Posts

ವಾಸ್ತುಶಾಸ್ತ್ರ- ವಸ್ತುಸ್ಥಿತಿ

Image
Walking ಸಮಯದ talking ನನಗೆ ಬಲು ಇಷ್ಟ ... ಅದು ನಮ್ಮದಾದರೂ ಸರಿ.. ಬೇರೆಯವರ ಮಾತಾದರೂ ಸರಿ. ಹೀಗೆ ಕೇಳಿಸಿಕೊಂಡ ಮಾತು ವಾಸ್ತು ಶಾಸ್ತ್ರದ ಬಗೆಗಿತ್ತು.." ಎಂಥಾ ಸಂದಿಗ್ಧ  ಅಂತೀರಾ... ನಮ್ ಪಕ್ಕದ ಸೈಟ್ ನಲ್ಲಿ ದೇವಮೂಲೆಯಲ್ಲಿ ಬೋರ್ ವೆಲ್ ಹಾಕಿಸಿದ್ದಾರೆ ...ಒಳ್ಳೆ ನೀರು ಬಂದಿದೆ. ನಮ್ ಸೈಟ್ ನಲ್ಲೂ ಬೋರ್ ವೆಲ್ ಹಾಕಿಸ ಬೇಕು... ಅದು ದೇವಮೂಲೆಯಲ್ಲಿ ಇದ್ರೆ ಒಳ್ಳೇದು ಅಂತ ವಾಸ್ತು ತಿಳಿದವರು ಹೇಳ್ತಾರೆ... ಆದರೆ ನೀರಿನ ಸೆಲೆ ಹುಡುಕಿಕೊಟ್ಟವರು ಅದನ್ನ ಅಗ್ನಿಮೂಲೆ ತೋರಿಸಿದ್ದಾರೆ... ಏನ್ ಮಾಡಬೇಕು ತೋಚುತ್ತಾ ಇಲ್ಲ" . ಕಣ್ಮುಚ್ಚಿ ಅಕ್ಕ ಪಕ್ಕ ಸೈಟ್ ಅನ್ನ ಕಲ್ಪಿಸ್ಕೊಂಡೆ ಆಗ ಕಾಣಿಸಿದ್ದೇ ...ಒಬ್ಬರ ಮನೆಯ ಅಗ್ನಿ ಮೂಲೆಯ  ಬಲಗಡೆ ಪಕ್ಕದ ಮನೆಯವರ ದೇವ ಮೂಲೆ. ನೀರಿನ ಹರಿವು ಅದೃಷ್ಟವಶಾತ್ ಒಬ್ಬರಿಗೆ ದೇವಮೂಲೆಯಲ್ಲಿ ಸಿಕ್ಕಿದೆ, ಪಕ್ಕದಲ್ಲಿ ಬೋರ್ ಹಾಕಿದರೆ ನೀರಿನ ಸಾಧ್ಯತೆ ಹೆಚ್ಚು ಅಲ್ಲವೇ( ಕಾನೂನುಗಳ ವಿಧಿಯನ್ನು ಗಮನಿಸದೆ)... ವಾಸ್ತು ಶಾಸ್ತ್ರಕ್ಕೂ ವಸ್ತು ಸ್ಥಿತಿಗೂ ಇರುವ ಅಂತರ... ಅದರಿಂದಾಗುವ ಗೊಂದಲ ನನ್ನಲ್ಲಿ ಮೂಡಿತು.... ನನಗಿದು ಸಂಬಂಧವೇ ಇಲ್ಲದಿರುವ ವಿಷಯವಾದರೂ. ಇನ್ನು ಅದನ್ನು ನಿಭಾಯಿಸಬೇಕಾದ ವ್ಯಕ್ತಿಗೆ ಆಗುವ ಗೊಂದಲ....  ಹಣದ ಪ್ರಶ್ನೆಯ ಜೊತೆಗೆ... ಅರ್ಥ ಮಾಡಿಕೊಳ್ಳಲು ಅಷ್ಟು ಸುಲಭವಲ್ಲ, ಅನುಭವಿಸಿ ಅರ್ಥಮಾಡಿಕೊಳ್ಳಬೇಕು. ವಾಸ್ತು ಶಾಸ್ತ್ರದ ಜೊತೆ ನನ್ನ ಮೊದಲ ಮುಖಾಮುಖಿ 1975ರ ಸುಮಾರ...

