Posts

ಮುಳ್ಳಿಗೆ ಮುಳ್ಳಿಂದಲೇ ಮದ್ದೇ.. ?

Image
  78 ರ ಇಳಿ ವಯಸ್ಸಿನಲ್ಲೂ, ಪಾಠಮಾಡುವ ಕಾಯಕವನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಹಿರಿಯರ ಮನಸ್ಸಿನ ಮಾತುಗಳನ್ನ,  ಅದರಲ್ಲೂ never stop giving back ಎನ್ನುವ ಮಾತುಗಳು ಹಾಗೂ ಅದಕ್ಕೆ ಪ್ರತಿಕ್ರಯಿಸುತ್ತಾ, ಅವರ ಸ್ನೇಹಿತರು ಬರೆದ ಹೊಗಳಿಕೆಯ ಮಾತುಗಳನ್ನು face book ನಲ್ಲಿ  ಓದಿದಾಗ ಹೆಮ್ಮೆ ಎನಿಸಿತು. ನಿಜಕ್ಕೂ ಇದು ಅನುಕರಣೆ ಮಾಡಬೇಕಾದ ವಿಷಯ ಎನಿಸಿತು. ಜೊತೆ ಜೊತೆಗೆ ಮನಸ್ಸು ಹಿಂದಕ್ಕೋಡಿತು.... ನನ್ನ  ವೃತ್ತಿ ಜೀವನದಲ್ಲಿ, ಸುಮಾರು 1 ವರ್ಷ   ಅನುಭವಿಸಿದ ಕಹಿ ಘಟನೆಗಳ ಚಿತ್ರಗಳು ಮನಃಪಟಲದ ಮೇಲೆ ಮೂಡಿತು. ನನ್ನ ಸಣ್ಣ ಕೈಗಾರಿಕೆಯಲ್ಲಿ ಕೆಲಸಗಳು ಸುಗಮವಾಗಿ ನಡೆಯುತ್ತಿದ್ದವು. ಹೊಸ ಹೊಸ development ಕೆಲಸಗಳನ್ನು  ಮಾಡುವ ಅವಕಾಶಗಳು ದೊರೆಯುತ್ತಿದ್ದವು. ಅಂತಹ ಒಂದು test equipment ಮಾಡುವ ಪ್ರಸ್ತಾವನೆ ನನಗೆ ಬಂತು, ಸಹಜವಾಗಿ ಸಂತೋಷವಾಯಿತು. ಅದರ ಬಗ್ಗೆ ವಿಷಯ ಸಂಗ್ರಹಣೆ ಮೊದಲ ಹಂತ. ಸದರಿ ಅಧಿಕಾರಿ, ಈ ವಿಷಯದ ಬಗ್ಗೆ ಅರಿವಿರುವ ಒಬ್ಬ ವ್ಯಕ್ತಿಯ ಜೊತೆ ಟೆಲಿಫೋನ್ ಮೂಲಕ ಮಾತನಾಡಿದರು. ಅತ್ತ ಕಡೆಯಿಂದ  ಸರಿಯಾದ, ಸಮಾಧಾನಕರವಾದ ಉತ್ತರ ಬರಲಿಲ್ಲವೆಂದು, ಸ್ವಲ್ಪ ಬೇಸರಪಟ್ಟರು.  ವಿದೇಶದಿಂದ ಬಹಳ ಹಿಂದೆ ಬಂದಿದ್ದ ಇಂತಹದೇ equipment ನೋಡಿ, ಅದರಿಂದ ಸ್ಪೂರ್ತಿ ಪಡೆದು, ಮಾಡುವ ವಿಶ್ವಾಸವಿದ್ದರೆ ಮುಂದುವರಿಯಬಹುದು ಎಂಬ ಸಲಹೆ ಇತ್ತರು. ಅವರ ಸಲಹೆಯಂತೆ, ಅದರಿಂದ ...

