Posts

ಪರಿಸಮಾಪ್ತಿಯಾದ 'ಪರ್ವ'

Image
  ನಾನು ಗೌರವ ಭಕ್ತಿಯಿಂದ ನೋಡಿದ ಲೇಖಕರಲ್ಲಿ ಎಸ್ ಎಲ್ ಭೈರಪ್ಪನವರು ಅಗ್ರಗಣ್ಯರು. ಅವರು ನಮ್ಮನ್ನಗಲಿದ ಸುದ್ದಿಯನ್ನು ಕೇಳಿದಾಗ ಕೆಲ ಕ್ಷಣಗಳು ವಿಚಲಿತನಾದೆ. ವಯೋ ಸಹಜವಾದ ಸಾವು ಆದ್ದರಿಂದ, ಯಾವ ನೋವೂ ಇಲ್ಲದೆ, ಒಪ್ಪಿಕೊಳ್ಳಬೇಕೆಂಬುದು ನನ್ನ ನಿಲುವು. ಆದರೂ ಒಂದರೆಕ್ಷಣ ಸಂಕಟವಾದದ್ದು ಸತ್ಯ. " ದೇವರ ತಾವುಕ್ಕೆ ಹೋದದ್ದು, ಇನ್ನೇನು ಮಾತಾಡಿ ಸುಖವಿಲ್ಲ.. ಮುಂದಿನ ಕೆಲಸ ನೋಡೋಣ " ಎಂಬ ಗೃಹಭಂಗದ ಅಯ್ಯನವರ ಮೂಲಕ ಭೈರಪ್ಪನವರು  ಹೇಳಿದ  ಮಾತು  ಕಟು ಸತ್ಯ. ಎಸ್ ಎಲ್ ಭೈರಪ್ಪನವರ ಬಗ್ಗೆ ಮೊದಲು ಕೇಳಿದ್ದು, ನಾನು ಶಹಾಬಾದಿನಲ್ಲಿದ್ದಾಗ. ನಾನಿನ್ನೂ ನನ್ನ ಓದಿನ ಗುಂಗಿನಲ್ಲೇ  ಇದ್ದ ಕಾರಣ, ಕಾದಂಬರಿಗಳ ಬಗ್ಗೆ ಗಮನವಿರಲಿಲ್ಲ. ಆದರೆ ಸ್ನೇಹಿತರ ಗುಂಪಿನಲ್ಲಿ ನಡೆಯುತ್ತಿದ್ದ, ಭೈರಪ್ಪನವರ ಕಾದಂಬರಿಗಳ ಬಗ್ಗೆ ವಿಶ್ಲೇಷಣಾತ್ಮಕ ಚರ್ಚೆಯ ಮೂಲಕ. ಗೃಹಭಂಗದ ಗಂಗಮ್ಮನ ಬೈಗುಳ, " ಅನ್ನೆಲ್ಡಾಳುದ್ದ ಬಾವಿಗೆ  ಆರಾಳುದ್ದ ಹಗ್ಗ ಬುಟ್ರೆ ಎಟುಕುತೈತಾ"  ಎಂಬ ವಿಷಯದ ಬಗ್ಗೆ ನಡೆದ  ಚರ್ಚೆ, ನನ್ನ ಗಮನ ಸೆಳೆದದ್ದು. ಆಗ ಬಂದಿದ್ದೆ ಗೃಹಭಂಗ ಕಾದಂಬರಿಯನ್ನು ಓದಬೇಕೆಂಬುವ ಕುತೂಹಲ. ಜೀವನದ ಒಂದು ಘಟ್ಟದಲ್ಲಿ, ಗೃಹಭಂಗ ಕಾದಂಬರಿಯನ್ನು, ಗಂಗಮ್ಮನ ಬೈಗುಳದ ವೈಶಿಷ್ಟ್ಯವನ್ನು ಸವಿಯಲು ಆರಂಭ ಮಾಡಿದರೂ, ಮನಸ್ಸಿಗೆ ತಾಕಿದ್ದು ನಂಜಮ್ಮನ ಪಾತ್ರ. ನಂಜಮ್ಮನ ಪಾತ್ರದಲ್ಲಿ ಕಂಡದ್ದು ನನ್ನಮ್ಮನನ್ನು.  ಈ ವಿಷಯವನ...

ಜೀವನದರ್ಶನ - ಅವರವರ ದೃಷ್ಟಿಯಲ್ಲಿ.

