Posts

Showing posts from July, 2023

ಅಮ್ಮನ ಮಡಿಲು.. ಅಪ್ಪನ ಹೆಗಲು

Image
 ಅಮ್ಮನ ಮಡಿಲು.. ಅಪ್ಪನ ಹೆಗಲು ಬುಧವಾರ ಸುಮಾರು 12 ಗಂಟೆ ಸಮಯದಲ್ಲಿ ಮನೆಗೆ ಬರ್ತಾ ಇದ್ದೆ. ಸಣ್ಣಗೆ ಹನಿ ಹಾಕ್ತಾ ಇತ್ತು.... ಕೆಂಪು ದೀಪ ಅಡ್ಡ ಬಂತು ಅಂತ ನನ್ನ ಗಾಡಿಯನ್ನು ನಿಲ್ಲಿಸ್ದೆ.... ಪಕ್ಕದಲ್ಲಿ ಸ್ಕೂಟರ್ ನ ಮುಂದಿನ ಜಾಗದಲ್ಲಿ ನಿಂತಿದ್ದ ಮಗುವಿನ ಕಣ್ಣಲ್ಲಿ ನೀರು ಹರೀತಿತ್ತು.... ಮನಸ್ಸು ತಡೆಯದೆ ಕೇಳಿದೆ ' ಯಾಕೋ ಮರಿ ಅಳ್ತಾ ಇದ್ದೀಯಾ'  ಅಂತ. ಉತ್ತರ ಕೊಟ್ಟಿದ್ದು ಮಗುವಿನ ಅಮ್ಮ... ನೋಡಿ ಹನಿ ಬರ್ತಾ ಇದೆ ತಲೆ ಮೇಲೆ ಟೋಪಿ ಹಾಕು ಅಂದ್ರೆ ಬೇಡ ಅಂತ ಹಠ ಮಾಡ್ತಾಳೆ.... ಕೋಪ ಬಂತು ತಲೆ ಮೇಲೆ ಮಟಕ್ದೆ.. ಅದಕ್ಕೆ ಅಳು.    ಮಗು ಅಮ್ಮನ ತೊಡೇನ ತಬ್ಬಿ ಕೊಳ್ತು, ಅಮ್ಮ ಮಗುನ ಮುದ್ದು ಮಾಡಿ ಕಣ್ಣೀರು ಒರೆಸಿದ್ಲು ಅಷ್ಟರಲ್ಲಿ ಹಸಿರು ದೀಪ ಬಂತು ನನ್ನ ದಾರಿ ನಾನು ಹಿಡಿದೆ.   ಅಮ್ಮನಿಂದನೆ ನೋವಾಗಿದ್ರು, ಅಮ್ಮನ ಪ್ರೀತಿಯ ಅಪ್ಪುಗೆ ಆ ಮಗುವಿಗೆ ಸಮಾಧಾನ ಕೊಡ್ತು... ಅದೇ ಅಲ್ವಾ ಅಮ್ಮನ ಅಪ್ಪುಗೆಯ ವಿಶೇಷತೆ. "ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು... ನಿನ್ನ ಸಂಗ ಆಡಲೆಂದು ಬಂದೆ ನಾನು...." ಕಪ್ಪು ಬಿಳುಪು ಚಿತ್ರದ ಈ ಹಾಡಿನ ದೃಶ್ಯದಲ್ಲಿ ಕಲ್ಪನಾ ಅವರ ಅಭಿನಯ ನೋಡಿದಾಗ ಅಮ್ಮನ ತೋಳಿನ ಹಿತವಾದ ಅನುಭವದ ಕಲ್ಪನೆ ತಾನಾಗಿ ನಮ್ಮ ಮುಂದೆ ಬರುತ್ತದೆ ಮನೆಯಲ್ಲಿ ಹೆಂಡತಿ ಇರಲಿಲ್ಲ, ನಾನೊಬ್ಬನೇ... ಸಂಜೆಯಾದರೆ ಮತ್ತೆ ಜಿಟಿ ಜಿಟಿ ಮಳೆ, ಮಬ್ಬು ಬೆಳಕಿನ ವಾತಾವರಣ.. ತಿನ್ನಕ್ಕೆ ಏನಾದರೂ ಬಿಸಿ ಬಿಸಿ ...

ಘ್ನಾನಪೀಠ...

