Posts

Showing posts from August, 2017

ಪರಿಸರ - ಗಣಪ:

  ಪರಿಸರ - ಗಣಪ: ನಮ್ಮ ಸುತ್ತಲಿನ ಪರಿಸರದ ಬಗೆಗಿನ ಕಾಳಜಿ ಈಗ ಬಹಳ ಬೇಕಿದೆ. ಯಾಂತ್ರೀಕರಣಕ್ಕೂ, ಪರಿಸರಕ್ಕೂ ಉತ್ತರ ಧೃವ, ದಕ್ಷಿಣ ಧೃವ ಸಂಭಂಧ. ಹಾಗೇ ಮನುಷ್ಯನ ದುರಾಸೆಗೂ ವಿಲೋಮ ಸಂಭಂಧ. ಪುರಾತನ ಕಾಲದಿಂದಲೂ ನಮ್ಮ ಹಿರಿಯರ ಜೀವನಶೈಲಿ ಪರಿಸರಕ್ಕೆ ಹೊಂದಿಕೊಂಡು ಅದಕ್ಕೆ ಪೂರಕವಾಗಿರುತ್ತಿತ್ತು. ತನ್ನೆಲ್ಲ ಬೇಕುಗಳಿಗೆ ಮನುಷ್ಯ ಪರಿಸರದಮೇಲೆ ಅವಲಂಬಿಸಿದ್ದರೂ, ತನ್ನ ಬೇಕುಗಳನ್ನು ಮಿತಿಯಲ್ಲಿಟ್ಟಿರುತ್ತಿದ್ದ. ಪ್ರಕೃತಿ ತನ್ನದೆಲ್ಲವನ್ನೂ ಜೀವ ಸಂಕುಲಕ್ಕೆ ಧಾರೆಯೆರೆದಿದೆ. ಮೂಕ ಪ್ರಾಣಿಗಳು ಸಹ ತಮ್ಮ ಜೀವನವನ್ನು ಪ್ರಕೃತಿಯಮೇಲೆ ಅವಲಂಬಿಸಿಕೊಂಡಿವೆ. ಆದರೆ ಅವುಗಳು ತಮ್ಮ ಹೊಟ್ಟೆ ತುಂಬಿದನಂತರ ಅವುಗಳ ಬೇಕುಗಳಿಗೆ (brake) ಕಡಿವಾಣ ಹಾಕುತ್ತವೆ. ಮನುಷ್ಯ ಪ್ರಾಣಿ ಮಾತ್ರ ಇದಕ್ಕೆ ಹೊರತು. ಅವನ ಆಸೆಗೆ (ದುರಾಸೆಗೆ) ಮಿತಿಯೇ ಇಲ್ಲ. ಹಾಗಾಗಿ ನೆಲ, ಜಲ, ಗಾಳಿ, ಮರಗಿಡಗಳು, ಖನಿಜಸಂಪತ್ತು ಎಲ್ಲದರ ಮೇಲೂ ತನ್ನ ದುರಾಸೆಯ ಹಸ್ತವನ್ನು ಚಾಚಿದ್ದಾನೆ. ಹಾಗಾಗಿ ಇಂದು ಪರಿಸರ ವಿನಾಶದ ಅಂಚಿಗೆ ಬಂದು ನಿಂತಿದೆ. ಇದು ಎಲ್ಲರಿಗೂ ತಿಳಿದ ವಿಷಯ. ಗಣೇಶನ ಹಬ್ಬ ಬಂದಿದೆ. ಇದು ನಮ್ಮೆಲ್ಲರಿಗೂ ಸಡಗರ ನಿಜ. ಈ ಸಡಗರದ ಜೊತೆ ಜೊತೆಗೆ ನಮ್ಮ ಪರಿಸರದ ಬಗ್ಗೆ ಯೋಚಿಸಬೇಕಾದ್ದು ನಮ್ಮ ಕರ್ತವ್ಯ. ಈ ವಿಷಯ ಚರ್ವಿತ ಚರ್ವಣವಾದರೂ ಸಹ ಮತ್ತೊಮ್ಮೆ ನೆನಸಿಕೊಳ್ಳುವುದು ಸಮಂಜಸ ಎಂದು ನನ್ನ ನಂಬಿಕೆ. ಮೊದಲು ಮನೆ. ಮನೆಗೆ ತರುವ ಗಣಪ ಮತ್ತು ಗೌರ...