Image
ನನ್ನ ಇಬ್ಬರು ಸ್ನೇಹಿತರ ಮಧ್ಯೆ ಒಂದು ಚರ್ಚೆ ನಡೆಯುತ್ತಿತ್ತು. ಚರ್ಚೆಯ ವಿಷಯ ಅವರಿಬ್ಬರಿಗೂ ತಿಳಿದ ವ್ಯಕ್ತಿಯ ಬಗ್ಗೆ. ಒಬ್ಬರ ಅಭಿಪ್ರಾಯ ಅವರು ಬಹಳ ಜನಕ್ಕೆ ಸಹಾಯ ಮಾಡಿದ್ದಾರೆ ಅದರಲ್ಲಿ ನಾನು ಒಬ್ಬ... ಇನ್ನೊಬ್ಬರ ಅಭಿಪ್ರಾಯ.. ಅವರು ಹಾಗೇನು ಮಾಡಿಲ್ಲ ನನಗೆ ಗೊತ್ತು. ಇದರಲ್ಲಿ ಯಾವುದು ಸರಿ ಯಾವುದು ತಪ್ಪು ಹೇಳುವುದು ಸಾಧ್ಯವೇ? ಇಬ್ಬರಿಗೂ ಅವರದೇ ಆದ ಅಭಿಪ್ರಾಯ ಆ ಮೂರನೆಯ ವ್ಯಕ್ತಿಯ ಬಗ್ಗೆ... ಅವರವರು ಕಂಡಂತೆ. ಜೀವನವೇ ಹಾಗಲ್ಲವೇ?. ಯಾವುದೇ ವಿಷಯವಾಗಲಿ ಅದರ ಬಗ್ಗೆ ನಮ್ಮ ಅಭಿಪ್ರಾಯ ಮೂಡುವುದು, ಆ ವಿಷಯದ ಬಗ್ಗೆ ನಮಗಿರುವ ತಿಳುವಳಿಕೆ, ಅನುಭವ ದಿಂದ ಮಾತ್ರ ನಿಲುಕುವಂಥದ್ದು. ಅಂದರೆ ನನ್ನ ಸೀಮಿತ ಜ್ಞಾನಕ್ಕೆ ನಿಲುಕುವಷ್ಟು. ಸಮುದ್ರದ ತುಂಬಾ ನೀರಿದ್ದರೂ , ಎಷ್ಟು ಬೇಕಾದರೂ ತೆಗೆದುಕೊಳ್ಳಲು ಅಡ್ಡಿ ಇಲ್ಲದಿದ್ದರೂ.. ನನಗೆ ದಕ್ಕುವುದು ಮೊದಲ ಹಂತದಲ್ಲಿ ನನ್ನ ಬೊಗಸೆಗೆ ನಿಲುಕುವಷ್ಟು ಮಾತ್ರ.. ಜಿಎಸ್ ಶಿವರುದ್ರಪ್ಪನವರ ಈ ಹಾಡು  ಮಣ್ಣಿನ ಬಗ್ಗೆ ಇಬ್ಬರಿಗಿರುವ ಇಬ್ಬಗೆಯ ದೃಷ್ಟಿಕೋನ. ನನಗೆ ತುಂಬಾ ಪರಿಚಿತ ಹಿರಿಯರೊಬ್ಬರ ಅಳಿಯ ಸರ್ಕಾರದ ಮುಖ್ಯ ಇಲಾಖೆಯಲ್ಲಿ  ಗುಮಾಸ್ತ. ಚೆನ್ನಾಗಿ ಸಂಪಾದಿಸುತ್ತಿದ್ದ (ಲಂಚ ಎಂದು ಬೇರೆ ಹೇಳಬೇಕೆ?) ವ್ಯಕ್ತಿ. ತಮ್ಮ ಅಳಿಯನಿಗೆ ಸಂಪಾದನೆ ಚೆನ್ನಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದವರು. ಮುಂದೊಂದು ದಿನ ತನ್ನ ಮಗ ಅದೇ  ಇಲಾಖೆಗೆ ತನ್ನ ಕೆಲಸ ಆಗಲು ದೊಡ್ಡ ಮೊತ್ತದ ಲ...

ಅಂಚೆ ಪೆಟ್ಟಿಗೆಯ ಸುತ್ತ...

