Posts

ಪ್ರಶ್ನೋತ್ತರ - ಪ್ರಶ್ನಾತೀತ

Image
   ನಿಮ್ಮ ಜೀವನದಲ್ಲಿ ಅತಿ ಹೆಚ್ಚು ಬಾರಿ ಉತ್ತರಿಸಿದ ಒಂದು ಪ್ರಶ್ನೆ ಯಾವುದು? ಎಂಬ ಪ್ರಶ್ನೆಯನ್ನು ನನಗೆ ಕೇಳಿದರೆ, ನನ್ನ ಉತ್ತರ .... ನಿನ್ನ ಹೆಸರೇನು? ವಯಸ್ಸಿನ ಬೇರೆ ಬೇರೆ ಹಂತದಲ್ಲಿ ಪ್ರಶ್ನೆಯ ರೂಪ ಬೇರೆ ಬೇರೆಯಾದರೂ ಭಾವ ಮಾತ್ರ ಒಂದೇ, ಅದು ಹೆಸರನ್ನು ತಿಳಿಯುವುದು. ಎಷ್ಟೋ ಬಾರಿ ಈ ಪ್ರಶ್ನೆಯು ಇಲ್ಲದೆ ನನ್ನ ಹೆಸರನ್ನು ಹೇಳಿ ನಾನೇ  ಪರಿಚಯಿಸಿಕೊಂಡದ್ದು.   ಯಾವುದೇ ಮಾತುಕತೆ ಪ್ರಾರಂಭವಾಗುವುದು ಪ್ರಶ್ನೆಯಿಂದಲೇ ಅಥವಾ ಪ್ರಶ್ನಾರ್ಥಕ ರೂಪದ ವಾಕ್ಯದಿಂದಲೇ. ಉದಾಹರಣೆಗೆ ಸೆಖೆ ಶುರುವಾಗಿಹೋಯಿತು ಅಲ್ವಾ... .ಮುಂದುವರಿಯುವುದೂ ಪ್ರಶ್ನೋತ್ತರಗಳಿಂದಲೇ... ಕೇಳುವುದು ಹೇಳುವುದು. ಸಾಮಾನ್ಯವಾಗಿ ಎದುರಾಗುವ ಪ್ರಶ್ನೆಗಳು.. ಕಾಫಿ ಆಯ್ತಾ? ಆರಾಮನಾ? How are you ? ಹೇಗಿದ್ದೀರಾ? ಹೀಗೆ .  ಕಾಫಿ ಆಯ್ತಾ ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ.  ಆಯ್ತು ಎಂಬ ಉತ್ತರ ಹಸಿ ಸುಳ್ಳು..  ಯಾಕೆಂದರೆ ನಾನು ಕಾಫಿ ಕುಡಿಯುವವನಲ್ಲ.   ಇದು ಎಂದಾದರೊಮ್ಮೆ ಭೇಟಿಯಾಗುವ ವ್ಯಕ್ತಿಗಳಿಗೆ ಸಂಕೋಚವಿಲ್ಲದೆ ಕೊಡುವ ಉತ್ತರ.  ಆಗಿಲ್ಲ ಎಂಬ ಉತ್ತರಕ್ಕೆ ಮತ್ತೊಂದು ಪ್ರಶ್ನೆ, ಹಾಗಾಗಿ ಉತ್ತರದ ಬದಲು ಒಂದು ಒಣ ನಗೆ. ಸಾಕಷ್ಟು ಪರಿಚಿತ ವ್ಯಕ್ತಿಗಳು, ಈ ಪ್ರಶ್ನೆಯನ್ನು ಕೇಳಿ, ನಂತರ ಅವರೇ ನೀವು ಕುಡಿಯೋದೇ ಇಲ್ವಲ್ಲ ಅನ್ನುವ ಉತ್ತರವನ್ನು ಕೊಡುವುದುಂಟು. How are you?  ಎಂಬ ಪ್...

