Posts

ಹಿಂದು ಮುಂದಾದರೂ ಒಂದಾಗಬೇಕು

Image
ಇದೀಗ ಬಂದ ಸುದ್ದಿಯಲ್ಲಿ ಕಾಶ್ಮೀರದಲ್ಲಿ... ಹಿಂದುಗಳನ್ನೇ ಗುರುತಿಸಿ ಕೊಲ್ಲುವಾಗ.... ಉಗ್ರರು ಯಾವ ಜಾತಿಯೆಂದು ಯಾರನ್ನೂ ಕೇಳಲಿಲ್ಲ...  ಹಿಂದುಗಳೆಂದು ಮಾತ್ರ ಗುರುತಿಸಿ ಗುಂಡಿಕ್ಕಿದ್ದು .   ಅಲ್ಲಿಗೆ ಜಾತಿ ಜಾತಿ ಎಂದು ನಮ್ಮಲ್ಲೇ ನಾವು ಕಚ್ಚಾಡುತ್ತಿರುವ... ಅದನ್ನೇ ದಾಳವಾಗಿ ಉಪಯೋಗಿಸಿಕೊಂಡು ತಮ್ಮ ಕುರ್ಚಿಯನ್ನು ಭದ್ರ ಮಾಡಿಕೊಳ್ಳುವ ದುರುಳ ರಾಜಕಾರಣಿಗಳ ಹುನ್ನಾರದಿಂದ ಹೊರಬರಲು ಇನ್ನಾದರೂ ನಿರ್ಧಾರ ಮಾಡಬೇಕು. ಈಗಲಾದರೂ ನಾವು ಜಾತಿ ಪಂಗಡಗಳಿಂದ ಹೊರಬಂದು ನಾವೆಲ್ಲಾ ಹಿಂದುಗಳು ಎಂಬ ಭಾವನೆಯಿಂದ ಒಂದುಗೂಡಿದರೆ ಮಾತ್ರ, ನಾವೆಲ್ಲರೂ ಹಾಗೂ ನಮ್ಮ ಮುಂದಿನ ಪೀಳಿಗೆಯವರು ಸುರಕ್ಷತೆಯಿಂದ ಇರಬಹುದು.  ಕೋಟ್ಯಾಂತರ ರೂಪಾಯಿಗಳನ್ನು ಗಳಿಸಿ ಆಸ್ತಿ ಮಾಡಿ ಅದನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋದರೆ, ನಾವಂದುಕೊಂಡಂತೆ ಅವರು ಅದನ್ನು ಅನುಭವಿಸಿಕೊಂಡು ಸುಖವಾಗಿರಲಾರರು. ಅದನ್ನು ದುರುಳ ಉಗ್ರವಾದಿಗಳು ಕಿತ್ತುಕೊಂಡು, ಮತಾಂತರ ಮಾಡಿ, ಒಪ್ಪದಿದ್ದರೆ ಕೊಂದು, ಹೆಣ್ಣು ಮಕ್ಕಳನ್ನು ಅವಮಾನಿಸಿ, ಹಿಂಸಿಸಿ ಅವರನ್ನು ಹೊತ್ತೊಯ್ಯುತ್ತಾರೆ. ಇದನ್ನು ತಪ್ಪಿಸಬೇಕೆಂದರೆ, ನಾವೆಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಹೋರಾಡಿ ಆ ದುರುಳ ಸಂತತಿಯನ್ನು ಎದುರಿಸಿ, ಅವರ ಶಕ್ತಿಯನ್ನು ನಿರ್ನಾಮ ಮಾಡುವುದೊಂದೇ ದಾರಿ.  ಈಗಿನ ದಿನಗಳಲ್ಲಿ ಯಾವುದೇ ಮಾಧ್ಯಮದಲ್ಲಿ ನೋಡಿದರೂ ದೇಶದಲ್ಲಿ ನಡೆಯುತ್ತಿರುವ ಗಲಭೆಗಳ ಬಗ್ಗೆಯೇ ಕಾಣುತ್ತೇವೆ. ಅದರಲ...