Image
  ಕೆಲ ದಿನಗಳ ಹಿಂದೆ ವಾಟ್ಸಪ್ ನಲ್ಲಿ " ಅಂಚೆ ಪೆಟ್ಟಿಗೆಗಳನ್ನು  ಸೆಪ್ಟೆಂಬರ್ 2025ರ   ಒಂದನೇ ದಿನಾಂಕದಿಂದ ತೆಗೆದು ಹಾಕಲಿದ್ದಾರೆ" ಎಂಬ ಸಂದೇಶ ಹರಿದಾಡಿತು. ಅದನ್ನು ಓದಿದಾಗ ನನಗೆ ತಿಳಿಯದಂತೆ ಸಲ್ಪ ಕಸಿವಿಸಿ ಆಯಿತು. ಸೆಪ್ಟಂಬರ್ ಒಂದನೆಯ ತಾರೀಕು ನನ್ನ ಜೀವನದ ಅತ್ಯಂತ ಪ್ರಮುಖ ದಿನ... ಅಂದು ನಾನು ಮೊದಲ ಕೆಲಸಕ್ಕೆ ಸೇರಿದ ದಿನ. ಅದೇ ಸೆಪ್ಟೆಂಬರ್ 1 ಪೋಸ್ಟ್ ಬಾಕ್ಸ್ ಇರುವುದಿಲ್ಲ ಎನ್ನುವ ವಿಷಯ  ಒಪ್ಪಲು ನನ್ನ ಮನಸ್ಸು ನಿರಾಕರಿಸಿತು. ಹಾಗಾಗಿ, ಒಂದಷ್ಟು ಗೂಗಲ್ ನಲ್ಲಿ ಹುಡುಕಾಟದ ನಂತರ, ಆ ಸುದ್ದಿ ಸತ್ಯವಲ್ಲ ಎಂದು ತಿಳಿದು ಸಹಜವಾಗಿ ಸಂತೋಷವಾಯಿತು. ಅಂಚೆ ಮತ್ತು ತಂತಿ ಇಲಾಖೆಯೊಂದಿಗೆ ನನ್ನ ಒಡನಾಟ ಬೆಳೆದದ್ದು ಐದನೇ ತರಗತಿಯಲ್ಲಿ ಓದಲು ವಿದ್ಯಾನಗರದ ಸರ್ಕಾರಿ ಶಾಲೆಗೆ ಹೋಗಲು ಪ್ರಾರಂಭ ಮಾಡಿದಾಗ. ವಿದ್ಯಾನಗರದಲ್ಲಿ  ಮಾತ್ರ ಅಂಚೆ ಕಛೇರಿಯು  ಇದ್ದ ಕಾರಣದಿಂದ, ನನ್ನೂರು ದೊಡ್ಡಜಾಲಕ್ಕೆ ಬರುವ ಎಲ್ಲಾ ಪತ್ರಗಳನ್ನು ತಂದು ತಲುಪಿಸುವ ಜವಾಬ್ದಾರಿ ನಮಗೆ ಕೊಡಲಾಗಿತ್ತು. ಓದಲು ಬರದ ಕೆಲವರಿಗೆ ಬಂದ ಪತ್ರಗಳನ್ನು ಓದಿ ಹೇಳುವ ಜವಾಬ್ದಾರಿಯೂ ನಮ್ಮದಾಗಿತ್ತು. ಇದಲ್ಲದೆ ನಮ್ಮ ಊರಿನವರು ಬರೆದ ಕಾಗದಗಳನ್ನು ಅಂಚೆ ಪೆಟ್ಟಿಗೆಗೆ ಹಾಕುವುದು, ಊರಲ್ಲಿದ್ದ ಪಂಪ್ಸೆಟ್ಟುಗಳ ಎಲೆಕ್ಟ್ರಿಕ್ ಬಿಲ್ಲುಗಳನ್ನು ಮನಿ ಆರ್ಡರ್ ಮಾಡುವುದು ನಮ್ಮ ಕೆಲಸವಾಗಿತ್ತು. ಇದಕ್ಕೆಲ್ಲಾ ಯಾವುದೇ ರೀತಿಯ ಸರ್ಕಾರಿ ಆದೇಶಗಳ...