ರಥೋತ್ಸವ - ಮತ್ತೊಮ್ಮೆ

Image
ಶಿವರಾತ್ರಿ ಕಳೆದರೆ, ಛಳಿ ಶಿವ-ಶಿವಾ ಅಂತ ಓಡಿ ಹೋಗುತ್ತೆ ಅನ್ನುವುದು ಒಂದು ಮಾತು. ಬೇಸಿಗೆಯ ಕಾಲ ಪ್ರಾರಂಭವಾದಂತೆ, ಕೃಷಿಯೇ ಪ್ರಧಾನ ಕಸುಬಾಗಿದ್ದ ಕಾಲದಲ್ಲಿ, ಸುಗ್ಗಿಯ ಕಾಲ ಮುಗಿದು, ಅಳಿದುಳಿದ ಕೆಲಸಗಳನ್ನು ಮುಗಿಸಿದ ರೈತನಿಗೆ ಇದು ಸ್ವಲ್ಪ ಬಿಡುವಿನ ಸಮಯ ಆದಕಾರಣ, ಮನಸ್ಸು ಬೇರೆಯ ಕಡೆಗೆ ಹೊರಳುತ್ತದೆ. ಮಳೆ ಗಾಳಿ ಇಲ್ಲದ ಕಾಲವಾದ್ದರಿಂದ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಸೂಕ್ತವಾದ ಕಾಲ.  ಹಾಗಾಗಿ ಈ ತೇರು, ಜಾತ್ರೆ, ರಥೋತ್ಸವ,ಪರಿಷೆ ಎಲ್ಲವೂ ನಡೆಯುವುದು ಬೇಸಿಗೆಯ ಕಾಲದಲ್ಲಿ.  ಹೋದ ಭಾನುವಾರ (22.02.2026), ಹೂವಿನಕಟ್ಟೆಯ ಗುಡ್ಡದ ರಂಗನಾಥ ಸ್ವಾಮಿಯ ರಥೋತ್ಸವದಲ್ಲಿ ಭಾಗಿಯಾಗಿದ್ದೆ. 1979 ರಲ್ಲಿ ಮೊದಲಾದಂದಿನಿಂದ ನಾನು ಅತಿ ಹೆಚ್ಚು ಬಾರಿ ಭಾಗಿಯಾದ ಜಾತ್ರೆ.  ಅಂದು ಇದ್ದ ದೇವಸ್ಥಾನ, ಅದರ ಪರಿಸರಕ್ಕೂ ಇಂದಿನದಕ್ಕೂ ಅಜಗಜಾಂತರ. ಆಗಿನದು ಮುಗ್ಧ ಭಕ್ತಿಯ ಸಂಕೇತ...ಈಗಿನದು ಭಕ್ತಿಯ ಜೊತೆಗೆ ಆಡಂಬರ ಹಾಗೂ ಆಧುನೀಕತೆಯ ಮಿಶ್ರಣ. ದೇವಸ್ಥಾನ ಹತ್ತಿರವಾಗುತ್ತಿದ್ದಂತೆ ಕಣ್ಣಿಗೆ ಬಿದ್ದದ್ದು  ಬಣ್ಣ ಬಣ್ಣದ ಬಟ್ಟೆಗಳಿಂದ,  ಹೂವಿನ ಹಾರಗಳಿಂದ ಅಲಂಕೃತವಾದ ತೇರು.  ದೇವಸ್ಥಾನದ ಹೊರಗೂ ಒಳಗೂ ವಿಶೇಷ ಹೂವಿನ ಅಲಂಕಾರ ಈ ಬಾರಿಯ ಆಕರ್ಷಣೆಯಾಗಿತ್ತು. ದಾರಿ ಯುದ್ಧಕ್ಕೂ ಅಂಗಡಿಗಳ ಸಾಲು. ಕಡಲೆಪುರಿ, ಅದಕ್ಕೆ ಬೆರೆಸಲು ಹುರಿಗಡಲೆ, ಬೆಲ್ಲ, ಕಾರ ಸೇವು, ಜೊತೆಗೆ ಬತ್ತಾಸು, ಕಲ್ಯಾಣ ಸೇವೆ ಆಗ ತಾನೇ ರೆಡಿಯಾಗುತ್...

ಕಾಲ - ಕೆಟ್ಟಿತಾ? - ಬದಲಾಯಿತಾ?

