Posts

ಉಪವಾಸ. .. NETಉಪವಾಸ

Image
  ಹೋದ ವರ್ಷ ಉತ್ಥಾನ ದ್ವಾದಶಿ ದಿನ ನಮ್ಮ ಕುಟುಂಬದ ಮುವ್ವತ್ತಕ್ಕೂ ಮೀರಿ ಜನ ಒಂದು ಪ್ರವಾಸದಲ್ಲಿದ್ದೆವು.. ಅದರ ಹೆಸರು ಉತ್ವಾನ್ ದ್ವಾದಶಿ ಟ್ರಿಪ್... ವರ್ಷ ಉರುಳಿದೆ.... ಈ ವರ್ಷ ಈ ಏಕಾದಶಿ ಸ್ವಲ್ಪ ವಿಶೇಷ.... ನಮ್ಮ ವೈಶಾಖ್ ಹಾಗೂ ಸೌಮ್ಯ ದಂಪತಿಗೆ ಮಗ ಹುಟ್ಟಿದ ಸಂಭ್ರಮ.... ಆ ಸಂಭ್ರಮದಲ್ಲಿ ಸೌಮ್ಯನಿಗೆ ಊಟ ಇಲ್ಲ... ಅದು ಸಹಜ... ಸಂತೋಷದಲ್ಲಿ ವೈಶಿಯೂ ಊಟ ಮಾಡಿರಲಿಕ್ಕಿಲ್ಲ.... ಅವನಿಗೂ ಉಪವಾಸ.... ನನಗೂ ನನ್ನ ಹೆಂಡತಿಗೂ ಈ ಏಕಾದಶಿ / ದ್ವಾದಶಿಯೆಲ್ಲಾ ಹೊರಗುಳಿದ ಸಂದರ್ಭ.... ಉಪವಾಸವೂ ಸಹ... ಆದರೆ ಇದ್ದಿದ್ದು ಆಸ್ಪತ್ರೆಯಲ್ಲಿ.... ವಿಜಯಳ ಆರೋಗ್ಯ ಸ್ವಲ್ಪ ತಾಳ ತಪ್ಪಿದ್ದರಿಂದ... ಈ ಲೇಖನ ರೂಪುಗೊಂಡದ್ದು.. ಕರಡನ್ನು ಬರೆದದ್ದು ಆಸ್ಪತ್ರೆಯಲ್ಲೇ....  ಮನೆಗೆ ಹೋಗಲು ಅನುಮತಿಗಾಗಿ ಡಾಕ್ಟರನ್ನು ಕಾಯುತ್ತಾ..... ಕೃಷ್ಣ ಹುಟ್ಟಿದಾಗ ತುಂಬಾ ಜನಕ್ಕೆ ಸಂತೋಷ... ಸಂತೋಷದ ಭರದಲ್ಲಿ ಹಸಿವೆ ಕಾಡಿಲ್ಲ... ಹಾಗಾಗಿ ಉಪವಾಸ... ಇನ್ನು ಕೆಲವರು ಸಿಹಿ ತಿಂದು ಸಂಭ್ರಮಿಸಿದರು... ಅವರವರ ಭಾವಕ್ಕೆ ತಕ್ಕಂತೆ. ಉಪವಾಸಕ್ಕೂ ಏಕಾದಶಿಗೂ ವಿಶೇಷ ನಂಟು... ಚಾಂದ್ರಮಾನ ಪಂಚಾಂಗದ ಪ್ರಕಾರ ಏಕಾದಶಿ 11ನೇ ದಿನ.. ಅಂದು .....ವೈಜ್ಞಾನಿಕವಾಗಿ ಸಹ ತಿಳಿದಂತೆ .....ವಾತಾವರಣದಲ್ಲಿ ವಾಯು ಭಾರ(atmospheric prssure) ಕಡಿಮೆ ಇರುತ್ತದೆ... ಹಾಗಾಗಿ ಉಪವಾಸ ಮಾಡಿದಾಗ ಹಾಗೂ ಬರಬಹುದಾದ ನಿಃಶಕ್ತಿ ಕಡಿಮೆ ಸ್ತರದಲ್ಲಿ ಇರುತ್ತದೆ.  ...