ತುಂಬು ಕುಟುಂಬ - ಸುವರ್ಣ ಕಾಲ

Image
ನನ್ನ ಪರಿಚಯದ ಶ್ರೀಮತಿ ಸುಜಾತ ರೆಡ್ಡಿ ಅವರು... ನನ್ನ ಲೇಖನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುತ್ತಾರೆ, ಜೊತೆ ಜೊತೆಗೆ ಅವರಿಗೆ ನೆನಪಾದ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಕೆಲವೊಂದು ನನ್ನನ್ನು ಉಬ್ಬಿಸುತ್ತವೆ...  ಹುರಿದುಂಬಿಸುತ್ತವೆ. ಇಂದು ಅವರ ಮೆಸೇಜ್ ನೋಡುವಾಗ ಅನಿರೀಕ್ಷಿತವಾಗಿ ಕಣ್ಣಿಗೆ ಬಿದ್ದ ಅವರ ಮದುವೆಯ ಸಂದರ್ಭ. ..ಹಾಗೂ Joint family  ಪದವೇ ನನ್ನ ಲೇಖನಕ್ಕೆ ಸ್ಫೂರ್ತಿ. Joint family ಎನ್ನುವ ಪದ ವಿಶೇಷವೇ. ಚಿಕ್ಕಂದಿನಲ್ಲಿ ನಮಗೆ ತಿಳಿಯದು. ಹಳ್ಳಿಯ ಎಲ್ಲ ಮನೆಗಳಲ್ಲೂ ಜನವೋ ಜನ... ನನಗೆ ನೆನಪಿರುವಂತೆ, ಒಂದೇ ಮನೆಯಲ್ಲಿ ಗಂಡ ಹೆಂಡತಿ ಇದ್ದದ್ದು... ಅವರಿಗೆ ಮಕ್ಕಳಿರಲಿಲ್ಲ ಎಂಬ ನೆನಪು.  ಬೆಂಗಳೂರಿಗೆ ಬಂದ ನಂತರವೇ ಕೆಲ ದಿನ ನಾವು ಅಣ್ಣ ತಮ್ಮಂದಿರು, ಜೊತೆಗೆ ನನ್ನಕ್ಕ ಗಿರಿಜಾಂಬ ಮಾತ್ರ ಮನೆಯಲ್ಲಿದ್ದದ್ದು... ಅದು ಒಂದು ತರಹ branch office ಇದ್ದ ಹಾಗೆ. ನಂತರ, ದೊಡ್ಡಜಾಲ ಬಿಟ್ಟು ಅಪ್ಪ, ಅಮ್ಮ ಬೆಂಗಳೂರಿಗೆ ಬಂದಮೇಲೆ, ಬೆಂಗಳೂರೇ head office ಆಯ್ತು.  ಕೂಡು ಕುಟುಂಬದ ಭಾಗವಾಗಿದ್ದು... ಅನುಭವಿಸಿದ ಸುಂದರ ಕ್ಷಣಗಳು ಅವಿಸ್ಮರಣೀಯ.  ಅಕ್ಕಂದಿರುಗಳ ಮದುವೆಯಾಗಿ ಅವರುಗಳ ಜೀವನ ಸಾಗುತ್ತಿದ್ದು... ಮನೆಯಲ್ಲಿ ಅಮ್ಮನನ್ನು ಬಿಟ್ಟರೆ ಬೇರೆ ಹೆಣ್ಣಿಲ್ಲ... ಬರೀ ಗಂಡಸರು... ಇದಾದ ನಂತರದ ತಿರುವು... ಒಬ್ಬರ ನಂತರ ಒಬ್ಬರು, ನಮ್ಮಣ್ಣಂದಿರಿಬ್ಬರ ಮದುವೆ... ಮನೆಗೆ ಅತ...

