Posts

ತಪ್ಪು- ಶಿಕ್ಷೆ- ಪಶ್ಚಾತ್ತಾಪ

Image
ಮೊನ್ನೆ ಒಂದು ದಿನ... ಯೂಟ್ಯೂಬ್ ನಲ್ಲಿ ನನಗೆ ತುಂಬಾ ಪ್ರಿಯವಾದ ಮುಖೇಶ್ ಹಾಡಿದ ಗೋಳು ಗೀತೆಗಳ(sad songs) ಹುಡುಕಾಟದಲ್ಲಿದ್ದಾಗ... ಧುತ್ತೆಂದು ಮುಂದೆ ಬಂದಿದ್ದು..ZEE TVಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಒಂದು ಸಂಚಿಕೆ... ಅದು ಚಿತ್ರನಟ ಅನಂತನಾಗ್ ಅವರದ್ದಾದ್ದರಿಂದ... ಕುತೂಹಲ ಮೂಡಿ ಪೂರ್ಣ ಸಂಚಿಕೆಯನ್ನು  ಸುಮಾರು ಒಂದು ಗಂಟೆಗೂ ಮೀರಿ ತುಂಬಾ ಇಷ್ಟದಿಂದ ನೋಡಿದೆ.  ಅದು  #ಅನಂತನಾಗ್ ಅವರ " ಸಿಹಿ ಕಹಿ  ನೆನಪುಗಳು" ಆಗಿತ್ತು ಎನ್ನುವ ಅನಿಸಿಕೆ( ಇದು ಒಂದು ತರಹ ತಿಕ್ಕಲುತನ ಎನ್ನಲೇ?) ನನ್ನದಾಯಿತು. #Ananthanag  ನಾನು ಮೆಚ್ಚಿದ ನಟರಲ್ಲಿ ಒಬ್ಬರು. ನನ್ನ ದೃಷ್ಟಿಯಲ್ಲಿ ಕನ್ನಡ ಚಿತ್ರರಂಗದ #versatile ನಟರು ಎಂದರೆ ಬಾಲಕೃಷ್ಣ ಹಾಗೂ #ಅನಂತ್ ನಾಗ್ ಅವರು. ಈ ನನ್ನ ಅಭಿಪ್ರಾಯವನ್ನು ಒಪ್ಪದೇ ಇರುವ, ವಿರೋಧಿಸುವ ಒಂದು ದೊಡ್ಡ ದಂಡೇ ನನ್ನ ಅತ್ತೆಯ ಮನೆ ಕಡೆ ಇದೆ... ನನ್ನ ಹೆಂಡತಿ ವಿಜಯ ಆ ಗುಂಪಿನ ಮಂಚೂಣಿಯಲ್ಲಿದ್ದಾಳೆ.. ಅವರಿಗೆಲ್ಲ ಅಣ್ಣಾವ್ರು  (ರಾಜಕುಮಾರ್) ಅಚ್ಚು ಮೆಚ್ಚು...ನನಗೂ #ರಾಜಕುಮಾರ್ ಎಂದರೆ ಇಷ್ಟವೇ... ವಿಷಯ ಪಲ್ಲಟವಾಯಿತು... ಇರಲಿ ಅದು ಒಂದು ಕಡೆ. #ಅನಂತ್ ನಾಗ್ ಅವರು ನಿರರ್ಗಳವಾಗಿ ಹಾಡಿದ ಒಂದು ನೀಳ ಗೀತೆ... ಪ್ರಾರ್ಥನೆಯ ರೂಪದಲ್ಲಿ ಚಿಕ್ಕಂದಿನಲ್ಲಿ ಕಲಿತದ್ದು... ವಿಶೇಷವಾಗಿತ್ತು, ಜೊತೆಯಲ್ಲೇ ಹೇಳಿದ ಮಾತು " ಯಾವ ಚಿತ್ರದ ಮಾತುಗಳೂ ನೆನಪಿಲ್ಲ" ... ಚಿಕ್...