ಚರಮಗೀತೆ - ಬಿನ್ನವತ್ತಳೆ

Image
ನಾನು ಬರೆದ ಬ್ಲಾಗ್ ನ ಲೇಖನಗಳಿಗೆ ಭೇಷ್ ಎನ್ನುವ ಪ್ರತಿಕ್ರಿಯೆಗಳು ಬಂದಾಗ ಸಹಜವಾಗಿ ಖುಷಿಯಾಗುತ್ತದೆ. ಕೆಲವರು ಸಲಹೆ/ ಸೂಚನೆಗಳನ್ನು ಕೊಟ್ಟಿದ್ದಾರೆ,  ಅವುಗಳಲ್ಲಿ ಕೆಲವನ್ನು ಅಳವಡಿಸಿಕೊಂಡಿದ್ದೇನೆ. ನನ್ನ ಮಾವನ ಬಗ್ಗೆ ಬರೆದ ಲೇಖನಕ್ಕೆ ಬಂದದ್ದು ವಿಶೇಷ ಪ್ರತಿಕ್ರಿಯೆ, ನನ್ನ ಸ್ನೇಹಿತ ಶಿವನಿಂದ (ಕೆ. ಎನ್. ಶಿವಶಂಕರ). ನನಗೆ ಮಾವನಾಗುವುದಕ್ಕೂ ಮುಂಚೆ... ನಾನು ಹಾಗೂ ಶಿವ, ಅವರ ಮನೆಯ ಮುಂದೆ ತಾಳ ಹಾಕಿಕೊಂಡು ಜೋರಾಗಿ ಹಾಡಿದ " ಸರ್ವ ಮಂಗಳನಾಮ ಸೀತಾರಾಮ" ಹಾಡಿಗೆ ಅವರ ಸಿಡುಕು ಎಂದು ಹೇಳಬಹುದಾದ ಪ್ರತಿಕ್ರಿಯೆ  "ಏನದು ಮನೆ ಮುಂದೆ ಇದೆಲ್ಲ.. ನಿಲ್ಸಿ". ನಾವು ಬೈಸಿಕೊಂಡೆವೇನೋ ಎಂಬಂತೆ ಸಪ್ಪಗಾಗಿದ್ದು ಸತ್ಯ. ಈ ವಿಷಯ ಯಾಕೆ ಬರೀಲಿಲ್ಲ ಅಂತ ಶಿವನ ಪ್ರಶ್ನೆ... ಯಾಕೆ ಬರೀಲಿಲ್ಲ ಅಂತ ನನಗೆ ನಾನೇ ಪ್ರಶ್ನೆ ಮಾಡಿಕೊಂಡಾಗ ಅನ್ನಿಸಿದ್ದು... ಪ್ರಾಯಶಃ ನಾನು ಮಾವ ಕೃಷ್ಣಮೂರ್ತಿಯವರ ಬಗ್ಗೆ ಮಾತ್ರ ಯೋಚಿಸಿದ್ದಿರಬಹುದಾ? ಅಥವಾ ಸತ್ತವರ ಬಗ್ಗೆ ಯಾಕೆ ಈ ಕಹಿ ಘಟನೆಯ ನೆನಪು ಎಂದಿರಬಹುದಾ? ನಾ ಹೇಳಲಾರೆ... ಯಾಕೆಂದರೆ ಇದು ಘಟನೆಯ ನಂತರದ ವಿಶ್ಲೇಷಣೆ.(postmortem). ಖಾಸಗಿ ಮಾತು ಕಥೆಗಳಲ್ಲಿ, ಏನೇ ವಿಷಯ ಮಂಥನಗಳು ನಡೆಯಲಿ, ಸಾರ್ವಜನಿಕ ವಾಗಿ, ಸತ್ತವರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುವುದು ಲೋಕ  ನಿಯಮವೇ ಎಂದು ಹೇಳಬಹುದು. ಹಾಗಾಗಿ ಎಲ್ಲರೂ ಸತ್ತವರ ಒಡನಾಟದ ಕೆಲ ಸುಂದರ ಕ್ಷಣಗಳನ್ನು ನೆನೆದು ಅದನ್ನು ಹಂಚಿಕೊಳ್ಳು...