ಕೆಂಗಲ್ ಹನುಮಂತಯ್ಯ ಕಲಾಸೌಧ

ಕೆಂಗಲ್ ಹನುಮಂತಯ್ಯ ಕಲಾಸೌಧ ಹೆಸರು ಹೊಸದೋ? ಅಥವಾ ಎಲ್ಲೋ ಕೇಳಿದ ನೆನಪೇ? ಇದೇ ನಮ್ಮ ಕನ್ನಡಿಗರ ದೌರ್ಭಾಗ್ಯ. ಈಗ ಹೇಳಿ "ಕೆ.ಹೆಚ್. ಕಲಾಸೌಧ" ಗೊತ್ತಾ? ಹೌದು ನಿಮ್ಮ ಯೋಚನೆ ಸರಿಯಾಗಿದೆ. ಇದು ಹನುಮಂತನಗರದ ರಾಮಾಂಜನೇಯ ಗುಡ್ಡದ ಒಂದು ಭಾಗದಲ್ಲಿದೆ. "ಕೆಂಗಲ್ ಹನುಮಂತಯ್ಯ ಕಲಾಸೌಧ" ಅಂತ ಸುಂದರವಾದ ಕನ್ನಡದ ಹೆಸರನ್ನ ಕುಲಗೆಡಿಸಿ "ಕೆ.ಹೆಚ್. ಕಲಾಸೌಧ" ಮಾಡಿಬಿಟ್ಟರು. ಇದು ಮಾಡಿದ್ದು ಯಾರು ಗೊತ್ತೇ... ಕನ್ನಡದ ಕಂದಮ್ಮಗಳೆಂದು ಹೊಗಳಿಕೊಳ್ಳುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರು (ಅದೇ ರೀ.. ಬಿ.ಬಿ.ಎಮ್.ಪಿ). ಇದು ನಡೆದಿರೊದು ನಮ್ಮ ಕನ್ನಡದ ಆಗು ಹೋಗು ನೊಡಿಕೊಳ್ಳುವ ಸರ್ಕಾರಿ ಕೃಪಾಪೋಷಿತ ಕನ್ನಡ ಕಾವಲು ಸಮಿತಿಯ ಮೂಗಿನ ಕೆಳಗೆ. ಇದಲ್ಲದೇ ಕನ್ನಡಕ್ಕಾಗಿ ಪ್ರಾಣವನ್ನು ಕೊಡಲು ತಯಾರಿರುವ ಕಟ್ಟಾಳುಗಳ ಕನ್ನಡ ಕೋಟೆಯಲ್ಲೇ. ಇದು ಹೆಸರಿನ ಕಥೆ ಮತ್ತು ವ್ಯಥೆ. ಇದು ಇಲ್ಲಿಗೆ ಮುಗಿಯದ ಕಥೆ (ವ್ಯಥೆ ಕೂಡ). ಸದಾ ಚಟುವಟಿಕೆ ಇಂದ ಇರುತ್ತಿದ್ದ ಈ ಜಾಗ ಈಗ ಬಿಕೋ ಎನ್ನುತ್ತಿದೆ. ಈ ಭಾಗದ ಕಲಾರಸಿಕರ ತಾಣವಾಗಿದ್ದ ಈ ಜಾಗವನ್ನು ಕೊಂಪೆಯಾಗಿ ಮಾಡುವ ಕಾರ್ಯಕ್ರಮವೇ ಸಿಧ್ಧಗೊಂಡಿದೆಯೇನೋ ಎನ್ನುವಂತೆ ಇದನ್ನು ಮುಚ್ಚಲಾಗಿದೆ. ಕನ್ನಡದ ಬೆಳವಣಿಗೆಗೆ ಚಿಂತನೆ ಮಾಡುವ ಎಲ್ಲರೂ ಯೋಚಿಸಬೇಕಾದ ವಿಷಯ. ಇದನ್ನು ಹೀಗೇ ಮುಚ್ಚಲು ಬಿಡಬೇಕೆ? ಯಾವುದೇ ವಸ್ತು ಉಪಯೋಗಿಸದೆ ಬಿಟ್ಟಾಗ ಅದು ಬಹಳ ಬೇಗ ಹಾಳಾಗುತ್ತದೆ. ...

