Posts

ಕೋಳಿ ಕೂಗು - ಬೆಳ್ಳಿ ಬೆಳಗು

Image
  ಭಾನುವಾರ ಬೆಳಿಗ್ಗೆ ಸಾಮಾನ್ಯವಾಗಿ ಎಚ್ಚರ ಆಗುವುದು, ಮೇಕೆಯ ಆರ್ತನಾದದಿಂದ. ಸ್ವಲ್ಪ ಹೊತ್ತಿಗೆ ಆ ಆರ್ತನಾದ ಸಂಪೂರ್ಣ ನಿಂತು ಹೋಗುತ್ತದೆ... ಮೇಕೆ ಆಹಾರ ರೂಪವಾಗಿ ಬದಲಾಗಿರುತ್ತದೆ. ಮೊದಮೊದಲು ಮನಸ್ಸಿಗೆ ಕಸಿವಿಸಿ ಆಗುತ್ತಿತ್ತು. ಆದರೆ ಮಾಡುವುದೇನು... ಅದು ಅವರ ಊಟ, ಹಾಗಾಗಿ ಮೇಕೆಯ ಹನನ ಅವರಿಗೆ ಅನಿವಾರ್ಯ. ಮೊನ್ನೆ ಭಾನುವಾರ ದೂರದಲ್ಲೆಲ್ಲೋ ನನಗೆ ಕೇಳಿಸಿದ್ದು ಕೋಳಿಯ ಕೂಗು. ಪಾಪ ಅದಕ್ಕೆ ತನ್ನ ಹನನದ ಸಮಯ ಬಂದಿದೆ ಎಂದು ತಿಳಿದಿರಲಾರದು. ಆಗ ಮನಸ್ಸಿನಲ್ಲಿ ಮೂಡಿದ್ದು... ಕೊಕ್ಕೋ... ಕೊಕ್ಕೋ... ಎಂದು ಕೋಳಿಯೊಂದು ಕೂಗಿತು, ಅದರ ಕೂಗು ಕೇಳಿ ನನ್ನ ಮನಸ್ಸು ಮುದುಡಿ ಹೋಯಿತು ಎಂಬ ಸಾಲುಗಳು ( ಕುವೆಂಪುರವರ ಟುವ್ವಿ ಟುವ್ವಿ ಟುವ್ವಿ ಟುವ್ವಿ ಎಂದು ಹಕ್ಕಿ ಹಾಡಿತು ಪದ್ಯದ ಸ್ಪೂರ್ತಿ). ಈ ಕೋಳಿಯದು ಏನೋ ಶಿಸ್ತು. ಬೆಳಿಗ್ಗೆ ಬೇಗ ಏಳುವುದು, ಕೂಗಿ ಎಲ್ಲರನ್ನೂ ಎಬ್ಬಿಸುವುದು. ಬೆಳಗಿನ ಆ ಸಮಯಕ್ಕೂ ಒಂದು ನಂಟುಂಟು... ಅದೇ ಬೆಳ್ಳಿ ಚುಕ್ಕಿಯ (ಶುಕ್ರ ಗ್ರಹದ) ದರ್ಶನ. ಬೆಳಗಿನ ನಕ್ಷತ್ರ / ಮುಸ್ಸಂಜೆಯ ನಕ್ಷತ್ರ ಎಂದು ಕರೆಯಲ್ಪಡುವ ಶುಕ್ರ ಗ್ರಹ, ಚೆನ್ನಾಗಿ ಕಾಣುವುದು ಆ ಸಮಯದಲ್ಲಿ.  ಕೋಳಿ ಕೂಗಿತಕ್ಕ ನಂದನ ವನಾಕ... ಬೆಳಗಾಗಿ ಬೆಳ್ಳಿಯ ಚುಕ್ಕಿ ಉದಯಾದ ಬಳಿಕ .. ಮತ್ತು  ಬೆಳ್ಳಿ ಮೂಡಿತೋ ಕೋಳಿ ಕೂಗಿತೋ... ಬಾನಾಗಿ ರಂಗು ಚೆಲ್ಲಿ ತೇರಾನೇರಿ ಸೂರ್ಯ ಬಂದ.... ಎರಡು ಹಾಡುಗಳು ಬೆಳ್ಳಿಯ ಚುಕ್ಕಿ ಮತ್ತು ಕೋಳಿಗಿರುವ ...