ಚೌರ - ಕ್ಷೌರಿಕ - ಕೇಶ ಶೃಂಗಾರ

Image
ಸಂಜೆ ಮನೆಗೆ ಮರಳುವ ಹೊತ್ತಿಗೆ ನಮ್ಮ ಮನೆಯ ಮುಂದಿನ ಸಾಲಿನಲ್ಲಿ ಒಂದು ಹೊಸ ಬೋರ್ಡ್ ಕಾಣಿಸಿಕೊಂಡಿತು... ಅದರಲ್ಲಿ ಬರೆದದ್ದು... ರಿಶಿ ಬ್ಯೂಟಿ ಸ್ಟುಡಿಯೋ.. ಅಂದರೆ ಅದೊಂದು ಮೂಲತಃ (ನನ್ನ ಚಿಕ್ಕಂದಿನ ಭಾಷೆಯಲ್ಲಿ ಹೇಳುವುದಾದರೆ) ಚೌರದ ಅಂಗಡಿ. ನಿಜಕ್ಕೂ ಈ ಚೌರದ ವಿಚಾರವಾಗಿ ಆಗಿರುವ ರೂಪಾಂತರ ಆಶ್ಚರ್ಯ ಪಡುವಂಥದ್ದು. ಮರದ ಕೆಳಗೆ, ನಮ್ಮ ಮನೆಯ ಬಳಿ ನಡೆಯುತ್ತಿದ್ದ ಚೌರದ ಕಾರ್ಯಕ್ರಮ ಈಗ ಸುಸಜ್ಜಿತ ಸ್ಟುಡಿಯೋ ವರೆಗೆ ಬಂದು ನಿಂತಿದೆ. ಒಂದು ಸಮಯವಿತ್ತು... ಅವರನ್ನು ಮುಟ್ಟಬಾರದು...ಮೈಲಿಗೆ, ಸಂಜೆಯ ಹೊತ್ತು ನೆನೆಯಬಾರದು, ಎಲ್ಲಿಯಾದರೂ ಹೊರಟಾಗ ಅವರು ಎದುರಿಗೆ ಬಂದರೆ ಅಪಶಕುನ ಎಂಬ ಭಾವನೆ. ಆದರೆ ಅವರ ಓಲಗದ ನಾದ ಮಾತ್ರ ಎಲ್ಲ ಶುಭ ಸಂದರ್ಭಗಳಲ್ಲೂ ಬೇಕು... ಇದು ಯಾವ ನ್ಯಾಯ... ಅರ್ಥವಾಗದು.  ಈ ವಿಚಾರವಾಗಿ ಶತಾವಧಾನಿ ಗಣೇಶ್ ಅವರು ಹೇಳಿದ ಒಂದು ಘಟನೆ ಕಣ್ಣು ತೆರೆಸುವಂತದು. ಶತಾವಧಾನಿ ಗಣೇಶ್ ಅವರು ಅವರ ತಾತನ ಜೊತೆ ಶೃಂಗೇರಿಯ ಆಗಿನ ಜಗದ್ಗುರು ಶ್ರೀ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಯವರ ದರ್ಶನಕ್ಕೆ ಹೋಗಿದ್ದರಂತೆ...ಆ ಸಮಯದಲ್ಲಿ ತಾತ ಜಗದ್ಗುರುಗಳಲ್ಲಿ ಒಂದು ಪ್ರಶ್ನೆ ಕೇಳಿದರಂತೆ ..."ಅವರುಗಳು ತೆಲುಗಿನಲ್ಲಿ ಮಾತಾಡುತ್ತಿದ್ದರಂತೆ.. ಇದರ  ಕನ್ನಡ ಭಾವಾನುವಾದ "ಕ್ಷೌರ ಮಾಡುವವರನ್ನು ಮುಟ್ಟಿದರೆ ಮೈಲಿಗೆ, ಎದುರಿಗೆ ಬಂದರೆ ಅಪಶಕುನ ಎಂದು ಭಾವಿಸುತ್ತೇವೆ... ಆದರೆ ಅದೇ ಮನುಷ್ಯರು ದೇವರ ಮೆರವಣಿಗೆಯಲ್ಲಿ ನಾದಸ್ವರವನ...