ಗಣೇಶ- ಗೀತೆ- ಗುಣಗಾನ

Image
  ಗಣೇಶನ ಹಬ್ಬ ಮನೆಯಲ್ಲಿ ಮುಗಿದಿದೆ, ಆದರೆ ಮನೆಯ ಸುತ್ತು ಮುತ್ತಿನ ರಸ್ತೆಯಲ್ಲಿ ಸಡಗರ ಮುಂದುವರೆದಿದೆ. ಮಕ್ಕಳ ಉತ್ಸಾಹಕ್ಕೆ ಮೇರೆ ಇಲ್ಲ, ಗಣೇಶನಿಗೆ ಜೈಕಾರ, ಹಾಡು, ಕುಣಿತ ಜೋರಿದೆ. ಗಣೇಶ ಬಂದ ಕಾಯಿ ಕಡಬು ತಿಂದ, ಹೊಟ್ಟೆ ಮೇಲೆ ಗಂಧ,  ಚಿಕ್ಕೆರೇಲ್ ಬಿದ್ದ ದೊಡ್ ಕೆರೇಲಿ ಎದ್ದ ..ಇದು ನಾವು ಚಿಕ್ಕಂದಿನಲ್ಲಿ ಹೇಳುತ್ತಿದ್ದ ಗಣೇಶನ  ಮೊದಲ  ಹಾಡು. ನಂತರ ಕೋಲಾಟಕ್ಕಾಗಿ ಕಲಿತದ್ದು ಶರಣು ಶರಣುವಯ್ಯ ಗಣನಾಯಕ ನಮ್ಮ ಕರುಣದಿಂದಲಿ ಕಾಯೋ ಗಣನಾಯಕ. ಕೋಲಾಟ ಆಡುತ್ತಾ  ಹಾಡುವುದು ಕಷ್ಟ ಆದಕಾರಣ, ನಾವು ಗಣನಾಯಕ ಭಾಗ ಮಾತ್ರ ಹೇಳುತ್ತಿದ್ದೆವು, ಮೂಲ ಹಾಡು ಬೇರೆ ಯಾರಾದರೂ ಹಾಡುತ್ತಿದ್ದರು. ಬೇರೆ ಬೇರೆ ವೇಗದಲ್ಲಿ ಕುಣಿಯುತ್ತ ಹಾಡುವಾಗ ನಮ್ಮ ಉತ್ಸಾಹ ಮುಗಿಲು ಮುಟ್ಟುತ್ತಿತ್ತು. ಪ್ರತಿದಿನ ಸಂಜೆ, ದೀಪ ಹೊತ್ತಿಸಿದ ತಕ್ಷಣ,  ಶುಕ್ಲಾಂಭರದರಂ ವಿಷ್ಣುಂ ಶಶಿವರ್ಣಂ... ಗಣೇಶ ಸ್ತುತಿಯೊಂದಿಗೆ ಪ್ರಾರಂಭ ಮಾಡಿ  ಗುರು ಬ್ರಹ್ಮ ಗುರು ವಿಷ್ಣು.. ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ ... ಶ್ಲೋಕಗಳನ್ನು ಹೇಳಿ ಓದುತ್ತಿದ್ದದ್ದು. ಗಣೇಶನಿಗೆ ಮೊದಲ ಪೂಜೆ ಎಂದು ತಲೆಯಲ್ಲಿ ಅಚ್ಚಾಗಿತ್ತು. ಅಗಜಾನನ ಪದ್ಮಾರ್ಕಮ್, ಗಜಾನನ ಮಹರ್ನಿಶಂ.. ಸ್ತೋತ್ರದ ಅನೇಕದಂತಂ ಹಾಗೂ ಏಕದಂತಂ ಬಗ್ಗೆ ನನಗೆ ಒಂದಷ್ಟು ಅನುಮಾನವಿತ್ತು. ಏಕದಂತಂ ಗಣೇಶನ ಒಂದು ಹೆಸರು ಅನೇಕದಂತಮ್ ಏನು? ರಾಷ್ಟ್ರೀಯ ವಿದ್ಯಾಲಯ ಹೈಸ್ಕೂಲಿನ ಸಂಸ್ಕ...

ಗೌರಿ ಹಬ್ಬ- ಬಾಂಧವ್ಯ ಬೆಸುಗೆ

Image
ಆಗಸ್ಟ್ 15 ಸ್ವಾತಂತ್ರ್ಯೋತ್ಸವದ ದಿನ, ಭಾರತದಲ್ಲೆಲ್ಲಾ ಅದರದೇ ಸಂಭ್ರಮ. ಈ ಸಂಭ್ರಮದ ಜೊತೆಗೆ ನಾನು ಪಾಲ್ಗೊಂಡದ್ದು ಇನ್ನೊಂದು ಸಂಭ್ರಮ. ಅದು “ ಹೂವಿನ ಕಟ್ಟೆ ಹೆಣ್ಣು ಮಕ್ಕಳ ಸಂಭ್ರಮ”  ಎನ್ನುವ ಹೆಸರಿನಲ್ಲಿ ಸಂಭ್ರಮಿಸಿದ್ದು. ಕಬ್ಬಿಣದ ಅಂಗಡಿಯಲ್ಲಿ ನೊಣಕ್ಕೇನು ಕೆಲಸ ಎಂದು ನಿಮಗೆ ಅನಿಸಿದ್ದರೆ ತಪ್ಪೇನಿಲ್ಲ... ಕಾರಣ ಆ ಹೆಣ್ಣು ಮಕ್ಕಳ ಸಂಭ್ರಮದಲ್ಲಿ ಸಂಬಂಧಪಟ್ಟ ಗಂಡಸರಿಗೂ ಭಾಗವಹಿಸಲು ಆಹ್ವಾನವಿತ್ತು. ನಾನು ಹೂವಿನ ಕಟ್ಟೆ ಮನೆತನಕ್ಕೆ ದೊಡ್ಡ ಅಳಿಯ ಆದ ಕಾರಣದಿಂದ ನಾನೂ ಅರ್ಹನೇ.  ಈ ಕಾರ್ಯಕ್ರಮ ಸುಮಾರು 18 ವರ್ಷಗಳಿಂದ ನಡೆಯುತ್ತಿದ್ದರೂ, ನನ್ನ ಸ್ಪಷ್ಟ ನೆನಪಿನಂತೆ  ನಾನು ಪೂರ್ಣ ಪ್ರಮಾಣದಲ್ಲಿ ಭಾಗವಹಿಸಿದ್ದು ಇದೇ ಮೊದಲು.  ಈ ಕಾರ್ಯಕ್ರಮಕ್ಕೆ ಮೂಲ ಸ್ರೋತವೇ ಎಚ್ ಪಿ ರಂಗನಾಥ್ ಮತ್ತು ಜಿ ವಿಜಯ ದಂಪತಿ.( #ಬಲು ಅಪರೂಪ ನಂಜೋಡಿ ) ಈ ಕಾರ್ಯಕ್ರಮ ಅವರು 25 ವರ್ಷದಿಂದ ವಾಸವಾಗಿದ್ದ ಮನೆಯಲ್ಲಿ ಸದ್ಯದ ಮಟ್ಟಿಗೆ ಕೊನೆಯ ಕಾರ್ಯಕ್ರಮ... ಅವರು ಬೇರೊಂದು ಹೊಸ ಮನೆಗೆ ವಾಸ್ತವ್ಯವನ್ನು ಬದಲಾಯಿಸುತ್ತಿದ್ದಾರೆ. ಇದೂ  ನಾನು ಭಾಗವಹಿಸಲು ಮುಖ್ಯ ಕಾರಣವಾಗಿತ್ತು.  ಗೌರಿ ಹಬ್ಬಕ್ಕೆ ಹೆಣ್ಣು ಮಕ್ಕಳಿಗೆ ಅರಿಶಿನ ಕುಂಕುಮ ಕೊಡುವ ಸಂಪ್ರದಾಯವನ್ನು, ಭಿನ್ನವಾಗಿ ಆಚರಿಸಲು ಸಂಬಂಧಪಟ್ಟ ಎಲ್ಲ ಹೆಣ್ಣು ಮಕ್ಕಳನ್ನು (ಬಹುಶಃ ಅಕ್ಕತಂಗಿಯರಿಂದ ಪ್ರಾರಂಭವಾದ  ಈ ಚಿಂತನೆ ಕ್ರಮೇಣ ವಿಸ್ತಾರಗೊಂಡು, ಅವರಿಬ್ಬರ ...