ಜಾಹೀರಾತಿಗೆ ಮನಸೋತು..

Image
ಮಾತು ಏಕಮುಖ ಸಂಚಾರಿ. ಅನುಭವಿ ಮಾತುಗಾರರನ್ನು ಒಳ್ಳೆಯ ಸಂವಹನಕಾರ (communicator) ಎಂದು ಹೇಳುವರು. communication skill (ಸಂವಹನಕಲೆ) ಎಂದಾಗ ಬರೀ ಮಾತನಾಡುವುದಲ್ಲ, ಒಳ್ಳೆಯ  ಕೇಳುಗನೂ (listener)  ಆಗಬೇಕು. ಆಪ್ತ ಸಮಾಲೋಚಕರ ತರಬೇತಿ ಶಿಬಿರದಲ್ಲಿ, ಸಂವಹನ ಕಲೆ ಬಗ್ಗೆ ತಿಳಿಸುವಾಗ, ಮಾತನಾಡುವ ಕಲೆಯ ಜೊತೆಗೆ, ಗಮನವಿಟ್ಟು ಕೇಳುವುದು , ಕೇಳಿದ್ದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು, ವಿಶ್ಲೇಷಣೆ ಮಾಡುವುದು, ನಂತರ ಸರಿಯಾದ ಮಾರ್ಗದರ್ಶನ ಮಾಡುವುದು, ಎಲ್ಲವೂ ಬಹು ಮುಖ್ಯ ಎಂಬುದನ್ನು ಒತ್ತಿ ಹೇಳುತ್ತೇವೆ.  ಇನ್ನೊಂದು ಕ್ಷೇತ್ರವಿದೆ, ಅಲ್ಲಿ ಮಾತು, ಬರಹ, ಚಿತ್ರ, ಚಲನಚಿತ್ರದ ಮೂಲಕ ಸಂವಹನವಿರುತ್ತದೆ, ಆದರೆ ಅದೆಲ್ಲವೂ ಏಕಮುಖಿ. ಹೇಳಬೇಕಾದುದನ್ನು, ಅದು ಯಾರಿಗೆ ಮುಟ್ಟಬೇಕು, ಯಾವ ಪರಿಣಾಮ ಆಗಬೇಕು ಎನ್ನುವುದನ್ನು ನಿರ್ಧರಿಸಿ  ಅವರಿಗೆ ತಲುಪುವಂತೆ ಮಾಡುವ ಕಲೆ. ಅದು ವಿಶೇಷ ಅಭಿವ್ಯಕ್ತಿ. ಅದೇ ಜಾಹೀರಾತಿನ ಪ್ರಪಂಚ. ಇಂದಿನ ದಿನಗಳಲ್ಲಿ ಜಾಹೀರಾತಿಗೆ ವಿಶೇಷ ಸ್ಥಾನಮಾನವಿದೆ. ಹೆಜ್ಜೆ ಹೆಜ್ಜೆಗೂ, ಒಂದಲ್ಲ ಒಂದು ಜಾಹೀರಾತು ನಮ್ಮ ಕಣ್ಣ ಮುಂದೆ ಬರುತ್ತದೆ. ಅದರಲ್ಲೂ ಫೋನ್ ನಲ್ಲಿ ಏನೇ ನೋಡಲು ಮೊದಲು ಮಾಡಿದರೂ, ಜಾಹೀರಾತುಗಳ ಮಹಾಪೂರವೇ ಹರಿದು ಬರುತ್ತದೆ. ಸ್ವಲ್ಪ ಕಿರಿ ಕಿರಿ ಅನಿಸಿದರೂ ಅದನ್ನು ನೋಡುವುದು ಅನಿವಾರ್ಯವಾಗಿದೆ. ಕೆಲವನ್ನು ಸ್ಕಿಪ್ ಮಾಡಲು ಅವಕಾಶ ಇರುವುದೇ ಒಂದು ವರವಾಗಿದೆ. ಈ ಜಾಹೀರಾತುಗಳ...