ವಾಕ್ಚಾತುರ್ಯ - ಮಾತಾಡುವ ಕಲೆ

Image
  ಕರ್ನಾಟಕ ಹಿರಿಯ ನಾಗರಿಕ ವೇದಿಕೆಗಳ ಒಕ್ಕೂಟ ಹಾಗೂ ಸ್ನೇಹ ಸೇವಾ ಟ್ರಸ್ಟ್ ಜೊತೆಗೂಡಿ 50ಕ್ಕೂ ಹೆಚ್ಚು ಶಾಲೆ ಕಾಲೇಜುಗಳಲ್ಲಿ “ವಾಕ್ಚಾತುರ್ಯ ಸ್ಪರ್ಧೆ” ನಡೆಸಲಾಯಿತು. . ಎಲ್ಲರಿಗೂ ಕೊಟ್ಟ ವಿಷಯ " ನನ್ನ ಹಿರಿಯರು- ನನ್ನ ಆದರ್ಶ". ಭಾಗವಹಿಸಿದ ಮಕ್ಕಳು ಅವರದೇ ರೀತಿಯಲ್ಲಿ ತಮ್ಮ ವಿಷಯಗಳನ್ನು ಅಭಿವ್ಯಕ್ತಿ ಪಡಿಸಿದರು.  ಪ್ರತಿ ಶಾಲೆಯಲ್ಲೂ ಮೂರು ಜನ ವಿದ್ಯಾರ್ಥಿಗಳನ್ನು ಬಹುಮಾನ ವಿಜೇತರನ್ನಾಗಿ ಆರಿಸಲಾಯಿತು.  ಜುಲೈ 27ನೇ ತಾರೀಕು ಮೊದಲ ಎರಡು ಸ್ಥಾನ ಗಳಿಸಿದ ಎಲ್ಲರ ಮಧ್ಯೆ “champion of champions" ಸ್ಪರ್ಧೆಯನ್ನು ಏರ್ಪಡಿಸಿ ಅಂತಿಮ ವಿಜೇತರನ್ನು ಗುರುತಿಸಲಾಯಿತು. ಈ ಶಾಲಾ ಸ್ಪರ್ಧೆಗೆ ಜಡ್ಜ್  ಆಗಿ ಎರಡು ಶಾಲೆಯಲ್ಲಿ ಭಾಗವಹಿಸುವ ಅವಕಾಶ ನನ್ನದಾಗಿತ್ತು. ಜಡ್ಜ್ ಎನ್ನುವ ಪದ ನನಗಷ್ಟು ಒಪ್ಪಿಗೆಯಾಗದಿದ್ದರೂ... ಆ ಸಂದರ್ಭದಲ್ಲಿ ಅದು ಅನಿವಾರ್ಯವಾಗಿತ್ತು.  ಆಪ್ತ ಸಮಾಲೋಚಕರಿಗೆ ಒಂದು ಮಾರ್ಗಸೂಚಿ ಇದೆ. "you are not a judge....don't  judge anybody by their words or acts. analyse the reason behind  that act" ಹಾಗಾಗಿ  ಜಡ್ಜಿಂಗ್ ಅನ್ನುವ ಕಲ್ಪನೆಯೇ ನನ್ನೀ 32 ವರ್ಷದ ಆಪ್ತ ಸಮಾಲೋಚಕನ ಪಯಣದಲ್ಲಿ ಮೂಗು ತೂರಿಸಿಲ್ಲ. ಎರಡೂ ಸಂಘಟನೆಯ ಸದಸ್ಯರುಗಳು.. ಶಾಲೆಗಳಿಗೆ ಹೋಗಿ ಸ್ಪರ್ಧೆಯನ್ನು ನಡೆಸಿ, ವಾಟ್ಸಪ್ ಗುಂಪಿನಲ್ಲಿ ಹಂಚಿಕೊಂಡ ಚಿತ್ರಗಳು, ವಿಷಯಗಳು ತುಂಬಾ...