ಅಳಿಯತನ, ಮಾವನ ಮನೆ, ದೀಪಾವಳಿ

Image
ಈ ವರ್ಷ ದೀಪಾವಳಿ ಹಬ್ಬದ ಆಚರಣೆ ನಮಗಿಲ್ಲ... ಅಣ್ಣ ಮತ್ತು ಅತ್ತಿಗೆ ತೀರಿಕೊಂಡ ಕಾರಣದಿಂದ. ಆದರೂ ಈ ದೀಪಾವಳಿ ನಮಗೆ ವಿಶೇಷವಾಗಿತ್ತು. ಮೊದಲನೆಯ ಕಾರಣ ನನ್ನ ಮಾವ ಶ್ರೀ ಎಚ್ ಪಿ ಕೃಷ್ಣಮೂರ್ತಿಯವರು, ಹಬ್ಬಕ್ಕೆ ಉಡುಗೊರೆಯಾಗಿ ಹಣವನ್ನು ನನ್ನ ಕೈಗೆ ಕೊಟ್ಟಿದ್ದು... ಮುಂಚಿನ ದಿನಗಳಲ್ಲಿ ಅವರ ಮಗಳ ಕೈಗೆ ಕೊಟ್ಟು ನನಗೆ ತಲುಪಿಸುತ್ತಿದ್ದರು. 96 ವರ್ಷದ ಹಿರಿಯರು ಬೆಳಿಗ್ಗೆಯೇ ಆಟೋ ಮಾಡಿಕೊಂಡು ಬಂದು... ಎಲ್ಲರಿಗೂ ಕೊಟ್ಟಾಯ್ತು ನಿನಗೆ ಮಾತ್ರ ಇನ್ನು ಕೊಟ್ಟಿಲ್ಲ... ಹಬ್ಬಕ್ಕೆ ಮುಂಚೆ ಕೊಡಬೇಡವೇ ಎಂದು ಹೇಳಿ...76 ವರ್ಷದ ನನಗೆ ಕೊಟ್ಟು ಹೋದದ್ದು ಅವರ ಪ್ರೀತಿಯ ದ್ಯೋತಕ. ಕೊಡುವ  ಹಿಂದಿನ ಭಾವ ಬಹು ಮುಖ್ಯ. ನಾನೂ ಒಬ್ಬ ಮಾವನಾಗಿ ಹೀಗೆ ಮಾಡಿಲ್ಲ. ಎರಡನೆಯದು, ಸೋಮವಾರ ಸಂಜೆ ನನ್ನ ಭಾವ ಮೈದುನ, ಕುಮಾರನ ( ಎಚ್ ಕೆ ಹರೀಶ್)  ಮನೆಯಲ್ಲಿ ಕಳೆದ ಕೆಲ ಗಂಟೆಗಳು. ನಮ್ಮ ಮಾವನವರ  ಜೊತೆಯಲ್ಲಿ..  ಅವರ ನಾಲ್ಕನೇ ತಲೆಮಾರಿನ...  ಅಭಿನವ ಶಂಕರ...(   ಸ್ನೇಹ ಳ ಮಗ)  ಪಟಾಕಿ ಹಚ್ಚಿದ್ದನ್ನು ನೋಡುವ ಸಂಭ್ರಮ.... ಅಭಿನವ ಶಂಕರನ ಮುದ್ದು ಮುದ್ದು ..ಜೊತೆಗೆ ತರಲೆಯ ಆಟ ಕಣ್ಣಿಗೊಂದು ಹಬ್ಬ....  ಇದಕ್ಕೆ ಕಾರಣ ಲಕ್ಷ್ಮಿ... ಆಗ್ರಹಪೂರ್ವಕವಾಗಿ ನಮ್ಮನ್ನು ಹಬ್ಬಕ್ಕೆ ಕರೆದು... ಸಂಭ್ರಮಿಸುವಂತೆ ಮಾಡಿ... ಪ್ರೀತಿಯಿಂದ ಉಡುಗೊರೆ ಕೊಟ್ಟು ಕಳಿಸಿದ್ದು. ಯಾವ ಪ್ರೇರಣೆಯೋ ಕಾಣೆ... ನನ್ನ ಮದುವೆಯಾದ 44...

ಕಾರ್ತಿಕ ಮಾಸ - ಕೈ ತುತ್ತು - ವನಭೋಜನ

Image
  ಕೆಲ ದಿನಗಳ ಹಿಂದೆ ಒಂದು ಕಾರ್ಯಕ್ರಮ... ಸಂಜೆ ಸ್ನೇಹಿತನ ಮನೆಯಲ್ಲಿ ಎಲ್ಲ ಸೇರಿದ್ದೆವು ಹರಟೆ ,ಆಟ, ನಂತರ ಇದ್ದದ್ದೇ ಊಟ...   ಊಟ ಮನೆಯಲ್ಲಿನ ಸಣ್ಣ ಕೈದೋಟದಲ್ಲಿ ಮಾಡಲು ತಯಾರಾದೆವು... ಇದ್ದ ಒಂದು ಮರ ಎನ್ನಬಹುದಾದ ದೊಡ್ಡಗಿಡ ಹಾಗೂ ಹೂ ಗಿಡಗಳು ಇವುಗಳ ಮಧ್ಯೆ ತಿಳಿ ಬೆಳಕಿನಲ್ಲಿ, ಕೈಯಲ್ಲಿ ತಟ್ಟೆ ಹಿಡಿದು ಹರಟೆ ಹೊಡೆಯುತ್ತಾ ಊಟ ಮಾಡಿದ್ದು ....ಒಂದು ಕೈ ಹೆಚ್ಚೇ..ತಿಂದದ್ದು. . ಮಾತಿನ ಮಧ್ಯೆ ಬೆಳದಿಂಗಳು ಇದ್ದರೆ ಚೆನ್ನಾಗಿರುತ್ತೆ ಅಂತ ಒಂದು ಚಿಂತನೆ... ಬೆಂಗಳೂರು ಬೆಳಕಲ್ಲಿ ಬೆಳದಿಂಗಳ ಸವಿ ಕಷ್ಟ .....ಎಲ್ಲ ದೀಪಗಳು ಆರಿ ಬೆಳದಿಂಗಳಿದ್ದರೆ ಚನ್ನಲ್ಲವೇ.. ಬೆಳದಿಂಗಳ ಊಟ ನೆನಪುಗಳನ್ನ ಮುಂದೆ ತಂತು. ದೊಡ್ಡಜಾಲದಲ್ಲಿ ನಾನಿದ್ದ ಸಮಯದಲ್ಲಿ ವಿದ್ಯುತ್  ಇಲ್ಲದ ಕಾಲ... ಬೆಳಕಿಗೆ ಒಂದು ಸೀಮೆಎಣ್ಣೆ ದೀಪ... ಸಂಜೆ ನನ್ನಪ್ಪ ದೀಪದ ಗಾಜನ್ನು ಬೂದಿ ಹಾಕಿ ಚೆನ್ನಾಗಿ ಒರೆಸಿ ಪಳ ಪಳ ಮಾಡಿ ದೀಪಕ್ಕೆ ಇಡುತ್ತಿದ್ದದ್ದು.... ಅದೇ ಬೆಳಕಿಗೆ ನಮ್ಮ ಜೀವನ ಹೊಂದಿಕೊಂಡಿತ್ತು...  ಹಾಗಾಗಿ ಬೆಳದಿಂಗಳು ಇರುವ ದಿನಗಳು ನಮಗೆ ಹೆಚ್ಚಿನ ಉತ್ಸಾಹ ಕೊಡುತ್ತಿದ್ದವು... ಆಗೆಲ್ಲ ತುಳಸಿ ಕಟ್ಟೆಯ ಹತ್ತಿರ ಕೈತುತ್ತು ಊಟ ನಮಗೆಲ್ಲಾ ಖುಷಿಯ ಸಂಗತಿ..... ಮೊದಲ ಕಾರಣ ಉಂಡತಟ್ಟೆಯನ್ನು ತೊಳೆಯುವ ಕೆಲಸದಿಂದ ತಪ್ಪಿಸಿಕೊಳ್ಳಬಹುದಲ್ಲ..... ಜೊತೆಗೆ ಅಜ್ಜಿ/ ಅಮ್ಮ ಏನೆಲ್ಲ ಸೇರಿಸಿ ಹದ ಮಾಡಿ ಕಲಸಿ ಹಾಕುತ್ತಿದ್ದ ಕೈತುತ್ತಿನ ರು...