ಅರ್ಹತೆಯ ಸವಾಲು ಎದುರಾದಾಗ..

Image
ಆಪ್ತ ಸಮಾಲೋಚಕನಾಗಿ, ಮೂರು ದಶಕಕ್ಕೂ ಮಿಕ್ಕಿದ ನನ್ನ ಪಯಣದಲ್ಲಿ, ವಿವಿಧ ರೀತಿಯ ಚಿಂತನೆಗಳು, ಸಮಸ್ಯೆಗಳು, ಅದನ್ನು ಪರಿಹರಿಸಿಕೊಳ್ಳಬೇಕಾದಂತಹ ಮನಸ್ಸು, ಅದಕ್ಕೆ ಮಾಡುವ ಪ್ರಯತ್ನ ಹೀಗೆ ವಿವಿಧ ರೀತಿಯ ವ್ಯಕ್ತಿಗಳ ಜೊತೆ ಸಂವಹನ ಮಾಡ ಬೇಕಾದದ್ದು ಅನಿವಾರ್ಯ ಹಾಗೂ ಅವಕಾಶ ಸಹ. ಅದೇ ಒಂದು ಪ್ರಪಂಚ.  ವ್ಯಕ್ತಿಯ ಹಿನ್ನೆಲೆ ಏನೇ ಇರಲಿ, ಆಪ್ತ ಸಮಾಲೋಚಕನಾಗಿ ನಮ್ಮ ಬಳಿ ಮನಸ್ಸು ಬಿಚ್ಚಿ ಮಾತಾಡಲು, ಅವರಿಗೆ ನಮ್ಮ ಮೇಲೆ ವಿಶ್ವಾಸ ಬರಬೇಕಾದದ್ದು ಬಹು ಮುಖ್ಯ. ಆಪ್ತ ಸಮಾಲೋಚಕನಾಗಿ, ಪರಿಣಾಮಕಾರಿ ಫಲಿತಾಂಶಗಳನ್ನು ಕೊಡಬೇಕಾದರೆ ಮೊದಲ ಹಂತ ಅವರ ವಿಶ್ವಾಸವನ್ನು ಗಳಿಸುವುದೇ ಆಗುತ್ತದೆ. ಅದೇ ಸವಾಲಾಗಿ ನನ್ನ ಮುಂದೆ ಧುತ್ತೆಂದು ನಿಂತ ಪ್ರಸಂಗ ನಿಮ್ಮ ಮುಂದೆ. ಅಂದು ನನ್ನ ಮುಂದೆ ಬಂದವರು ನನಗಿಂತಲೂ ಹಿರಿಯರಾದ ಒಬ್ಬ ವ್ಯಕ್ತಿ. ಅವರ ಮುಖದಲ್ಲಿ ಕೋಪ ಇತ್ತು, ಅಸಮಾಧಾನ ಇತ್ತು... ನಮಸ್ಕರಿಸಿ ಕೂಡಲು ಹೇಳಿದೆ... ಪ್ರತಿಯಾಗಿ ನಮಸ್ಕಾರವೂ ಮಾಡದೆ ಕೂರುತ್ತಾ  ಹೇಳಿದ್ದು.." ನಿಮಗೊಂದು ಪ್ರಶ್ನೆ ಕೇಳಬೇಕು... ಕೌನ್ಸೆಲಿಂಗ್ ಮಾಡಲು ನಿಮಗೇನು ಅರ್ಹತೆ ಇದೆ... ನೀವು ನನಗಿನ್ನ ಚಿಕ್ಕವರು."  ಒಂದು ಕ್ಷಣ ಅಧೀರನಾಗಿದ್ದು ಸತ್ಯ. ಸಮಜಾಯಿಷಿ ಕೊಡುವ ರೀತಿಯಲ್ಲಿ ಹೇಳಿದ್ದು.." ಹೌದು ಸರ್ ನಾನು ನಿಮಗಿನ್ನ ಚಿಕ್ಕವನು, ತಕ್ಕಮಟ್ಟಿಗಿನ ಅನುಭವ ಇದೆ, ನಿಮಗೆ ಒಪ್ಪಿಗೆ ಆದರೆ ನನ್ನ ಜೊತೆ ಮಾತನಾಡಿ... ನನ್ನ ಸೀಮಿತ ಅನುಭವದಲ್ಲಿ ಸಾಧ್ಯವಾದಷ್ಟೂ ನ...