ಸ್ವಾತಂತ್ಯ ದಿನೋತ್ಸವ:

ಸ್ವಾತಂತ್ಯ ದಿನೋತ್ಸವ: ಸ್ವಾತಂತ್ಯ ದಿನೋತ್ಸವ ಅಂದ ಕೂಡಲೇ ನೆನಪಿಗೆ ಬರುವುದು ದಲಿತಕವಿ ಎಂದೇ ಖ್ಯಾತರಾದ ಶ್ರೀ ಸಿದ್ದಲಿಂಗಯ್ಯನವರು. ನಾಟಕದ ಹೆಸರು ಜ್ಞಾಪಕವಿಲ್ಲ. ಆದರೆ ಅಂದು ಅವರು ಕಲಾಕ್ಷೇತ್ರದ ಬಾಲ್ಕನಿಯಿಂದ ತಮಟೆ ಬಾರಿಸಿಕೊಂಡು ದೊಡ್ಡ ಧ್ವನಿಯಲ್ಲಿ " ಯಾರಿಗೆ ಸಿಕ್ಕಿದೆ ಎಲ್ಲಿ ಸಿಕ್ಕಿದೆ ನಲವತ್ತೇಳರ ಸ್ವಾತಂತ್ಯ" ಎಂದು ಹೇಳಿಕೊಂಡು ರಂಗಕ್ಕೆ ಪ್ರವೇಶಮಾಡಿದ್ದು ನೆನಪಲ್ಲಿ ಹಸಿರಾಗಿದೆ. ದೆಹಲಿಯ ಕೆಂಪು ಕೋಟೆ ಮತ್ತು ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ ಮೂಡಿಬರುವ ಕಾರ್ಯಕ್ರಮಗಳನ್ನು ದೂರದರ್ಶನದಲ್ಲಿ ನೋಡಿದ್ದಿದೆ. ಬಾಲ್ಯದ ಸ್ವಾತಂತ್ಯ ದಿನೋತ್ಸವದಲ್ಲಿ ನಾವು ಶಾಲೆಯ ಮಕ್ಕಳೆಲ್ಲಾ ಗಾಂಧೀಜಿ ಫೋಟೋ ಮತ್ತು ಬಾವುಟ ಎತ್ತಿಕೊಂಡು ನಮ್ಮೂರ ಬೀದಿಗಳಲ್ಲಿ ಮೆರವಣಿಗೆ ಮಾಡುವುದು. ಮೆರವಣಿಗೆ ನಮ್ಮ ಮನೆಯ ಹತ್ತಿರ ಬಂದಾಗ ನಾನು ಬಾವುಟವನ್ನು ಎತ್ತಿಕೊಂಡಿರುವುದನ್ನು ನಮ್ಮಮ್ಮ ಹೆಮ್ಮೆಯಿಂದ ನೋಡಿ ಸಂತೋಷ ಪಡೋಳು. ಮೆರವಣಿಗೆ ಮುಗಿದಮೇಲೆ ಯಾರೋ ದೊಡ್ಡವರು ಭಾಷಣ ಮಾಡೋರು. ನಮಗೆಲ್ಲ ಅದು ಏನೂ ಅರ್ಥ ಆಗ್ತಿರಲಿಲ್ಲ. ನಮ್ಮೆಲ್ಲರ ಗಮನ ಅವತ್ತು ಕೊಡುವ ಸಿಹಿಯ ಮೇಲೆ. ಜನಗಣಮನ ಹೇಳಿದ್ದು ಕೊನೆಯಲ್ಲಿ ಸಿಹಿ ಬೂಂದಿ ತಿಂದಿದ್ದು ಮಾತ್ರ ನೆನಪಿನಲ್ಲಿದೆ. ಈಗ್ಗೆ ಸುಮಾರು 12 ವರ್ಷಗಳಿಂದ ನನ್ನ ಸ್ವಾತಂತ್ಯ ದಿನಾಚರಣೆಯ ನಂಟು ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ , ಹುಂಗೇನಹಳ್ಳಿ, ಸರ್ಕಾರಿ ಪ್ರಾಥಮಿಕ ಶಾಲೆಯೊಂದಿಗೆ ಬ...