ಮನಸು ಗೊಂದಲದ ಗೂಡು

Image
ನಯನ ಫೋನ್ ಮಾಡಿ " ಸರ್ ನಿಮ್ಮತ್ರ ಮಾತಾಡಬೇಕು ಯಾವಾಗ ಸಿಕ್ತೀರಾ" ಕೇಳಿದಾಗ ವಿಶೇಷ ಎನಿಸಲಿಲ್ಲ. ಇದು ಆಗಾಗ್ಗೆ ನಡೆಯುವ ಸಂಭಾಷಣೆ. ಹೊಂಗಿರಣ ಆಪ್ತ ಸಲಹಾ ಕೇಂದ್ರಕ್ಕೆ ಬಂದ ನಯನ ತನ್ನ ಹೊಸ ಕೆಲಸದ ಬಗ್ಗೆ ವಿವರಗಳನ್ನು ಹೇಳುವಾಗ, ತನ್ನ ಇಂಜಿನಿಯರಿಂಗ್ ಪದವಿಯ ಶ್ರೇಯಸ್ಸು ಬಹುಭಾಗ ನನಗೆ ಸಿಗಬೇಕೆಂದು ಹೇಳಿದಾಗ ಜೋರಾಗಿ ನಕ್ಕೆ. ಕಷ್ಟಪಟ್ಟು ಓದಿದ್ದು ನೀನು, ಪರೀಕ್ಷೆ ಬರೆದದ್ದು ನೀನು, ನನ್ನ ಪಾತ್ರವೇನು ಎಂದಾಗ " ಸರ್ ನನ್ನ ಹಿಂದೆ ನಿಂತು ಪ್ರೋತ್ಸಾಹಿಸಿ, ಧೈರ್ಯ ಕೊಟ್ಟು, ಫಲಿತಾಂಶ ಏನೇ ಇರಲಿ, ಪರೀಕ್ಷೆ ಬರೆಯಲೇ ಬೇಕೆಂದು ಒತ್ತಾಯಿಸಿದವರು ನೀವು.. ಇಲ್ಲದಿದ್ದರೆ ನಾನು ಪರೀಕ್ಷೆಗೆ ಹೋಗುತ್ತಿರಲಿಲ್ಲ" ಎಂದಾಗ ಸಂತೋಷವಾಗಿದ್ದು ನಿಜ. ನಯನಳ ಮೊದಲ ಭೇಟಿ, ಪ್ರಸನ್ನ ಆಪ್ತ ಸಲಹಾ ಕೇಂದ್ರದಲ್ಲಿ. ಆಗಿನ್ನು ಹೈಸ್ಕೂಲ್ ಮುಗಿಸಿ ಕಾಲೇಜಿನಲ್ಲಿ ಓದುತ್ತಿದ್ದವಳು. ಸಮಸ್ಯೆ .... ಓದಿನ ಮೇಲೆ ಗಮನಹರಿಸಲು ಆಗುತ್ತಿಲ್ಲ... ನಯನ ಅಪ್ಪ ಅಮ್ಮನಿಗೆ ಒಬ್ಬಳೇ ಮಗಳು. ಅಪ್ಪ ಅಮ್ಮ ಇಬ್ಬರು ಕೆಲಸಕ್ಕೆ ಹೋಗುವ ಕಾರಣ, ಶಾಲೆಯಿಂದ ಬಂದ ನಂತರ ಒಂಟಿಯಾಗಿ ಇರುವುದು ಅನಿವಾರ್ಯ. ನೆರೆಯ ಒಂದು ಮನೆಯಲ್ಲಿ ಮಾತ್ರ ಸ್ವಲ್ಪ ಸಲಿಗೆ ಇದೆ, ಬೇರೆ ಯಾರ ಮನೆಗೂ ಹೋಗುವುದಿಲ್ಲ. ಹೆಚ್ಚು ಮಾತಾಡದ ನಯನಳ ಕಣ್ಣಲ್ಲಿ ನೀರು ತುಂಬುವುದು ಬೇಗ, ಆದರೆ ಅಳಲೊಳ್ಳಲು. ಒಂದಷ್ಟು ಸಮಾಧಾನದ ಮಾತುಗಳನ್ನು ಆಡಿ, ಓದುವ ಬಗ್ಗೆ, ಹವ್ಯಾಸ ಬೆಳೆಸಿಕೊಳ್ಳುವುದು, ಸ್ನ...

ಶ್ರಾವಣ - ನಿರಾಶೆಗೆ ಕಾರಣ

Image
 ಶ್ರಾವಣ ಬಂತು ಕಾಡಿಗೆ, ಬಂತು ನಾಡಿಗೆ, ಬಂತು  ಬೀಡಿಗೆ... ಬಂತು ಶ್ರಾವಣ...  ಬೇಂದ್ರೆಯವರ ಈ ಹಾಡು ಕೇಳಲು ಪುಳಕ... ಅದರಲ್ಲೂ ಸಿ ಅಶ್ವತ್ ಅವರು ರಾಗ ಸಂಯೋಜಿಸಿ ಹಾಡಿದ್ದನ್ನು ಕೇಳುವಾಗ ಅರಿವಿಲ್ಲದಂತೆ ಕಾಲು ಹೆಜ್ಜೆ ಹಾಕುತ್ತದೆ ಕೈ ಜೊತೆಗೂಡಿಸುತ್ತದೆ.      ಶ್ರವಣ ನಕ್ಷತ್ರದ ಪ್ರಾಧಾನ್ಯತೆಯ ಕಾರಣ ಶ್ರಾವಣ ಮಾಸ ಎಂಬ ಹೆಸರು ಬಂದಿರಬಹುದೇ? ಪ್ರಶ್ನೆ  ಪಕ್ಕಕ್ಕೆ ಇಟ್ಟು ಗಮನಿಸಿದರೆ, ಶ್ರಾವಣಮಾಸ, ಶುರುವಾಯಿತೆಂದರೆ, ಹಬ್ಬಗಳ ಸಾಲು ಶುರುವಾದಂತೆ. ನಾವು ಚಿಕ್ಕವರಿದ್ದಾಗ ಹಬ್ಬ ಎಂದ ಕೂಡಲೇ.. ಆಯಾ ಹಬ್ಬಗಳ ವಿಶೇಷ ಸಿಹಿ ತಿನಿಸುಗಳ ತಿನ್ನುವ ಸಂಭ್ರಮ.  ಭೀಮನ ಅಮಾವಾಸ್ಯೆಯ ದಿನ, ಹೊಸ್ತಿಲ ಮೇಲಿಟ್ಟ ಭಂಡಾರವನ್ನು, ಮೊಣ ಕೈಯಿಂದ ಗುದ್ದಿ, ಒಳಗಿಟ್ಟಿರುವ ಕಾಸನ್ನು ತೆಗೆದುಕೊಂಡು, ಸಿಹಿಯನ್ನು ತಿನ್ನುವುದು. ನಾಗರ ಪಂಚಮಿಯಂದು ಅಕ್ಕಂದಿರ ಮನೆಗೆ ಹೋಗಿ, ಬೆನ್ನು ತೊಳಿಸಿಕೊಂಡು, ನುಚ್ಚಿನುಂಡೆ, ಹೊಯ್ಗಡುಬು ತಿನ್ನುವ ಕಾರ್ಯಕ್ರಮ. ವರಮಹಾಲಕ್ಷ್ಮಿಯ ಹಬ್ಬಕ್ಕಂತು ಒಬ್ಬಟ್ಟಿನ ಸಮಾರಾಧನೆ. ಇದೆಲ್ಲದರ ಮಧ್ಯೆ ಶ್ರಾವಣ ಶನಿವಾರದಂದು ಮಾಡಲೇಬೇಕಾದ ಪಡಿ ಬೀರುವ ಕಾಯಕ. ಶನಿವಾರ morning class. ಅಂದರೆ ಬೆಳಿಗ್ಗೆ  ಬೇಗ ಪ್ರಾರಂಭ. ಸುಮಾರು 8 ಘಂಟೆ ಇರಬಹುದಾ ನೆನಪಿಲ್ಲ. ( ಬೇರೆ ದಿವಸ 10 ಗಂಟೆಗೆ ಪ್ರಾರಂಭ  ಆದರೂ ಅದು ಮಾರ್ನಿಂಗ್ ಅಲ್ಲ ...ಯಾಕೋ ). ಅಷ್ಟರಲ್ಲಿ ಸ್ನಾನ ಮಾಡಿ, ಅಕ್ಕ...