Image
  ಕಾಲ ಕೆಟ್ಟೋಯ್ತು... ನಮ್ ಕಾಲದಲ್ಲಿ ಹೀಗಿರಲಿಲ್ಲ ... ಇದು ನಾನು ಬಹಳ ಸಲ ಕೇಳಿದ ಹಿರಿಯರ ಮಾತುಗಳು.. ಆ ಹಿರಿಯರಲ್ಲಿ ನಮ್ಮಪ್ಪನೂ ಒಬ್ಬರು. ಕಾಲ ಕೆಡುವುದು ಅನ್ನುವ ಚಿಂತನೆಯೇ ನನ್ನ ಮನಸ್ಸಿಗೆ ಒಗ್ಗದು. ಕಾಲ ಏನು ಮಾಡಿಟ್ಟ ಅಡಿಗೆಯೇ.. ಕೆಡಲು / ಹಳಸಲು. ಕಾಲ ನವನವೀನ.. ಕ್ಷಣ ಕ್ಷಣಕ್ಕೂ ಹೊಸತಾಗುವ ಕಾಲ ಕೆಡಲು ಸಾಧ್ಯವೇ? ಕಾಲ ಬದಲಾಗುತ್ತದೆ... ಖಂಡಿತ ಹೌದು. ಅದರ ಗುಣವೇ ಬದಲಾಗುವುದು. ಕ್ಷಣ ಕ್ಷಣಕ್ಕೂ ಹೊಸದಾಗಿ ಬದಲಾಗುವುದು.  ಕಾಲಕ್ಕೆ ತಕ್ಕಂತೆ ಬದಲಾಗು , ತಾಳಕ್ಕೆ ತಕ್ಕಂತೆ ಕುಣಿದಾಡು ಎನ್ನುವುದು ಗಾದೆಯ ಮಾತು. ವೇದ ಸುಳ್ಳಾದರು ಗಾದೆ ಸುಳ್ಳಾಗದು ಎನ್ನುವ ಮಾತನ್ನು ನಂಬಿ ಯೋಚಿಸಿದರೆ, ಕಾಲಕ್ಕೆ ತಕ್ಕಂತೆ ಬದಲಾಗು ಎಂಬ ನಿರ್ದೇಶನ ಇರುವುದು ಮನುಷ್ಯರಿಗೆ ಅಲ್ಲವೇ? ಹಾಗಾದರೆ ಬದಲಾಗುತ್ತಿರುವುದು ಕಾಲವೋ ? ಮನುಷ್ಯನೋ ?.... ಅಂದಮೇಲೆ ಕೆಟ್ಟಿರೋದು/ ಬದಲಾಗಿರೋದು ಮನುಷ್ಯನೇ ಹೊರತು ಕಾಲ ಅಲ್ಲ.. ಅಹುದಾದರಹುದೆನ್ನಿ. ಬದಲಾಗಿರುವುದು ಮನುಷ್ಯನ ಚಿಂತನೆ ಹಾಗೂ ವರ್ತನೆ.  ತನ್ನ ತಪ್ಪನ್ನು ಮುಚ್ಚಿಟ್ಟುಕೊಂಡು ಬೇರೆಯವರನ್ನು ದೂಷಿಸುವ ಮನುಷ್ಯನ ಸಹಜ ಸ್ವಭಾವದಂತೆ, ಆರೋಪವನ್ನು ಕಾಲದ ಮೇಲೆ ಹೊರಿಸುವುದು ಅಷ್ಟೇ. ನಮ್ಮ ಕಾಲದಲ್ಲಿ ಒಂದು ರೂಪಾಯಿಗೆ ಹತ್ತು ಸೇರು ಅಕ್ಕಿ ಸಿಗುತ್ತಿತ್ತು, ಜೊತೆಗೆ ಜೇಬಲ್ಲಿ ದುಡ್ಡು ತಗೊಂಡು ಹೋಗಿ ಮೂಟೆಯಲ್ಲಿ ಸಾಮಾನು ತರಬಹುದಿತ್ತು ಅನ್ನುವ ಮಾತು... ಅದು ಸತ್ಯ ಇರಬಹುದು.. ಆದರೆ...