ಸರಸ್ವತಿ ಪೂಜೆ

Image
  ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ// ಯಾಕುಂದೇಂದು ತುಷಾರ ಹಾರ ಧವಳಾ ಯಾ ಶುಭ್ರ ವಸ್ತ್ರಾನ್ವಿತ ಯಾ ವೀಣಾ ವರದಂಡ ಮಂಡಿತಕರ ಯಾ ಶ್ವೇತ ಪದ್ಮಾಸನಾ ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿಃ ದೇವೈ ಸದಾ ಪೂಜಿತಾ ಸಾಮಾಂಪಾತು ಸರಸ್ವತಿ ಭಗವತಿ  ನಿಃಶೇಷ ಜಾಡ್ಯಾಪಃ// ಇದು ಪ್ರತಿದಿನ ಸಂಜೆ ಮನೆಯ ದೀಪ ಹಚ್ಚಿದ ಮೇಲೆ ಓದಲು ಕುಳಿತಾಗ ಕೈ ಮುಗಿದು ಮಾಡುತ್ತಿದ್ದ ಮೊದಲ ಪ್ರಾರ್ಥನೆ. ಅದರ ಅರ್ಥವೂ ತಿಳಿಯದಿದ್ದ ಕಾಲ.. ಆದರೆ ಶ್ರದ್ಧೆ ಭಕ್ತಿ ನಂಬಿಕೆ ಮಾತ್ರ ಗಟ್ಟಿಯಾಗಿತ್ತು.  ಈ ಕರಿಷ್ಯಾಮಿ ಪದ ನನಗೆ ಒಂದು ಅನುಮಾನ ಮೂಡಿಸುತ್ತಿತ್ತು. ನಮ್ಮಪ್ಪನನ್ನು ಅಜ್ಜಿ " ಶಾಮಿ" ಎಂದು ಕರೆಯುತ್ತಿದ್ದದ್ದು.. ನಮ್ಮಪ್ಪ ಅಷ್ಟೇನೂ  ಬೆಳ್ಳಗಿಲ್ಲದಿದ್ದದ್ದು... ಎರಡು ಸೇರಿ ಕರಿಶ್ಯಾಮಿ ಆಗಿ ಇಲ್ಲಿ ಹೇಗೆ ಬಂತು ಎಂದು. ಅದಕ್ಕೆ ಉತ್ತರ ಸಿಕ್ಕಿದ್ದು ನಾನು ಹೈಸ್ಕೂಲ್ ನಲ್ಲಿ ಸಂಸ್ಕೃತ ಓದಲು ಆಯ್ಕೆ ಮಾಡಿದಾಗ .... ಸಂಸ್ಕೃತದ ಪಂಡಿತರು ವೆಂಕಟದಾಸಶರ್ಮ ಅವರಿಂದ. ಸರಸ್ವತಿ ಪೂಜೆ ನವರಾತ್ರಿ ಸಂಭ್ರಮದ ಒಂದು ಮುಖ್ಯ ಭಾಗ...  ಮನೆಯಲ್ಲಿ ಬೊಂಬೆಗಳನ್ನು ಜೋಡಿಸುವಾಗಲೇ... ನನ್ನೆಲ್ಲ ಪುಸ್ತಕಗಳನ್ನು ಸರಸ್ವತಿ ಪೂಜೆಗೆ ಇಡುತ್ತಿದ್ದದ್ದು.. ಅದರ ಹಿಂದಿನ ಕಾರಣ ಸುಮಾರು 12 ದಿನಗಳ ಕಾಲ ಪುಸ್ತಕ, ಓದು ಎನ್ನುವ ಜಂಜಾಟವೇ ಇಲ್ಲದ್ದು.  ಸರಸ್ವತಿ ಪೂಜೆಯ ದಿನ... ದೇವರಿಗೆ ನಮಸ್ಕಾ...