ಪ್ರೇಮ..ಜ್ವರ..ಹಾಗೂ ನವಂಬರ್

Image
ಪ್ರೇಮದಲ್ಲಿ ಬಿದ್ದವರಿಗೆ, ಜ್ವರ ಬೇಗ ಕಾಣಿಸಿಕೊಳ್ಳುತ್ತಂತೆ.... ಇದು ಒಂದು ಅಭಿಪ್ರಾಯ.... ಇಲ್ಲೊಂದು ವಿಶಿಷ್ಟ ಜ್ವರ....ಸಾಮಾನ್ಯವಾಗಿ ಈ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುವುದು ಅಕ್ಟೋಬರ್ ಕೊನೆಯ ವಾರದಲ್ಲಿ.... ನವಂಬರ್ ಒಂದಕ್ಕೆ ತುತ್ತ ತುದಿಯನ್ನು ಮುಟ್ಟಿ... ನಂತರ ನಿಧಾನವಾಗಿ.... ಕ್ಷೀಣಿಸಿ ನವೆಂಬರ್ ಕೊನೆಗೆ ಇಳಿದು ಹೋಗುತ್ತೆ.  ಕರೋನಾದಂತೆ ಭಯಂಕರವಲ್ಲದಿದ್ದರೂ...  ಅದರಷ್ಟೇ ಬೇಗ ಹರಡುವ ಖ್ಯಾತಿಯನ್ನು ಹೊಂದಿದೆ. ಈ ಪ್ರೇಮ ಜ್ವರ ಕಾಣಿಸಿಕೊಂಡಿದ್ದು 1956 ರಲ್ಲಿ.. ಹಾಗೂ ಇದು ಪ್ರತಿ ವರ್ಷವೂ ತಪ್ಪದೇ , ಇದೇ ಸಮಯದಲ್ಲೇ ಕಾಣಿಸಿಕೊಳ್ಳುತ್ತಿದೆ.... ಇದುವೇ ಈ ಪ್ರೇಮ ಜ್ವರದ ವಿಶೇಷತೆ. ನಿಮಗೆ ಅರ್ಥವಾಗಿದೆ ಅನ್ಕೋತೀನಿ..... ಹೌದೂರಿ.... ಅದೇ ...ಅದೇ.... ಕನ್ನಡದ ಮೇಲಿನ ಪ್ರೀತಿಯ, ಅಭಿಮಾನದ "ಪ್ರೇಮ ಜ್ವರ".  ಇದು ಜಗದಲ್ಲೆಡೆ ನೆಲೆಸಿರುವ  ಕನ್ನಡಿಗರಿಗೆ/ ಕನ್ನಡದ ಅಭಿಮಾನಿಗಳಿಗೆ ಮಾತ್ರ ಬರುವ ಜ್ವರ.....ಅದೇ ಕನ್ನಡ ರಾಜ್ಯೋತ್ಸವದ ಜ್ವರ. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂದು ಬರೆದ ಹುಯಿಲಗೋಳ ನಾರಾಯಣರಾಯರ ಮನದಾಳದ ಆಸೆಯಂತೆ 1956 ರಲ್ಲಿ ಕನ್ನಡ ಮೂಲ ಭಾಷೆಯಾದ ಪ್ರದೇಶಗಳು ಒಂದುಗೂಡಿ ಕನ್ನಡ ನಾಡಿನ ಉದಯವಾಯಿತು..... ಹೆಸರಾಯಿತು ಕರ್ನಾಟಕ... ಉಸಿರಾಗಲಿ ಕನ್ನಡ ಎನ್ನುವ ಆಸೆ ಮಾತ್ರ ಇನ್ನೂ ಪೂರ್ಣವಾಗಿಲ್ಲ...ಸರ್ಕಾರದ ದೊಡ್ಡ ಅಧಿಕಾರಿಗಳೂ ಸಹ ಈ ವಿಚಾರದಲ್ಲಿ ನಿಷ್ಕ್ರಿಯರು...  ...