ಮಾತು - (ತಲೆ) ಹರಟೆ

Image
  ಬೆಳಿಗ್ಗೆ ಉದ್ಯಾನವನದಲ್ಲಿ ಸ್ನೇಹಿತ ಯೋಗಾನಂದ ಅವರ ಜೊತೆ ನಡೆದಾಡುತ್ತಾ ಇದ್ದಾಗ ಒಬ್ಬ ಆಜಾನುಬಾಹು ವ್ಯಕ್ತಿ  ಫೋನಿನಲ್ಲಿ ಯಾರಿಗೋ ಜೋರಾಗಿ ದಬಾಯಿಸುತ್ತಾ ನಮ್ಮ ಪಕ್ಕದಲ್ಲಿ ನಡೆದರು... ಕೆಲ ಕ್ಷಣಗಳು ನಾವಿಬ್ಬರೂ ಮಾತು ನಿಲ್ಲಿಸಿದೆವು.. ಆ ವ್ಯಕ್ತಿ ಮುನ್ನಡೆದಾಗ ಯೋಗಾನಂದ ಅವರು ಹೇಳಿದ್ದು " ಇದರ ಬಗ್ಗೆ ಒಂದು ಬ್ಲಾಗ್ ಬರೆಯಿರಿ".  ಮುಂದಿನ ಲೇಖನದ ವಿಷಯ ಇನ್ನೂ ನನ್ನ ತಲೆಗೆ ಬರದಿದ್ದರಿಂದ, ಇದೇ ಇರಲಿ ಎಂದು ಆಯ್ಕೆ ಮಾಡಿದೆ. ಹಾಗಾಗಿ ಈ ಲೇಖನ..  ಕಿವಿಗೆ headphone ಗಳನ್ನು ಸಿಕ್ಕಿಸಿದ್ದ  ವ್ಯಕ್ತಿಯ ಶಾರೀರ, ಶರೀರದಷ್ಟೇ ದೊಡ್ಡದಾಗಿತ್ತು. ಕೋಪ ಎದ್ದು ಕಾಣುತ್ತಿತ್ತು. ಕೋಪ ಬಂದಾಗ ಎದುರಿನ ವ್ಯಕ್ತಿ ತುಂಬಾ ಹತ್ತಿರದಲ್ಲೇ ಇದ್ದರೂ, ಎಲ್ಲೋ ದೂರದಲ್ಲಿರುವವರೊಡನೆ ಮಾತನಾಡುವಂತಿರುತ್ತದೆ. ಏಕೆಂದರೆ ಮಾನಸಿಕವಾಗಿ ಅವರು ದೂರದಲ್ಲಿ ಇರುತ್ತಾರೆ. ಅದೇ ಪ್ರೀತಿ ಇದ್ದರೆ ಪಿಸು ಮಾತು ಸಹ ಬೇಗ ಮನ ಮುಟ್ಟುತ್ತದೆ. ಇದು ನವದಂಪತಿಗಳಲ್ಲಿ ಹಾಗೂ ಪ್ರೇಮಿಗಳಲ್ಲಿ ಹೆಚ್ಚು ಕಾಣುತ್ತದೆ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂದರು ಬಸವಣ್ಣನವರು.  ಅದು ಬುದ್ಧಿವಾದ / ಸಲಹೆ ಮಾತ್ರ. ನಿಜ ಜೀವನದಲ್ಲಿ ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎನ್ನುವುದೇ ವಸ್ತುಸ್ಥಿತಿ.  ಮುತ್ತಿನ ಹಾರ ಬಲು ಅಪರೂಪ. ಅದರಲ್ಲೂ ಭಾರತದ ಸಂವಿಧಾನ ಕೊಟ್ಟಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವಾಗಿದ್ದೆ ಹೆಚ್...

