ಮನಸು ಗೊಂದಲದ ಗೂಡು
ನಯನ ಫೋನ್ ಮಾಡಿ " ಸರ್ ನಿಮ್ಮತ್ರ ಮಾತಾಡಬೇಕು ಯಾವಾಗ ಸಿಕ್ತೀರಾ" ಕೇಳಿದಾಗ ವಿಶೇಷ ಎನಿಸಲಿಲ್ಲ. ಇದು ಆಗಾಗ್ಗೆ ನಡೆಯುವ ಸಂಭಾಷಣೆ. ಹೊಂಗಿರಣ ಆಪ್ತ ಸಲಹಾ ಕೇಂದ್ರಕ್ಕೆ ಬಂದ ನಯನ ತನ್ನ ಹೊಸ ಕೆಲಸದ ಬಗ್ಗೆ ವಿವರಗಳನ್ನು ಹೇಳುವಾಗ, ತನ್ನ ಇಂಜಿನಿಯರಿಂಗ್ ಪದವಿಯ ಶ್ರೇಯಸ್ಸು ಬಹುಭಾಗ ನನಗೆ ಸಿಗಬೇಕೆಂದು ಹೇಳಿದಾಗ ಜೋರಾಗಿ ನಕ್ಕೆ. ಕಷ್ಟಪಟ್ಟು ಓದಿದ್ದು ನೀನು, ಪರೀಕ್ಷೆ ಬರೆದದ್ದು ನೀನು, ನನ್ನ ಪಾತ್ರವೇನು ಎಂದಾಗ " ಸರ್ ನನ್ನ ಹಿಂದೆ ನಿಂತು ಪ್ರೋತ್ಸಾಹಿಸಿ, ಧೈರ್ಯ ಕೊಟ್ಟು, ಫಲಿತಾಂಶ ಏನೇ ಇರಲಿ, ಪರೀಕ್ಷೆ ಬರೆಯಲೇ ಬೇಕೆಂದು ಒತ್ತಾಯಿಸಿದವರು ನೀವು.. ಇಲ್ಲದಿದ್ದರೆ ನಾನು ಪರೀಕ್ಷೆಗೆ ಹೋಗುತ್ತಿರಲಿಲ್ಲ" ಎಂದಾಗ ಸಂತೋಷವಾಗಿದ್ದು ನಿಜ. ನಯನಳ ಮೊದಲ ಭೇಟಿ, ಪ್ರಸನ್ನ ಆಪ್ತ ಸಲಹಾ ಕೇಂದ್ರದಲ್ಲಿ. ಆಗಿನ್ನು ಹೈಸ್ಕೂಲ್ ಮುಗಿಸಿ ಕಾಲೇಜಿನಲ್ಲಿ ಓದುತ್ತಿದ್ದವಳು. ಸಮಸ್ಯೆ .... ಓದಿನ ಮೇಲೆ ಗಮನಹರಿಸಲು ಆಗುತ್ತಿಲ್ಲ... ನಯನ ಅಪ್ಪ ಅಮ್ಮನಿಗೆ ಒಬ್ಬಳೇ ಮಗಳು. ಅಪ್ಪ ಅಮ್ಮ ಇಬ್ಬರು ಕೆಲಸಕ್ಕೆ ಹೋಗುವ ಕಾರಣ, ಶಾಲೆಯಿಂದ ಬಂದ ನಂತರ ಒಂಟಿಯಾಗಿ ಇರುವುದು ಅನಿವಾರ್ಯ. ನೆರೆಯ ಒಂದು ಮನೆಯಲ್ಲಿ ಮಾತ್ರ ಸ್ವಲ್ಪ ಸಲಿಗೆ ಇದೆ, ಬೇರೆ ಯಾರ ಮನೆಗೂ ಹೋಗುವುದಿಲ್ಲ. ಹೆಚ್ಚು ಮಾತಾಡದ ನಯನಳ ಕಣ್ಣಲ್ಲಿ ನೀರು ತುಂಬುವುದು ಬೇಗ, ಆದರೆ ಅಳಲೊಳ್ಳಲು. ಒಂದಷ್ಟು ಸಮಾಧಾನದ ಮಾತುಗಳನ್ನು ಆಡಿ, ಓದುವ ಬಗ್ಗೆ, ಹವ್ಯಾಸ ಬೆಳೆಸಿಕೊಳ್ಳುವುದು, ಸ್ನ...