ಜೀವನ ಕಲಿಸಿದ ವ್ಯವಹಾರದ ಪಾಠಗಳು

Image
ದಸರಾ...ದೇಶಕ್ಕೆ... ಅದರಲ್ಲೂ ಕನ್ನಡ ನಾಡಿಗೆ ವಿಶೇಷ ಹಬ್ಬ.. ನಾಡ ಹಬ್ಬ ಸಹ. ಇದರ ಒಂದು ವಿಶೇಷ ಭಾಗ ಆಯುಧ ಪೂಜೆ... ನಾವು ಚಿಕ್ಕ ಕಾರ್ಖಾನೆಯನ್ನು ನಡೆಸುತ್ತಿದ್ದಷ್ಟು ದಿನವೂ ಆಯುಧ ಪೂಜೆಯನ್ನು ಆಚರಿಸಿದ್ದಿದೆ.... ಶುರುವಿನ ದಿನಗಳಲ್ಲಿ, ಹಣಕ್ಕಾಗಿ ಕಷ್ಟವಿದ್ದಾಗ ಪೂಜೆಯನ್ನು ಬಿಡದೆ ಕ್ಲುಪ್ತವಾಗಿ ಮಾಡಿ ಮುಗಿಸುತ್ತಿದ್ದೆವು. ಹಣಕ್ಕೆ ಪರದಾಡದೆ ಆಯುಧ ಪೂಜೆಯನ್ನು ಮಾಡುವ ಹಂತ ತಲುಪಲು ಸವೆಸಿದ ದಾರಿ ಬಹುದೀರ್ಘ, ಕಠಿಣ ಹಾಗೂ ಸವಾಲಿಂದ ಕೂಡಿತ್ತು. ಆ ಕಲಿಕೆ ಸುದೀರ್ಘವೂ ಮತ್ತು ದುಬಾರಿ ಖರ್ಚಿನದೂ ಆಗಿತ್ತು.  ಈ ಹಂತದಲ್ಲಿ ಆಯುಧ ಪೂಜೆ ನಿಜಕ್ಕೂ ಒಂದು ಸಂಭ್ರಮ.... ಎಲ್ಲ ಕೆಲಸಗಾರರಿಗೂ ಬಟ್ಟೆ, ಬೋನಸ್, (ಹಣ್ಣುಗಳು, ಸಿಹಿ ಹಾಗೂ ಹಣದ ಕವರನ್ನು ನಮ್ಮ ಕೆಲಸದವರಿಗೆ ಕೊಡುತ್ತಿದ್ದದ್ದು ನಮ್ಮಪ್ಪ- ಅವರಿರುವವರೆಗೂ) ಹಾಗೂ ಪೂಜೆಯ ದಿನ  ಬಂದ ಇಷ್ಟರು ಹಾಗೂ ಸ್ನೇಹಿತರು ಎಲ್ಲರೂ ಒಟ್ಟಿಗೆ ಸೇರಿ ಊಟ ಮಾಡುವುದು. ಇದೊಂದು ಸಂಪ್ರದಾಯದಂತೆ ಸುಮಾರು 30 ವರ್ಷಗಳ ಕಾಲ ಸತತವಾಗಿ ನಡೆಯಿತು. 70ರ ದಶಕದಲ್ಲಿ ಸಣ್ಣ ಕೈಗಾರಿಕೆಗಳ ಪ್ರಾರಂಭಕ್ಕೆ ಸರ್ಕಾರ, ಬ್ಯಾಂಕುಗಳಿಂದ ತುಂಬಾ ಪ್ರೋತ್ಸಾಹವಿತ್ತು. ಸಾಲಗಳನ್ನು ಸುಲಭವಾಗಿ ಕೊಡುತ್ತಾರೆ ಎನ್ನುವ ಒಂದು ಕಾರಣವೇ ಸಾಕಾಗಿತ್ತು... ನನ್ನ ಮನಸ್ಸಿಗೆ ಸಣ್ಣ ಕೈಗಾರಿಕೆ ಶುರು ಮಾಡಲು ಸಿಕ್ಕಿದ ಪ್ರೋತ್ಸಾಹ. ಆಗ ನನ್ನಲ್ಲಿ ಇದ್ದದ್ದು ಏನು ಬೇಕಾದರೂ ಸಾಧಿಸಬಲ್ಲೆ ಎಂಬ ಹುಮ್ಮಸ್ಸು... ಇದಕ್ಕೆ ಒಂದು ...

ಶಾಮಣ್ಣನ ಶತಾಭ್ಧಿ ಸಂಭ್ರಮ...

Image
ಹೋದ ಭಾನುವಾರ ನನ್ನ ಮಾವ ಶ್ರೀ. ಹೆಚ್. ಪಿ. ಕೃಷ್ಣಮೂರ್ತಿಯವರ 96 ನೇ ಹುಟ್ಟು ಹಬ್ಬದ  ಪ್ರಯುಕ್ತ ಅವರ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು, ಅಳಿಯಂದಿರು, ಸೊಸೆಯಂದಿರು...ಎಲ್ಲ ಒಟ್ಟಾಗಿ ಸೇರಿ UD Residency ಹೋಟೆಲ್ ನಲ್ಲಿ ಸಂಭ್ರಮಿಸಿದೆವು. ವಿಶೇಷ ಅಂದರೆ ನಮಗೆಲ್ಲಾ ಭರ್ಜರಿಯಾಗಿ ಭೋಜನ ಕೊಡಿಸಿದ್ದು ನಮ್ಮ ಮಾವ. ಸಾಮಾನ್ಯವಾಗಿ ಇದು ನಾವು ಮಾಡಬೇಕಾದ್ದು.....ಇನ್ನೊಂದು ವಿಶೇಷ...ಕೇಕ್ ಜೊತೆಗೆ...ನನ್ನ ನಾದಿನಿ ಮಣಿ ಕೈಯ್ಯಾರ ಮಾಡಿ ತಂದಿದ್ದ  ಹಾಲ್ ಬಾಯಿಯನ್ನು ಕತ್ತರಿಸಿ ಎಲ್ಲರೂ ತಿಂದಿದ್ದು.  ತಕ್ಕಮಟ್ಟಿನ ಹರಟೆ, photo session, ಪುಷ್ಕಳವಾದ ಊಟ, ಉಡುಗೊರೆ ಕೊಡುವುದು ಎಲ್ಲಾ  ಸಾಂಗೋಪಾಂಗವಾಗಿ ನಡೆಯಿತು.  ಅದರಲ್ಲಿ  ನನ್ನ ಮೊಮ್ಮಗಳು ವಿಸ್ಮಯ ಕೊಟ್ಟ greeting card  ಸಹ ಒಂದು.   ಈ greeting card ಮಾಡಲು ನನ್ನ ಮೊಮ್ಮಗಳ (ನನ್ನ  ಮಾವನ ಮರಿ ಮಗಳು) ತಯಾರಿ, ತಾತನ ಹೆಸರಿನ ಸ್ಪೆಲ್ಲಿಂಗ್ ಕೇಳಿ ಬರೆದದ್ದು, ಹೀಗೆ...ಉತ್ಸಾಹಕ್ಕೆ ಎಣೆಯಿರಲಿಲ್ಲ.... ಇದನ್ನು ನೋಡುತ್ತಾ...ನನ್ನ ನೆನಪಿಗೆ ಬಂದದ್ದು .. ನನ್ನಣ್ಣನ ಮೊಮ್ಮಗಳು... ಮುರಳಿಯ ಮಗಳು ಮಾಧುರಿ(ನಮ್ಮಪ್ಪನಿಗೆ ಮರಿ ಮಗಳು). ನಮ್ಮಪ್ಪನ 100 ನೇ ವರ್ಷದ ಹುಟ್ಟು ಹಬ್ಬದ ಸಮಯದಲ್ಲಿ, ನಾವು ಹೊರ ತಂದ ಸ್ಮರಣ ಸಂಚಿಕೆಗೆ ಮಾಧುರಿ ಬರೆದ ಲೇಖನ. ಒಂದಕ್ಷರವೂ ಬರೆಯಲು ಬರದ, ಆದರೆ ಬರೆಯುವ ಉತ್ಸಾಹ ತುಂಬಿದ.. ಮಗುವಿ...

