Posts

ವಸಂತವನ್ನೇ ಕಾಣದ ವಸಂತಲಕ್ಷ್ಮಿ

Image
ನನ್ನ ಕಛೇರಿಯಲ್ಲಿ ಯಾವುದೋ Technical discussion  ನ್ನಲ್ಲಿದ್ದೆ. ಫೋನ್ ರಿಂಗಣಿಸಿತು.. ಉತ್ತರಿಸದೆ ನಿರಾಕರಿಸಿದೆ.  ಮತ್ತೆರಡು ಸಲ  ಅದೇ ಫೋನ್  ಕರೆ... ಅಪರಿಚಿತ ನಂಬರ್ ನಿಂದ. ಪ್ರಾಯಶಃ ಯಾವುದೋ ಗಹನವಾದ ವಿಷಯವೇ ಇರಬಹುದೆಂದು ಕರೆಯನ್ನು ಸ್ವೀಕರಿಸಿದೆ. ' ಸರ್ ಕ್ಷಮಿಸಿ, ಮತ್ತೆ ಮತ್ತೆ ಫೋನ್ ಮಾಡಿದ್ದಕ್ಕೆ. ನಾನು ವಸಂತ ಲಕ್ಷ್ಮಿಯ ತಂಗಿ, ಅಕ್ಕನ ಆರೋಗ್ಯ ತುಂಬಾ ಹದಗೆಟ್ಟಿದೆ, ಪದೇ ಪದೇ ನಿಮ್ಮ ಹೆಸರು ಹೇಳ್ತಾಳೆ, ನೀವು ಒಂದು ನಿಮಿಷ ಬಂದು ಅಕ್ಕನನ್ನು ಮಾತಾಡಿಸಲು ಸಾಧ್ಯವಾ ಎಂದು ಅಪ್ಪ ಕೇಳಿದ್ದಾರೆ, ಬರ್ತೀರ ಅಲ್ವಾ?' ಮನೆಯ ವಿಳಾಸ ಕೇಳಿ ತಿಳಿದುಕೊಂಡೆ, ನಡೆಯುತ್ತಿದ್ದ ಮಾತುಕತೆಯನ್ನು ಬೇಗ ಮುಗಿಸಿ, ಹೊರಡಲನುವಾದೆ. ಮನೆ ಸಮೀಪಿಸಿದಾಗ, ಅಳು ಕೇಳಿ ಬಂತು, ಅನುಮಾನವಾಯಿತು, ನನ್ನ ಕಂಡೊಡನೆ ಅವರ ಅಪ್ಪ ಹೇಳಿದ್ದು "ನೋಡಿ ಸರ್ ಹೆಂಗ್ ಮಲಗವಳೆ, ನನ್ ಮೇಲೆ ಕೋಪ ಬಂದಾಗ ರಂಗನಾಥ್ ರಾವ್ ಸರ್ ಗೆ ಹೇಳ್ತೀನಿ ಅಂತ ಹೆದರಿಸುತ್ತಿದ್ದೋಳು ಈಗ ತೆಪ್ಪಗೆ ಮಲಗವಳೆ.. ನಮ್ಮನ್ನ ಬಿಟ್ಟು ಹೋಗ್ಬಿಟ್ಲು' . ನನಗೆ ಆಘಾತವಾಯಿತು, ಇಷ್ಟು ಬೇಗ ಹೀಗಾಗುತ್ತದೆ ಎಂದು ನಾನು ಎಣಿಸಿರಲಿಲ್ಲ. ಸ್ವಲ್ಪ ಹೊತ್ತು ಇದ್ದು ಸಮಾಧಾನದ ಮಾತಾಡಿ, ಅಲ್ಲಿಂದ ಹೊರಟೆ... ಮನಸ್ಸು ಹಿಂದಕ್ಕೆ ಓಡಿತು. ಆಗಿನ್ನು ಆಪ್ತ ಸಮಾಲೋಚಕನಾದ ಹೊಸತು, ಬುಧವಾರ ಸಂಜೆ ಹೋದೊಡನೆ, ಪ್ರಸನ್ನ ಆಪ್ತ ಸಲಹಾ ಕೇಂದ್ರದ ಬಾಗಿಲು ತೆಗೆದು,  ಬಂದಿರುವ ಎಲ್ಲರ ಹೆ...