ಗುರುಪೂರ್ಣಿಮೆ

Image
  ಮೊನ್ನೆ ಭಾನುವಾರ ಗುರುಪೂರ್ಣಿಮೆಯ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಗುರುಪೂರ್ಣಿಮೆಯ ಶುಭಾಶಯಗಳು ಹಾಗೂ ಸಂಬಂಧಪಟ್ಟ ವಿಷಯಗಳ ಬಗ್ಗೆ ಮೆಸೇಜುಗಳ ಮಹಾಪೂರವೇ ಹರಿದು ಬಂತು. ಗುರುಪೂರ್ಣಿಮೆಯ ಆಚರಣೆ ಹಿಂದಿನಿಂದ ಇತ್ತಾದರೂ... ಅದು ಜನಮಾನಸದ ಎಲ್ಲ ಸ್ತರದ ಜನರನ್ನು ಮುಟ್ಟಿರಲಿಲ್ಲ.... ಸಾಮಾಜಿಕ ಜಾಲತಾಣದ ಕೃಪೆಯಿಂದಾಗಿ.. ಇಂದು ಬಹು ಜನರನ್ನು ಮುಟ್ಟಿದೆ... ಹಾಗೂ ಈ ವಿಷಯ ಜನಜನಿತವಾಗಿದೆ. ಇದೊಂದು ಧಾರ್ಮಿಕ ಆಚರಣೆಯೇ ಆಗಿಲ್ಲದೆ... ಸಾಮಾಜಿಕವಾಗಿಯೂ ಆಚರಣೆಯಲ್ಲಿ ಇದೆ... ತಮಗೆ ಇಷ್ಟವಾದ ಗುರುಗಳನ್ನು ಆದರಿಸಿ ಸತ್ಕರಿಸಿ ಗೌರವ ತೋರಿಸಿ, ಕೃತಜ್ಞತೆ ಸಲ್ಲಿಸುವ ಮೂಲಕ. ಅದರಲ್ಲೂ ಸಂಗೀತ ಕ್ಷೇತ್ರದಲ್ಲಿ ಗುರು ವಂದನೆಗೆ ಹೆಚ್ಚಿನ ಪ್ರಾಮುಖ್ಯತೆ. ನಮ್ಮ ಸಂಸ್ಕೃತಿಯಲ್ಲಿ... ಅಪ್ಪ ಅಮ್ಮನ ನಂತರದ ಸ್ಥಾನ ಗುರುವಿಗೆ. " ಮಕ್ಕಳಿಸ್ಕೂಲ್ ಮನೇಲಲ್ವೇ" ಎಂಬ ಕೈಲಾಸಂ ಮಾತಿನಂತೆ.. ತಾಯಿಯೇ ಮೊದಲ ಗುರು. " ಅಜ್ಞಾನಾತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ" ಅಜ್ಞಾನದಿಂದ ಕುರುಡಾದವನ ಕಣ್ಣುಗಳನ್ನು ಜ್ನಾನಾಂಜನ ಎಂಬ ಸಲಾಕೆಯಿಂದ.. ಕಣ್ಣನ್ನು ತೆರೆಸಿದವನೇ ಗುರು. ವರ್ಣಮಾತ್ರಂ ಕಲಿಸಿದಾತಂ ಗುರು ಎನ್ನುವ ಹೇಳಿಕೆಯೂ ಇದೆ. ಗುರುವಿನ ಬಗ್ಗೆ ಇಂತಹ ಸಾಲುಗಳು ಅನೇಕವು.. ಬಗೆದಷ್ಟೂ ಸಿಗುವಂತಹವು. ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರದ ಶಿವನನ್ನು ಆದಿ ಗುರು ಎಂದು ಕರೆಯುವು...