ಹೌದು ಸ್ವಾಮಿ ನಾವಿರೋದೆ ಹೀಗೆ

Image
  " ನಾರಾಯಣ ಸಾಕು ಮಾಡಪ್ಪಾ, ಬೇಗ ಕರೆಸ್ಕೋ" ಈ ಮಾತು ಕಿವಿಗೆ ಬಿದ್ದಾಗ, ಆರ್ತನಾದ ಅನಿಸಿತು. ತಿರುಗಿ ನೋಡಿದಾಗ ಕಂಡದ್ದು, ಕೃಶ ದೇಹದ 75 ವರ್ಷದ ಆಸುಪಾಸಿನ ಒಬ್ಬ ಹಿರಿಯರು. ಉದ್ಯಾನವನದಲ್ಲಿ ನಿಧಾನವಾಗಿ ನಡೆಯುತ್ತಿದ್ದರು, ಕಿವಿಯ ಹತ್ತಿರ ಹಿಡಿದ ಕೈಯಲ್ಲಿ ಮೊಬೈಲ್ ಫೋನ್, ಬಿಳಿ ಪಂಚೆ ಶರ್ಟು, ಕಾಲಲ್ಲಿ ಶೂ. ಏನೋ ನೋವಿರಬೇಕು ಅಂತ ಭಾವಿಸಿದೆ. ಮತ್ತೆರಡು ದಿನದ ನಂತರ ಆ  ಹಿರಿಯರು ಕಂಡರು. ಏರು ದಾರಿಯಲ್ಲಿ ನಡೆಯುತ್ತಿದ್ದೆವು. ಸ್ವಲ್ಪ ದೂರ ಸಾಗಿದ ನಂತರ, ಸುಧಾರಿಸಿಕೊಳ್ಳುವ ರೀತಿ ನಿಂತು "ನಾರಾಯಣ ಸಾಕು ಮಾಡಪ್ಪಾ, ಬೇಗ ಕರೆಸ್ಕೋ" ಎಂದು ಹೇಳಿದ್ದು ಗಮನಿಸಿದೆ. ಅದರ ಹಿಂದೆ ನೋವಿತ್ತು. ವಯೋಸಹಜ ಸುಸ್ತೂ ಇತ್ತು. ಸಂಕಟ ಬಂದಾಗ ವೆಂಕಟರಮಣ ಎನ್ನುವ ನಾಣ್ಣುಡಿ ಅಕ್ಷರಶಃ ಸತ್ಯ .  ಒಬ್ಬೊಬ್ಬರ ಸಂಕಟ ಒಂದೊಂದು, ಅದಕ್ಕೆ ತಕ್ಕ ಹಾಗೆ ದೇವರಲ್ಲಿ ಬೇಡಿಕೆ... ದೇವರು ಬೇಡಿಕೆ ಈಡೇರಿಸ್ತಾನೋ ಇಲ್ಲವೋ... ಅವನಿಗೇ ಗೊತ್ತು... ನಾವ್ ಮಾತ್ರ ಬೇಡಿಕೊಳ್ಳುವುದು ಬಿಡಲ್ಲ. ದೇವರನ್ನು ನಂಬುವ ಆಸ್ತಿಕರದು ಈ ಬಗೆಯಾದರೆ, ದೇವರನ್ನೇ ನಂಬದ ನಾಸ್ತಿಕರೂ ಇದ್ದಾರೆ. ತಮ್ಮ ಹತ್ತು ಜನ್ಮದಲ್ಲಿ ದೇವರನ್ನು ದ್ವೇಷಿಸುತ್ತಿದ್ದ ಜಯ ವಿಜಯರು ಇದ್ದರೆಂಬುದು ದಶಾವತಾರದ ಕಥೆ. ನನ್ನೂರು ದೊಡ್ಡಜಾಲದಲ್ಲಿ, ಚಿಕ್ಕಂದಿನಲ್ಲಿ ನೋಡಿದ್ದು...  ಮುನೀರಣ್ಣ ಒಬ್ಬ ಕೆಳ ಜಾತಿಯವರು, ಜೊತೆಗೆ ಕುಷ್ಟರೋಗಿ. ಕೈಬೆರಳುಗಳೆಲ್ಲ ಮುರುಟಿ ಹೋಗಿದ್ದವು. ಸ...