Air India - ಕೃತಕ ಬುದ್ದಿಮತ್ತೆ

Image
ಜೂನ್ ಹನ್ನೆರಡರಂದು ಅಹಮದಾಬಾದ್ ನಲ್ಲಿ ನಡೆದ     A ir  I ndia ದ  ನಂಬರ್   A   I - 117  ವಿಮಾನದ ಅಪಘಾತದ ಸುದ್ದಿ ನಮ್ಮನ್ನೆಲ್ಲ ಬೆಚ್ಚಿಬೀಳಿಸಿತು. 250 ಕ್ಕೂ ಹೆಚ್ಚು ಜನರು ಸತ್ತಿದ್ದು ನೋವಾಯಿತು. ಅದರಲ್ಲೂ ಹಾಸ್ಟೆಲ್ ನಲ್ಲಿ ಊಟ ಮಾಡುತ್ತಿದ್ದ ಅಮಾಯಕ ವಿದ್ಯಾರ್ಥಿಗಳು ಸತ್ತದ್ದು ವಿಧಿಯಾಟವೇ ಸರಿ.  .... ವಿಶ್ವ ಕುಮಾರ್ ರಮೇಶ್ ಎಂಬ ಒಬ್ಬರೇ ವ್ಯಕ್ತಿ ಬದುಕುಳಿದದ್ದು ಸಹ ವಿಧಿಯಾಟವೇ. ಈ ಸುದ್ದಿಯನ್ನು ಓದುವಾಗ ನನಗೆ ಎದ್ದು ಕಂಡದ್ದು  A   I.   ಪ್ರಸಕ್ತ ಕಾಲಮಾನದಲ್ಲಿ    A   I - ಕೃತಕ ಬುದ್ದಿಮತ್ತೆ , ಮುಂಚೂಣಿಯಲ್ಲಿರುವ ವಿದ್ಯಮಾನ. ಎಲ್ಲ ಸ್ತರಗಳಲ್ಲೂ ಅದರ ಉಪಯೋಗ ಅನಿವಾರ್ಯವೋ ಎಂಬಂತೆ ಬೆಸೆದುಕೊಂಡಿದೆ.  ಜೊತೆಗೆ ಅದರಿಂದ ಆಗಬಹುದಾದ  ಅನಾಹುತಗಳ ಬಗ್ಗೆ ಚರ್ಚೆ, ಚಿಂತನೆಗಳು...  ಮನುಷ್ಯನ ಬುದ್ಧಿಮತ್ತೆಯ ಕಣ್ಗಾವಲು ತಪ್ಪಿದರೆ, ಮನುಷ್ಯನನ್ನೇ ನುಂಗುವ ಪರಿಸ್ಥಿತಿ ಬರಬಹುದು ಎನ್ನುವ ವಿಚಾರ ಚಾಲ್ತಿಯಲ್ಲಿವೆ.   ತನ್ನ ಕೈಯನ್ನು ಬೇರೆಯವರ ತಲೆಯ ಮೇಲೆ ಇಟ್ಟು ಸುಡುವ ಶಕ್ತಿಯ ವರವನ್ನು  ಶಿವನಿಂದ  ಪಡೆದ ಭಸ್ಮಾಸುರ, ಶಿವನ ಮೇಲೆ ಪ್ರಯೋಗ ಮಾಡಲು ಹೊರಟಂತೆ, ಕೊನೆಗೆ ವಿಷ್ಣು ಮೋಹಿನಿ ರೂಪದಲ್ಲಿ ಬಂದು ಭಸ್ಮಾಸುರನನ್ನು ಕೊಂದಂತೆ... ಕೃತಕ ಬುದ್ಧಿಮತ್ತೆ...

ಮಂತ್ರಾಲಯಕೆ ಹೋಗೋಣ...

