ಏಕಾಂಗಿ ಸಂಚಾರ
ಎಲ್ಲಿ ಹೋಗಲೂ ನನಗೆ ಜೊತೆ ಬೇಕು. ಜೊತೆ ಇಲ್ಲದಾದಾಗ ಎಷ್ಟೋ ಸಲ ಹೋಗದೇ ಇದ್ದ ಸಂದರ್ಭಗಳು ಇವೆ. ಹಾಗೆ ಅನಿವಾರ್ಯವಾಗಿ ಹೋದ ಸಂದರ್ಭಗಳೂ ಇದೆ. ನಾನೇ ಇಷ್ಟ ಪಟ್ಟು ಒಂಟಿಯಾಗಿ ಹೋದದ್ದು ಲೇಪಾಕ್ಷಿಗೆ. ಆ ಅನುಭವ ಖುಷಿ ಕೊಟ್ಟಿತ್ತು. ಈಚೆಗೆ ಏಕಾಂಗಿಯಾಗಿ ಹೋಗಿದ್ದ ಮುಳುಬಾಗಿಲಿನ ಪ್ರವಾಸದ ಅನುಭವ.... ಜೊತೆಯಲ್ಲಿ ಯಾರು ಇರದಿದ್ದರೂ, ಅಪರಿಚಿತರ ಜೊತೆ ಒಂದೆರಡು ಮಾತು ಬಿಟ್ಟು, ಮೌನವೇ ಆವರಿಸಿದ್ದರೂ, ಅಲ್ಲೊಂದು ಸಂತಸವಿತ್ತು, ಅಂತರ್ಮುಖಿಯಾಗಲು ಅವಕಾಶವಿತ್ತು... ಹಾಗಾಗಿ ಅದೊಂದು ಬೇರೆಯೇ ದಾರಿ ಎನಿಸಿತು. ಈಗ ಒಬ್ಬಂಟಿಯಾಗಿ ಹೋಗುವ ಪ್ರವಾಸದ ಅವಕಾಶಕ್ಕಾಗಿ ಎದುರು ನೋಡುತ್ತೇನೆ. ಹೋದ ಶುಕ್ರವಾರ ಏಕಾಂಗಿಯಾಗಿ ಹೋದದ್ದು, ಕನಕಪುರ ರಸ್ತೆಯ ರವಿಶಂಕರ್ ಗುರೂಜಿಯವರ ಆಶ್ರಮಕ್ಕೆ. ನಾನು ಅಲ್ಲಿ ತಲುಪುವಾಗ 12 ಗಂಟೆ ಸಮೀಪಿಸಿತ್ತು. ಒಳಗೆ ಹೋಗಲು ಅನುಮತಿಗೆ, ಬೇಕಾದ ವಿವರಗಳನ್ನು online ಮೂಲಕ ತುಂಬಿ,ಪಡೆದು, ಅವರ ಸಲಹೆಯಂತೆ ಮುಂದೆ ನಡೆದೆ. ಪಾದಚಾರಿಗಳಿಗಾಗಿ ಹಾಸುಗಲ್ಲುಗಳ ಮಾರ್ಗ... ಎಡಬಲಗಳಲ್ಲಿ ಹಸಿರು, ಅಲ್ಲಲ್ಲಿ ಮಾರ್ಗದರ್ಶಕ ಬರವಣಿಗೆಗಳು... ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ. ನನಗ್ಯಾವ ಗೊತ್ತು ಗುರಿಗಳು ಇರದಿದ್ದರಿಂದ ಹಾಗೆ ಮುನ್ನಡೆದೆ, ಅಲ್ಲೊಂದು ಧ್ಯಾನ ಮಂದಿರ ಎಂದು ಬರೆದ ಬಾಗಿಲನ್ನು ತೆರೆಯಲು ಪ್ರಯತ್ನ ಪಡುತ್ತಿದ್ದೆ, ಆಗ ಬಂದ ಒಬ್ಬ ಹೆಣ್ಣು ಮಗಳು, ಹತ್...