ಎರಡೆರಡು ಸಂಭ್ರಮ

Image
ಭಗವದ್ಗೀತೆಯ ಗೀತೋತ್ಸವದ ಸಂಭ್ರಮ ಮುಗಿಯುತ್ತಿಂದಂತೆಯೇ ಮತ್ತೊಂದು ಸಂಭ್ರಮಕ್ಕೆ ಅಣಿಯಾದೆ. ಅದು ರುದ್ರಪಟ್ಟಣದಲ್ಲಿ ನಡೆದ ಧಾತ್ರಿ ಹವನ.  ರುದ್ರಪಟ್ಟಣದ ನಂಟು ಮತ್ತಷ್ಟು ಗಟ್ಟಿಯಾದ ಸಮಯ Dhatri homa video ಕಾವೇರಿ ನದಿ ತೀರದ ಮರದ ತೋಪಿನ ಮಧ್ಯದಲ್ಲಿ ಸುಂದರವಾಗಿ ಅಣಿಗೊಳಿಸಿದ್ದ ಯಜ್ಞ ಕುಂಡದಲ್ಲಿ ಸುಧೀರ್ಘವಾಗಿ ನಡೆದ ಹೋಮ. ರುದ್ರಪಟ್ಟಣದ ಶ್ರೀರಾಮ ಸೇವಾ ಸಮಿತಿಯ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದ ರೂವಾರಿ, ಸಂಗೀತಜ್ಞ RK ಪದ್ಮನಾಭ ಅವರ ಮಾತಿನಂತೆ, ಈ ಕಾರ್ಯಕ್ರಮಕ್ಕೆ ಸ್ಪೂರ್ತಿಯೇ1961 ರಲ್ಲಿ ನಡೆದ ಅತಿರುದ್ರ ಮಹಾಯಾಗ.  20.12.1961 ರಂದು ಪ್ರಾರಂಭವಾಗಿ 31.12.1961ರ ವರೆಗೆ ನಡೆದ ಈ ವಿಶೇಷ ಯಾಗವು ಶೃಂಗೇರಿ ಪೀಠದ ಶ್ರೀಮದಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳ ಸನ್ನಿಧಿಯಲ್ಲಿ, ಅವರ ಮಾರ್ಗದರ್ಶನದಲ್ಲಿ ನೆರವೇರಿದ್ದು. ಇದರಲ್ಲಿ ಮೈಸೂರು ರಾಜ ಮನೆತನದ ಜಯ ಚಾಮರಾಜೇಂದ್ರ ಒಡೆಯರ್ ರವರು, ಅಂದಿನ ಮುಖ್ಯಮಂತ್ರಿ  ಬಿ ಡಿ ಜತ್ತಿಯವರು ಹಾಗೂ ಇತರ ಗಣ್ಯಾತಿ ಗಣ್ಯರು ಭಾಗವಹಿಸಿದ್ದರೆಂಬುದು ಚರಿತ್ರೆಯ ಭಾಗ.  ನಂತರದ ದಿನಗಳಲ್ಲೂ, ಧಾತ್ರಿ ಹವನ ನಡೆಯುತ್ತಿದ್ದು, ಕಾರಣಾಂತರಗಳಿಂದ ಮುಂದುವರೆದಿರಲಿಲ್ಲ. ಈ ಕಾರ್ಯವನ್ನು  ರುದ್ರಪಟ್ಟಣದ ವಾಸಿಗಳ ಹಾಗೂ ರುದ್ರಪಟ್ಟಣದ ಬೇರುಗಳನ್ನು ಹೊಂದಿರುವ, ಎಲ್ಲ ಕಡೆ ಪಸರಿಸಿರುವ ಜನಗಳ ಸರ್ವತೋಮುಖ ಬೆಳವಣಿಗೆ ಹಾಗೂ ಶುಭಕ್ಕಾಗಿ ಮುಂದುವರಿಸಿ ಕೊಂಡು ಹೋಗಬೇಕೆಂದು ನಿಶ್ಚಯಿಸ...