ಸೋಲು - ಸವಾಲು

Image
“ದೇವರೇ ನನ್ನ ಮಗನ ಕಷ್ಟ ಪರಿಹಾರ ಮಾಡಪ್ಪ”  ಅನ್ನುವ ಒಂದು ಪ್ರಾರ್ಥನೆಯೇ ಲಕ್ಷಮ್ಮನ ದೈನಂದಿನ ಕೆಲಸದ ದೊಡ್ಡ ಭಾಗವಾಗಿತ್ತು. ಈಚಿನ ದಿನಗಳಲ್ಲಿ ಮಗನ ಚಿಂತೆಯಲ್ಲೇ ದಿನ ಕಳೆಯುವುದಾಗಿತ್ತು. ಏನು ಮಾಡಲೂ ದಿಕ್ಕು ತೋಚದು... ಸುಮ್ಮನಿರಲೂ ಆಗದು. ಚಿಕ್ಕವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡ ಮೂರು ಮಕ್ಕಳ ತಾಯಿ ಲಕ್ಷಮ್ಮ, ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ, ಹೇಗೋ ಜೀವನವನ್ನು ಸಾಗಿಸುತ್ತಾ ಮಕ್ಕಳನ್ನು ದೊಡ್ಡದು ಮಾಡಿದವರು. ಎಲ್ಲರನ್ನೂ ಒಂದು ಹಂತಕ್ಕೆ ತಂದು, ಎಲ್ಲ ಮಕ್ಕಳಿಗೂ ಮದುವೆ ಮಾಡಿ, ಜವಾಬ್ದಾರಿಗಳನ್ನು ಮುಗಿಸಿದವರು.  ಮಕ್ಕಳ ಸಲಹೆಯಂತೆ, ಸಂಪಾದನೆ ಮಾಡುವ ಎಲ್ಲ ಕೆಲಸಗಳನ್ನು ಬಿಟ್ಟು, ನಿರಾಳವಾಗಿ ಕಾಲ ಕಳೆಯಬೇಕು ಎಂಬ ನಿರ್ಧಾರ ಮಾಡಿ, ಚಿಕ್ಕ ಮಗ ಮಾಧವನ ಹೊಸ ಸಂಸಾರದೊಂದಿಗೆ ಜೀವನ ಶೈಲಿಯನ್ನು ಹೊಂದಿಸಿಕೊಂಡು, ಕೆಲಸಕ್ಕೆ ಹೋಗುವ ಸೊಸೆಗೂ ಬೇಕಾದ  ಊಟ ತಿಂಡಿಗಳನ್ನು ಮಾಡಿಕೊಡುತ್ತಾ ಹೆಜ್ಜೆ ಹಾಕುತ್ತಿದ್ದರು.   ಹೊಸ ದಂಪತಿಗಳು ಜೊತೆ ಜೊತೆಯಲ್ಲಿ ಓಡಾಡುವುದನ್ನು ನೋಡಿ ಸಂತೋಷಕ್ಕೆ ಪಾರವೇ ಇಲ್ಲದಂತೆ ಸಂಭ್ರಮಿಸುತ್ತಿದ್ದರು. ಕಾಲ ಸರಿದಂತೆ ಮಗ ಸೊಸೆ ಮಧ್ಯೆ ಎಲ್ಲವೂ ಚೆನ್ನಾಗಿಲ್ಲವೇನೋ ಅನ್ನಿಸತೊಡಗಿತು. ಮುಂದುವರಿದಂತೆ ಅದು ಪ್ರಕಟಗೊಳ್ಳಲು ಶುರುವಾಯಿತು... ಅದರ ಪರಿಣಾಮ ಲಕ್ಷಮ್ಮನ ಮನಸ್ಸಿನಲ್ಲಿ ಆತಂಕ ಮೂಡಿತು. ಸೊಸೆ ತನ್ನ ಬಗ್ಗೆ ಗೌರವದಿಂದ ನಡೆದುಕೊಂಡರೂ.... ಮಗನ ಜೊತೆ ಎಲ್ಲವೂ ಸರಿ ಇಲ್ಲದಿದ...