ಕಗ್ಗದ ಭಟ್ಟರು

Image
  ಮೊನ್ನೆ ಶನಿವಾರ, ಅಶಕ್ತ ಪೋಷಕ ಸಭಾದಲ್ಲಿ ನಡೆದ, ವಾರದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಂದಿದ್ದವರು ' ಕಗ್ಗದ ಭಟ್ಟ ' ಎಂದೆ ಖ್ಯಾತರಾದ ಪ್ರೊ. ಎಚ್ ಎಸ್ ಲಕ್ಷ್ಮೀನಾರಾಯಣ ಭಟ್ಟರು.  ಸಾಹಿತ್ಯದಲ್ಲಿ ಹಾಸ್ಯ ಎಂಬ ವಿಷಯವನ್ನು ಇಟ್ಟುಕೊಂಡು, ಸುಮಾರು ಒಂದು ಗಂಟೆಗೂ ಮಿಕ್ಕಿ ಮಾತನಾಡಿದ / ಹಾಡಿದ / ಹಾಡಿಸಿದ ಭಟ್ಟರು, ಹಿರಿಯ ನಾಗರಿಕರ ಪಾಲ್ಗೊಳ್ಳುವಿಕೆಯನ್ನು, ಪ್ರೋತ್ಸಾಹಿಸಿದರು, ಸಫಲರಾದರು ಸಹ. 80 ವರ್ಷದ ಲಕ್ಷ್ಮೀನಾರಾಯಣ ಭಟ್ಟರು ಹಾಡುಗಳನ್ನು ಹಾಡುವಾಗ, ಸ್ವರ ಮೇಲೆತ್ತಲು ಸ್ವಲ್ಪ ಕಷ್ಟ ಪಟ್ಟರೂ ಸಹ, ಉತ್ಸಾಹ ಮಾತ್ರ ಉತ್ತುಂಗದಲ್ಲಿತ್ತು. ಪ್ರತಿ ಹಂತದಲ್ಲೂ ಒಂದಲ್ಲ ಒಂದು ಗಾಯನ ಇದ್ದೇ ಇತ್ತು.  ಇಂಗ್ಲೀಷ್ ಮಿಶ್ರಿತ ಹಾಸ್ಯರೂಪದ ಗಣಪತಿಯ ಸ್ತೋತ್ರ, ಬೆಂಗಳೂರಾಯಿತು ಬೊಂಬಾಯಿ ಎಂದು ಶುರು ಮಾಡಿ, ಬೆಂಗಳೂರಿನ ಕೆಲವು ಅಪಸವ್ಯಗಳನ್ನು ಹಾಸ್ಯ ಭರಿತವಾಗಿ ಪ್ರಸ್ತುತ ಪಡಿಸಿದರು. ಈಶ್ವರನ ತೊಡೆಯ ಮೇಲೆ ಕೂತ ಗೌರಿ ಹಾಗೂ ತಲೆಯ ಮೇಲೆ ಕೂತ ಗಂಗೆ ಇವರಿಬ್ಬರನ್ನು ಸಂಭಾಳಿಸುವ ಪ್ರಸಂಗವನ್ನು ವಿವರಿಸಿ, ಎಲ್ಲರೂ ಶಿವನಿಗೆ ಅಯ್ಯೋ ಪಾಪ ಅಯ್ಯೋ ಪಾಪ ಎಂದು ಹೇಳುವಂತೆ ಮಾಡಿದ್ದು ವಿಶಿಷ್ಟವಾಗಿತ್ತು. ಆಚೆ ಮನೆ ಸುಬ್ಬಮ್ಮನ ಏಕಾದಶಿ ಉಪವಾಸದ ವರ್ಣನೆ, ಸಾಕಷ್ಟು  ಸಲ ಕೇಳಿದ್ದ ನಿವಾಸಿಗಳಿಗೂ, ನಗೆಯುಕ್ಕಿಸಲು ಸಾಧ್ಯವಾಯಿತು. ಕಗ್ಗದ ಭಟ್ಟರಾಗಿ, ಕಗ್ಗವನ್ನು ಬಿಡಲಾದೀತೆ ? ನಗುವೊಂದು ರಸಪಾಕ  ಅಳುವೊಂದು ರಸಪಾಕ, ನಗುವು ಸ...