Image
  ಮಳೆ ಹನಿಗಳ ಸಿಂಚನ ಮೈ ಮೇಲೆ, ಮಂತ್ರಾಲಯಕೆ ಹೋಗೋಣ.. ಗುರುರಾಯರ ದರುಶನ ಮಾಡೋಣ.. ಎಂಬ ಹಾಡು ಕಿವಿಯ ಮೇಲೆ, ಝಗಮಗಿಸುವ ದೀಪಾಲಂಕಾರ ಕಣ್ಣಿಗೆ, ಮಳೆಯಲ್ಲೇ ಸಡಗರದಿಂದ ಓಡಾಡುತ್ತಿದ್ದ ಜನಸಾಗರ... ಇದು  ಮೊನ್ನೆ ಭಾನುವಾರ ಮಂತ್ರಾಲಯದ ನೆಲದ ಮೇಲೆ, ಮಗಳು, ಮೊಮ್ಮಗಳೊಡನೆ ಕಾಲಿಟ್ಟಾಗ ನನಗಾದ ಅನುಭವ. ಪ್ರಯಾಣ ಮಾಡಿ ದಣಿದಿದ್ದ ಕಾರಣ, ಕೈಕಾಲು ಮುಖ ತೊಳೆದು ಬರಲೂ ಸಹ ಸಮಯ ಇಲ್ಲದಂತೆ ದರ್ಶನದ ಸಮಯ ಕೊನೆಯ ಹಂತದಲ್ಲಿತ್ತು. ಹೊರಗಿಂದಲೇ ಕೈಮುಗಿದು, ನಮ್ಮ ಕೋಣೆಗೆ ಬಂದು ವಿರಮಿಸಿದ್ದಾಯ್ತು.  ಕಾಲ ಸರಿದಂತೆ ಜೀವನಶೈಲಿಯಲ್ಲಿ ಬದಲಾವಣೆಗಳು ಬಂದು... ಸೆಖೆಯನ್ನು ನೀಗಲು  ಫ್ಯಾನ್ ಹಾಗೂ AC ಯ ಅನುಕೂಲತೆಗಳು ನಮ್ಮ ಕೋಣೆಯಲ್ಲಿದ್ದವು. ಮಗಳು ಮೊಮ್ಮಗಳ ಜೊತೆಯಲ್ಲಿ ಒಂದಿಷ್ಟು ಮಾತು ಆಟ ಆಡಿ ಮಲಗಲು ಅಣಿಯಾದರೂ... ತಕ್ಷಣ ನಿದ್ರೆ ಬರಲಿಲ್ಲ.... ನೆನಪಿಗೆ ಬಂದದ್ದೇ ಕಷ್ಟದಿಂದ ಕಳೆದ ಆ ರಾತ್ರಿ..... ಮದುವೆಯಾದ ಹೊಸತು... ಮಂತ್ರಾಲಯಕ್ಕೆ ಹೋಗಬೇಕೆಂದು ನಿರ್ಧರಿಸಿ ನಾವಿಬ್ಬರೂ ಹೊರಟೇ ಬಿಟ್ಟೆವು. ಮಂತ್ರಾಲಯವನ್ನು ಮುಟ್ಟಿದಾಗ ಮಧ್ಯಾಹ್ನ... ಸುಡುವ ಬಿಸಿಲು, ಹೇಗೋ ನಮ್ಮ ಹಣಕಾಸಿನ ನಿಲುಕಿನಲ್ಲಿದ್ದ ಒಂದು ಕೋಣೆಯನ್ನು ಆಯ್ಕೆ ಮಾಡಿ ದೇವರ ದರ್ಶನ ಮಾಡಿ... ಆಗೆಲ್ಲಾ ಕೋಣೆಯ ಬಳಿ ಬಂದು ಮಾರುತ್ತಿದ್ದ ಇಡ್ಲಿಯನ್ನು ತಿಂದು ದಿನದ ಕೊನೆಗೆ ಬಂದೆವು. ಫ್ಯಾನಿನ ಗಾಳಿ ಪ್ರಖರ ಸೆಖೆಯೊಡನೆ ಗುದ್ದಾಡಿ  ಸೋಲುತ್ತಿತ್ತು, ಗೆಲ್ಲುವ ಪ...