ಅಂತ್ಯ- ನಿರಂತರ - ಯುಗಾದಿ

Image
  ಹೆಣ್ಣು ಕೊಟ್ಟ ಮಾವ ಕಣ್ಣು ಕೊಟ್ಟ ದೈವ  ಎರಡು ಸಮಸಮ ಎನ್ನುವುದೊಂದು ಭಾವ . ಇಹಲೋಕದ ವ್ಯಾಪಾರ ಮುಗಿಸಿ ಹೊರಟಿತು ಆ ಜೀವ.. ಆ ಆತ್ಮಕ್ಕೆ ಸದ್ಗತಿಯನ್ನು ತಕ್ಷಣವೇ ಕರುಣಿಸೋ ಓ ದೇವ. ಮಾರ್ಚ್ 27ರಂದು,  ನಮ್ಮನ್ನು ಅಗಲಿದ ನನ್ನ ಮಾವ 97 ವರ್ಷದ ಹಿರಿಯ ಚೇತನ H P ಕೃಷ್ಣಮೂರ್ತಿಯವರ ಸಾವಿನ ಕ್ಷಣದಲ್ಲಿ ನನ್ನೊಳಗೆ ಮೂಡಿದ್ದು, ಮೇಲಿನ  ಸಾಲುಗಳು.  ಮೂರು ಘಂಟೆಯ ಅವಧಿಯಲ್ಲಿ ಅವರ ಆರೋಗ್ಯದಲ್ಲಿ  ತುಂಬಾ ವೇಗದಿಂದ ಆದ ಬದಲಾವಣೆಗಳು, ನಮ್ಮನ್ನೆಲ್ಲ ಸ್ವಲ್ಪ ಆತಂಕಕ್ಕೆ ದೂಡಿದ್ದು ಸಹಜ ಸತ್ಯ.    ಸುಮಾರು 1967 ರಿಂದ,  ನನಗೆ ಅವರ ಪರಿಚಯ. ಮಾವನಾದದ್ದು 1979ರಲ್ಲಿ.  ಅವರ ಅಣ್ಣನ  (ದೊಡ್ಡಪ್ಪ ಎಂದು ಕರೆಯುತ್ತಿದ್ದ ಎಚ್ ಪಿ ನರಸಿಂಹಮೂರ್ತಿಯವರು.. ) ಜೊತೆಯಲ್ಲಿದ್ದ ಬಾಂಧವ್ಯ, ಒಟ್ಟಾಗಿ ಸಂಸಾರದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದ ರೀತಿ, ತಂಗಿಯರು, ತಮ್ಮ ಹಾಗೂ ಮಕ್ಕಳ ಓದು, ಮದುವೆ, ಬಾಣಂತನ.. ಹೀಗೆ ಎಲ್ಲವನ್ನು ತಮಗಿದ್ದ ಸಂಪಾದನೆಯಲ್ಲಿ ನಿಭಾಯಿಸಿದ ರೀತಿ, ನಾನು ತುಂಬಾ ಅಭಿಮಾನದಿಂದ ಹಾಗೂ ಮೆಚ್ಚುಗೆಯಿಂದ ನೆನೆಯುತ್ತೇನೆ. ಅದರಲ್ಲೂ ಇಬ್ಬರು ಅಣ್ಣ ತಮ್ಮಂದಿರಲ್ಲಿದ್ದ ಪರಸ್ಪರ ಗೌರವ ನಂಬಿಕೆ ಹಾಗೂ ಒಮ್ಮ ಸಮ್ಮತ ಈಗಿನ ಕಾಲಕ್ಕೆ ಒಂದು ಉದಾಹರಣೆಯೇ ಸರಿ.   ತಮ್ಮ 48ನೆಯ ವಯಸ್ಸಿನಲ್ಲೇ ಮಡದಿಯನ್ನು ಕಳೆದುಕೊಂಡ ಅವರು ನಂತರದ ಇಡೀ ಜೀವನವನ್ನು ಮಕ್ಕಳ ಹಾಗೂ ಸಂ...