ಕೃಷ್ಣ ಜನ್ಮಾಷ್ಟಮಿ

ಕೃಷ್ಣ ಜನ್ಮಾಷ್ಟಮಿ.... ಬಹಳಷ್ಟು ಸಂಭ್ರಮ ಒಬ್ಬೊಬ್ಬರ ಆಚರಣೆ ಒಂದೊಂದು ತರಹ. ಕೆಲವರಿಗೆ ಸಂತೋಷ ಸಂಭ್ರಮಕ್ಕೆ ಬೇರೆಲ್ಲರಿಗೂ ಸಿಹಿ ಹಂಚಿ ತಾವೂ ತಿನ್ನುವ ಮನಸ್ಸು. ಇನ್ನು ಕೆಲವರು ಸಂತೋಷದ ಭರದಲ್ಲಿ ತಿನ್ನುವುದನ್ನೇ ಮರೆತಿದ್ದಾರೆ. ಇವರು ಉಪವಾಸ ಹಾಗಾಗಿ ಇವರನ್ನು ನಂಬಿದವರಿಗೆಲ್ಲ ಉಪವಾಸ. ನಾವು ಯಾವುದನ್ನು ಬೇಕಾದರೂ ಆರಿಸಿಕೊಳ್ಳಬಹುದು. ನಾನು ವೈಯುಕ್ತಿಕವಾಗಿ ಮೊದಲ ಗುಂಪಿನಲ್ಲಿ ಗುರುತಿಸಿಕೊಳ್ಳುವವನು. ಕೃಷ್ಣನನ್ನು ಬಹುರೂಪಿ ಎನ್ನುತ್ತಾರೆ. ವಸ್ತುಸ್ಥಿತಿ ಏನೇ ಇರಲಿ ರಾಧೆ, ರುಕ್ಮಿಣಿ, ಸತ್ಯಭಾಮೆ, ಮೀರಾ, ಗೋಪಿಕೆಯರು, ಇನ್ನು ಬಾಲ್ಯದ ಗೆಳೆಯ ಸುಧಾಮ, ದ್ರೌಪದಿ ಹೀಗೆ ಎಲ್ಲರೂ ಕೃಷ್ಣನನ್ನು ಅವರವರ ದೃಷ್ಟಿಯಲ್ಲಿ ಕಂಡವರೇ. ನನ್ನ ತಿಳುವಳಿಕೆಯ ಮಟ್ಟದಲ್ಲಿ ಎಲ್ಲರೂ ಕೃಷ್ಣನಿಂದ ಪಡೆಯಲು ಬಯಸಿದವರೆ (ಏನಾದರಿರಲಿ). ಇವರಲ್ಲಿ ಸುಧಾಮ ಮಾತ್ರ ವಿಶಿಷ್ಟ ರೀತಿಯಲ್ಲಿ ಕಾಣುತ್ತಾನೆ. ತನ್ನ ಹೆಂಡತಿಯ ಆಗ್ರಹದ ಮೇರೆಗೆ ಕೃಷ್ಣನನ್ನು ಭೇಟಿ ಮಾಡಲು ಬರುವುದು ಕೇಳುವುದಕ್ಕಾಗಿಯೆ, ಆದರೆ ಅವನು ಬರುವಾಗ ತಾನು ಕೃಷ್ಣನಿಗೆ ಏನು ಕೊಡಬೇಕು ಎಂದು ಯೋಚಿಸುತ್ತಾನೆ. ಕಡೆಗೆ ಬಡತನದ ತನ್ನ ಮನೆಯಲ್ಲಿದ್ದ ಒಂದು ಹಿಡಿ ಅವಲಕ್ಕಿಯನ್ನು ಗಂಟು ಮಾಡಿ ಕೃಷ್ಣನಿಗಾಗಿ ಪ್ರೀತಿಯಿಂದ ತರುತ್ತಾನೆ. ಈ ಭಾವ ನನಗೆ ತುಂಬಾ ಪ್ರಿಯವಾಗಿದ್ದು. ಹಾಗಾಗಿ ನನಗೆ ಸುಧಾಮನ ಬಗ್ಗೆ ವಿಶೇಷ ಅಭಿಮಾನ. ಹೀಗೆ ತಮ್ಮಲ್ಲಿಲ್ಲದಿದ್ದರೂ ಬೇರೆಯವರಿಗೆ ಕೊಡುವ ಮಹಾನುಭಾವರು...