ಭಗವದ್ಗೀತೆ - ಗೀತೋತ್ಸವ

Image
ಭಗವದ್ಗೀತೆಯ ಪ್ರಭಾವ ವಿಶ್ವದೆಲ್ಲೆಡೆ ಪಸರಿಸುತ್ತಿದೆ. ಗೀತಾ ಅಭಿಯಾನಗಳು ನಿರಂತರವಾಗಿ ಎಲ್ಲೆಲ್ಲೂ ನಡೆಯುತ್ತಿವೆ. ಭಗವದ್ಗೀತಾ ಅಭಿಯಾನ- 2025 ಇನ್ನೇನು ಸಂಪನ್ನಗೊಳ್ಳಲಿದೆ. ಉಡುಪಿಯಲ್ಲಿ ನಡೆದ ಒಂದು ಲಕ್ಷ ಜನರ ಭಗವದ್ಗೀತಾ  ಸಾಮೂಹಿಕ ಕಂಠಪಾಠ, ವಿಶಿಷ್ಟವಾಗಿತ್ತು. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವತಃ ಭಾಗವಹಿಸಿದ್ದು ಕಾರ್ಯಕ್ರಮಕ್ಕೆ  ಮೆರುಗು ನೀಡಿತ್ತು . ಈ ವರ್ಷದ ಭಗವದ್ಗೀತಾ ಅಭಿಯಾನದಲ್ಲಿ.. ವಿಶೇಷವಾಗಿ ಶಾಲಾ ಮಕ್ಕಳಿಗೆ ಭಗವದ್ಗೀತೆಯನ್ನು ಪರಿಚಯಿಸಿ, ಅದರ ಬಗ್ಗೆ ಆಸ್ತೆ ಮೂಡಿಸಲು  ಒತ್ತುಕೊಡಲಾಗಿತ್ತು. ಇದರ ಅಂಗವಾಗಿ, ನಾನು ಒಡನಾಟ ಇಟ್ಟುಕೊಂಡಿರುವ  "ಸ್ನೇಹ ಸೇವಾ ಟ್ರಸ್ಟ್" ಈ ವರ್ಷ ಪ್ರೌಢಶಾಲೆಯ ಮಕ್ಕಳಿಗೆ ಭಗವದ್ಗೀತೆ ಸ್ಪರ್ಧೆ “ ಗೀತೋತ್ಸವ” ಹೆಸರಿನಲ್ಲಿ ನಡೆಸಿ 19.12.2025 ರಂದು ಸಮಾರೋಪ ಕಾರ್ಯಕ್ರಮವನ್ನು  ಆಯೋಜಿಸಲಾಗಿತ್ತು. ವಾಸವಿ ಕನ್ವೆನ್ಷನ್ ಹಾಲಿನಲ್ಲಿ , ಮಧ್ಯಾಹ್ನ ಸುಮಾರು 3 ಘಂಟೆಗೆ ಸೇರಿದ ಕಾರ್ಯಕರ್ತರು, ಸಮರೋಪಾದಿಯಲ್ಲಿ ಮಾಡಿದ, ಪ್ರಾಂಗಣದ ಅಲಂಕಾರ, ಮುಖ್ಯ ವೇದಿಕೆ, ಬಹುಮಾನ ವಿತರಣೆಗಾಗಿ ಮತ್ತೆ ಮೂರು ವೇದಿಕೆಗಳು, ಅತಿಥಿಗಳಿಗೆ ಗೌರವ ಸಮರ್ಪಣೆಗೆ ಬೇಕಾದ ಸಲಕರಣೆಗಳು ಹಾಗೂ ಬಹುಮಾನಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳುವ ಕೆಲಸಗಳು,  ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಮಾಡಿದ ಸಂಭ್ರಮವನ್ನು  ನೋಡುತ್ತಾ ನಾನೂ ಸಂಭ್ರಮಿಸಿದ್ದ...