ಭಿತ್ತಿಪತ್ರ-ಗೋಡೆ ಬರಹ

Image
  ಕೂಗುಮಾರಿ ಬಂದು ಬಾಗಿಲು ಬಡಿತಾಳೆ, ತಕ್ಷಣ ಬಾಗಿಲು ತೆಗೆದು ಅವಳನ್ನು ನೋಡಿದರೆ, ರಕ್ತಕಾರಿ ಸಾಯೋದು ಖಚಿತ. ಅದನ್ನ ತಪ್ಸೋಕೇ ಬಾಗಿಲ ಮೇಲೆ ಮೂರು ನಾಮ ಬರೆದು ನಾಳೆ ಬಾ ಎಂದು ಜೊತೆಗೆ ಸೇರಿಸಿದರೆ.. ಕೂಗು ಮಾರಿ ಅದನ್ನು ಓದಿ ನಾಳೆ ಬರೋಣ ಅಂತ ಹೋಗ್ತಾಳೆ,  ನಾಳೆ ಮತ್ತದೇ, ಹಾಗಾಗಿ ಸಾಯೋದು ತಪ್ಪುತ್ತೆ.  ಇದು ಚಿಕ್ಕಂದಿನಲ್ಲಿ ಕೇಳಿದ್ದ ಒಂದು ಸುದ್ದಿ . ಹಾಗಾಗಿ ಎಲ್ಲರ ಮನೆಯ ಬಾಗಿಲ ಮೇಲೆ ಇದು ಬರೆದದ್ದನ್ನು ನೋಡಿದ್ದೇನೆ... ನಮ್ಮ ಮನೆಯ ಬಾಗಿಲ ಮೇಲೂ  ಬರೆದದ್ದನ್ನು ಈಗ ನೆನೆದು ನಕ್ಕಿದ್ದೇನೆ. ಇದು ನೆನಪಾಗಲು ಕಾರಣವೇನೋ ಗೊತ್ತಿಲ್ಲ.. ಹಾಗೇ ಮನಸ್ಸಿಗೆ ಬಂತು... ಅದರ ಹಿಂದೆಯೇ ನೆನಪಿನ ಸರಮಾಲೆ. ಬಹಳ ಜನಕ್ಕೆ ವಿಷಯವನ್ನು ತಿಳಿಸಬೇಕಾದಾಗ ಅದನ್ನು  ಗೋಡೆಯ ಮೇಲಿನ ಬರಹ ಅಥವಾ ಗೋಡೆಗೆ ಅಂಟಿಸಿದ ಚೀಟಿಯ ಮೂಲಕ ಮಾಡುತ್ತಿದ್ದದ್ದು ರೂಢಿಗತ. ಅದಕ್ಕೂ ಮೊದಲು, ಓದು ಬರಹ ಬರದ ಜನ ಜಾಸ್ತಿ ಇದ್ದಾಗ, ಈ ವಿಚಾರಗಳನ್ನು ಡಂಗುರದ ಮೂಲಕ ಸಾರುತ್ತಿದ್ದರು.   ಡಂಗುರವ ಸಾರಿರಯ್ಯ ಡಿಂಗರಿಗರೆಲ್ಲರು ಭೂ-ಮಂಡಲಕ್ಕೆ ಪಾಂಡುರಂಗವಿಠ್ಠಲ ಪರದೈವವೆಂದು.. ಪುರಂದರದಾಸರು ಆಗಿನ ಕಾಲಕ್ಕೆ ಹೇಳಿದ್ದು. ಚಿಕ್ಕಂದಿನಲ್ಲಿ ನನ್ನೂರು ದೊಡ್ಡಜಾಲದಲ್ಲಿ ಕಂಡಂತಹ ಮೊದಲ ಭಿತ್ತಿ ಪತ್ರಗಳು.. ಚಿಕ್ಕಜಾಲದ ಸಿನಿಮಾ ಟೆಂಟ್ ನಲ್ಲಿ ಬರುತ್ತಿದ್ದ ಚಲನ ಚಿತ್ರಗಳ ವಿಚಾರ ತಿಳಿಸುವ ಪೋಸ್ಟರ್ ಗಳು. ನಂತರ ತುಂಬಾ ಕಣ್ಣಿಗೆ ಬಿದ್ದಂತಹ ಗ...