ನೂರು - ಶತಕ - ಸಂಭ್ರಮ

Image
  ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತಂ ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ ಪಲವುಂ ಪಳ್ಳ ಸಮುದ್ರವೈ  ಹರ ಹರಾ ಶ್ರೀ ಚನ್ನ ಸೋಮೇಶ್ವರ.. ಸೋಮೇಶ್ವರ ಶತಕದ ಈ ಪದ್ಯ ನಮ್ಮ ಜೀವಿತಕಾಲದಲ್ಲೆಲ್ಲ ಅಳವಡಿಸಿಕೊಳ್ಳಬೇಕಾದ ಒಂದು ಸೂತ್ರ ಎಂದು ನನ್ನ ನಂಬಿಕೆ. ಮನುಷ್ಯನ ಜೀವಿತಕಾಲ ಅಂದಾಗ ಅದು ನೂರು ವರ್ಷ ಎನ್ನುವ ಒಂದು ಪ್ರತೀತಿ. ನೂರು ವರ್ಷಗಳನ್ನು ಕಾಣದವರೇ ಬಹಳ ಮಂದಿ.. ನೂರು ವರ್ಷಗಳನ್ನು ಪೂರೈಸಿ ತಮ್ಮ ಜೀವಿತಕಾಲದಲ್ಲಿ ಜನರ ಪ್ರೀತಿಯನ್ನು ಗಳಿಸಿದ .. ಕರ್ನಾಟಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ರೂವಾರಿ ಸರ್ ಎಂ ವಿ... ವಿಶ್ವೇಶ್ವರಯ್ಯನವರು, ನಡೆದಾಡುವ ದೇವರೆಂದು ಪ್ರಸಿದ್ಧರಾದ ಸಿದ್ಧಗಂಗೆಯ ಶ್ರೀ ಶಿವಕುಮಾರ ಸ್ವಾಮಿಗಳು,  ನಿಘಂಟು ತಜ್ಞ ಎಂದು ಹೆಸರಾದ   ಶ್ರೀ ವೆಂಕಟಸುಬ್ಬಯ್ಯನವರು, ವೇದಪಾರಂಗತ ಪಂಡಿತ ಸುಧಾಕರ್ ಚತುರ್ವೇದಿಯವರು ತಕ್ಷಣ ನೆನಪಿಗೆ ಬಂದವರು. 108 ವರ್ಷ ಬದುಕಿದ್ದ ನಮ್ಮಪ್ಪನ ನೂರು ವರ್ಷದ  "ಶಾಮಣ್ಣನ ಶತಾಬ್ದಿ ಸಂಭ್ರಮ"ದ ಆಚರಣೆ ಅತಿ ಸಂಭ್ರಮ ಯುಕ್ತವಾಗಿತ್ತು. 100 / ಶತಕ ನಮ್ಮ ಜೀವನದ ವಿವಿಧ ಘಟ್ಟದಲ್ಲಿ ಮೂಗು ತೂರಿಸಿದೆ. ಚಿಕ್ಕಂದಿನಲ್ಲಿ ನನ್ನಮ್ಮ ಯುಗಾದಿ ಹಾಗೂ ದೀಪಾವಳಿ ಹಬ್ಬದಲ್ಲಿ ನಮಗೆಲ್ಲ ತಲೆಗೆ ಎಣ್ಣೆಯನ್ನು ಹಚ್ಚಿ.. ಅಭ್ಯಂಜನಕ್ಕೆ ಅಣಿ ಮಾಡುತ್ತಿದ್ದದ್ದು ಪದ್ಧತಿ... ಆಗೆಲ್...