ದಾಂಪತ್ಯ - ವೈಪರೀತ್ಯ

Image
  ದಾಂಪತ್ಯ - ಸಾಂಗತ್ಯ  ಲೇಖನವನ್ನು ಓದಿದ ನಂತರ ಬಂದ ಅಭಿಪ್ರಾಯ...." ಯಾಕೋ ಪೂರ್ಣ ಎನಿಸಲಿಲ್ಲ.." ಎಂದು. " ಪೂರ್ಣಮದಃ.. ಪೂರ್ಣಮಿದಂ.. ." ಶ್ಲೋಕದಂತೆ ಪೂರ್ಣ ಎಂಬುದು ಅನಂತತೆ. ಪೂರ್ಣಕ್ಕೆ ಪೂರ್ಣ ಸೇರಿಸಿದರೆ ಮತ್ತದು ಪೂರ್ಣವೇ,  ಪೂರ್ಣದಿಂದ ಪೂರ್ಣ ತೆಗೆದರೆ ಅದೂ ಪೂರ್ಣವೇ... ಅದೇ ಇಂಗ್ಲಿಷಿನ infinity. ದಾಂಪತ್ಯದ ಬಗೆಗಿನ ವಿಷಯಗಳು.. ಹಾಗೇ ಅಕ್ಷಯ ಪಾತ್ರೆ ಇದ್ದಂತೆ. ಮೊಗೆದಷ್ಟೂ ಕಮ್ಮಿಯಾಗದ.. ಮತ್ತೆ ತುಂಬಿಕೊಳ್ಳುವ ತರಹ. ಹಾಗಾಗಿ ನನ್ನ ಓದುಗ ಮಿತ್ರರ ಅಭಿಪ್ರಾಯವನ್ನು ಸಂಪೂರ್ಣ ಗೌರವಿಸಿ...  ಪೂರ್ಣಮಾಡಲು ಯೋಚಿಸಿದೆ. ನನ್ನ ವೈಯುಕ್ತಿಕ ಅನುಭವ,  ಆಪ್ತಸಮಾಲೋಚನೆಯ ಸಮಯ, ಹಾಗೂ ಒಡನಾಡಿದ ದಂಪತಿಗಳ ಅಭಿಪ್ರಾಯಗಳನ್ನು, ಮತ್ತೊಮ್ಮೆ ಮೆಲುಕು ಹಾಕಿದೆ.   ಮತ್ತೆ  ಲೇಖನದ ಶೀರ್ಷಿಕೆಯನ್ನು ಓದಿದಾಗ... ಸಾಂಗತ್ಯಕ್ಕೆ ಸೀಮಿತವಾದ ಬರಹವಾದ ಕಾರಣ ಕೊರತೆ ಇರಬಹುದು ಎಂದು ಗಮನಿಸಿ.. ಹೊಸ ಶೀರ್ಷಿಕೆ ಬರೆದೆ.. ದಾಂಪತ್ಯ - ವೈಪರೀತ್ಯ.. ಅದೇ ಈ ಲೇಖನ. ಗಂಡ ಹೆಂಡತಿ ಬದುಕಿನ ಬಂಡಿಗೆ ಎರಡು ಚಕ್ರಗಳಿದ್ದಂತೆ. ಯಾವ ಚಕ್ರ ಹಾಳಾದರೂ ಬಂಡಿಯ ಓಟ ಕುಂಠಿತವಾಗುತ್ತದೆ. ಚಕ್ರ ಹಾಳಾಗಲು ನಾನಾ ಕಾರಣಗಳು... ಅಹಮಿಕೆ,  ಅನುಮಾನ, ಅಸಮಾಧಾನ, ಅತೃಪ್ತಿ, ಅಸೂಯೆ, ಅಗಲಿಕೆ, ತಾರತಮ್ಯ, ಸುಳ್ಳು, ಸ್ವತ್ವ / ಸ್ವಾಮಿತ್ವ  (posessiveness)..... ಹೀಗೆ ನೂರಾರು. ಹಣಕಾಸಿನ ವಿಚಾರದಲ್ಲಂತೂ ಗಂ...