ಶ್ರಧ್ದೆ- ಶ್ರಾಧ್ದ

Image
ಶ್ರಾವಣ ಮಾಸದಿಂದ ಪ್ರಾರಂಭವಾಗುವ ಹಬ್ಬದ ಸಾಲು .. ನವರಾತ್ರಿಯೊಂದಿಗೆ ಮುಕ್ತಾಯ. ಈ ಮಧ್ಯೆ ನಾಗರ ಪಂಚಮಿಯ ಮಾರನೆಯ ದಿನ ನಮ್ಮ ಮನೆಯಲ್ಲಿ ಒಂದು ವಿಶೇಷ ಹಬ್ಬ... ಅದುವೇ ನಮ್ಮ ಅಮ್ಮನನ್ನು ನೆನೆಸಿಕೊಳ್ಳುವ ಹಬ್ಬ. 39 ವರ್ಷಗಳ ಹಿಂದೆ ತೀರಿಕೊಂಡ ನಮ್ಮಮ್ಮನ ಈ ವರ್ಷದ ಶ್ರಾಧ್ದದ ದಿನ. ಶ್ರದ್ಧಯಾ ಕ್ರಿಯತೇ ಇತಿ ಶ್ರಾಧ್ದಃ... ಶ್ರದ್ಧೆಯಿಂದ ಮಾಡುವುದೇ ಶ್ರಾದ್ಧ. ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡಿದಾಗ ಅದು ಶ್ರಾಧ್ದವಾಗುತ್ತದೆ. ಆದರೆ ಆಡು ಭಾಷೆಯಲ್ಲಿ ಶ್ರಾಧ್ದ ಎಂದಾಗ  ಹೊಳೆಯುವುದೇ ತಿಥಿ ಎಂಬ ಇನ್ನೊಂದು ಪದ.. ಅದು ಪಿತೃಕಾರ್ಯ, ಪಿತೃಗಳನ್ನು ನೆನೆಯುವ,ಗೌರವಿಸುವ, ಋಣ ತೀರಿಸುವ ಒಂದು ವಿಧಾನ. ನನ್ನ ಚಿಕ್ಕಂದಿನ ನೆನಪನ್ನು ಕೆದಕಿದರೆ, ತಾತನ ತಿಥಿ ಕಣ್ಮುಂದೆ ಬರುತ್ತದೆ. ದೇವನಹಳ್ಳಿ ಇಂದ ಬರುತ್ತಿದ್ದ ರಾಮಾಶಾಸ್ತ್ರಿಗಳು, ಬೆಂಗಳೂರಿನಿಂದ ಬರುತ್ತಿದ್ದ ಚಿಕ್ಕಪ್ಪ ನಂಜಣ್ಣಯ್ಯ,  ಮಡಿ ಮಡಿ ವಾತಾವರಣ, ಹಾಗಾಗಿ ನಮಗೆ ಮನೆಯಲ್ಲಿ ಎಲ್ಲೆಂದರಲ್ಲಿ ಓಡಾಡಲು ಅನುಮತಿ ಇಲ್ಲ. ಶಾಲೆಯ ಊಟದ ಸಮಯದಲ್ಲಿ ಮನೆಗೆ ಬಂದಾಗ, ತಿಥಿಯ ಭಾಗವಾಗಿ ಊಟ ಮಾಡುತ್ತಿದ್ದ ಬ್ರಾಹ್ಮಣರು, ಭಕ್ಷ ಭೋಜ್ಯಗಳ ಘಮ. ಆದರೆ ನಮಗೆ ಊಟವಿಲ್ಲ. ನಮ್ಮ ಊಟ ಸುಮಾರು 3 ಘಂಟೆಗೆ.. ಆಗ ಶಾಲೆಯಿಂದ ಮನೆಗೆ ಊಟಕ್ಕೆ ಬರಲು ವಿಶೇಷ ಅನುಮತಿ.  ಅಂತಹ ಒಂದು ದಿನ, ಶಾಲೆಯ ಊಟದ ಸಮಯದಲ್ಲಿ ಮನೆಗೆ ಬಂದಾಗ, ನನ್ನಮ್ಮ ಊಟ ಮಾಡುತ್ತಾ ಇದ್ದದ್ದು ಕಂಡು ನನಗೆ ಅತೀವ ದುಃಖವಾಯಿತ...