ಹುಡುಕಾಟ

Image
ಮೊನ್ನಿನ ಒಂದು ಕಾರ್ಯಕ್ರಮಕ್ಕೆ, ನನ್ನ ಸ್ನೇಹಿತ ಬರಲು ಬಹಳ ತಡವಾಯಿತು. ಅವನಿಗಾಗಿ ಕಾಯುತ್ತಾ ಕುಳಿತ ನಮಗೆಲ್ಲ ಸ್ವಲ್ಪ ಅಸಮಾಧಾನ. ಅವನು ಕೊಟ್ಟ ಕಾರಣ “ನನ್ನ ಮಗಳು ಗಾಡಿ ತಗೊಂಡು ಹೋಗಿದ್ದೋಳು ಬೀಗದ ಕೈ ಎಲ್ಲೋ ಇಟ್ಟು ಮರೆತಿದ್ದಾಳೆ. ಅದನ್ನು ಹುಡುಕಿ ಹುಡುಕಿ, ಸಿಗದೇ ಕೋಪ ಬಂದು ಅವಳಿಗೆ ಬೈದು, ಅವಳು ಅತ್ತು , ಕಡೆಗೆ ಅದು ಸಿಕ್ಕಿದ್ದು ಫ್ರಿಜ್ಜಿನಲ್ಲಿ.. ಅಂತೂ ಬಂದೆ" ತಕ್ಷಣ ನೆನಪಿಗೆ ಬಂದದ್ದು " ಈ ಹುಡುಗ್ರು ಸೂಳಾಮಕ್ಕಳು ಇಟ್ಟ ಸಾಮಾನು ಇಟ್ಟ ಕಡೆ ಇಡಲ್ಲ.. ಬೇಕಂದ್ರೆ ಹುಡುಕಿ ಸಾಯ್ಬೇಕು" ಎಂಬ ನನ್ನ ಪರಿಚಯದವರ ಮಾತು. ಹುಡುಕಾಟ ಜೀವಸಂಕುಲದ ಚರಿತ್ರೆಯಲ್ಲೇ ಮೊದಲ ಯೋಜಿತ ಕ್ರಿಯೆ ಎಂದು ನನ್ನ ಅನಿಸಿಕೆ. ಎಲ್ಲಾ ಪ್ರಾಣಿ ಪಕ್ಷಿಗಳೂ.. ಮನುಷ್ಯನನ್ನೂ ಸೇರಿ, ಮೊದಲು ಮಾಡಿದ ಕೆಲಸ ಆಹಾರವನ್ನು ಹುಡುಕುವುದೇ ಅಲ್ಲವೇ? ಗಿಡ ಮರಗಳೂ, ನೀರು ಹಾಗೂ ಪೋಷಕಾಂಶಗಳನ್ನು ಹುಡುಕುವುದು ತಮ್ಮ ಬೇರನ್ನು ಬೆಳೆಸುವ ಮೂಲಕ. ಮನುಷ್ಯ ಒಂದೆಡೆ ನೆಲೆ ನಿಂತು ಆಹಾರವನ್ನು ತಾನೇ ಬೆಳೆಯಲು ಪ್ರಾರಂಭ ಮಾಡಿದ ನಂತರ, ಅವನ ಹುಡುಕಾಟದ ದಿಕ್ಕು ಬದಲಾಯಿತೇ ಹೊರತು ಹುಡುಕಾಟ ನಿಲ್ಲಲಿಲ್ಲ. ನದಿ ಮೂಲ ಋಷಿಮೂಲವನ್ನು ಹುಡುಕಬಾರದು ಎಂಬ ನಾಣ್ಣುಡಿಯಿದೆ. ಎರಡೂ ಹಿಂದಕ್ಕೆ ಚಲನೆಯಾದ್ದರಿಂದ ಹಾಗೆ ಹೇಳಿರಬಹುದೇ? ನದಿ ಸಾಗಿ ಬಂದ ಕೊರಕಲುಗಳು, ಪ್ರಪಾತಗಳು ಇವೆಲ್ಲವನ್ನು ದಾಟುವುದು ಕಷ್ಟ. ಹಾಗೆ ಋಷಿ ಮೂಲವನ್ನು ಹುಡುಕುತ್ತಾ ಹೋದಾಗ, ಮನಸ್ಸಿಗೆ ಹಿತವಲ್...