ಅಂಕಿ - ಸಂಖ್ಯೆ - ಲೆಕ್ಕ

Image
  ಅಂಕಿ ಸಂಖ್ಯೆಗಳು ಜೀವನದ ಅವಿಭಾಜ್ಯ ಅಂಗ. ಅದರ ಒಡನಾಟವಿಲ್ಲದ ದಿನಗಳೇ ಇಲ್ಲವೇನೋ. ನನ್ನ ಜೀವಿತದಲ್ಲಿ, ಅಂಕಿಯೊಂದಿಗೆ ಗೆಳೆತನ ಬೆಸೆದದ್ದು, ಬಾಯಿ ಪಾಠದ ಪ್ರಾರಂಭದಿಂದ... ನನಗೆ ಸುಮಾರು 3-4 ವರ್ಷ ಇರಬಹುದು. ಬಾಲ ಭಾಷೆಯಲ್ಲಿ ಹೇಳುತ್ತಿದ್ದ ಬಾಯಿ ಪಾಠ...  ಶುಕ್ಲಾಂಭರದರಂ ವಿಷ್ಣುಂ...  ಗುರು ಬ್ರಹ್ಮ ಗುರು ವಿಷ್ಣು..  ಸರಸ್ವತಿ ನಮಸ್ತುಭ್ಯಂ... ಇಂದ ಪ್ರಾರಂಭಗೊಂಡು.. ಸೋಮವಾರ ಮಂಗಳವಾರ,... ಪಾಡ್ಯ, ಬಿದಿಗೆ, ತದಿಗೆ,    ಚೈತ್ರ ವೈಶಾಖ... ವಸಂತ ಋತು, ಗ್ರೀಷ್ಮ ಋತು ಮುಗಿಸಿ  ಒಂದು ಎರಡು 3 4 ಐದು ಆರು 7 8 ಒಂಭತ್ತು ಹತ್ತು ಹೇಳಿ ಮುಗಿಸುತ್ತಿದ್ದದ್ದು. ಅದನ್ನು ಮೊದಲು ಅಳವಡಿಸಿಕೊಂಡಿದ್ದು.. ಶಾಲೆಯಲ್ಲಿ ಉಪಾಧ್ಯಾಯರಿಗೆ ಕಿರುಬೆರಳು ತೋರಿಸಿ (ಒಂದಕ್ಕೆ)  ತೋರು ಬೆರಳು ಮಧ್ಯಬೆರಳು ತೋರಿಸಿ ( ಎರಡಕ್ಕೆ) ಆಚೆ ಹೋಗವುದು. ಕೂಡಿ ಕಳೆಯುವಾಗ ಕೈಬೆರಳುಗಳ ಸಹಾಯದಿಂದ ಎಣಿಸುತ್ತಿದ್ದದ್ದು.  ಎಲ್ಲಾ ಆಟಗಳಲ್ಲೂ ಒಂದಲ್ಲ ಒಂದು ತರಹ ಎಣಿಕೆ -  ಲೆಕ್ಕ ಇದ್ದದ್ದೆ.  ಈಜಾಟದ ಸಮಯದಲ್ಲಿ, ಯಾರು ಹೆಚ್ಚು ಸಮಯ ನೀರಲ್ಲಿ ಮುಳುಗಿರುತ್ತಾರೆ ಎನ್ನುವುದು ಎಣಿಕೆಯ ರೂಪದಲ್ಲಿ ಇರುತ್ತಿತ್ತು. ನಾವು ಯಾರನ್ನು ಗೆಲ್ಲಿಸಬೇಕೋ, ಅವರು ಮುಳುಗಿದಾಗ ಒಂದು, ಎರಡು, ಮೂರು, ನಾಲ್ಕು... ಇದು ಎಣಿಕೆಯ ಓಟ, ಬೇರೆಯವರು ಮುಳುಗಿದಾಗ, ಒಂದು......... ಎರಡು........ ಮೂರು....... ನಾಲ್ಕು.....

ಏಕಾಂಗಿ ಸಂಚಾರ

Image
ಎಲ್ಲಿ ಹೋಗಲೂ ನನಗೆ ಜೊತೆ ಬೇಕು. ಜೊತೆ ಇಲ್ಲದಾದಾಗ ಎಷ್ಟೋ ಸಲ ಹೋಗದೇ ಇದ್ದ ಸಂದರ್ಭಗಳು ಇವೆ. ಹಾಗೆ ಅನಿವಾರ್ಯವಾಗಿ ಹೋದ ಸಂದರ್ಭಗಳೂ ಇದೆ. ನಾನೇ ಇಷ್ಟ ಪಟ್ಟು ಒಂಟಿಯಾಗಿ ಹೋದದ್ದು ಲೇಪಾಕ್ಷಿಗೆ. ಆ ಅನುಭವ ಖುಷಿ ಕೊಟ್ಟಿತ್ತು.  ಈಚೆಗೆ ಏಕಾಂಗಿಯಾಗಿ ಹೋಗಿದ್ದ ಮುಳುಬಾಗಿಲಿನ ಪ್ರವಾಸದ ಅನುಭವ.... ಜೊತೆಯಲ್ಲಿ ಯಾರು ಇರದಿದ್ದರೂ, ಅಪರಿಚಿತರ ಜೊತೆ ಒಂದೆರಡು ಮಾತು ಬಿಟ್ಟು, ಮೌನವೇ ಆವರಿಸಿದ್ದರೂ, ಅಲ್ಲೊಂದು ಸಂತಸವಿತ್ತು, ಅಂತರ್ಮುಖಿಯಾಗಲು ಅವಕಾಶವಿತ್ತು... ಹಾಗಾಗಿ ಅದೊಂದು ಬೇರೆಯೇ ದಾರಿ ಎನಿಸಿತು.  ಈಗ ಒಬ್ಬಂಟಿಯಾಗಿ ಹೋಗುವ ಪ್ರವಾಸದ ಅವಕಾಶಕ್ಕಾಗಿ ಎದುರು ನೋಡುತ್ತೇನೆ. ಹೋದ ಶುಕ್ರವಾರ ಏಕಾಂಗಿಯಾಗಿ ಹೋದದ್ದು, ಕನಕಪುರ ರಸ್ತೆಯ ರವಿಶಂಕರ್ ಗುರೂಜಿಯವರ ಆಶ್ರಮಕ್ಕೆ.  ನಾನು ಅಲ್ಲಿ ತಲುಪುವಾಗ 12 ಗಂಟೆ ಸಮೀಪಿಸಿತ್ತು.  ಒಳಗೆ ಹೋಗಲು  ಅನುಮತಿಗೆ, ಬೇಕಾದ ವಿವರಗಳನ್ನು  online ಮೂಲಕ ತುಂಬಿ,ಪಡೆದು, ಅವರ ಸಲಹೆಯಂತೆ ಮುಂದೆ ನಡೆದೆ. ಪಾದಚಾರಿಗಳಿಗಾಗಿ ಹಾಸುಗಲ್ಲುಗಳ  ಮಾರ್ಗ... ಎಡಬಲಗಳಲ್ಲಿ ಹಸಿರು, ಅಲ್ಲಲ್ಲಿ ಮಾರ್ಗದರ್ಶಕ ಬರವಣಿಗೆಗಳು... ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ. ನನಗ್ಯಾವ ಗೊತ್ತು ಗುರಿಗಳು ಇರದಿದ್ದರಿಂದ ಹಾಗೆ ಮುನ್ನಡೆದೆ, ಅಲ್ಲೊಂದು ಧ್ಯಾನ ಮಂದಿರ ಎಂದು ಬರೆದ ಬಾಗಿಲನ್ನು ತೆರೆಯಲು ಪ್ರಯತ್ನ ಪಡುತ್ತಿದ್ದೆ, ಆಗ ಬಂದ ಒಬ್ಬ ಹೆಣ್ಣು ಮಗಳು,   ಹತ್...