ಎಮ್ಮೆ ಹಾಲು- ಮೊದ್ದುರಂಗ

Image
  "ಎಮ್ಮೆ ಹಾಲು ಕುಡಿದು ಕುಡಿದು ರಂಗ ಮೊದ್ದಾಗ್ತಾನೆ" ಇದು ನನ್ನ ಕೆಲ ಸ್ನೇಹಿತರು ನನಗೆ ಛೇಡಿಸುತ್ತಿದ್ದ ರೀತಿ. ನಾನು ಪಾಠ ಹೇಳಿಕೊಡಲು ಹೋಗುತ್ತಿದ್ದ ಆ ಮನೆಯ ಅಜ್ಜಿ ಕೊಡುತ್ತಿದ್ದ ಎಮ್ಮೆಯ ಹಾಲನ್ನು ಕುಡಿಯುತ್ತಿದ್ದದ್ದು ಸತ್ಯ... ಆದರೆ ನನ್ನ ಬುದ್ಧಿ ಮೊದ್ದಾಗಿತ್ತಾ.... ಅದು ಅವರ ಅಭಿಪ್ರಾಯ.... ನನ್ನದು ಅದೇ ಆಗಿರಬೇಕಿಲ್ಲ ಅಲ್ಲವೇ? ಪಾಠ ಹೇಳಿ ಕೊಡುವುದು ನನಗೆ ಚಿಕ್ಕಂದಿನಿಂದ ಬಂದ ಒಂದು ಹವ್ಯಾಸ... ನಾನು 5ನೇ ಕ್ಲಾಸಿನಲ್ಲಿ ಓದುತ್ತಿದ್ದಾಗಿನಿಂದ ನನ್ನ ಜೊತೆಯವರಿಗೆ / ನನಗಿಂತ ಚಿಕ್ಕವರಿಗೆ ಪಾಠ ಹೇಳಿ ಕೊಡುತ್ತಿದ್ದೆ.... ಅಂಥವರಲ್ಲಿ ನನ್ನೂರ ರಾಮದಾಸನೂ ಒಬ್ಬ. ಒಂದು ದಿನ ರಾಮದಾಸ ಕೈಯಲ್ಲಿ ಏನೋ ತೋರಿಸುತ್ತಾ ರಂಗಣ್ಣಾ.. ರಂಗಣ್ಣಾ.. ಎಂದು ಕೂಗಿದ... ಹತ್ತಿರ ಬಂದಾಗ ಅವನ ಕೈಯಲ್ಲಿ ಕಂಡದ್ದು ನಾಲ್ಕಾಣೆಯ ನಾಣ್ಯ. ಅದನ್ನು ನನಗೆ ಕೊಟ್ಟು... "ನಮ್ಮಮ್ಮ ಕೊಟ್ಟಳು... ನಿನಗೆ.... ಪಾಠ ಹೇಳಿ ಕೊಟ್ಟಿದ್ದಕ್ಕೆ..." ಅಂದ....  ನನಗೂ ಖುಷಿ... ತಂದು ನಮ್ಮಮ್ಮನಿಗೆ ಹೆಮ್ಮೆಯಿಂದ ತೋರಿಸಿ ಹೇಳಿದೆ.... ನಮ್ಮಮ್ಮನ ತಕ್ಷಣದ ಪ್ರತಿಕ್ರಿಯೆ.." ನಾಲ್ಕಕ್ಷರ ಹೇಳಿಕೊಟ್ಟು.. ದುಡ್ಡು ಇಸ್ಕೊಂಡ್ಯಾ... ರಂಗಪ್ಪಾ....." .. ಅಲ್ಲಿ ಅಸಮ್ಮತಿಯಿತ್ತು... ನಂತರ ತಿಳಿ ಹೇಳಿದ್ದು.... ನಾನು ಅರ್ಥ ಮಾಡಿಕೊಂಡಿದ್ದು....ಪಾಠ ಹೇಳಿಕೊಟ್ಟು ದುಡ್ಡು ತಗೋಬಾರದು ಅಂತ. ಅಂದಿನಿಂದ ಇದುವರೆಗೂ ಅದನ್ನು ಪಾಲಿಸಿಕೊಂ...