ಅಳುಕು ಮನಸ್ಸು

Image
  good evening sir ಎಂದು ಹೇಳುತ್ತಾ ಒಳ ಬಂದ ಆ ಹೆಣ್ಣು ಮಗಳು, sir i  Know  little kannada, but can't express well,  i can speak in telugu or english. ( ಆಕೆ ಇಂಗ್ಲೀಷಿನಲ್ಲಿ ಹೇಳಿದ ಮಾತುಗಳ ಭಾವಾನುವಾದ, ಈ ಲೇಖನ) ಮೊದಲ ಪರಿಚಯದ ನಂತರ, ಮಾತಿಗಾರಂಭಿಸಿದ ಪಲ್ಲವಿ, "ಮನಸ್ಸು  ಗಲಿಬಿಲಿಯಿಂದ ತುಂಬಿದೆ, ಏನೂ ಮಾಡಲಾಗದ ಅಸಹಾಯಕತೆ ಕಾಡುತ್ತಿದೆ.. ಭವಿಷ್ಯದಲ್ಲಿ ಬರಿ ಕತ್ತಲೆನೋ ಅನಿಸುತ್ತಿದೆ, ಏನು ಮಾಡಲಿ ಹೇಳಿ...ಎಂದು ಪ್ರಾರಂಭಿಸಿ.. ಪಲ್ಲವಿ ಒಂದು ಖಾಸಗಿ ಸಂಸ್ಥೆಯಲ್ಲಿ ಸಾಫ್ಟ್ವೇರ್ ಇಂಜಿನಿಯರ್. ಆಂಧ್ರಪ್ರದೇಶ ಮೂಲದವಳು. PG ಯಲ್ಲಿ ಇದ್ದುಕೊಂಡು ಸುಮಾರು ಎರಡು ವರ್ಷದಿಂದ ಕೆಲಸ ಮಾಡುತ್ತಿರುವವಳು. ಅಲ್ಲಿ ಪರಿಚಯವಾದದ್ದು ಪುರು (ಪುರುಷೋತ್ತಮ). ಕೆಲಸದ ವಿಚಾರವಾಗಿ ಆಗಾಗ ವಿಚಾರ ವಿನಿಮಯ ಮಾಡಿಕೊಳ್ಳುತ್ತಾ, ಇಬ್ಬರಲ್ಲೂ ಸ್ನೇಹ ಬೆಳೆದಿದೆ. ಸ್ನೇಹ ಆತ್ಮೀಯತೆಗೆ... ಹಾಗಾಗಿ ತಮ್ಮ ಅಂತರ್ಯದ ವೈಯುಕ್ತಿಕ ವಿಚಾರಗಳನ್ನು ಪರಸ್ಪರ ಹಂಚಿಕೊಂಡಿದ್ದಾರೆ. ಪುರುಷೋತ್ತಮ ಅಪ್ಪ ಅಮ್ಮನಿಗೆ ಎರಡನೆಯ ಮಗ. ಓದಿನಲ್ಲಿ ತುಂಬಾ ಜಾಣನೇನಲ್ಲ. ಪದವಿಯ ನಂತರ ತನ್ನ ಅಣ್ಣನ ಸ್ನೇಹಿತನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಪಲ್ಲವಿಗೆ ಒಬ್ಬ ಅಣ್ಣ ಒಬ್ಬ ತಂಗಿ. ಅಣ್ಣ ಮದುವೆಯಾಗಿ ಅಮೆರಿಕದಲ್ಲಿ ಇದ್ದಾನೆ. ತಂಗಿಗೆ ಇನ್ನೂ ಮದುವೆಯಾಗಿಲ್ಲ. ಪಲ್ಲವಿಗೆ ಸಂಬಂಧದಲ್ಲೇ ಮದುವೆಯಾಗಿ ವರ್ಷದೊಳಗೇ ವಿಚ್ಛೇದನವಾ...

ಕೋಳಿ ಕೂಗು - ಬೆಳ್ಳಿ ಬೆಳಗು

Image
  ಭಾನುವಾರ ಬೆಳಿಗ್ಗೆ ಸಾಮಾನ್ಯವಾಗಿ ಎಚ್ಚರ ಆಗುವುದು, ಮೇಕೆಯ ಆರ್ತನಾದದಿಂದ. ಸ್ವಲ್ಪ ಹೊತ್ತಿಗೆ ಆ ಆರ್ತನಾದ ಸಂಪೂರ್ಣ ನಿಂತು ಹೋಗುತ್ತದೆ... ಮೇಕೆ ಆಹಾರ ರೂಪವಾಗಿ ಬದಲಾಗಿರುತ್ತದೆ. ಮೊದಮೊದಲು ಮನಸ್ಸಿಗೆ ಕಸಿವಿಸಿ ಆಗುತ್ತಿತ್ತು. ಆದರೆ ಮಾಡುವುದೇನು... ಅದು ಅವರ ಊಟ, ಹಾಗಾಗಿ ಮೇಕೆಯ ಹನನ ಅವರಿಗೆ ಅನಿವಾರ್ಯ. ಮೊನ್ನೆ ಭಾನುವಾರ ದೂರದಲ್ಲೆಲ್ಲೋ ನನಗೆ ಕೇಳಿಸಿದ್ದು ಕೋಳಿಯ ಕೂಗು. ಪಾಪ ಅದಕ್ಕೆ ತನ್ನ ಹನನದ ಸಮಯ ಬಂದಿದೆ ಎಂದು ತಿಳಿದಿರಲಾರದು. ಆಗ ಮನಸ್ಸಿನಲ್ಲಿ ಮೂಡಿದ್ದು... ಕೊಕ್ಕೋ... ಕೊಕ್ಕೋ... ಎಂದು ಕೋಳಿಯೊಂದು ಕೂಗಿತು, ಅದರ ಕೂಗು ಕೇಳಿ ನನ್ನ ಮನಸ್ಸು ಮುದುಡಿ ಹೋಯಿತು ಎಂಬ ಸಾಲುಗಳು ( ಕುವೆಂಪುರವರ ಟುವ್ವಿ ಟುವ್ವಿ ಟುವ್ವಿ ಟುವ್ವಿ ಎಂದು ಹಕ್ಕಿ ಹಾಡಿತು ಪದ್ಯದ ಸ್ಪೂರ್ತಿ). ಈ ಕೋಳಿಯದು ಏನೋ ಶಿಸ್ತು. ಬೆಳಿಗ್ಗೆ ಬೇಗ ಏಳುವುದು, ಕೂಗಿ ಎಲ್ಲರನ್ನೂ ಎಬ್ಬಿಸುವುದು. ಬೆಳಗಿನ ಆ ಸಮಯಕ್ಕೂ ಒಂದು ನಂಟುಂಟು... ಅದೇ ಬೆಳ್ಳಿ ಚುಕ್ಕಿಯ (ಶುಕ್ರ ಗ್ರಹದ) ದರ್ಶನ. ಬೆಳಗಿನ ನಕ್ಷತ್ರ / ಮುಸ್ಸಂಜೆಯ ನಕ್ಷತ್ರ ಎಂದು ಕರೆಯಲ್ಪಡುವ ಶುಕ್ರ ಗ್ರಹ, ಚೆನ್ನಾಗಿ ಕಾಣುವುದು ಆ ಸಮಯದಲ್ಲಿ.  ಕೋಳಿ ಕೂಗಿತಕ್ಕ ನಂದನ ವನಾಕ... ಬೆಳಗಾಗಿ ಬೆಳ್ಳಿಯ ಚುಕ್ಕಿ ಉದಯಾದ ಬಳಿಕ .. ಮತ್ತು  ಬೆಳ್ಳಿ ಮೂಡಿತೋ ಕೋಳಿ ಕೂಗಿತೋ... ಬಾನಾಗಿ ರಂಗು ಚೆಲ್ಲಿ ತೇರಾನೇರಿ ಸೂರ್ಯ ಬಂದ.... ಎರಡು ಹಾಡುಗಳು ಬೆಳ್ಳಿಯ ಚುಕ್ಕಿ ಮತ್ತು ಕೋಳಿಗಿರುವ ...