ಮುದ ನೀಡಿದ ಮನಸ್ಸುಗಳು

Image
ಮುದ ನೀಡಿದ ಮನಸ್ಸುಗಳು ಶನಿವಾರ ಬೆಳಿಗ್ಗೆ ವಾಕಿಂಗ್ ಮಾಡುವಾಗ, ಯಾವಾಗಲಾದರೂ ಒಮ್ಮೆ ಸಿಗುವ  ಹೇಮಾ   ( ನನ್ನ ಭಾವ ಮೈದುನನ ಹೆಂಡತಿ), ಒಬ್ಬ ಸ್ನೇಹಜೀವಿ. ವಾಕಿಂಗ್ ಮಾಡುತ್ತಾ ಟಾಕಿಂಗ್ ಮಾಡುವುದು ಸಾಮಾನ್ಯ... ವಿಷಯ ಇಂತದೇ ಆಗಿರಬೇಕೆಂದೇನೂ ಇಲ್ಲ. ಇಂದು ಮಾತನಾಡುವಾಗ ಬಂದ ವಿಷಯ- ಚಿಕ್ಕಂದಿನಲ್ಲಿ ರಜೆಯ ಕಾಲದಲ್ಲಿ ಬೇರೆಯವರ ಮನೆಗೆ ಹೋಗಿ ಇರುತ್ತಿದ್ದ ವಿಷಯ. ಆಗ ನೆನಪಿಗೆ ಬಂದಿದ್ದೆ ನಾನು ಕುಣಿಗಲ್ ಗೆ ಹೋಗಿದ್ದದ್ದು.  ನೆಂಟರಲ್ಲದ, ಹೆಚ್ಚು ಪರಿಚಯವಿಲ್ಲದವರಾದರೂ, ಪ್ರತಿಫಲಾಪೇಕ್ಷೆ ಇಲ್ಲದ ಪ್ರೀತಿ ತೋರಿಸಿದವರ ನೆನಪು ಮನಸ್ಸಿಗೆ ಬಂತು. ಅಂತ ಮನಸ್ಸುಳ್ಳ ವ್ಯಕ್ತಿಗಳ ಜೊತೆ ನನ್ನ ಒಡನಾಟದ ನೆನಪುಗಳ ಚಿತ್ರಣವೇ ಈ ಲೇಖನದ ವಿಷಯ. ಕುಣಿಗಲ್ ಭಾವ - ಹನುಮಂತ ರಾಯಪ್ಪನವರು: ನಾನು ಹೈಸ್ಕೂಲ್ ನಲ್ಲಿ ಓದುತ್ತಿದ್ದ ಹುಡುಗ, ಗವಿಪುರದ ನಮ್ಮ ವಠಾರದಲ್ಲಿ ಇದ್ದ ಎಂ ಎನ್ ಸುಮಿತ್ರ,  ( ಈಗ ಅವರು ನನಗೆ ಸುಮಿತ್ರ ಅತ್ತಿಗೆ)ಅವರ ಜೊತೆ ಸಲಿಗೆ... ನನ್ನಕ್ಕ ಗಿರಿಜಾಂಬನ ಮದುವೆಯಲ್ಲಿ ಅವರ ಜೊತೆ ಸೇರಿ ಹಾಡುಗಳನ್ನು ಹಾಡಿದ್ದೆ. ಅವರ ಅಕ್ಕ ಶಾಂತಾ ..ಅವರನ್ನು ಒಂದು ಸಲ ನೋಡಿದ್ದೆ. ಮಾಗಡಿ ಜಾತ್ರೆಗೆ ಹೋಗಿದ್ದಾಗ... ಈ ಶಾಂತ ಅಕ್ಕ ಸಿಕ್ಕರು.. ಹಾಗೆ ಕುಣಿಗಲ್ಲಿಗೆ ಹೋಗೋಣ ಬಾ ಅಂತ ಕರೆದರು... ಸ್ವಲ್ಪ ಸಂಕೋಚವಾದರೂ ಹೋಗುವ ಆಸೆ ಇತ್ತು.. ಅವರ ಗಂಡ ಸಹ (ನಾನು ಮೊದಲು ಬಾರಿ ನೋಡಿದ ಆದರೆ ಕೇಳಿದ್ದ "ಕುಣುಗುಲು ಭಾವ"), ನಡಿ ಹೋಗೋ...