ಅಂತ್ಯೇಷ್ಟಿ/ ಶ್ರಾದ್ಧಕ್ಕೆ ಮಗನೇ ಏಕೆ ?

Image
ಸಾಮಾನ್ಯವಾಗಿ ಯಾರನ್ನಾದರೂ ಭೇಟಿಯಾದಾಗ ನಮಸ್ಕಾರ ಹೇಳಿ, ಆರಾಮಾನಾ / ಚೆನ್ನಾಗಿದ್ದೀರಾ ಎಂದು ಕೇಳುವುದು ವಾಡಿಕೆ. ಅದರಲ್ಲೂ ಬೆಳಗಿನ ವಾಕಿಂಗ್ ಸಮಯದಲ್ಲಿ ಮುಂದುವರಿದು ಈಗ ಬಂದ್ರಾ / ಎಷ್ಟು ಸುತ್ತು ಆಯಿತು ಎಂದು ಕೇಳಿ... ಅವರ ಹಾಜರಾತಿಯ ವಿಷಯಕ್ಕೆ ಬಂದು... ಏನು ಎರಡು ದಿವಸದಿಂದ ಕಾಣಲಿಲ್ಲ ಎಂಬ ಪ್ರಶ್ನೆ ತಾನಾಗಿ ಬರುತ್ತದೆ. ಇಂಥ ಒಂದು ಪ್ರಶ್ನೆಯನ್ನು ಮೊನ್ನೆ ನಾನು ಲಕ್ಷ್ಮೀನಾರಾಯಣ ಹಾಗೂ ಜಯಶ್ರೀ ದಂಪತಿಯನ್ನು ಕೇಳಿದೆ. ಅದಕ್ಕೆ  ನಮ್ಮತ್ತೆಯ ಶ್ರಾದ್ದ ಇತ್ತು ಎಂದು ಹೇಳಿದವರು ಲಕ್ಷ್ಮಿ ನಾರಾಯಣ ಅವರು. ತಮ್ಮ ಬಂದಿದ್ನಾ ಎಂದು ಜಯಶ್ರೀ ಅವರನ್ನು ಕೇಳಿದಾಗ, ಅವನೆಲ್ಲಿ ಬರ್ತಾನೆ ಅಷ್ಟು ದೂರದಿಂದ... ನಾನೇ ಮಾಡ್ತೀನಿ ಎಂದು ಹೇಳಿದ್ದು ಕೇಳಿ, ಒಂದು ತರಹ ಖುಷಿ / ಆಶ್ಚರ್ಯ/ ಕುತೂಹಲದ ಭಾವ ಮನಸ್ಸಿನಲ್ಲಿ ಮೂಡಿತು. ಮುಂದುವರಿದು ಅವರು ಹೇಳಿದ್ದು, ನಾನೇ ಅಡಿಗೆ ಮಾಡುತ್ತೇನೆ.. ಪಿಂಡಪ್ರದಾನ ಮಾಡುವುದನ್ನು ಬಿಟ್ಟು, ತರ್ಪಣ ಬಿಡುವವರೆಗೆ ಎಲ್ಲವನ್ನು ನಾನೇ ಮಾಡುತ್ತೇನೆ. ಇವರು ಬಡಿಸುವುದಕ್ಕೆ ಸಹಾಯ ಮಾಡುತ್ತಾರೆ.   ಇಂದಿನ ದಿನಮಾನದ ಹೆಂಗಸರ ಮನಸ್ಥಿತಿಯನ್ನು ನೆನೆದಾಗ ಮೇಲಿನ ಎರಡು ಕೆಲಸಗಳು ವಿಶೇಷ ಎನ್ನಿಸಿದವು. ಅವರ ಅಮ್ಮ ಸತ್ತಾಗ, ತಮ್ಮ,  ತುಂಬಾ ಚಿಕ್ಕವನಲ್ಲದಿದ್ದರೂ... ಅವನ ಭಯವನ್ನು/ ಹಿಂಜರಿಕೆಯನ್ನು ಗಮನಿಸಿ, ಅವನೋಡನೆ ಸರಿಸಮನಾಗಿ ನಿಂತು, ಅಂತ್ಯ ಸಂಸ್ಕಾರದ ಎಲ್ಲ ವಿಧಿಗಳನ್ನು ಪೂರೈಸಿ ಚಿತೆಗೆ ಅಗ...