ಹರಕೆ - ಅರಿಕೆಯೋ, ಆಮಿಷವೋ?

Image
  ಬಸವನಗುಡಿಯ ದೊಡ್ಡ ಬಸವಣ್ಣನ ಹಾಗೂ ದೊಡ್ಡ ಗಣೇಶನ ದೇವಸ್ಥಾನ ಎಲ್ಲ ಯಾತ್ರಿಗಳು ಬಂದು ನೋಡುವ ತಾಣ. ಅವುಗಳಿರುವ ಗುಡ್ಡ, ಕಹಳೆ ಬಂಡೆ, ಒಂದಷ್ಟು ಹಸಿರು, ಜೊತೆಗೆ ನಾಗರಿಕತೆಯ ಕುರುಹಾಗಿ ನೀರಿನ ಟ್ಯಾಂಕ್, ಮಂಕುತಿಮ್ಮನ ಕಗ್ಗದ ಕರ್ತೃ ಡಿವಿಜಿ ಯವರ ಪುತ್ಥಳಿ... ಎಲ್ಲವೂ ಅಂದವನ್ನು ಹೆಚ್ಚಿಸಿದೆ. ದೈನಂದಿನ ಓಡಾಟದಲ್ಲಿ,  ಈ ಜಾಗದ ಪಕ್ಕದಲ್ಲಿ ಬಹಳ ಸಲ ಓಡಾಡಿದರೂ, ಒಳ ಹೋಗಿ ಬರುವುದು ಕಡಿಮೆಯೇ.  ಹೋದ ಸೋಮವಾರ ದೊಡ್ಡ ಗಣೇಶನಿಗೆ ಬೆಣ್ಣೆ ಅಲಂಕಾರ ಹಾಗೂ ಪೂಜೆ. ಇದನ್ನು ಬಹಳ ಹತ್ತಿರದಿಂದ ನೋಡುವ ಅವಕಾಶ ನನಗಾಯಿತು. ಅದಕ್ಕೆ ಕಾರಣ ನನ್ನ ಹೆಂಡತಿ ವಿಜಯ ಹೊತ್ತಿದ್ದ ಹರಕೆ. ಹರಕೆಗೆ 12 ವರ್ಷ ಎನ್ನುವ ಮಾತಿದೆ... ಆದರೆ ಈ ಹರಕೆ ಸಲ್ಲಿಸಲು ಸುಮಾರು ಮೂರು 12 ವರ್ಷಗಳು ಕಳೆದದ್ದು ಸತ್ಯ. ನನ್ನ ಮಗಳು ಚಿಕ್ಕವಳಿದ್ದಾಗ ಹರಸಿಕೊಂಡಿದ್ದಂತೆ, ಈಗ ಕಾಲ ಕೂಡಿ ಬಂದಿದ್ದು. ಅದರ ಫಲವೇ ಮೊದಲ ಬಾರಿ ದೊಡ್ಡ ಗಣೇಶನ ಮುಂದೆ ಕೂತಿದ್ದು, ಪೂಜೆ ಮಂಗಳಾರತಿಯಲ್ಲಿ ಭಾಗಿಯಾಗಿದ್ದು. ಸಾಮಾನ್ಯವಾಗಿ ಅಲ್ಲಿಗೆ ಹೋದಾಗ, ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡಿ, ಬರುವುದು ವಾಡಿಕೆ. ಬೆಣ್ಣೆಯ ಅಲಂಕಾರ ನಿಜಕ್ಕೂ ಒಂದು ಕಲೆ. ಅಷ್ಟು ದೊಡ್ಡ ವಿಗ್ರಹಕ್ಕೆ ಬೆಣ್ಣೆಯನ್ನು ಹಚ್ಚಿ, ಬಣ್ಣದ ಕಾಗದಗಳಿಂದ ಅಲಂಕರಿಸಿ, ವಿಗ್ರಹಕ್ಕೆ ಸುಂದರ ರೂಪವನ್ನು ಕೊಡುವುದು. ಜೊತೆಗೆ ವಿದ್ಯುತ್ ದೀಪದ ಬೆಳಕಿನ ಅಲಂಕಾರ. ಎಂಥವರ ಮನಸ್ಸನ್ನೂ ಸೆಳೆಯುವ ದೃಶ್ಯ. ಇನ್ನು ಭಕ್ತ ಸಮುದ...