ಮೂರಕ್ಕೆ ಮುಕ್ತಾಯ ????

ಮೂರಕ್ಕೆ ಮುಕ್ತಾಯ ???? "ಮೂರು " ಎಣಿಕೆ ಚಿಕ್ಕದಾದರೂ ಪ್ರಾಮುಖ್ಯತೆ ಜೋರು. ಸೃಷ್ಟಿ, ಸ್ಥ್ತಿತಿ ಮತ್ತು ಲಯ ಅದಕ್ಕೆ ಸಂಭಂದಿಸಿದಂತೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಮೂರು ಮೂರು. ಜನನ, ಜೀವನ ಮತ್ತು ಮರಣ - ಹುಟ್ಟಿನಿಂದ ಸಾವಿನವರೆಗೆ ಅಕ್ಷರಗಳು ಮೂರು. ಇನ್ನು ಜೀವಿಸಿರುವವರೆಗೂ ಮೂರರ ಪ್ರಭಾವ : ಜನನಿ, ಜನಕ, ಪಠನ, ಬರಹ, ಕೆಲಸ, ಮಡದಿ, ಮದುವೆ, ಮಕ್ಕಳು ಹೀಗೆ. "ಮುಟ್ಟಿದರೆ ಮೂರು ಸಲ" "ಮೂರಕ್ಕೆ ಮುಕ್ತಾಯ" "ಮುಖ ಮೂರು ಕಡೆ" ಇವು ನುಡಿಗಟ್ಟುಗಳು. ನದಿ ಅಥವಾ ಸಮುದ್ರದಲ್ಲಿ ಮೂರು ಸಲ ಮುಳುಗಿ, ಮೂರು ಸಲ ಆರ್ಘ್ಯ ಬಿಟ್ಟು, ದೇವರಿಗೆ ಮೂರು ಸುತ್ತು ಹಾಕಿ ಮಾಡುವುದು ಮೂರು ನಮಸ್ಕಾರ, ಹಾಕಿ ಕೊಳ್ಳುವುದು (ಕೆಲವುಸಲ ಬೇರೊಬ್ಬರಿಗೆ ಹಾಕುವುದು?) ಮೂರು ನಾಮ, ಕೊನೆಗೆ ನೆನಪಿಗೆ ಬಂದದ್ದು "ಗಂಗಮ್ಮ ಸಹ ಮೂರು ಸಲ ತೇಲಿಸಿ ಆಮೇಲೆ ಒಳಕ್ಕೆ ಎಳೆದುಕೊಳ್ಳುತ್ತಾಳೆ" ಅನ್ನುವ ಒಂದು ಮಾತು. ಈ ಮಾತು ಇಂದಿಗೂ ನನಗೆ ಒಂದು ತರಹ ಭಯ ಮತ್ತು ಗಾಬರಿಯನ್ನು ಉಂಟುಮಾಡುತ್ತದೆ. ಹಳ್ಳಿಯ ವಾತವರಣದಲ್ಲಿ ಬೆಳೆದ ನಾನು ಈಜಲು ಕಲಿತದ್ದು 6, 7 ನೇ ವಯಸ್ಸಿನಲ್ಲಿ. ಕಲಿಯಲು ಆಸೆ, ನೀರಿಗೆ ಬೀಳಲು ಭಯ. ನಮ್ಮ ಗುಂಪು ಬೇಸಿಗೆ ರಜಾ ಕಾಲದಲ್ಲಿ ಈಜುವುದು, ಮಾವು, ಸೀಬೆ, ದಾಳಿಂಬೆ, ಹುಣಿಸೆ ಹೀಗೆ ಸಿಕ್ಕಿದ ಯಾವುದೇ ಕಾಯಿಯಾದರೂ ಸರಿ ಉಪ್ಪು ಮೆಣಸಿನ ಪುಡಿ ಬೆರೆಸಿ ತಿಂದು ಮನೆಗೆ ಬರು...