ಅಜ್ಜಿ ತಾತ - ಪ್ರೀತಿಯ ಸ್ರೋತ

Image
  " ತಾತ.. ಬೆಳಿಗ್ಗೆ ಸ್ಕೂಲ್ಗೆ ಬಿಡಕ್ಕೆ ಬಸ್ ಹತ್ರ ಬರ್ತೀಯ ತಾನೆ? " ಇದು ನನ್ನ ಮೊಮ್ಮಗಳು ಮೊನ್ನೆ ಕೇಳಿದ ಮಾತು. ನಮ್ಮ ಮನೆಯಲ್ಲಿದ್ದಾಗ ಅವಳನ್ನು ಬಸ್ಸಿಗೆ ಹತ್ತಿಸಲು ನಾನು ಹೋಗುವುದು ಒಂದು ಅಭ್ಯಾಸ.   ಮೂರ್ನಾಲ್ಕು ದಿನದಿಂದ  ಮಗಳು ಮತ್ತು ಮೊಮ್ಮಗಳು ನಮ್ಮ ಮನೆಯಲ್ಲಿದ್ದಾರೆ. ಅವಳಿಗೆ ಪರೀಕ್ಷೆ ಶುರು.. ಅದಕ್ಕೆ ಅವರಮ್ಮನ ಜೊತೆಗೆ  ನಾವು ಅಜ್ಜಿ ತಾತ ಅವಳಿಗೆ ಪಾಠ ಹೇಳಿಕೊಡುವ ಹುಮ್ಮಸ್ಸು. ಮೊಮ್ಮಗಳ ಜೊತೆ ಕಾಲ ಕಳೆಯುವ ಒಂದೊಂದು ಕ್ಷಣವು... ಒಂದೊಂದು ಸ್ವರ್ಗದ ಮೆಟ್ಟಿಲು.  19.04.2018 ರ ದಿನ ನಮ್ಮ ಜೀವನದ ಒಂದು ವಿಶೇಷ ಮೈಲಿಗಲ್ಲು... ಅಂದು ನಮ್ಮ ಜೀವನಕ್ಕೆ ಮೊಮ್ಮಗಳು ವಿಸ್ಮಯನ ಆಗಮನ, ಹಾಗಾಗಿ ನಮಗೆ ಅಜ್ಜಿ ತಾತ ಆಗಿ ಬಡ್ತಿ ಸಿಕ್ಕಿದ ದಿನ. ಕೆಲವೇ ಕ್ಷಣಗಳ ಹಿಂದೆ ಇದ್ದ ಒಂದು ಸಣ್ಣ ಆತಂಕ ಕಳೆದು ಸಂತೋಷ ಚಿಮ್ಮಿದ ದಿನ. ಸುಮಾರು ಏಳು ದಿನಗಳ ಕಾಲ ಸತತವಾಗಿ ಆಸ್ಪತ್ರೆಯಲ್ಲಿ ಜೊತೆಯಲ್ಲಿದ್ದು, ಮಗಳು ಮೊಮ್ಮಗಳನ್ನು ನೋಡಿಕೊಂಡ ಸಮಯ ಮಿಶ್ರಭಾವದೊಂದಿಗೆ ಇತ್ತು. ತಾತನಾಗಿ ಮಗುವಿನ ಎಲ್ಲಾ ಆರೈಕೆಯಲ್ಲೂ ಭಾಗಿಯಾಗಿ... ರಾತ್ರಿ ನಿದ್ದೆ ಕೆಟ್ಟು, ಮೈ ಸೋತಿದ್ದರೂ ಮನಸ್ಸಿಗೆ ಏನೋ ಆಹ್ಲಾದ... ಆ ಮುದ್ದು ಬೊಮ್ಮಟೆಯನ್ನು ಎತ್ತಿ ಮುದ್ದಾಡಿದಾಗ ಸಿಕ್ಕ ಆನಂದ ಹೇಳಲು ಪದಗಳು ಇಲ್ಲ ಎಂದೇ ನನ್ನ ಭಾವನೆ. ಅಜ್ಜಿ ತಾತನಿಗೆ ಒಂದು ವಿಶೇಷ ಸವಲತ್ತು. ಅದು ಮಗುವಿನೊಂದಿಗಿನ ಒಡನಾಟ... ಯಾವುದೇ ವಿಶೇಷ ಜವಾಬ...

ಬಾಲ್ಯದ ಪ್ರಸಂಗಗಳು - ಇನ್ನಷ್ಟು.

Image
  ಹೈಸ್ಕೂಲ್ ಹಂತದಲ್ಲಿ ನಾನು ಟಿ ಆರ್ ಶ್ರೀನಿವಾಸರಾವ್ ಆಪ್ತರು. ಅವನದು ಎಲ್ಲಕ್ಕೂ ಎಡಗೈ ಬಳಕೆ ( ಲೊಡ್ಡೇ ಎಂದು ಕರೆಯುತ್ತಿದ್ದದ್ದು ಉಂಟು) ಒಟ್ಟಿಗೆ ಸ್ಕೂಲಿಗೆ ಹೋಗಿ ಬರುವುದು. ಒಂದೇ ಬೆಂಚಿನಲ್ಲಿ ಕೂಡುವುದು... ಹೀಗೆ. ಪ್ರತಿದಿನ ದಾರಿಯಲ್ಲಿರುವ ಅವರ ಮನೆಗೆ ಹೋಗಿ ಅಲ್ಲಿಂದ ಸ್ಕೂಲಿಗೆ ಹೋಗುವುದು ಒಂದು ಅಭ್ಯಾಸ. ಅವರ ಮನೆಗೆ ಹೋದಾಗಲೆಲ್ಲ... ಅವರ ಒಬ್ಬ ಅಕ್ಕನನ್ನು ನೋಡುತ್ತಿದ್ದೆ... ಮಾತನಾಡುತ್ತಿರಲಿಲ್ಲ... ಮುಖ ನೋಡಿ ನಗುವುದು ಮಾತ್ರ. ಕೆಲವು ಸಲ ಕೈಯಲ್ಲಿ ಒಂದು ಹಾರ್ಲಿಕ್ಸ್ ಬಾಟಲ್ಲು... ಅದರಲ್ಲಿ ಮಜ್ಜಿಗೆ.. ಅದನ್ನು ಅಲ್ಲಾಡಿಸುತ್ತಾ ಕುಳಿತಿರುವುದನ್ನು ಗಮನಿಸಿದ್ದೆ. ಒಂದು ದಿನ ತಿಳಿದದ್ದು ಅವರು ಬುದ್ಧಿಮಾಂದ್ಯರೆಂದು, ( ಆಗ ಅದರ ಅರಿವೇ ಇರಲಿಲ್ಲ). ಹಾಗಾಗಿ ಮಜ್ಜಿಗೆಯಿಂದ ಬೆಣ್ಣೆ ತೆಗೆಯಲು ಅವರ ಕೈಗೆ ಬಾಟಲ್ ಕೊಟ್ಟರೆ ಸ್ವಲ್ಪ ಸಮಯದ ನಂತರ ಬೆಣ್ಣೆ ಕಟ್ಟಿರುತ್ತಿತ್ತು.... ಅವರನ್ನು ನೋಡಿದಾಗಲೆಲ್ಲ  ನನಗೆ ಒಂದು ಹೇಳಲಾಗದ ಭಾವ.... ಸಧ್ಯ ನನ್ನಕ್ಕ ಹಾಗಿಲ್ಲ ಅಂದುಕೊಂಡದ್ದು ಉಂಟು. ಟಿ.ಆರ್ ಶ್ರೀನಿವಾಸ್ ರಾವ್   ನನ್ನು  ಕೊನೆಯ ಬಾರಿ ಭೇಟಿ ಮಾಡಿದ್ದು 72  - 73 ರಲ್ಲಿ... ಆಗ ಅವನು ಸಿಂಡಿಕೇಟ್ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ. ನಂತರ ನನ್ನ ಹೊಸ ಫ್ಯಾಕ್ಟರಿಯ ಸಂಭ್ರಮ (ಜಂಜಾಟ ಎಂತಲೂ ಹೇಳಬಹುದು) ದಲ್ಲಿ ನಾನೇ ಒಂದು ಸ್ವಯಂ ನಿರ್ಮಿತ ದ್ವೀಪದಲ್ಲಿದ್ದೆ. ಈಗ ಎರಡು ಮೂರು ವರ್...