ದಾಂಪತ್ಯ - ಸಾಂಗತ್ಯ

Image
  ಮನೆಯ ಹತ್ತಿರದ ಉದ್ಯಾನವನಕ್ಕೆ ಬೆಳಗಿನ ವಾಯು ವಿಹಾರಕ್ಕೆ ಹೋಗಲು ಪ್ರಾರಂಭ ಮಾಡಿ ಸುಮಾರು ಒಂದುವರೆ ವರ್ಷ ಆಗಿರಬಹುದು. ಎಲ್ಲ ಹೊಸಮುಖಗಳು, ಮಾತನಾಡಲು ಯಾರು ಜೊತೆ ಇಲ್ಲ.. ಹಾಗಾಗಿ ನನ್ನ ಗಮನ ಸುತ್ತಮುತ್ತ ನಡೆದಾಡುತ್ತಿರುವ ಜನಗಳ ಕಡೆಗೆ. ನಿಧಾನವಾಗಿ ಜನಗಳನ್ನು ಪರಿಚಯ ಮಾಡಿಕೊಳ್ಳುತ್ತಾ ಬಂದೆ.  ಹೀಗಿರುವಾಗ ಕಂಡದ್ದೆ ಒಂದು ಜೋಡಿ..( ಕ್ರೌಂಚ ಪಕ್ಷಿಗಳು ಎನ್ನಲೇ?) ಸಾಮಾನ್ಯವಾಗಿ ಇವರಿಬ್ಬರೂ ಮಾತನಾಡಿಕೊಂಡು ಸುತ್ತು ಹಾಕುತ್ತಿದ್ದದ್ದು... ಬೇರೆಯವರ ಜೊತೆ ಬೆರೆಯುವುದಿಲ್ಲವಾ? ಎಂಬ ಅನುಮಾನ ಕಾಡಿದ್ದು ಉಂಟು. ಆದರೆ ಅದು ಸತ್ಯವಲ್ಲ... ಯಾರಾದರೂ ಸಿಕ್ಕಾಗ ಅವರ ಜೊತೆಯೂ ನಾಲ್ಕು ಹೆಜ್ಜೆ ಹಾಕಿ.. ಮತ್ತೆ ಇಬ್ಬರು ಒಂದಾಗಿ ನಡೆದಾಡುವುದನ್ನು ಗಮನಿಸಿದೆ. ಕಾಲಕ್ರಮೇಣ ಅವರ ಪರಿಚಯವೂ ಆಯಿತು. ಅವರೇ ಲಕ್ಷ್ಮೀನಾರಾಯಣ ಮತ್ತು ಜಯಶ್ರೀ  ದಂಪತಿ.  ಮಾತಿನ ಮಧ್ಯೆ ಒಂದು ದಿನ ಲಕ್ಷ್ಮೀನಾರಾಯಣ ಅವರು  "ನಮ್ಮತ್ತೆಗೆ ಮಾತು ಕೊಟ್ಟಿದ್ದೇನೆ... ನಿಮ್ಮ ಮಗಳ ಜೊತೆ ಯಾವಾಗಲೂ ಇರುತ್ತೇನೆ" ಎಂದು ಹೇಳಿದರು.. ಸ್ವಲ್ಪ ತಮಾಷೆ ಮಾಡಿ ಸುಮ್ಮನಾದೆ. ಅವರ ಆ ಮಾತು ನನಗೆ ಹಿಡಿಸಿತು.   ಸಾಕಷ್ಟು ನನ್ನ ಪರಿಚಯದ ದಂಪತಿಗಳೊಡನೆ ಸಾಮಾನ್ಯವಾಗಿ ಹಾಗೂ ನನ್ನ ಆಪ್ತ ಸಮಾಲೋಚನೆಯ ಭಾಗವಾಗಿ ಮಾತನಾಡಿದ್ದೇನೆ. ದಾಂಪತ್ಯದ ವಿವಿಧ ಮುಖಗಳ ಪ್ರಸ್ತಾಪ ಮಾಡಿ  ಚರ್ಚಿಸಿದ್ದೇನೆ. ಹಾಗಾಗಿ ಇವರ ಬಳಿಯೂ ಮಾತನಾಡಲು ಬಯಸಿ ಅವರಲ್ಲಿ...