ದೇವಸ್ಥಾನದ ಊಟ - ಪ್ರಸಾದ

Image
ಹೋದ ಭಾನುವಾರ, ಕಲ್ಯಾಣಿ ತೋಟದ ರಾಯರ ಮಠದಲ್ಲಿ ಒಂದು ಸೀಮಂತ ಕಾರ್ಯಕ್ರಮ ಇತ್ತು... ಸಾಮಾನ್ಯವಾಗಿ ಸೀಮಂತ ಕಾರ್ಯಕ್ರಮದಲ್ಲಿ, ಗಂಡಸರಿಗೆ ಪ್ರಾಮುಖ್ಯತೆಯೇ ಇಲ್ಲ, ಊಟಕ್ಕೆ ಮಾತ್ರ ಲೆಕ್ಕ.  ನನಗೆ ತುಂಬಾ ಬೇಕಾದವರಾದ್ದರಿಂದ ನಾನು ಊಟಕ್ಕೇ ಹೋಗಿದ್ದೆ. ದೇವಸ್ಥಾನ, ರಾಯರ ಮಠ ಇಂಥ ಜಾಗಗಳಲ್ಲಿ ನೆಲದ ಮೇಲೆ, ಬಾಳೆ ಎಲೆ ಊಟ , ಹಾಗೂ ಉಡುಗೆ ತೊಡಿಗೆಯಲ್ಲಿ ಒಂದಷ್ಟು ಶಿಸ್ತು ಇರುತ್ತದೆ. ಆದರೆ ಇಲ್ಲಿ ಎರಡಕ್ಕೂ ಪ್ರಾಮುಖ್ಯತೆ ಇರಲಿಲ್ಲ... ಎಲ್ಲರಿಗೂ ಟೇಬಲ್ ಮೇಲೆ ಊಟ, ಅವರಿಷ್ಟ ಬಂದ ಉಡುಗೆ.  ಸ್ವಲ್ಪ ಆಶ್ಚರ್ಯ ಎನಿಸಿತು.. ಆದರೆ ಜಾಗ ಮಾಡಿಕೊಂಡು ಕುಳಿತುಕೊಳ್ಳುವ ಕಲೆ ಮಾತ್ರ  ಯಾವಾಗಿನಂತೆ ಇತ್ತು.  ಊಟ ಸೊಗಸಾಗಿತ್ತು... ಹಸಿವೆಯೂ ಜೊತೆಗೂಡಿತ್ತು... ಹೇಳಬೇಕೇ ಕಂಠಪೂರ್ತಿ ಉಂಡಿದ್ದಾಯ್ತು. ಮಾತಿನ ಮಧ್ಯೆ ನನ್ನ ಬ್ಲಾಗ್ ಬರವಣಿಗೆಯ ವಿಷಯ ಬಂತು... ಇಂದಿನ ಕಾರ್ಯಕ್ರಮದ ಬಗ್ಗೆ ಬ್ಲಾಗುಂಟಾ? ಎಂಬ ಪ್ರಶ್ನೆಯು ಎದುರಾಯಿತು.. ಆಗಿನ ನನ್ನ ಉತ್ತರ ...ಯಾವ ಸ್ಪೂರ್ತಿಯೂ ಇಲ್ಲ... ಆ ಕಾರ್ಯಕ್ರಮದ ಬಗ್ಗೆ ತಳಕು ಹಾಕುವ ನನ್ನ ಅನುಭವ / ನೆನಪು ಯಾವುದು ಗೋಚರಿಸುತ್ತಿಲ್ಲ .... ಆದರೆ ತಲೆಯಲ್ಲಿ ಹುಳಕೊರೆಯಿತು.... ದಾರಿಯೂ ಕಾಣಿಸಿತು ಹಾಗಾಗಿ ಈ ಲೇಖನ... ನನ್ನ ನೆನಪಿನಾಳದಿಂದ ಕೆದಕಿದಾಗ... ಮೊದಲ ದೇವಸ್ಥಾನದ ಸಾರ್ವಜನಿಕ ಊಟ ಮಾಡಿದ್ದು ಜಾಲದ ಅಕ್ಕಯ್ಯಮ್ಮನ ಬೆಟ್ಟದ ತಪ್ಪಲಿನಲ್ಲಿ ನಡೆದ ಪರ್ವದಲ್ಲಿ.  ನಮ್ಮಪ್ಪನ ಜೊತೆಯ...