ಕನಕಾಭಿಷೇಕ - ಸಂಭ್ರಮ

Image
  ಮೊನ್ನೆ ಗುರುವಾರ, ಒಂದು ವಿಶಿಷ್ಟ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಹ್ವಾನವಿತ್ತು. ಅಪರೂಪದ ಕಾರ್ಯಕ್ರಮವಾದ್ದರಿಂದ, ನರಸಿಂಹರಾಜ ಕಾಲೋನಿಯ ರಾಮದೇವರ ದೇವಸ್ಥಾನದ ಕಡೆಗೆ ಹೊರಟೆ.   ಅಲ್ಲಿ ಕಂಡದ್ದು ಸಡಗರ, ಸಂಭ್ರಮದ ವಾತಾವರಣ. ಒಂದು ಕಡೆ ಕಳಸಗಳ ಪೂಜೆ, ಇನ್ನೊಂದೆಡೆ ಹೋಮ ಹವನಗಳು, ಎಲ್ಲದರ ಮಧ್ಯೆ ಕಂಡದ್ದು  ಕಾರ್ಯಕ್ರಮದ ಕೇಂದ್ರಬಿಂದು  ಆ ಹಿರಿಯ ದಂಪತಿಗಳು( ಶ್ರೀಮತಿ ನಾಗಮ್ಮ ಹಾಗೂ ಶ್ರೀ ನಾಗರಾಜನ್)...  ಪಕ್ಕದಲ್ಲಿ ಚಿಕ್ಕಮ್ಮನ ಕಂಕುಳಲ್ಲಿ ಇದ್ದ ಈ ಕಾರ್ಯಕ್ರಮದ ಕಾರಣ ಪುರುಷ ನಾಲ್ಕನೇ ತಲೆಮಾರಿನ ಮಗು, ಶ್ರೀಪ್ರಮುಖ. ಅಂದು ಆ ಹಿರಿಯ ದಂಪತಿಗಳಿಗೆ ' ಕನಕಾಭಿಷೇಕ' ಕಾರ್ಯಕ್ರಮ.  ಕನಕಾಭಿಷೇಕ  ನಡೆಯುವುದು ಒಂದು ಅಪರೂಪದ ಸಂದರ್ಭದಲ್ಲಿ. ಅದು ನಾಲ್ಕು ತಲೆಮಾರಿನಲ್ಲೂ ಮೊದಲ ಮಗು ಗಂಡಾದಾಗ... ಇಲ್ಲಿನ ಉದಾಹರಣೆ ತೆಗೆದುಕೊಂಡರೆ- ನಾಗಮ್ಮ ಹಾಗೂ ನಾಗರಾಜ್ ದಂಪತಿಯ ಮೊದಲನೆಯ ಮಗ ರಘುರಾಮ್.. ರಘುರಾಮ್ ನಾಗಲಕ್ಷ್ಮಿ ದಂಪತಿಯ ಮೊದಲ ಮಗ ಶ್ರೀಹರ್ಷ.. ಶ್ರೀಹರ್ಷ ಹಾಗೂ ಯಶಸ್ವಿನಿಯ ಮೊದಲ ಮಗ ಶ್ರೀ ಪ್ರಮುಖ... ಹಾಗಾಗಿ ಹಿರಿಯ ದಂಪತಿಗಳಿಗೆ ಕನಕಾಭಿಷೇಕದ ಸಂಭ್ರಮ. ಯಶಸ್ವಿನಿ ನನ್ನಕ್ಕನ ಮಗನ ಮಗಳು. ಕನಕಾಭಿಷೇಕ ನಿಜ ಅರ್ಥದಲ್ಲಿ ಚಿನ್ನದ (ನಾಣ್ಯಗಳ) ಅಭಿಷೇಕ. ಹಿಂದೆ ಯಾರು ಮಾಡಿದ್ದರೋ ತಿಳಿಯದು. ವ್ಯಾವಹಾರಿಕವಾಗಿ ಯೋಚನೆ ಮಾಡಿದಾಗ ಚಿನ್ನದ ನಾಣ್ಯಗಳ ಅಭಿಷೇಕ ಸಾಧುವಲ್ಲ. ಸುರಿದ ಮೇಲೆ ಮತ್ತೆ ...