ಜಾಹೀರಾತಿಗೆ ಮನಸೋತು..

Image
ಮಾತು ಏಕಮುಖ ಸಂಚಾರಿ. ಅನುಭವಿ ಮಾತುಗಾರರನ್ನು ಒಳ್ಳೆಯ ಸಂವಹನಕಾರ (communicator) ಎಂದು ಹೇಳುವರು. communication skill (ಸಂವಹನಕಲೆ) ಎಂದಾಗ ಬರೀ ಮಾತನಾಡುವುದಲ್ಲ, ಒಳ್ಳೆಯ  ಕೇಳುಗನೂ (listener)  ಆಗಬೇಕು. ಆಪ್ತ ಸಮಾಲೋಚಕರ ತರಬೇತಿ ಶಿಬಿರದಲ್ಲಿ, ಸಂವಹನ ಕಲೆ ಬಗ್ಗೆ ತಿಳಿಸುವಾಗ, ಮಾತನಾಡುವ ಕಲೆಯ ಜೊತೆಗೆ, ಗಮನವಿಟ್ಟು ಕೇಳುವುದು , ಕೇಳಿದ್ದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು, ವಿಶ್ಲೇಷಣೆ ಮಾಡುವುದು, ನಂತರ ಸರಿಯಾದ ಮಾರ್ಗದರ್ಶನ ಮಾಡುವುದು, ಎಲ್ಲವೂ ಬಹು ಮುಖ್ಯ ಎಂಬುದನ್ನು ಒತ್ತಿ ಹೇಳುತ್ತೇವೆ.  ಇನ್ನೊಂದು ಕ್ಷೇತ್ರವಿದೆ, ಅಲ್ಲಿ ಮಾತು, ಬರಹ, ಚಿತ್ರ, ಚಲನಚಿತ್ರದ ಮೂಲಕ ಸಂವಹನವಿರುತ್ತದೆ, ಆದರೆ ಅದೆಲ್ಲವೂ ಏಕಮುಖಿ. ಹೇಳಬೇಕಾದುದನ್ನು, ಅದು ಯಾರಿಗೆ ಮುಟ್ಟಬೇಕು, ಯಾವ ಪರಿಣಾಮ ಆಗಬೇಕು ಎನ್ನುವುದನ್ನು ನಿರ್ಧರಿಸಿ  ಅವರಿಗೆ ತಲುಪುವಂತೆ ಮಾಡುವ ಕಲೆ. ಅದು ವಿಶೇಷ ಅಭಿವ್ಯಕ್ತಿ. ಅದೇ ಜಾಹೀರಾತಿನ ಪ್ರಪಂಚ. ಇಂದಿನ ದಿನಗಳಲ್ಲಿ ಜಾಹೀರಾತಿಗೆ ವಿಶೇಷ ಸ್ಥಾನಮಾನವಿದೆ. ಹೆಜ್ಜೆ ಹೆಜ್ಜೆಗೂ, ಒಂದಲ್ಲ ಒಂದು ಜಾಹೀರಾತು ನಮ್ಮ ಕಣ್ಣ ಮುಂದೆ ಬರುತ್ತದೆ. ಅದರಲ್ಲೂ ಫೋನ್ ನಲ್ಲಿ ಏನೇ ನೋಡಲು ಮೊದಲು ಮಾಡಿದರೂ, ಜಾಹೀರಾತುಗಳ ಮಹಾಪೂರವೇ ಹರಿದು ಬರುತ್ತದೆ. ಸ್ವಲ್ಪ ಕಿರಿ ಕಿರಿ ಅನಿಸಿದರೂ ಅದನ್ನು ನೋಡುವುದು ಅನಿವಾರ್ಯವಾಗಿದೆ. ಕೆಲವನ್ನು ಸ್ಕಿಪ್ ಮಾಡಲು ಅವಕಾಶ ಇರುವುದೇ ಒಂದು ವರವಾಗಿದೆ. ಈ ಜಾಹೀರಾತುಗಳ...