ಬಾಲ್ ಗ್ಲ್ಯಾಡರ್ ನಲ್ಲಿ ಕಲ್ಲು

Image
"ವಿಧಿ ಬರೆದ ಬರಹವ ತಪ್ಪಿಸಲು ಹರಿಹರ ವಿರಿಂಚಾದ್ಯರಿಗೆ ಸಾಧ್ಯವೇ.. ನಮ್ಮ ಪಾಡೇನು" ಇದು ಮಾಧ್ಯಮಿಕ ಶಾಲೆಯಲ್ಲಿ ನಾನು ಓದಿದ ನಳ ಚರಿತ್ರೆಯ ಒಂದೆರಡು ಸಾಲು.... ಹಣೆ ಬರಹಕ್ಕೆ ಹೊಣೆಯಾರು ? ಅನ್ನುವುದು ಒಂದು ಮಾತು.... ಈ ಮಾತುಗಳು ನಾವು ಉಪಯೋಗಿಸುವುದು ನಮ್ಮೆಲ್ಲ ಪ್ರಯತ್ನಗಳು ಮುಗಿದು ನಮಗೆ ಬೇಕಾದ ಗುರಿಯನ್ನು ಮುಟ್ಟಲು ಸಾಧ್ಯವಾಗದಿದ್ದಾಗ ಹೇಳುವ ಮಾತು.  ಅದು ಸಾಂತ್ವನ ಮಾಡುವ / ಮಾಡಿಕೊಳ್ಳುವ ವಿಧಾನದ ಕೊನೆಯ ಮಜಲು ಅಂತ ನನ್ನ ಅನಿಸಿಕೆ..ಹಾಗೂ ಆಪ್ತಸಮಾಲೋಚಕನಾಗಿ ನನ್ನ ಅನುಭವ. ಹಣಕಾಸಿನ ಕಷ್ಟ, ದೈಹಿಕ ಕಷ್ಟ ಇದಕ್ಕೆ ಪರಿಹಾರ ಹುಡುಕುವುದು ಅಷ್ಟು ಕಷ್ಟವಲ್ಲ... ಆದರೆ ಮಾನಸಿಕ ಕಷ್ಟಕ್ಕೆ ಪರಿಹಾರ ಅಷ್ಟು ಸುಲಭವಲ್ಲ... ಇಂಥ ಸಮಯದಲ್ಲಿ ಎಲ್ಲಾ ವೈರುಧ್ಯಗಳೊಡನೆ ಮನಸ್ಸಿನ ಸಮತೋಲನ ಕಾಪಾಡಿಕೊಳ್ಳುವುದು ಒಂದು ಸವಾಲೇ ಸರಿ.. ಒಂದು ದಶಕದ ಹಿಂದಿನ ಮಾತು... ನನಗೂ ಹೀಗೆ ಅನಿಸಿತ್ತು.... ಒಂದು ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದು.. ನೆರೆದಿದ್ದ ಒಂದಷ್ಟು ಜನರ ಜೊತೆ ಹರಟೆ ಹೊಡೆದು ಕೊಟ್ಟ ಸಿಹಿಯನ್ನು ತಿಂದು... ಎಲ್ಲರನ್ನೂ ಕಳಿಸಿಯಾದ ಮೇಲೆ... ಸ್ವಲ್ಪ ಹೊತ್ತಿನಲ್ಲೇ ಏನೋ ಕಿರಿಕಿರಿ, ಹೊಟ್ಟೆಯ ಮೇಲಿನ ಹಾಗೂ ಎದೆ ಕೆಳಗಿನ ಜಾಗದಲ್ಲಿ ಸ್ವಲ್ಪ ನೋವು... ಬರುಬರುತ್ತ ಆ ನೋವು ಜಾಸ್ತಿ ಆಯ್ತು, ಸಾಮಾನ್ಯವಾಗಿ ಇಂಥ ನೋವುಗಳಿಗೆ ನಾನು ಅಷ್ಟು ಪ್ರಾಮುಖ್ಯತೆ ಕೊಡುವುದಿಲ್ಲ.. ಆದರೆ ಆಗಿನ ನೋವು ತಾರಕ ಮುಟ್ಟುತ್ತಿತ್ತು... ತಡೆ...

ಗಣೇಶ ಬಂದ ಕಾಯ್ ಕಡುಬು ತಿಂದ

Image
  ಗಣೇಶ ಬಂದ ಕಾಯ್ ಕಡುಬು ತಿಂದ  ಹೊಟ್ಟೆ ಮೇಲೆ ಗಂಧ,  ಚಿಕ್ಕ ಕೆರೇಲ್ಬಿದ್ದ ದೊಡ್ಡ ಕೆರೇಲಿ ಎದ್ದ... ಇದು ನಾವು ಗಣೇಶನಿಗೆ ಹೇಳುತ್ತಿದ್ದ ಪದ... ಯಾಕೆ ಚಿಕ್ಕ ಕೆರೆಯಲ್ಲಿ ಬಿದ್ದ, ದೊಡ್ಕೆರೇಲೀ ಎದ್ದ.. ಇವತ್ತೂ ಗೊತ್ತಿಲ್ಲ.  ಸಾಮಾನ್ಯವಾಗಿ ಹಬ್ಬ ಅಂದ್ರೆ ಎರಡು ಕಾರಣಕ್ಕೆ ಖುಷಿ ಒಂದು ಶಾಲೆ ಇಲ್ಲ ಮಜಾ, ಎರಡು ಹಬ್ಬದ ಊಟ... ಗಣೇಶನ ಹಬ್ಬ ಅಂದ್ರೆ ಕಡುಬು,ಚಿಗಳಿ, ತಂಬಿಟ್ಟು... ಹಿಂದಿನ ದಿನ ಗೌರಿ ಹಬ್ಬದ ಪ್ರಯುಕ್ತ ಮಾಡಿದ ಒಬ್ಬಟ್ಟು... ಹೀಗೆ ತಿನ್ನುವುದೇ ಒಂದು ಮೋಜು.. ಗಣೇಶನ ಹಬ್ಬದ ಸಂಭ್ರಮ, ಗೌರಿ ಪೂಜೆಯಿಂದ ಶುರು... ಗೌರಿ ಪೂಜೆಗೆ ಮಣ್ಣನ್ನು ಊರ ಕೆರೆಯಿಂದ ಸಂಗ್ರಹಿಸಿ ತರುವ ಒಂದು ಸಂಪ್ರದಾಯ... ಇದು ಓಲಗ ಬಾಜಾ ಭಜಂತ್ರಿ ಯೊಂದಿಗೆ ಊರ ಮುಖ್ಯರಸ್ತೆಯ ಮೂಲಕ ಕೆರೆಗೆ ಹೋಗಿ ಪೂಜೆ ಮಾಡಿ, ಅಲ್ಲಿಂದ ತಂದ ಮಣ್ಣಿನ ಗೌರಿ(? ಇಲ್ಲಿ ನನಗೆ ಸಂಪೂರ್ಣ ಮಾಹಿತಿ ಇಲ್ಲ)ಯನ್ನು ಪೂಜೆ ಮಾಡುವುದು ನಮ್ಮನೆಯಲ್ಲಿ ಚಾಚೂ ತಪ್ಪದೆ ನಡೆಯುತ್ತಿತ್ತು.. ಆ ದಿನಗಳಲ್ಲಿ ಮಳೆ ಸಾಮಾನ್ಯ..  ಕೆರೆಗೆ ಹೋದಾಗೆಲ್ಲ ಮಳೆ ಹನಿಯಲ್ಲಿ ನೆಂದ ನೆನಪಿದೆ.  ಇನ್ನು ಗಣೇಶನ ವಿಗ್ರಹ ಮಾಡಿಕೊಡುವುದು ನಮ್ಮ ಸುಬ್ಬಣ್ಣಯ್ಯ ( ಸಕಲ ಕಲಾವಲ್ಲಭ ಸುಬ್ರಾಯಾಚಾರ್). ಗಣೇಶನ ಹಬ್ಬದ ದಿವಸವೇ ವಿಗ್ರಹಕ್ಕೆ ಬಣ್ಣ ಹಚ್ಚುವ ಕೆಲಸ ಮುಗಿಯುತ್ತಿದ್ದದ್ದು... ಅದರೊಳಗೂ ಗಣೇಶನ ಕಣ್ಣುಬರೆಯಲು ಸುಬ್ಬಣ್ಣಯ್ಯನೇ ಆಗಬೇಕು.  ಸುಬ್ಬಣ್ಣಯ್ಯನ ಮಕ್...