ಹದಿ ವಯಸು - ಕುತೂಹಲ

Image
  ಅವತ್ತು ಬುಧವಾರ ಸಂಜೆ ಯಾವಾಗಿನಂತೆ ಆಪ್ತ ಸಲಹಾ ಕೇಂದ್ರಕ್ಕೆ ಬಂದೆ...  ಹಿರಿಯ ಶ್ರೀನಿವಾಸ್ ಅವರು .. ರಂಗನಾಥ್ ನಿಮಗಾಗಿ ಒಂದು ಕೇಸ್ ಕಾಯ್ತಾ ಇದೆ.. ಬೇರೆ ಊರಿಂದ ಬಂದಿದ್ದಾರೆ... ಕಳಿಸ್ತೀನಿ  ಅಂದ್ರು. ಗಂಡ ಹೆಂಡತಿ ಒಂದು ಹೆಣ್ಣು ಮಗುವನ್ನು ಕರ್ಕೊಂಡು ರೂಮಿನ ಒಳಗೆ ಬಂದರು..  'ನನ್ನ ಸ್ನೇಹಿತ ನಿಮ್ಮನ್ನ ಭೇಟಿ ಮಾಡಕ್ಕೆ ಹೇಳಿದ...' ' ಕೂತ್ಕೊಳ್ಳಿ... ನಿಮ್ಮ ಹೆಸರು?' ' ನಾನು ರಮೇಶ್... ನನ್ ಹೆಂಡ್ತಿ ಸುಮತಿ'...  ಏನ್ ಮಗು  ನಿನ್ನ ಹೆಸರು  ಅಂತ ಕೇಳಿದೆ... "ಸುಮಾ” ಅಂತ ಅಮ್ಮ ಹೇಳಿದ್ದು.  ' ಬಂದ ವಿಷಯ?'  'ಏನ್ ಹೇಳ್ಬೇಕು ಎಲ್ಲಿಂದ ಶುರು ಮಾಡಬೇಕು ಗೊತ್ತಾಗ್ತಾ ಇಲ್ಲ' ಅಂದಾಗ... ನಿಮಗೆ ಏನು ಹೇಳಬೇಕು ಅನ್ಸುತ್ತೆ ಮನಸ್ಸು ಬಿಚ್ಚಿ ಹೇಳಿ, ಎಲ್ಲಿಂದ ಬೇಕಾದರೂ ಶುರು ಮಾಡಿ  ಎಂದೆ.. ಗಂಡ ಹೆಂಡತಿಯ ಮಧ್ಯೆ ಒಂದೆರಡು ಪಿಸುಮಾತು.. ನಂತರ ಗಂಡ ಹೇಳಿದ್ದು... ಅವಳೇ ಮಾತಾಡ್ತಾಳೆ ನಾನು ಮಗುನ ಕರ್ಕೊಂಡು ಆಚೆ ಕಡೆ ಇರ್ತೀನಿ.. ಅಂತ ಹೊರಗೆ ಹೋದರು. ಮಾತು ಮುಂದುವರಿತು 'ನಂಗೆ ತುಂಬಾ ಭಯ ಆಗುತ್ತೆ ಸರ್.. ನನ್ ಮಗಳದೇ ನನಗೆ ಚಿಂತೆಯಾಗಿದೆ' ' ಮಗು ಆರೋಗ್ಯದಲ್ಲಿ ಏನಾದ್ರೂ ತೊಂದರೆ ಇದೆಯೇನಮ್ಮ?'  'ಹಾಗೇನಿಲ್ಲ' ' ಮಗು ಯಾವ ಕ್ಲಾಸು' ' ಒಂದನೇ ಕ್ಲಾಸು' ' ಮಗು ಬೆಳವಣಿಗೆಯಲ್ಲಿ ಏನಾದ್ರೂ ತೊಂದರೆ ಇದೆಯಾ' ' ...

ಸುಳ್ಳು - ಸತ್ಯ - ಆಣೆ

Image
ಸುಳ್ಳು ಯಾಕೆ ಹೇಳಲೀ ನಾನು.... ಮೊನ್ನೆ ವಾಕಿಂಗ್ ನಲ್ಲಿ ಯಾರೋ ಒಬ್ಬರು ಹೇಳ್ತಿದ್ರು  “ನನ್ನ ಜೀವಮಾನದಲ್ಲಿ ಒಂದು ಸುಳ್ಳು ಹೇಳಿಲ್ಲ" ಅಂತ.... ಅವರ ಮುಖ ನೋಡಿ ಸಣ್ಣ ನಗೆ ಬೀರಿದೆ... ಯಾಕ್ರೀ ನಗ್ತೀರಾ ಅಂತ ತಮಾಷೆಯಾಗಿ ಧಮ್ಕಿ ಹಾಕಿದರು. ಮನಸ್ಸಿಗೆ ಬಂತು ಅವರು ಹೇಳಿದ್ದು ಸರಿ ಅಂತ... ಯಾಕಂದ್ರೆ ಒಂದೋ ಅವರು ಹೇಳಿದ್ದು ಒಂದು ಸುಳ್ಳು ಹೇಳಿಲ್ಲ ಅಂತ... ನೂರಾರು ಹೇಳಿರಬಹುದಲ್ಲ... ಅಥವಾ ಅವರು ಹೇಳಿದ್ದು ಹಸಿ ಸುಳ್ಳು ಇರಬಹುದಲ್ಲ.  ಚೆನ್ನಾಗಿ ಪರಿಚಯವಿಲ್ಲದಿದ್ದ ಕಾರಣ ಇದನ್ನು ಅವರಿಗೆ ಹೇಳುವ ಧೈರ್ಯ ಬರಲಿಲ್ಲ.. ಸುಮ್ನೆ ಮುಂದೆ ಹೆಜ್ಜೆ ಹಾಕ್ದೆ.   ಗೊದ್ದ ಗೋಡೆ ಹಾಕಿದ್ ಕಂಡೆ                             ಇಲಿ ಬೆಕ್ಕಿನ್ ತಿನ್ನೋದ್ ಕಂಡೆ                     ಕಂಡೇನಕ್ಕ ಮುಂಗ್ ಸೀಯ                         ಕಡಾಯಿ ಗಾತ್ರವ... ಇದು ನಾನು ಚಿಕ್ಕಂದಿನಲ್ಲಿ ಕಲಿತ ದಾಸರ ಪದ. ಆಗ ಅದು ಅರ್ಥವೇ ಇಲ್ಲದ ತಮಾಷೆಯಾಗಿ ಮಾತ್ರ ಕಾಣುತ್ತಿತ್ತು.  ಸುಳ್ಳು ನಮ್ಮಲ್ಲಿಲ್ಲವಯ್ಯ,  ಸುಳ್ಳು ನಮ್ಮಲ್ಲಿಲ್ಲ.    ಸುಳ್ಳೇ ನಮ್ಮನೆ ದೇವರು . .......