ಮಾತು - (ತಲೆ) ಹರಟೆ

Image
  ಬೆಳಿಗ್ಗೆ ಉದ್ಯಾನವನದಲ್ಲಿ ಸ್ನೇಹಿತ ಯೋಗಾನಂದ ಅವರ ಜೊತೆ ನಡೆದಾಡುತ್ತಾ ಇದ್ದಾಗ ಒಬ್ಬ ಆಜಾನುಬಾಹು ವ್ಯಕ್ತಿ  ಫೋನಿನಲ್ಲಿ ಯಾರಿಗೋ ಜೋರಾಗಿ ದಬಾಯಿಸುತ್ತಾ ನಮ್ಮ ಪಕ್ಕದಲ್ಲಿ ನಡೆದರು... ಕೆಲ ಕ್ಷಣಗಳು ನಾವಿಬ್ಬರೂ ಮಾತು ನಿಲ್ಲಿಸಿದೆವು.. ಆ ವ್ಯಕ್ತಿ ಮುನ್ನಡೆದಾಗ ಯೋಗಾನಂದ ಅವರು ಹೇಳಿದ್ದು " ಇದರ ಬಗ್ಗೆ ಒಂದು ಬ್ಲಾಗ್ ಬರೆಯಿರಿ".  ಮುಂದಿನ ಲೇಖನದ ವಿಷಯ ಇನ್ನೂ ನನ್ನ ತಲೆಗೆ ಬರದಿದ್ದರಿಂದ, ಇದೇ ಇರಲಿ ಎಂದು ಆಯ್ಕೆ ಮಾಡಿದೆ. ಹಾಗಾಗಿ ಈ ಲೇಖನ..  ಕಿವಿಗೆ headphone ಗಳನ್ನು ಸಿಕ್ಕಿಸಿದ್ದ  ವ್ಯಕ್ತಿಯ ಶಾರೀರ, ಶರೀರದಷ್ಟೇ ದೊಡ್ಡದಾಗಿತ್ತು. ಕೋಪ ಎದ್ದು ಕಾಣುತ್ತಿತ್ತು. ಕೋಪ ಬಂದಾಗ ಎದುರಿನ ವ್ಯಕ್ತಿ ತುಂಬಾ ಹತ್ತಿರದಲ್ಲೇ ಇದ್ದರೂ, ಎಲ್ಲೋ ದೂರದಲ್ಲಿರುವವರೊಡನೆ ಮಾತನಾಡುವಂತಿರುತ್ತದೆ. ಏಕೆಂದರೆ ಮಾನಸಿಕವಾಗಿ ಅವರು ದೂರದಲ್ಲಿ ಇರುತ್ತಾರೆ. ಅದೇ ಪ್ರೀತಿ ಇದ್ದರೆ ಪಿಸು ಮಾತು ಸಹ ಬೇಗ ಮನ ಮುಟ್ಟುತ್ತದೆ. ಇದು ನವದಂಪತಿಗಳಲ್ಲಿ ಹಾಗೂ ಪ್ರೇಮಿಗಳಲ್ಲಿ ಹೆಚ್ಚು ಕಾಣುತ್ತದೆ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂದರು ಬಸವಣ್ಣನವರು.  ಅದು ಬುದ್ಧಿವಾದ / ಸಲಹೆ ಮಾತ್ರ. ನಿಜ ಜೀವನದಲ್ಲಿ ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎನ್ನುವುದೇ ವಸ್ತುಸ್ಥಿತಿ.  ಮುತ್ತಿನ ಹಾರ ಬಲು ಅಪರೂಪ. ಅದರಲ್ಲೂ ಭಾರತದ ಸಂವಿಧಾನ ಕೊಟ್ಟಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವಾಗಿದ್ದೆ ಹೆಚ್...