ದ್ವಿತೀಯ ವಿಘ್ನ ಆಗಬಾರದು

ಇವತ್ತು ಎರಡನೆಯ ದಿನ. ದ್ವಿತೀಯ ವಿಘ್ನ ಆಗಬಾರದು... ಅದಕ್ಕೆ ಬರೀಲೇ ಬೇಕು. ಹೇಗಿದೆ ನಮ್ಮ ಹಿರಿಯರು ಮಾಡಿದ ಸಂಪ್ರದಾಯ. ಕೆಲಸ ಮಾಡಕ್ಕೆ ಸ್ಪೂರ್ತಿ ತುಂಬಲು ಒಂದು ಸೂಚನೆ. ನಮಗೆ ಗೊತ್ತಾಗದ ಹಾಗೆ ಸಣ್ಣ ಒತ್ತಡ. ದ್ವಿತೀಯ ವಿಘ್ನ ಅಂದ ತಕ್ಷಣ ನೆನಪಿಗೆ ಬರುವುದು " ಪ್ರಥಮ ಚುಂಬನೆ ದಂತ ಭಗ್ನೆ" ನಾಣ್ಣುಡಿ. ಚುಂಬನದಿಂದ ಅಲ್ಲದಿದ್ದರೂ ದಂತ ಭಗ್ನ ವಾದ ಸನ್ನಿವೇಷದ ನೆನಪು. ನಾನಿನ್ನೂ 5 , 6 ನೇ ತರಗತಿಯಲ್ಲಿ ಓದುತ್ತಿದ್ದ ಸಮಯ. ನನ್ನ ಅಂದಿನ ಹಳ್ಳಿ (ಇಂದು ಬೆಂಗಳೂರಿನ ಭಾಗವೇ ಆಗಿದೆ) ದೊಡ್ದಜಾಲದಲ್ಲಿ ನಾವು ಮಕ್ಕಳೆಲ್ಲಾ ನಾಟಕ ಮಾಡಬೇಕೆಂದು ನಿರ್ಢರಿಸಿದೆವು. ನಮ್ಮ ಮೇಷ್ಟ್ರ ಮಗ ತಾನೇ ಕೃಷ್ಣನ ಪಾತ್ರ ಮಾಡಬೇಕು ಅಂತ ಒಂದೇ ಹಠ. ಮೇಷ್ಟ್ರ ಮಗ ಹಾಗಾಗಿ ಅವನಿಗೆ ಒಂದಷ್ಟು ಪ್ರಾಮುಖ್ಯತೆ. ಇದು ನಮಗೆಲ್ಲಾ ಒಪ್ಪಿಗೆಯಾಗದ ವಿಷಯ. ಕೃಷ್ಣನ ಪಾತ್ರ ಅಂದ್ರೆ ಹೀರೋ, ಎಲ್ಲರಿಗೂ ಆಸೆ, ಆದರೆ ಅದನ್ನು ಹೇಳುವುದಕ್ಕೆ ಹಿಂಜರಿಕೆ. ( ಇದು ಮೇಷ್ಟ್ರ ಗಮನಕ್ಕೆ ಬಂದು ಅವರು ಬೈತಾರೆ ಅನ್ನುವ ಭಯ). ಈ ಒಳಗುದಿಯಲ್ಲೇ ನಾಟಕದ ಅಭ್ಯಾಸ ಶುರು. ನಮ್ಮೂರ ಈಶ್ವರನ ದೇವಸ್ಠಾನವೇ ನಮ್ಮ ರಂಗಸ್ಥಳ, ಮೆಟ್ಟಿಲುಗಳು ಸಿಂಹಾಸನ. ಕೃಷ್ಣ ಸಿಂಹಾಸನದ ಮೇಲೆ ಕೂತು ಮಾತನಾಡುವ ಸನ್ನಿವೇಷ. ಎಲ್ಲರೂ ನೋಡಿದ್ದ ನಾಟಕ. ನಮಗೆಲ್ಲಾ ತಿಳಿದಿದೆ ಎನ್ನುವ ಹಮ್ಮು ಬೇರೆ. ಕೃಷ್ಣನ ಪಾತ್ರಧಾರಿಯ ಮೇಲೆ ನಮ್ಮಲ್ಲಿ ಕೆಲವರಿಗೆ ಅಸಮಧಾನ, ಕೋಪ. ಹಾಗಾಗಿ ಕೃಷ್ಣ...
ನಮಸ್ಕಾರ... ಸ್ನೇಹಿತ ಸುಬ್ಬಯ್ಯ ಶೆಟ್ಟರು ಇಂದು ಬೆಳಗಿನ ವಿಹಾರದ ಸಮಯದಲ್ಲಿ ಕೊಟ್ಟ ಒಂದು ಸಲಹೆ : "ನೀವು ಇಲ್ಲಿ ಮಾತನಾಡುವುದನ್ನೇ ಬರೆದಿಡಿ... ಬಹುಶಃ ಅದು ಒನ್ದು ದಿನ ನಿಮಗೆ ಖುಶಿ ಕೊಡಬಹುದು"... ನನಗೂ ಬರೆಯುವ ಆಸೆ ಬಹಳವಿದೆ. ಆದರೆ ಬರೆಯಲು ಕುಳಿತರೆ ಯೋಚನೆ ಮತ್ತು ಬರಹದ ನಡುವಿನ ವೇಗದ ಅಂತರ ನನ್ನನ್ನು ಹಿಡಿದಿಡುತ್ತದೆ. ಬರೆದದ್ದೂ ಇದೆ... ಅದು ಬಹಳ ಸಲ ಬೇರೆಯವರ ಒತ್ತಾಯದಿಂದ .... ಈ ವಿಚಾರದಲ್ಲಿ ನನಗೆ ನನ್ನ ಮೇಲೆ ಅಸಮಧಾನವಿದೆ. ನೋಡೋಣ...ಇಂದೇ ನಿರ್ಧರಿಸಿದ್ದೇನೆ... ಬರವಣಿಗೆಯನ್ನು ಚಾಲ್ತಿಯಲ್ಲಿಡಬೇಕೆಂದು...... ಬ್ಲಾಗ್ ನಲ್ಲಿ ಬರೆಯಲು ಸಲಹೆಯನ್ನಿತ್ತವರು....ಅದೇ ಸುಬ್ಬಯ್ಯ ಶೆಟ್ಟರು. ಮೊದಲ ಸಾಲುಗಳು ಅವರಿಗೆ ಅರ್ಪಣೆ.....