ಸೋದರ ಮಾವ - ಊರ ಹಬ್ಬ

Image
ನಮ್ಮ ಸಮಾಜದ ಕೂಡು ಕುಟುಂಬದ ವ್ಯವಸ್ಥೆಯಲ್ಲಿ ಸೋದರ ಮಾವನಿಗೆ ವಿಶಿಷ್ಟ ಸ್ಥಾನವಿತ್ತು. ಅಮ್ಮನ ನಂತರದ ಪ್ರೀತಿ ಪಾತ್ರ ವ್ಯಕ್ತಿ ಸೋದರ ಮಾವ ಎಂಬುದು ಪ್ರತೀತಿ.  ಈಗಲೂ ಮದುವೆಯ ಸಮಯದಲ್ಲಿ.... ವಧುವನ್ನು ಕರೆ ತರಲು / ಹೊತ್ತು ತರಲು ಸೋದರ ಮಾವ / ಮಾವಂದಿರೇ  ಬೇಕು... ಇದು ಶಾಸ್ತ್ರದ ರೂಪ ತಳೆದಿದೆ. ಬಾಣಂತನಕ್ಕಾಗಿ ಹೆಣ್ಣು ಮಕ್ಕಳು,  ತವರು ಮನೆಗೆ ಹೋಗುವುದು ಸಾಮಾನ್ಯ, ಜೊತೆಗೆ ಈಗಾಗಲೇ ಇರುವ ಚಿಕ್ಕ ಮಕ್ಕಳು. ಇಷ್ಟೆಲ್ಲವನ್ನು ಸಂಭಾಳಿಸಲು ತವರು ಮನೆಯಲ್ಲಿನ ಅಣ್ಣ ತಮ್ಮಂದಿರು ಹಾಗೂ ಮದುವೆಯಾಗದ ತಂಗಿಯರು ಸದಾ ಸಿದ್ಧ.  ಮಕ್ಕಳಿಗೆ ಇವರೊಡನೆ ಸಲಿಗೆ ಜಾಸ್ತಿ... ಹಾಗಾಗಿ ಅವರ ಜೊತೆ ಆಟ, ಊಟ, ನಿದ್ದೆ ಎಲ್ಲವೂ. ಆಗಿನ ಕಾಲದಲ್ಲಿ ಚಿಕ್ಕ ವಯಸ್ಸಿಗೇ ಮದುವೆ ಮಾಡುತ್ತಿದ್ದದ್ದು.... ಮದುವೆಯ ಹೆಣ್ಣು... ಎಲ್ಲೋ ಇರುತ್ತಿದ್ದದ್ದು ಸೋದರ ಮಾವಂದಿರ ಜೊತೆ, ಬಹುಶಃ ಆಟವಾಡುತ್ತಾ. ಹಾಗಾಗಿ ಮುಹೂರ್ತದ ಸಮಯಕ್ಕೆ... ಸೋದರ ಮಾವ ಮಗುವನ್ನು ಕರೆ ತರುವುದು / ಎತ್ತಿಕೊಂಡು ಬರುವುದು... ಅನಿವಾರ್ಯವಾಗಿತ್ತು... ಅದೇ ಸಂಪ್ರದಾಯವಾಗಿರಬೇಕು... ಶಾಸ್ತ್ರದ ರೂಪ ತಳೆದಿರಬೇಕು... ಸೋದರ ಮಾವನನ್ನೇ ಮದುವೆಯಾಗುತ್ತಿದ್ದ ಸಂಗತಿಗಳು ನಡೆಯುತ್ತಿದ್ದವು... ಆಗೊಂದು ತೆಲುಗಿನ ಮಾತು " ಮಾಮಾ ಮಾಮಾ... ಮಗುಡಾಯ" ಚಾಲ್ತಿಯಲ್ಲಿತ್ತು. ಸೋದರ ಮಾವಂದಿರು ಅಂದಾಗ ನನಗಿದ್ದದ್ದು ಭಯ ಮಿಶ್ರಿತ ಗೌರವ. ಅಮ್ಮ ಕೊಟ್ಟ ಚಿತ್ರಣದಂತೆ.. ಅವರು 'ಉಳ್ಳವರ...