ಗೋವಿಂದಾ... ಗೋ....ವಿಂದ

Image
ಬೆಳಗಿನ ವಾಕಿಂಗ್ ಸಮಯ.. ಇದ್ದಕ್ಕಿದ್ದಂತೆ ಒಂದು ಮೂಲೆಯಿಂದ ಕೇಳುತ್ತಿದ್ದ ಗೋವಿಂದಾ ಎಂಬ ಕೂಗು... ಅದಕ್ಕೆ ಇನ್ನೊಂದು ಕಡೆಯಿಂದ ಬರುತ್ತಿದ್ದ ಪ್ರತಿಕ್ರಿಯೆ ಗೋ...ವಿಂದ, ಮತ್ತೊಮ್ಮೆ ಇನ್ನೊಂದು ಗೋವಿಂದ ಮತ್ತದಕ್ಕೆ ಪ್ರತಿಕ್ರಿಯೆ. ಹೀಗೆ ಸಾಕಷ್ಟು ಜನರ ಬಾಯಲ್ಲಿನ ಗೋವಿಂದನಾಮ, ಅದಕ್ಕೆ ಪ್ರತಿಕ್ರಿಯಿಸುತ್ತಿದ್ದವರು ಒಬ್ಬರೇ ಎಂದು ತಿಳಿಯಿತು. ಅವರ ಧ್ವನಿ ಪರಿಚಿತವಾಗಿದ್ದರೂ, ಮುಖತಃ ನೋಡಿರಲಿಲ್ಲ. ಈಚೆಗೆ ಅವರ ದರ್ಶನವಾಯಿತು. ನಮಸ್ಕರಿಸಿದೆ.  ಹಣೆಯಲ್ಲಿ ದುಂಡು ಕುಂಕುಮವಿದ್ದ, ಸಾತ್ವಿಕ ವರ್ಚಸ್ಸಿನ ಹಿರಿಯರು. ಇನ್ನೂ ನನಗೆ ಪರಿಚಯವಾಗಿಲ್ಲ. ಗೋವಿಂದ ನಾಮದ ಮೂಲಕವೇ ಎಲ್ಲರೂ ಅವರನ್ನು ನಮಸ್ಕರಿಸುತ್ತಿದ್ದದ್ದು. ಅದು ಅವರ ವೈಶಿಷ್ಟ್ಯತೆ. ಗೋವಿಂದ ಪದವನ್ನು ಕೇಳಿದಾಗ ಮನಸ್ಸಿಗೆ ಬರುವುದೇ ತಿರುಪತಿ, ಜೊತೆ ಜೊತೆಗೆ ಬಿಳಿ ಕೆಂಪಿನ ದೊಡ್ಡ ನಾಮ. ಅದು ತಿರುಪತಿಯ ಹೆಗ್ಗುರುತು. ತಿರುಪತಿಯ ಬೆಟ್ಟವನ್ನು ಹತ್ತುವಾಗ, ಇಳಿಯುವಾಗ ಸತತವಾಗಿ ಕೇಳುವುದೇ ಗೋವಿಂದಾ... ಗೋ...ವಿಂದ ಎನ್ನುವ ನಾಮಸ್ಮರಣೆ. ಬೆಟ್ಟದ ಮೇಲೆ ಕಣ್ಣಿಗೆ ಕಾಣುವುದು, ಲಿಂಗ ಭೇದವಿಲ್ಲದ, ವಯಸ್ಸಿನ ಅಂತರ ಲೆಕ್ಕಕ್ಕೆ ಇಲ್ಲದ ಬೋಡು ಗುಂಡುಗಳು, ಹಣೆಯ ಮೇಲಿನ ನಾಮಗಳು.  ಗೋವಿಂದ ಪದದ ಹುಟ್ಟಿನ ಹಿಂದೆ ಒಂದು ಕುತೂಹಲಕಾರಿ ಕಥೆ ಇದೆ. ಭೂಮಿಯಲ್ಲಿ ವಾಸ ಮಾಡಲು ಬಂದ ವಿಷ್ಣು, ಸನ್ಯಾಸಿಯ ರೂಪದಲ್ಲಿ ಅಗಸ್ತ್ಯ ಋಷಿಗಳ ಆಶ್ರಮಕ್ಕೆ ಬಂದು ತನ್ನ ಉಪಯೋಗಕ್ಕಾಗಿ ಒಂದು ಹಸುವನ್ನು...