Walking - ನಡೆದಾಟ

Image
ವಾಕಿಂಗ್ ಎಂದರೆ.. ಈಗ ಅರ್ಥ ಮಾಡಿಕೊಳ್ಳುವುದು... ಬೆಳಿಗ್ಗೆ ಅಥವಾ ಸಂಜೆ ಯಾವುದಾದರೂ ಉದ್ಯಾನವನದಲ್ಲೋ... ಜನ ಸಂದಣಿ ಇಲ್ಲದ ರಸ್ತೆಯಲ್ಲೋ... ಸ್ವಚ್ಛ ಗಾಳಿಯನ್ನು ಕುಡಿದು ನಡೆದಾಡುವ ಕ್ರಿಯೆ ಎಂದು. ಅಷ್ಟರಮಟ್ಟಿಗೆ ಅದು ಕನ್ನಡದ ಪದವಾಗಿ ಬಳಕೆಯಲ್ಲಿದೆ. 2004 ರಿಂದ ಕರೋನಾ ಮಾರಿ ಬಂದು ಕಾಡುವ ತನಕ ನಿರಂತರವಾಗಿ ನಾನು ಹರಿಹರ ಗುಡ್ಡಕ್ಕೆ ವಾಕಿಂಗ್ (ವಾಕಿಂಗ್ ಗೂ ಮಿಕ್ಕಿ talking ಇರುತ್ತಿತ್ತು) ಹೋಗುತ್ತಿದ್ದೆ. ಕರೋನಾ ನನ್ನನ್ನು ಮನೆಯಲ್ಲಿ ಹಿಡಿದಿಟ್ಟಿತ್ತು,  ಹಾಗಾಗಿ ಮನೆಯಲ್ಲಿ ವಾಕಿಂಗ್.... ನಂತರದಲ್ಲಿ ಹರಿಹರ ಗುಡ್ಡಕ್ಕೆ ವಾಕಿಂಗ್ ಶುರುವಾದರೂ... ನಿಯಮಿತವಾಗಿ ಹೋಗುತ್ತಿಲ್ಲ.. ಈಗ ಮನೆಯ ಹತ್ತಿರದ ಉದ್ಯಾನವನದಲ್ಲಿ ವಾಕಿಂಗ್ ಮಾಡುತ್ತೇನೆ. ಈಗೀಗ ವಾಕಿಂಗ್ ಮಾಡುವ ಜನ ಜಾಸ್ತಿಯಾಗುತ್ತಿದ್ದಾರೆ.... ಕೆಲವರು ಕಾಲ ಕಳೆಯಲು, ಕೆಲವರು ಆರೋಗ್ಯದ ದೃಷ್ಟಿಯಿಂದ, ಯುವಕ ಯುವತಿಯರು ತಮ್ಮ ದೇಹದ fitness ಗಾಗಿ, ಇನ್ನೂ ಕೆಲ ಅಗೋಚರ ಕಾರಣಗಳಿಗಾಗಿಯೂ ಇರಬಹುದು. ಲೋಕಾರೂಢಿಯಾಗಿ ಮಾತಾಡ್ತಾ... ಯಾವಾಗ ವಾಕಿಂಗ್ ಶುರು ಮಾಡಿದ್ದು ಅಂದಾಗ......" ಸುಮಾರು ನನಗೆ ಒಂದು ವರ್ಷವಾದಾಗಲಿಂದ ವಾಕಿಂಗ್ ಮಾಡುತ್ತಿದ್ದೇನೆ" ಎಂಬ ತಲೆಹರಟೆ / ತಮಾಷೆ ಉತ್ತರ ಕೊಟ್ಟಿದ್ದೇನೆ... ಹೌದಲ್ವಾ walking ನ ನಿಜಾರ್ಥದಲ್ಲಿ ಅದುವೇ ಸರಿ...  ಮಗುವಿನ ಮೊದಲ ಹೆಜ್ಜೆಯನ್ನು ಇಟ್ಟ ಕ್ಷಣ... ಅಪ್ಪ ಅಮ್ಮನಿಗೆ ಸಂಭ್ರಮ.. ಮಗುವನ್ನು ಅಪ್ಪಿ ಮುದ್ದಾಡುವ...