ಅಬಲೆ - ಅಮ್ಮ - ದುರ್ಗೆ

Image
  ಪಹಲ್ಗಾಮ್ ಘಟನೆಯ, ಸುದ್ದಿ ಚಿತ್ರಗಳು ಹೊರ ಬರುತ್ತಿದ್ದಂತೆ, ಮನಸ್ಸು ವ್ಯಗ್ರಗೊಂಡಿತು. ಹಿಂದುಗಳೆಂದು ಖಚಿತಪಡಿಸಿಕೊಂಡು, ಅಸಹಾಯಕ ಹೆಣ್ಣು ಮಕ್ಕಳ ಮುಂದೆ ಗಂಡ, ಅಪ್ಪ, ಅಣ್ಣ, ತಮ್ಮ ಎಂದು ನೋಡದೆ, ಗುಂಡಿಟ್ಟು ಕೊಂದ ಆ ಕ್ರೂರ ಮನಸ್ಸಿನ ಪಾತಕಿಗಳನ್ನು ಸದೆ ಬಡಿಯಲೇ ಬೇಕು... ಎಂಬುದು  ಆಶಯವಾಗಿತ್ತು. ಅದರಲ್ಲೂ " ಮೋದಿಗೆ ಹೋಗಿ ಹೇಳಿ" ಎಂಬ ಉದ್ಧಟತನದ ಮಾತು ರಕ್ತ ಕುದಿಯುವಂತೆ ಮಾಡಿತ್ತು. ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡರು ಎಂದು ಅನಿಸಿದ್ದು ಸಹಜವಾದರೂ... ಜವಾಬ್ದಾರಿ ಸ್ಥಾನದಲ್ಲಿ ಕುಳಿತವರು, ಎಲ್ಲ ದೃಷ್ಟಿಯಿಂದಲೂ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ, ಆಗಬಹುದಾದ ಪರಿಣಾಮಗಳು ಅದಕ್ಕೆ ಬೇಕಾದ ತಯಾರಿಗಳು ಎಲ್ಲವನ್ನೂ ಮಾಡಿಕೊಂಡು  "ಆಪರೇಷನ್ ಸಿಂಧೂರ" ಹೆಸರಿನ ಕಾರ್ಯಾಚರಣೆ ಮಾಡಿ, ಅದರಿಂದ ಸಾಕಷ್ಟು ಉಗ್ರಗಾಮಿಗಳನ್ನು ಹತಗೊಳಿಸಿದ ವಿಷಯ ಮನಸ್ಸಿಗೆ ಒಂದಷ್ಟು ನೆಮ್ಮದಿಯನ್ನು ಕೊಟ್ಟಿತು. ಅದಕ್ಕೂ ಹೆಚ್ಚು ಸಂತೋಷ ಕೊಟ್ಟಿದ್ದು, ಈ ವಿಚಾರವಾಗಿ ನಡೆದ ಪತ್ರಿಕಾಗೋಷ್ಠಿ. ಅದರಲ್ಲಿ ವಿವರಗಳನ್ನು ಕೊಡಲು, ಮಿಲಿಟರಿ ಉಡುಗೆ ತೊಟ್ಟು, ಟೋಪಿಯೊಂದಿಗೆ ಕಂಗೊಳಿಸುತ್ತಿದ್ದ ಧೀರ ಮಹಿಳೆಯರು... colonel ಸೋಫಿಯಾ ಖುರೇಶಿ ಹಾಗೂ wing commander ವ್ಯೋಮಿಕಾ ಸಿಂಗ್. ಅಸಹಾಯಕ ಮಹಿಳೆಗೆ ಹೇಳಿದ   "ಮೋದಿಗೆ ಹೇಳು" ಎಂಬ ಸಂದೇಶಕ್ಕೆ ಪ್ರತಿಕ್ರಿಯೆಯಾಗಿ ಮಾಡಿದ ಆಪರೇಷನ್ ಸಿಂಧೂರದ ವಿವರಣೆಯನ್ನು ಉಗ್ರಗಾಮಿ ಸಂ...