ಈಶ್ವರ - ವಿಶ್ವೇಶ್ವರ

Image
  ಮೊನ್ನೆ ಭಾನುವಾರ ಆಕಸ್ಮಿಕವಾಗಿ, ಬಹುದಿನದ ಆಸೆ... ಮುದ್ದೇನಹಳ್ಳಿಯನ್ನು ನೋಡುವುದು..... ನೆರವೇರಿತು ...ಅದು ನನ್ನ ಸ್ನೇಹಿತ ವಾಸು ( NS ವಾಸುದೇವ್) ವಿನ ಕೃಪೆಯಿಂದ. ಬೆಂಗಳೂರು ಮಹಾನಗರ ಸಾರಿಗೆ ಏರ್ಪಡಿಸಿರುವ ಒಂದು ದಿನದ ಪ್ರವಾಸದ ಮೂಲಕ. ಸಾಮಾನ್ಯ ಕಣ್ಣಿಗೆ ಕಾಣದ, ಸರ್ವಾಂತರ್ಯಾಮಿ ಹಾಗೂ ಸರ್ವಶಕ್ತ... ಪ್ರಪಂಚಕ್ಕೆ ಯೋಗ ಜ್ಞಾನವನ್ನು ಕೊಟ್ಟ ಆದಿ ಗುರು ಶಿವ... ಈಶ್ವರನ ದರ್ಶನ.... ಹಾಗೆ ನಮ್ಮ ಜೀವಿತ ಕಾಲದಲ್ಲೇ ಇದ್ದು ಜನಹಿತದ ಕೆಲಸಗಳನ್ನು ಮಾಡಿದ ತಮ್ಮ ಇಂಜಿನಿಯರಿಂಗ್ ಜ್ಞಾನದ ಮೂಲಕ ನೀರು ವಿದ್ಯುತ್ ಅಣೆಕಟ್ಟು ಹೀಗೆ ಅನೇಕ  ವಿಧದ ಅನುಕೂಲತೆಗಳನ್ನು ಮಾಡಿದ, ಮೈಸೂರು ರಾಜ್ಯದ ದಿವಾನರಾಗಿ ಬ್ಯಾಂಕು, ಕಾರ್ಖಾನೆಗಳು, ವಿದ್ಯಾಸಂಸ್ಥೆಗಳನ್ನು ಹುಟ್ಟು ಹಾಕಿದ.. ನಮ್ಮ ನಾಡಿನಲ್ಲಿ ನಡೆದಾಡಿದ ವಿಶ್ವೇಶ್ವರನ ದರ್ಶನ... ಹೌದು ಅದು ಸರ್ MV ಎಂದೇ ಪ್ರಸಿದ್ಧರಾದ, ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ದರ್ಶನ. ಈಶ್ವರ, ವಿಶ್ವೇಶ್ವರ ಇಬ್ಬರ ದರ್ಶನ ನನಗೆ ತುಂಬಾ ಖುಷಿ ಕೊಟ್ಟಿತು. ಅಂದು ಸುಮಾರು 11.15 ಗಂಟೆಗೆ ಕೆಂಪೇಗೌಡ ಬಸ್ ನಿಲ್ದಾಣವನ್ನು ಬಿಟ್ಟು ಮೊದಲು ತಲುಪಿದ್ದು ಕಣಿವೆ ಬಸವೇಶ್ವರನ ದೇವಸ್ಥಾನ.  ಹೆಸರೇ ಹೇಳುವಂತೆ ಒಂದು ಕಡೆ ಬೆಟ್ಟ ಮತ್ತೊಂದು ಕಡೆ ಕಣಿವೆ... ಮಳೆ ಬಂದ ಕಾರಣದಿಂದ ಎಲ್ಲವೂ ಹಸಿರು ಹಸಿರು... ನೋಡಲು ಕಣ್ತುಂಬಿ ಬಂದಂತ ವನಸಿರಿ. ಜೊತೆಗೆ ದೊಡ್ಡದಾದ ಉದ್ಭವ ಮೂರ್ತಿ ಎಂದು ಹೇಳಲಾದ ಬಸವಣ್ಣನ ವಿ...