ಸವಿ ನೆನಪುಗಳು ಬೇಕು-ಸವಿಯಲೀ ಬದುಕು

Image
    ಫೆಬ್ರವರಿ 3ನೇ ವಾರ ನನ್ನಣ್ಣನ ಮಗಳು ವಾಣಿ ಮತ್ತು ಶಶಿಧರ್ ದಂಪತಿಗಳ ಮಗ ಆಕಾಶನ ಮದುವೆ... ಚೆನ್ನೈಯಲ್ಲಿ.  ಮದುವೆ ಆಧುನಿಕತೆ ಹಾಗೂ ಪರಂಪರೆ ಎರಡರ ಮಿಳಿತವಾಗಿತ್ತು. ಸಂತೋಷದಿಂದ ಕೂಡಿತ್ತು.. ಹಾಗೇ ಒಂದಷ್ಟು ನೆನಪುಗಳನ್ನು ಮೇಲುಕುಹಾಕುವಂತೆ ಮಾಡಿತು. ಚೆನ್ನೈ ( ಅಂದಿನ ಮದರಾಸು) ನನ್ನ  ಓದು ಮುಗಿದ ನಂತರ(1967) ಮೊದಲ ಬಾರಿಗೆ ನನ್ನ ಕಾರ್ಯಕ್ಷೇತ್ರವಾದ ಕಾರ್ಖಾನೆಯ ಸಂಪರ್ಕ ಕೊಟ್ಟ ಊರು. ಪೆರಂಬೂರಿನಲ್ಲಿರುವ ದಕ್ಷಿಣ ರೈಲ್ವೆಯ ಕಾರ್ಖಾನೆಯಲ್ಲಿ ಭಾರತ ಸರ್ಕಾರ ಪ್ರಾಯೋಜಿತ apprentice ಯೋಜನೆಯಲ್ಲಿ ಕೆಲಸ, ಯಾವ ಅರ್ಜಿಯೂ ಸಲ್ಲಿಸದೆ, ಸಂದರ್ಶನವೂ ಇಲ್ಲದೆ, ಕೇವಲ ಅರ್ಹತೆಯ ಆಧಾರದ ಮೇಲೆ ಸಿಕ್ಕ ಅವಕಾಶ. ತಿಂಗಳಿಗೆ 150 ರೂಪಾಯಿ ವೇತನ ಪಡೆದು, ಒಂದಷ್ಟು ಹೊಸದನ್ನು ಕಲಿತು, ಒಂದಷ್ಟು ಕಾಲಹರಣವನ್ನು ಮಾಡಿ ವರ್ಷ ಪೂರೈಸಿದ್ದು. ಆಗ ಪರಿಚಯವಾಗಿ ಈಗಲೂ ಉಳಿದಿರುವ ಸ್ನೇಹ ಅಂದರೆ ಅದು S ರಾಮನ್ ನದು.  ವಾಣಿ ಲಗ್ನ  ಪತ್ರಿಕೆ ಕೊಟ್ಟಿದ್ದು ಪ್ರಾಯಶಃ ಡಿಸೆಂಬರ್ ಮೊದಲ ವಾರದಲ್ಲಿ... ಆಗಲೇ ರಾಮನಿಗೆ ವಿಷಯ ತಿಳಿಸಿದ್ದೆ. ಆಗ ಅವನು ಆಸ್ಟ್ರೇಲಿಯಾದಲ್ಲಿದ್ದ... ಮದುವೆಯ ಹೊತ್ತಿಗೆ ವಾಪಸ್ ಬರುವನೆಂದೂ ಖಂಡಿತವಾಗಿಯೂ ಭೇಟಿಯಾಗುವುದೆಂದು ನಿರ್ಧಾರ ಮಾಡಿದೆವು. ನಮ್ಮ ಭೇಟಿಯು ನಿಯಮಿತವಾಗಿಲ್ಲದಿದ್ದರೂ, ಸಂಪರ್ಕ ಮಾತ್ರ ತಕ್ಕಮಟ್ಟಿಗೆ ಇತ್ತು. ಚೆನ್ನೈಗೆ  ಮೊದಲ ಮದುವೆಗೆ ಹೋದದ್ದು ರಾಮನ್ ದಂಪತಿಗಳ ಮಗಳ ...