ಹಿಂದು ಮುಂದಾದರೂ ಒಂದಾಗಬೇಕು

Image
ಇದೀಗ ಬಂದ ಸುದ್ದಿಯಲ್ಲಿ ಕಾಶ್ಮೀರದಲ್ಲಿ... ಹಿಂದುಗಳನ್ನೇ ಗುರುತಿಸಿ ಕೊಲ್ಲುವಾಗ.... ಉಗ್ರರು ಯಾವ ಜಾತಿಯೆಂದು ಯಾರನ್ನೂ ಕೇಳಲಿಲ್ಲ...  ಹಿಂದುಗಳೆಂದು ಮಾತ್ರ ಗುರುತಿಸಿ ಗುಂಡಿಕ್ಕಿದ್ದು .   ಅಲ್ಲಿಗೆ ಜಾತಿ ಜಾತಿ ಎಂದು ನಮ್ಮಲ್ಲೇ ನಾವು ಕಚ್ಚಾಡುತ್ತಿರುವ... ಅದನ್ನೇ ದಾಳವಾಗಿ ಉಪಯೋಗಿಸಿಕೊಂಡು ತಮ್ಮ ಕುರ್ಚಿಯನ್ನು ಭದ್ರ ಮಾಡಿಕೊಳ್ಳುವ ದುರುಳ ರಾಜಕಾರಣಿಗಳ ಹುನ್ನಾರದಿಂದ ಹೊರಬರಲು ಇನ್ನಾದರೂ ನಿರ್ಧಾರ ಮಾಡಬೇಕು. ಈಗಲಾದರೂ ನಾವು ಜಾತಿ ಪಂಗಡಗಳಿಂದ ಹೊರಬಂದು ನಾವೆಲ್ಲಾ ಹಿಂದುಗಳು ಎಂಬ ಭಾವನೆಯಿಂದ ಒಂದುಗೂಡಿದರೆ ಮಾತ್ರ, ನಾವೆಲ್ಲರೂ ಹಾಗೂ ನಮ್ಮ ಮುಂದಿನ ಪೀಳಿಗೆಯವರು ಸುರಕ್ಷತೆಯಿಂದ ಇರಬಹುದು.  ಕೋಟ್ಯಾಂತರ ರೂಪಾಯಿಗಳನ್ನು ಗಳಿಸಿ ಆಸ್ತಿ ಮಾಡಿ ಅದನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋದರೆ, ನಾವಂದುಕೊಂಡಂತೆ ಅವರು ಅದನ್ನು ಅನುಭವಿಸಿಕೊಂಡು ಸುಖವಾಗಿರಲಾರರು. ಅದನ್ನು ದುರುಳ ಉಗ್ರವಾದಿಗಳು ಕಿತ್ತುಕೊಂಡು, ಮತಾಂತರ ಮಾಡಿ, ಒಪ್ಪದಿದ್ದರೆ ಕೊಂದು, ಹೆಣ್ಣು ಮಕ್ಕಳನ್ನು ಅವಮಾನಿಸಿ, ಹಿಂಸಿಸಿ ಅವರನ್ನು ಹೊತ್ತೊಯ್ಯುತ್ತಾರೆ. ಇದನ್ನು ತಪ್ಪಿಸಬೇಕೆಂದರೆ, ನಾವೆಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಹೋರಾಡಿ ಆ ದುರುಳ ಸಂತತಿಯನ್ನು ಎದುರಿಸಿ, ಅವರ ಶಕ್ತಿಯನ್ನು ನಿರ್ನಾಮ ಮಾಡುವುದೊಂದೇ ದಾರಿ.  ಈಗಿನ ದಿನಗಳಲ್ಲಿ ಯಾವುದೇ ಮಾಧ್ಯಮದಲ್ಲಿ ನೋಡಿದರೂ ದೇಶದಲ್ಲಿ ನಡೆಯುತ್ತಿರುವ ಗಲಭೆಗಳ ಬಗ್ಗೆಯೇ ಕಾಣುತ್ತೇವೆ. ಅದರಲ...