ಹೌದು ಸ್ವಾಮಿ ನಾವಿರೋದೆ ಹೀಗೆ

Image
  " ನಾರಾಯಣ ಸಾಕು ಮಾಡಪ್ಪಾ, ಬೇಗ ಕರೆಸ್ಕೋ" ಈ ಮಾತು ಕಿವಿಗೆ ಬಿದ್ದಾಗ, ಆರ್ತನಾದ ಅನಿಸಿತು. ತಿರುಗಿ ನೋಡಿದಾಗ ಕಂಡದ್ದು, ಕೃಶ ದೇಹದ 75 ವರ್ಷದ ಆಸುಪಾಸಿನ ಒಬ್ಬ ಹಿರಿಯರು. ಉದ್ಯಾನವನದಲ್ಲಿ ನಿಧಾನವಾಗಿ ನಡೆಯುತ್ತಿದ್ದರು, ಕಿವಿಯ ಹತ್ತಿರ ಹಿಡಿದ ಕೈಯಲ್ಲಿ ಮೊಬೈಲ್ ಫೋನ್, ಬಿಳಿ ಪಂಚೆ ಶರ್ಟು, ಕಾಲಲ್ಲಿ ಶೂ. ಏನೋ ನೋವಿರಬೇಕು ಅಂತ ಭಾವಿಸಿದೆ. ಮತ್ತೆರಡು ದಿನದ ನಂತರ ಆ  ಹಿರಿಯರು ಕಂಡರು. ಏರು ದಾರಿಯಲ್ಲಿ ನಡೆಯುತ್ತಿದ್ದೆವು. ಸ್ವಲ್ಪ ದೂರ ಸಾಗಿದ ನಂತರ, ಸುಧಾರಿಸಿಕೊಳ್ಳುವ ರೀತಿ ನಿಂತು "ನಾರಾಯಣ ಸಾಕು ಮಾಡಪ್ಪಾ, ಬೇಗ ಕರೆಸ್ಕೋ" ಎಂದು ಹೇಳಿದ್ದು ಗಮನಿಸಿದೆ. ಅದರ ಹಿಂದೆ ನೋವಿತ್ತು. ವಯೋಸಹಜ ಸುಸ್ತೂ ಇತ್ತು. ಸಂಕಟ ಬಂದಾಗ ವೆಂಕಟರಮಣ ಎನ್ನುವ ನಾಣ್ಣುಡಿ ಅಕ್ಷರಶಃ ಸತ್ಯ .  ಒಬ್ಬೊಬ್ಬರ ಸಂಕಟ ಒಂದೊಂದು, ಅದಕ್ಕೆ ತಕ್ಕ ಹಾಗೆ ದೇವರಲ್ಲಿ ಬೇಡಿಕೆ... ದೇವರು ಬೇಡಿಕೆ ಈಡೇರಿಸ್ತಾನೋ ಇಲ್ಲವೋ... ಅವನಿಗೇ ಗೊತ್ತು... ನಾವ್ ಮಾತ್ರ ಬೇಡಿಕೊಳ್ಳುವುದು ಬಿಡಲ್ಲ. ದೇವರನ್ನು ನಂಬುವ ಆಸ್ತಿಕರದು ಈ ಬಗೆಯಾದರೆ, ದೇವರನ್ನೇ ನಂಬದ ನಾಸ್ತಿಕರೂ ಇದ್ದಾರೆ. ತಮ್ಮ ಹತ್ತು ಜನ್ಮದಲ್ಲಿ ದೇವರನ್ನು ದ್ವೇಷಿಸುತ್ತಿದ್ದ ಜಯ ವಿಜಯರು ಇದ್ದರೆಂಬುದು ದಶಾವತಾರದ ಕಥೆ. ನನ್ನೂರು ದೊಡ್ಡಜಾಲದಲ್ಲಿ, ಚಿಕ್ಕಂದಿನಲ್ಲಿ ನೋಡಿದ್ದು...  ಮುನೀರಣ್ಣ ಒಬ್ಬ ಕೆಳ ಜಾತಿಯವರು, ಜೊತೆಗೆ ಕುಷ್ಟರೋಗಿ. ಕೈಬೆರಳುಗಳೆಲ್ಲ ಮುರುಟಿ ಹೋಗಿದ್ದವು. ಸ...