ಸುಖದ ಪರಿಕಲ್ಪನೆ

Image
  ಹೋದ ಗುರುವಾರ NIMHANS ನ ಅಂಗ ಸಂಸ್ಥೆಯಾದ ವಯೋಮಾನಸ ಸಂಜೀವನಿಯ ಸ್ಪೂರ್ತಿ ತಂಡದ.. ವಾರದ online ಕಾರ್ಯಕ್ರಮದಲ್ಲಿ ಮಾತನಾಡುವ ಅವಕಾಶವನ್ನು ಮಾಡಿಕೊಟ್ಟಿದ್ದರು ಶ್ರೀಮತಿ ರತ್ನಪ್ರಭಾ ಅವರು. ವಿಷಯ ಇಂದಿನ ನನ್ನ ಶೀರ್ಷಿಕೆಯೇ... ಸುಖದ ಪರಿಕಲ್ಪನೆ.  ಮೊದಲ ಹಂತದಲ್ಲಿಯೇ ಭಾಗಿಗಳಾಗಿದ್ದ ಜನರನ್ನು.. ಅವರ ದೃಷ್ಟಿಯಲ್ಲಿ.. ಸುಖ ಎಂದರೆ ಏನು? ಎಂಬ ಪ್ರಶ್ನೆಗೆ ಸಿಕ್ಕ ಉತ್ತರಗಳು ಹೀಗಿತ್ತು * ತೃಪ್ತಿಯಿಂದ ಇರುವುದು * ಆಸೆಯೇ ದುಃಖಕ್ಕೆ ಕಾರಣ * ನಮಗೆ ಬೇಕಾದ್ದು ಸಿಕ್ಕಾಗ * Acceptance.. ಒಪ್ಪಿಕೊಳ್ಳುವುದು * Balancing of life. ಹೊಂದಾಣಿಕೆ  * ಬೇರೆಯವರಿಗೆ ಸಂತೋಷ  ಹಂಚುವುದು * ಸಮಾಜ ಸೇವೆ * ಆರೋಗ್ಯ * ಕಷ್ಟವಿಲ್ಲದ್ದು.... ಸುಖ * ಶಾಂತಿ * ಖುಷಿ * ನೆಮ್ಮದಿ * ಚಿಂತೆ ಇಲ್ಲದ ಜೀವನ * ಸುಖವಾದ ಮರಣ * ಹೊಗಳಿಕೆ ಸಿಕ್ಕಾಗ * ಸಂಬಂಧಗಳು ಚೆನ್ನಾಗಿದ್ದಾಗ * ಗೆಲುವು / ಯಶಸ್ಸು * Expectations * ತಿನ್ಕೊಂಡು ಉಂಡ್ಕೊಂಡು    ಹಾಯಾಗಿರೋದು * ಬೆಚ್ಚನಾ ಮನೆಯಿರಲು..... ಸರ್ವಜ್ಞ ಸುಖ ಅನ್ನುವುದು... ಅವರವರ ಭಾವನೆ/ ಕಲ್ಪನೆ.... ಸಾಮಾನ್ಯವಾಗಿ ಅವರಿಗೆ ಆ ಸಮಯದಲ್ಲಿ ಕಷ್ಟ ಅನ್ನಿಸಿದ್ದು ಇಲ್ಲವಾದಾಗ ಅದು ಸುಖ.  ಮೇಲಿನ ಎಲ್ಲಾ ವಿಷಯಗಳನ್ನು ಸ್ವಲ್ಪ ಮಟ್ಟಿಗೆ ಒಳಗೊಂಡು ನನ್ನದೇ ಆದ ವಿಶ್ಲೇಷಣೆಯನ್ನು ಸೇರಿಸಿ, ಮಾತನಾಡಿ ಕಾರ್ಯಕ್ರಮ ಮುಗಿಸಿದೆ. ನಂತರ.. ನನ್ನ ಜೀವನದ ಒಂದು ಸಿಂಹಾವಲೋ...