಅವರು ಕೊಡುತ್ತಿದ್ದ ನೋಟ್ಸ್, ಹಾಗೂ ವಿಷಯ ಇಂಗ್ಲೀಷಿನಲ್ಲಿ ಇರುತ್ತಿತ್ತು.  ಇದರ ಜೊತೆಗೆ ನಾನು ಹಾಕುತ್ತಿದ್ದ ಲಾಡಿಯಿಂದ ಕಟ್ಟುವ ಚಡ್ಡಿ, ಹಳ್ಳಿಯಲ್ಲಿ ಹೊಲಿದ ಶರಟು ಬಟ್ಟೆಗಳು,  ನನ್ನ ಸಹಪಾಠಿಗಳೊಂದಿಗೆ ಹೋಲಿಸಿ ನೋಡಿದಾಗ ನನ್ನಲ್ಲಿದ್ದ ಹಿಂಜರಿಕೆ ಜಾಸ್ತಿಯಾಗಿ ಒಂದು ವಿಧವಾದ ಕೀಳರಿಮೆ ಬಂದಿದ್ದು ಸತ್ಯ. ಕಾಲಕ್ರಮೇಣ ಇದನ್ನು ಹೋಗಲಾಡಿಸಿಕೊಂಡೆನಾದರೂ, ಗಣಿತದ ಫಾರ್ಮುಲಾಗಳು, ಪೈಥಾಗರಸ್ ಥಿಯರಂ, ಆರ್ಕಿಮಿಡಿಸ್ ಪ್ರಿನ್ಸಿಪಲ್, ನ್ಯೂಟನ್ ಲಾಸ್ ಆಫ್ ಮೋಶನ್ ಎಲ್ಲವನ್ನು ಅರ್ಥೈಸಿಕೊಳ್ಳುವುದು ಕಷ್ಟವೆನಿಸುತ್ತಿತ್ತು.  ಇದೆಲ್ಲಾ ಕಲಿತು ಆಗಬೇಕಾದುದೇನು ಎಂದು ಅನಿಸಿದ್ದೂ ಉಂಟು. ಆ ಸಮಯದಲ್ಲೇ ಯಾರೋ ಹೇಳಿದ..... ನ್ಯೂಟನ್ ಮೇಲಿನ ವ್ಯಂಗ್ಯ ಚಿತ್ರಣ.  ಕೆಲಸವಿಲ್ಲದ ಸೋಮಾರಿಯೊಬ್ಬ ಸೇಬು ಹಣ್ಣಿನ ಮರದ ಕೆಳಗೆ, ಏನೋ ಯೋಚಿಸುತ್ತಾ ಮಲಗಿದ್ದಾಗ, ಆತನ ಮೇಲೆ ಬಿದ್ದ ಸೇಬು ಹಣ್ಣಿನಿಂದ, ಆತನಿಗೆ ಹೊಳೆದದ್ದು ಭೂಮಿಯ ಗುರುತ್ವಾಕರ್ಷಣೆ ಶಕ್ತಿಯ ( gravitational force ) ಬಗ್ಗೆ. ಈ ವಿಷಯ ಈಗ ನಮ್ಮ ತಲೆಯನ್ನು ವೃಥಾ ತಿನ್ನುತ್ತಿದೆ... ಅನ್ನುವ ಕಥೆ ಸತ್ಯಕ್ಕೆ ಹತ್ತಿರವೇನೋ ಎನಿಸುತ್ತಿತ್ತು....