ಚರಮಗೀತೆ - ಬಿನ್ನವತ್ತಳೆ

Image
ನಾನು ಬರೆದ ಬ್ಲಾಗ್ ನ ಲೇಖನಗಳಿಗೆ ಭೇಷ್ ಎನ್ನುವ ಪ್ರತಿಕ್ರಿಯೆಗಳು ಬಂದಾಗ ಸಹಜವಾಗಿ ಖುಷಿಯಾಗುತ್ತದೆ. ಕೆಲವರು ಸಲಹೆ/ ಸೂಚನೆಗಳನ್ನು ಕೊಟ್ಟಿದ್ದಾರೆ,  ಅವುಗಳಲ್ಲಿ ಕೆಲವನ್ನು ಅಳವಡಿಸಿಕೊಂಡಿದ್ದೇನೆ. ನನ್ನ ಮಾವನ ಬಗ್ಗೆ ಬರೆದ ಲೇಖನಕ್ಕೆ ಬಂದದ್ದು ವಿಶೇಷ ಪ್ರತಿಕ್ರಿಯೆ, ನನ್ನ ಸ್ನೇಹಿತ ಶಿವನಿಂದ (ಕೆ. ಎನ್. ಶಿವಶಂಕರ). ನನಗೆ ಮಾವನಾಗುವುದಕ್ಕೂ ಮುಂಚೆ... ನಾನು ಹಾಗೂ ಶಿವ, ಅವರ ಮನೆಯ ಮುಂದೆ ತಾಳ ಹಾಕಿಕೊಂಡು ಜೋರಾಗಿ ಹಾಡಿದ " ಸರ್ವ ಮಂಗಳನಾಮ ಸೀತಾರಾಮ" ಹಾಡಿಗೆ ಅವರ ಸಿಡುಕು ಎಂದು ಹೇಳಬಹುದಾದ ಪ್ರತಿಕ್ರಿಯೆ  "ಏನದು ಮನೆ ಮುಂದೆ ಇದೆಲ್ಲ.. ನಿಲ್ಸಿ". ನಾವು ಬೈಸಿಕೊಂಡೆವೇನೋ ಎಂಬಂತೆ ಸಪ್ಪಗಾಗಿದ್ದು ಸತ್ಯ. ಈ ವಿಷಯ ಯಾಕೆ ಬರೀಲಿಲ್ಲ ಅಂತ ಶಿವನ ಪ್ರಶ್ನೆ... ಯಾಕೆ ಬರೀಲಿಲ್ಲ ಅಂತ ನನಗೆ ನಾನೇ ಪ್ರಶ್ನೆ ಮಾಡಿಕೊಂಡಾಗ ಅನ್ನಿಸಿದ್ದು... ಪ್ರಾಯಶಃ ನಾನು ಮಾವ ಕೃಷ್ಣಮೂರ್ತಿಯವರ ಬಗ್ಗೆ ಮಾತ್ರ ಯೋಚಿಸಿದ್ದಿರಬಹುದಾ? ಅಥವಾ ಸತ್ತವರ ಬಗ್ಗೆ ಯಾಕೆ ಈ ಕಹಿ ಘಟನೆಯ ನೆನಪು ಎಂದಿರಬಹುದಾ? ನಾ ಹೇಳಲಾರೆ... ಯಾಕೆಂದರೆ ಇದು ಘಟನೆಯ ನಂತರದ ವಿಶ್ಲೇಷಣೆ.(postmortem). ಖಾಸಗಿ ಮಾತು ಕಥೆಗಳಲ್ಲಿ, ಏನೇ ವಿಷಯ ಮಂಥನಗಳು ನಡೆಯಲಿ, ಸಾರ್ವಜನಿಕ ವಾಗಿ, ಸತ್ತವರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುವುದು ಲೋಕ  ನಿಯಮವೇ ಎಂದು ಹೇಳಬಹುದು. ಹಾಗಾಗಿ ಎಲ್ಲರೂ ಸತ್ತವರ ಒಡನಾಟದ ಕೆಲ ಸುಂದರ ಕ್ಷಣಗಳನ್ನು ನೆನೆದು ಅದನ್ನು ಹಂಚಿಕೊಳ್ಳು...