ಜೀವನ- ಉತ್ಸಾಹ- ಉತ್ಸವ

Image
  ಜೀವನ- ಉತ್ಸಾಹ- ಉತ್ಸವ ಹೋದ   ಲೇಖನದಲ್ಲಿ ಹೇಳಿದಂತೆ... ಜೀವನದ ವಿಷಯಗಳ ಬಗ್ಗೆ ಬರೆಯಲು ಯೋಚಿಸುತ್ತಿದ್ದಾಗ ಕಣ್ಣಿಗೆ ಬಿದ್ದದ್ದೆ, ನನ್ನ ಯುವ ಸ್ನೇಹಿತ ಮಣಿಕಂಠ facebook ನಲ್ಲಿ ಬರೆದಿದ್ದ ಒಂದು ಲೇಖನ. ಮಣಿಕಂಠನಿಗೆ ಮದುವೆಯಾಗಿ ಒಂದು ವರ್ಷ ಆದ ಸಂದರ್ಭದಲ್ಲಿ ತನ್ನ ಮಡದಿಗೆ ಬರೆದ ಪತ್ರರೂಪದ ಲೇಖನ. ಅದು ತನ್ನ ಮಡದಿಗೆ ಬರೆದದ್ದಾದರೂ.. ಪತ್ರವು ಬಹಿರಂಗ ರೂಪದಲ್ಲಿ ಇತ್ತು. ಪತ್ರವೂ ಭಾವುಕತೆಯಿಂದ ಕೂಡಿತ್ತು... ಅಲ್ಲಿ ಮದುವೆಯ ಮುಂಚಿನ ಮತ್ತು ನಂತರದ ಸುಂದರ ಕ್ಷಣಗಳು, ಮದುವೆಯ ಸಂಭ್ರಮ, ಕಾರ್ಯನಿಮಿತ್ತ ದೂರವಿರಬೇಕಾದಂತ ಸಮಯದ ಅಗಲಿಕೆ (ವಿರಹ ಎನ್ನಲೇ) ಇದರ ಮಧ್ಯೆ ಮುದ್ದು ಕಂದನ ಆಗಮನದ ಮುನ್ಸೂಚನೆಯ ಸಿಹಿ ಸುದ್ದಿ.... ಅದರ ಜೊತೆ ಜೊತೆಗೆ ಮಗುವನ್ನು ಪಡೆಯಲು ತಾಯಿ ಪಡಬೇಕಾದಂತಹ ನೋವು, ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ಇರುವ ಸ್ಥಾನಮಾನ ಹೀಗೆ ಸಾಕಷ್ಟು ವಿಷಯಗಳ ಚಿಂತನ ಮಂಥನ. ಜೀವನವನ್ನು ಉತ್ಸಾಹದಿಂದ ನೋಡಿದ,  ಸಂಭ್ರಮದಿಂದ ಅನುಭವಿಸಿದ ಮನದಾಳದ ಮಾತುಗಳು. ಅದರಲ್ಲೂ ಮಗನ ಆಗಮನ ಸಂಭ್ರಮವನ್ನು ಇಮ್ಮಡಿಸಿತ್ತು ಎಂದು ನನ್ನ ಅನಿಸಿಕೆ. ಓದಿದ ನಂತರ... ಜೀವನವನ್ನು ಉತ್ಸಾಹದಿಂದ..ಉತ್ಸವದಂತೆ ಆಚರಿಸುವ, ಸಂಭ್ರಮಿಸುವ ಕ್ಷಣಗಳನ್ನು, ಅಂತಹ ಸ್ಫೂರ್ತಿದಾಯಕ ವ್ಯಕ್ತಿಗಳನ್ನು  ನೆನಪಿನಿಂದ ಹೆಕ್ಕಿ  ತೆಗೆಯುವ ಮನಸಾಯಿತು... ಇದೋ ನಿಮ್ಮ ಮುಂದೆ ಆ ಮಧುರ ನೆನಪುಗಳು. ಉತ್ಸವ ಎಂದ ಕ್ಷಣ ನನ್ನ ನೆನಪಿಗ...