ಸಮಯಾ ಸಮಯ - ಕಾಲಾನುಕಾಲ

Image
1988 ರ ಸಮಯ, ಭಾನುವಾರ ಬೆಳಿಗ್ಗೆ  10 ಘಂಟೆಗೆ, ದೂರದರ್ಶನದಲ್ಲಿ BR Chopra ಅವರು ತಯಾರಿಸಿದ ಮಹಾಭಾರತ ಧಾರಾವಾಹಿ  ಪ್ರಸಾರವಾಗುತ್ತಿತ್ತು. ಭಾರತದ ಬಹು ಮನೆಗಳಲ್ಲಿ ಟಿವಿಗೆ ಪೂಜೆಮಾಡಿ, ಮನೆಮಂದಿಯೆಲ್ಲಾ ಕುಳಿತು ನೋಡುತ್ತಿದ್ದ ಸಮಯ.  ಮೈ ಸಮಯ್ ಹೂ ಎಂದು ಪ್ರಾರಂಭವಾದ ಮೊದಲ ಸಂಚಿಕೆ... ಕಥೆಯ ಸೂತ್ರಧಾರ  ಸಮಯ. ಸಂಚಿಕೆಯ ಪ್ರಾರಂಭದಲ್ಲಿ ಕಥೆಯ ಕೊಂಡಿಯನ್ನು ಜೋಡಿಸುತ್ತಿದ್ದದ್ದು. ಸಮಯ ಎಲ್ಲ ಆಗುಹೋಗುಗಳಿಗೆ ಸಾಕ್ಷಿಯಾಗಿದ್ದಂತೆ ಅದನ್ನು ನಿರೂಪಿಸಿದ್ದು. ಸಂಚಿಕೆಗಳಲ್ಲಿ ಎಷ್ಟು ಲೀನವಾಗಿರುತ್ತಿದ್ದೆವೆಂದರೆ, ಸಮಯ ಕಳೆದದ್ದು ಗೊತ್ತಾಗುತ್ತಿರಲಿಲ್ಲ. ಹಾಗೇ ಅಲ್ಲವೇ..ಸಂತೋಷದಲ್ಲಿದ್ದಾಗ ಸಮಯದ ಪರಿವೆಯೇ ಇಲ್ಲ. ಅದೇ ದುಃಖ, ಆತಂಕ ಹಾಗೂ ಕಾಯುವ ಸಮಯದಲ್ಲಿ , ಗಡಿಯಾರ ಮುಂದಕ್ಕೇ ಹೋಗುವುದಿಲ್ಲವೇನೋ ಎನಿಸುತ್ತದೆ.  ಈ ವಿಚಾರದಲ್ಲಿ ನಂದೊಂದು  ಅನುಭವ. ಕರೆಂಟೇ ಇಲ್ಲದ,    ಗಡಿಯಾರವೂ ಇಲ್ಲದ  ದೊಡ್ಡಜಾಲದ ಮನೆಯಲ್ಲಿ ಬೆಳೆದ ನಾನು, ಸೂರ್ಯ ಮುಳುಗಿ, ಕತ್ತಲಾದ ನಂತರ, ಸ್ವಲ್ಪ ಹೊತ್ತು ದೀಪದ ಬೆಳಕಿನಲ್ಲಿ ಓದಿದಂತೆ ಮಾಡಿ (ಅದು ಅಪ್ಪನ ಭಯದಿಂದ)  ಊಟ , ನಿದ್ದೆ ... ದಿನ ಮುಗಿದಂತೆ. ಬೆಂಗಳೂರಿಗೆ ಬಂದ ಹೊಸತು, ಹೈಸ್ಕೂಲು, ಹಾಗಾಗಿ ಓದು ಜಾಸ್ತಿ ಇರಬೇಕು ಎಂಬುದು ಮನೆಯವರ ಅನಿಸಿಕೆ. ನನ್ನ ಅಭ್ಯಾಸದಂತೆ, ಕತ್ತಲಾಗಿ ಸ್ವಲ್ಪ ಹೊತ್ತು ಓದಿದರೆ, ಸಮಯ 7 ಘಂಟೆಯೂ ಆಗುತ್ತಿರಲಿಲ್ಲ. ನನ...