ರೂಪಾಂತರ - metamorphasis

Image
  ಬೆಳಗಿನ ವಾಕಿಂಗ್ ಸಮಯದಲ್ಲಿ ಪರಿಚಯವಾಗಿ, ಭೇಟಿಯಾಗುವ ಹಿರಿಯರು, ರಾಮಣ್ಣನವರು. ಅವರು ಯಾವಾಗಲೂ ಶುಭ್ರವಾದ ಬಿಳಿಯ ಪ್ಯಾಂಟ್ ಮತ್ತು ಅರ್ಧ ತೋಳಿನ ಬಿಳಿಯ ಶರ್ಟ್ ನಲ್ಲಿ ಕಾಣಿಸುತ್ತಿದ್ದವರು. ಬೆಳ್ಳಿಯ ಕೂದಲಿನ, ಬಿಳಿ ಬಣ್ಣದ,    ಬಿಳಿಯ ಉಡುಗೆ ತೊಡುಗೆಯ ರಾಮಣ್ಣನವರನ್ನು ಬಣ್ಣ ಬಣ್ಣದ ಪ್ಯಾಂಟ್ ಮತ್ತು ಟೀ ಶರ್ಟ್ ನಲ್ಲಿ ಕಂಡಾಗ ಆಶ್ಚರ್ಯ ಹಾಗೂ ಸಂತೋಷ ಒಟ್ಟಿಗೆ ಆಯ್ತು. smart young man ತರ ಕಾಣ್ತೀರ ಅಂತ ಮೆಚ್ಚುಗೆಯನ್ನು ಸೂಚಿಸಿದೆ. ಈಚೆಗೆ ಜಪಾನ್ ಗೆ ಹೋಗಿ ಬಂದ ರಾಮಣ್ಣನವರಿಗೆ, ಅಲ್ಲಿ ಉಪಯೋಗಿಸಲು, ಮಗಳು ತಂದುಕೊಟ್ಟ ಐದಾರು ಜೊತೆ ಬಣ್ಣ ಬಣ್ಣದ ಬಟ್ಟೆಗಳನ್ನು, ಸವೆಸುವ/ ಅನುಭವಿಸುವ ಅವಕಾಶ. ಹೆಣ್ಣು ಮಕ್ಕಳ ಈ ಪ್ರೀತಿಯನ್ನು ಅನುಭವಿಸುವುದೇ ಒಂದು ಆನಂದ.  ಈ ಸಮಯದಲ್ಲಿ ಜ್ಞಾಪಕಕ್ಕೆ ಬಂದದ್ದೇ metamorphasis ಪದ. ಚಿಟ್ಟೆಯ ಜೀವನಚಕ್ರ ಪಾಠದಲ್ಲಿ,   ಹೈಸ್ಕೂಲಿನಲ್ಲಿ ಓದಿದ್ದು. ಕಂಬಳಿ ಹುಳುವಿನಿಂದ ಚಿಟ್ಟೆಯಾಗಿ ರೂಪಾಂತರಗೊಂಡು.. ಮೊಟ್ಟೆ ಇಟ್ಟು ಮತ್ತೆ ಕಂಬಳಿ ಹುಳು ಆಗುವ ಜೀವನಚಕ್ರ. ಹಳ್ಳಿಯಲ್ಲಿ ದಿನ ದಿನವೂ ಕಣ್ಣಿಗೆ ಬೀಳುತ್ತಿದ್ದ ಮುಟ್ಟಿದರೆ ಚುಚ್ಚಿ ಕೈ ನವೆ ಆಗುತ್ತಿದ್ದ ಕಂಬಳಿ ಹುಳ ಹಾಗೂ ಕೈಯಲ್ಲಿ ಹಿಡಿಯಲು ಇಷ್ಟಪಟ್ಟು, ಪ್ರಯತ್ನಿಸುತ್ತಿದ್ದ ಬಣ್ಣ ಬಣ್ಣದ ಚಿಟ್ಟೆಗಳ ಮಧ್ಯೆ ಇಂಥ ಒಂದು ಸಂಕೀರ್ಣ ಸಂಬಂಧ ಇದೆ ಎಂದು ತಿಳಿದಾಗ ಆಶ್ಚರ್ಯವಾದದ್ದು ಸಹಜವೇ ಅಲ್ಲವೇ? ಶರ್ವ ( ನನ್ನ ನ...

ಗೆಳೆತನ ಅಂದ್ರೆ. ...