ಪಂಚವಟಿಯಲ್ಲಿ ...ಕೃಷ್ಣ...

Image
  ಹೋದ ಭಾನುವಾರ ವೈಯಕ್ತಿಕ ಕಾರ್ಯನಿಮಿತ್ತ ಮೈಸೂರಿಗೆ ಹೋಗಬೇಕಾಗಿತ್ತು... ಸಾಮಾನ್ಯವಾಗಿ ಮೈಸೂರಿಗೆ ಹೋದಾಗ ಅಣ್ಣನ ಮನೆಯಲ್ಲಿ( ಸತ್ತಿ ಸರ್) ಊಟ ಉಪಚಾರ... ಆದರೆ ಈ ಬಾರಿ ಅತ್ತಿಗೆ ಊರಲ್ಲಿರದ ಕಾರಣ ಹೋಟೆಲ್ ಗೆ ಹೋಗುವುದೆಂದು ಮೊದಲೇ ನಿರ್ಧಾರವಾಗಿತ್ತು. ಹಾಗಾಗಿ ನಾವು ಊಟಕ್ಕೆ ಬಂದಿದ್ದು ಪಂಚವಟಿಗೆ... ವಾತಾವರಣ / ಪರಿಸರ ಚೆನ್ನಾಗಿತ್ತು... ಒಳಗೆ ಹೋದಾಕ್ಷಣ ಕಣ್ಣಿಗೆ ಕಂಡದ್ದು ಸುಂದರವಾದ ಕೃಷ್ಣನ ವಿಗ್ರಹ. ಊಟಕ್ಕೆ ಕೂತಾಗ ಮತ್ತೊಮ್ಮೆ ಅದೇ ವಿಗ್ರಹ ಕಣ್ಣಿಗೆ ಬಿತ್ತು... ಆಗ ಬಂದ ಯೋಚನೆ ಪಂಚವಟಿಗೂ ಕೃಷ್ಣನಿಗೂ ಹೇಗೆ ಸಂಬಂಧ??.... ನನ್ನ ರಾಮಾಯಣ ಮಹಾಭಾರತದ ಜ್ಞಾನಕ್ಕೆ ಹಾಗೂ ನನ್ನ ಬುದ್ಧಿವಂತಿಕೆಗೆ ನಾನೇ ಮೆಚ್ಚಿಕೊಂಡೆ.. ಹೇಳಿಕೊಂಡೆ ಪಂಚವಟಿಯಲ್ಲಿ ಕೃಷ್ಣ ಹೇಗೆ.... ಅದು ರಾಮಾಯಣದ ರಾಮ ಸೀತೆ ಲಕ್ಷ್ಮಣ ಇದ್ದ ಜಾಗ.... ಕಬ್ಬಿಣದ ಅಂಗಡಿಯಲ್ಲಿ ನೊಣಕ್ಕೇನು ಕೆಲಸ... ತಕ್ಷಣ ಇನ್ನೊಂದು ಮನಸ್ಸು ಹೇಳಿತು.. ಅಯ್ಯಾ.. ರಂಗನಾಥ ಪಂಚವಟಿ ಹೋಟೆಲ್ ನ ಹೆಸರು... ಕೃಷ್ಣ.... ದೇವರ ವಿಗ್ರಹ.. ಬಹುಶಃ ಹೋಟೆಲ್ ಯಜಮಾನರ ಆರಾಧ್ಯ ದೈವ ಇರಬಹುದಲ್ಲವೇ..???. ಯೋಚಿಸಬೇಕಾದ್ದೆ...  ಸಾಮಾನ್ಯವಾಗಿ ಅಚ್ಚ ಸಸ್ಯಾಹಾರಿ ಹೋಟೆಲ್ ನಡೆಸುವ ಕಲೆ ಉಡುಪಿ ಮಂಗಳೂರು ಕಡೆಯವರಿಗೆ ಕರಗತವಾಗಿದೆ... ಸಹಜವಾಗಿ ಉಡುಪಿ  ಕೃಷ್ಣ.. ಪೊಡವಿಗೊಡೆಯ... ಅವರಿಗೆ ಅಚ್ಚುಮೆಚ್ಚು... ಅದಲ್ಲದೆ ಹೆಸರು ಅವರ ಇಷ್ಟಕ್ಕೆ ಸಂಬಂಧಪಟ್ಟವಿಷಯ..ಅವರ ಆಯ್ಕೆ... ಅದ...