ಮಳೆ ಬಂತು ಮಳೆ

Image
  ಬಿಸಿಲ ಬೇಗೆಯಿಂದ ಬಳಲುತ್ತಿದ್ದ, ಜಾತಕ ಪಕ್ಷಿಯಂತೆ ಮಳೆಗಾಗಿ ಕಾಯುತ್ತಿದ್ದ ಬೆಂಗಳೂರಿಗರಿಗೆ 29 ನೇ ತಾರೀಕಿನ ಸಂಜೆಯ ಮಳೆ ಒಂದಷ್ಟು ನೆಮ್ಮದಿಯನ್ನು ತಂದಿತು. ಸೆಕೆ, ಬಿಸಿಲ ಬೇಗೆ, ಏರಿದ ಉಷ್ಣಾಂಶದ ಬಗ್ಗೆಯೇ ಸುತ್ತುತ್ತಿದ್ದ ಮಾತುಕತೆ, ಸಂಪೂರ್ಣ ಬದಲಾವಣೆಯಾಗಿ ಮಳೆ ತಂದ ತಂಪು, ಆಲಿಕಲ್ಲು ಬಿದ್ದದ್ದು, ಮರಗಳು ಉರುಳಿದ್ದು, ಕೆಳ ಸೇತುವೆಗಳಲ್ಲಿ ನೀರು ತುಂಬಿದ್ದರ ಬಗ್ಗೆ ಹೊರಳಿತು. ಪ್ರಕೃತಿಯ ಬದಲಾವಣೆಯೊಂದಿಗೆ ಹೊಂದಿಕೊಂಡು ಹೋಗಬೇಕಾದದ್ದು ಅನಿವಾರ್ಯ. ಸಾಮಾನ್ಯವಾಗಿ 32 ಡಿಗ್ರಿ ಮುಟ್ಟಿದಾಗ, ಬೆಂಗಳೂರಿಗೆ ಮಳೆ ಖಾತ್ರಿ ಎಂಬ ನಂಬಿಕೆಯು ಈ ಬಾರಿ ಹುಸಿಯಾಯಿತು. 36 ಡಿಗ್ರಿ ಮುಟ್ಟಿದರೂ ಮಳೆಯ ಲಕ್ಷಣವೇ ಕಾಣದೆ ಪರದಾಡಿದ್ದಾಯ್ತು.  ಇದಕ್ಕೆ   EL NINO  (ಎಲ್ ನೀನೋ) ... ದೂರದ ಪೆಸಿಫಿಕ್ ಸಾಗರದಲ್ಲಿ ಆಗುವ ಬಿಸಿ ಏರಿಕೆ, ಕಾರಣ ಎಂದು, ತಜ್ಞರ ಹೇಳಿಕೆ.   ಅದಕ್ಕೆ ಕಾರಣ, ಮಾನವ ಕುಲ ಪ್ರಕೃತಿಯ ಮೇಲೆ ನಡೆಸಿದ ಅತ್ಯಾಚಾರ. ತನ್ನ ಸ್ವಾರ್ಥಕ್ಕಾಗಿ, ದುರಾಸೆಗಾಗಿ, ಪ್ರಕೃತಿಯಲ್ಲಿನ ಸಂಪನ್ಮೂಲವನ್ನು ದುರ್ಬಳಕೆ ಮಾಡಿದ್ದು. (EL)ಎಲ್ ನೀನೇನೋ ಮಾಡಿದೆ ಅದಕ್ಕೆ (EL)ಇಲ್ ನಾನು ಕಷ್ಟಪಡಬೇಕು ಅನ್ನುವುದು, (EL)ಎಲ್ ಎಲ್ಲೂ ಇರುವ ಜನಾಂಗಕ್ಕೆ ಅರಿವಾಗಬೇಕು. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ 29ರ ಮಳೆ..  ಬಂದೇ ಬಂತು... ಮಳೆ ಬಂತು ಮಳೆ, ತೊಳೆಯಿತು ಜಗದ ಕೊಳೆ    ತಂಪಾಯಿತು ಇಳೆ...