Image
 ವಿದ್ಯಾರ್ಥಿ ಜೀವನದ ಪ್ರಸಂಗಗಳು ಲೇಖನಕ್ಕೆ ಬಂದ ಒಂದು ಪ್ರತಿಕ್ರಿಯೆ ಇದು. ಓದಿದ ಕೂಡಲೇ ಖುಷಿಯಾಯಿತು, ಇದನ್ನು ಬರೆದಿರುವುದು ಪ್ರೇಮನೇ (ಭದ್ರಾವತಿಯ ಪ್ರೇಮ್ ಕುಮಾರ್... ಪ್ರೇಮ್) ಎಂದು ಖಚಿತವಾಯಿತು. ತಕ್ಷಣ ಅವನಿಗೆ ಫೋನ್ ಮಾಡಿದೆ... ಸಂತೋಷದ ತರಂಗಗಳು ನಮ್ಮಿಬ್ಬರ ಮಧ್ಯೆ ಹರಿದಾಡಿದವು. ಸುಮಾರು 10 ನಿಮಿಷಗಳ ಕಾಲದಲ್ಲಿ ಏನೆಲ್ಲ ಮಾತಾಡಿ, ಹಳೆಯದನ್ನು ನೆನಪಿಸಿಕೊಂಡು, ಭೇಟಿ ಮಾಡುವ ನಿರ್ಧಾರ ಮಾಡಿದ್ದಾಯ್ತು.  ಈ ಪ್ರೇಮ ವಿಶಿಷ್ಟ ವ್ಯಕ್ತಿ. ಅವನನ್ನು ಪ್ರೇಮ್... ಅಂದರೆ ಗಂಡಸು ಎಂದು ಕರೆಸಿಕೊಳ್ಳುವ ಇಚ್ಛೆ.... ಆದರೆ ಮೋತಿ ಕರೆಯುತ್ತಿದ್ದದ್ದು ಪ್ರೇಮ ಎಂದು, ಸಹಜವಾಗಿ ನಾನೂ ಅದನ್ನೆ ಉಪಯೋಗಿಸಿದೆ. ನನ್ನ ನೆನಪಿನಲ್ಲಿರುವಂತೆ,  ಇದುವರೆಗೆ 4 ಸಲ ಭೇಟಿ ಮಾಡಿರಬಹುದೇನೋ.. ಅದರಲ್ಲಿ ಒಂದು ಬಾರಿ ಮಾತ್ರ ಒಂದು ವಾರಕ್ಕೂ ಹೆಚ್ಚು, ಜೊತೆ ಜೊತೆಯಲ್ಲೇ ಕಳೆದದ್ದು. ಇಷ್ಟು ಕಡಿಮೆ ಒಡನಾಟದಲ್ಲಿ, ಅದೆಷ್ಟು ಬಾಂಧವ್ಯ ಬೆಳೆದಿದೆ ಎಂದರೆ.. ಆ ಆತ್ಮೀಯತೆ ಅನುಭವಿಸಿಯೇ ತೀರಬೇಕು. ಆ ವಯಸ್ಸಿನ ಪ್ರಭಾವವೋ, ಗೆಳೆತನಕ್ಕೆ ಬಿದ್ದ ಭದ್ರ ಬುನಾದಿಯೋ.. ಇಂದಿಗೂ ಚೆನ್ನಾಗಿದೆ.    ಅವನು ನೆನಪಿಸಿದ ಬಿದರಗೂಡಿನ ಪ್ರವಾಸ ಈ ಲೇಖನದ ತಿರುಳು. ಅದು 1968 - 69 ರ ಸಮಯ . ಓದು ಮುಗಿಸಿ, ಸರಿಯಾದ, ಪೂರ್ಣ ಪ್ರಮಾಣದ  ಕೆಲಸವಿಲ್ಲದ ದಿನಗಳು. ಸುಮಾರು 12 ರ ತನಕ Bangalore Institute of Engineering ನಲ್ಲಿ ಪಾಠ ಮಾಡಿ ...

ಅಪ್ಪಂದಿರ ದಿನ

Image
 ಒಂದು ಕಾರ್ಯಕ್ರಮದ ನಿಮಿತ್ತ ನನ್ನ ಹೆಂಡತಿ ಬೆಳಿಗ್ಗೆ 9:00 ಗಂಟೆಗೆ ಮನೆಯಿಂದ ಹೊರಟಳು. ಒಂಟಿಯಾಗಿದ್ದೆ... ಏನು ತೋಚದೆ.. ಹಾಗೆ ಮಲಗಿದೆ... ಯಾವಾಗಿನಂತೆ ಸುಖ ನಿದ್ರೆಗೆ ಜಾರಿದೆ. ಟೆಲಿಫೋನ್  ಕರೆಯ ಶಬ್ದ ಎಲ್ಲೋ ಕೇಳಿಸಿದಂತಾಗಿ, ಅರೆ ನಿದ್ರೆಯಲ್ಲಿಯೇ ಕಿವಿಯ ಬಳಿ ಇಟ್ಟೆ... " ಏನ್ ಮಾಡ್ತಾ ಇದ್ದೀಯಾ?" ಆ ಕಡೆಯಿಂದ ಧ್ವನಿ... ಇಷ್ಟು ಗತ್ತಿನಿಂದ ಕೇಳುವ ಒಂದೇ ವ್ಯಕ್ತಿ ಅದು ನನ್ನ ಮಗಳು ಚೈತ್ರ " ನಿದ್ದೆ..." " ಸೋಮಾರಿ ಕಟ್ಟೆ" ನನ್ನ ಬೈಗುಳವೇ ನನಗೆ ತಿರುಗುಬಾಣವಾಯಿತು "thank you..." " ತಿಂಡಿ ಏನ್ ತಿಂದೆ" " ಇನ್ನೂ ಸ್ನಾನನೂ ಮಾಡಿಲ್ಲ, ಯೋಚನೇನು ಮಾಡಿಲ್ಲ" " ಇಲ್ ಕೇಳಿಸ್ಕೋ... ನೀನು ಏನೂ ಮಾಡಕ್ಕೆ ಹೋಗ್ಬೇಡ, ನಾನು, ನೀನು, ವಿಸ್ಮಯ ಊಟಕ್ಕೆ ಹೋಗೋಣ... ಬಾಳೆ ಎಲೆ ಊಟ... ನಾನ್ ಬುಕ್ ಮಾಡ್ತೀನಿ..ಹನ್ನೆರಡೂವರೇಗೆ ಬರ್ತೀನಿ.. ನೀನ್ ರೆಡಿಯಾಗಿರು.. ನನ್ ಗಾಡಿಲ್ಲೇ ಕರ್ಕೊಂಡು ಹೋಗ್ತೀನಿ" " ಅಯ್ಯೋ.. ಬೇಡ ಕಣೆ ಆಟೋದಲ್ಲಿ ಹೋಗೋಣ" " ಸುಮ್ನೆ ಆಟೋ ಯಾಕೆ..." " ಹಾಗಾದ್ರೆ ನನ್ ಗಾಡಿಯಲ್ಲಿ ನಾನು.. ನಿನ್ ಗಾಡೀಲಿ ನೀನು ನಿನ್ ಮಗಳು ಹೋಗೋಣ" " ಎರಡೆರಡು ಗಾಡಿ ಯಾಕೆ.. ಒಂದೇ ಸಾಕು..." " ಹಾಗಾದ್ರೆ ನನ್ ಗಾಡಿಲಿ ಹೋಗೋಣ..."  " ಆಯ್ತು... ಬೇಗ ರೆಡಿಯಾಗು..." ಫ...