Image
 ಘ್ನಾನಪೀಠ... ಶೀರ್ಷಿಕೆಯಲ್ಲಿ ಕಾಗುಣಿತ ತಪ್ಪು ಅನಿಸ್ತಾ ಇದೆಯಾ?  ನಿಮ್ಮ ಯೋಚನೆ ತಕ್ಕಮಟ್ಟಿಗೆ ಸರಿ ಇದೆ, ಚಿತ್ರಕ್ಕೂ ಶೀರ್ಷಿಕೆಗೂ ಅರ್ಥಾರ್ಥಕ್ಕೆ ಸಂಭಂದ ಇಲ್ಲ ಅನ್ಸತ್ತಾ? ನೀವು ನೂರಕ್ಕೆ ನೂರು ಸರಿ.  ಆದರೆ ಸ್ವಲ್ಪ ತಾಳಿ ನಾನು ಯೋಚನೆ ಮಾಡಿಯೇ ಬರೆದಿದ್ದೇನೆ... ಅದಕ್ಕೂ ಮೊದಲು ನಾನು ನನ್ನೆಲ್ಲಾ ಓದುಗರಿಗೆ ಸಪ್ರೇಮ ನಮಸ್ಕಾರಗಳನ್ನ ತಿಳಿಸುತ್ತೇನೆ. ಯಾಕೆ ಗೊತ್ತಾ... ಹೊಸ ದಾರಿಯಲ್ಲಿ ನಿಮ್ಮನ್ನು ಮುಟ್ಟಿದ ನನ್ನ ಬ್ಲಾಗ್  " ಎಂಟು ವರ್ಷಕ್ಕೆ ಮಗ ದಂಟು ಅಂದ"  ಅನ್ನು ನನ್ನ ಊಹೆಗೂ ಮೀರಿ ನೋಡಿ, ಅಭಿಪ್ರಾಯಗಳನ್ನು ತಿಳಿಸಿದ್ದಕ್ಕಾಗಿ.  ಅದರಲ್ಲೂ ನನ್ನ ಪುಟ್ಟ ನಾದಿನಿ ಮನಸಿ  (ಡಾ// H R ಮನಸ್ವಿನಿ  MD (Ayu) , MSc, DFSM) ...ಮಾಡಿದ  "ನಿಮ್ಮಿಂದ ಸ್ಪೂರ್ತಿ ಪಡೆದು ನಾನು ಬ್ಲಾಗ್ ಬರೀತೀನೀ ಅಂತ ನೀವ್ಯಾಕೆ ಬರೀಲಿಲ್ಲ"  ಅನ್ನುವ ಆಕ್ಷೇಪಣೆ... ನನಗೂ ಸಂತೋಷ ಆಯ್ತು... ನನ್ನಿಂದ ಅವಳಿಗೆ ಸ್ಪೂರ್ತಿ ಸ್ಪುರಿಸಿತಲ್ಲ ಅಂತ.   ಮನಸ್ವಿನಿಯ ಬರವಣಿಗೆ ಚೆನ್ನಾಗಿ ಮುಂದುವರೆಯಲಿ ಎಂದು ಆಶಿಸುತ್ತಾ.... ವಿಷಯಾಂತರ ಆಗಿದ್ದಕ್ಕೆ ಕ್ಷಮೆ ಇರಲಿ ಮತ್ತೆ ನನ್ನ ವಿಷಯಕ್ಕೆ ಬರ್ತೀನಿ... ಘ್ನಾನಪೀಠ.. ಕನ್ನಡಪ್ರಭದಲ್ಲಿ ಬರುವ ಒಂದು ಪ್ರಶ್ನೋತ್ತರ ಅಂಕಣ... ಆ ಅಂಕಣದ ಲೋಗೋ ಸರಿಸುಮಾರು ಇಂತಿದೆ. ಅದನ್ನು ನೋಡಿದಾಗೆಲ್ಲಾ  ನನಗನಿಸೋದು " ಉತ್ತರ ಹೊಳಿಯಕ್ಕೆ ಅದು...

ಕಣ್ಣು.. ಅದ ಮಾಡದಿರಿ ಮಣ್ಣು

Image
ಕಣ್ಣು.. ಅದ ಮಾಡದಿರಿ ಮಣ್ಣು  ಪಂಚೇಂದ್ರಿಯಗಳು ನಮ್ಮ ದೇಹದ sensor ಗಳು. ನಮ್ಮ ಎಲ್ಲ ದೈನಂದಿನ ಕೆಲಸಗಳಲ್ಲಿ ಪೂರಕವಾಗಿ ಇರುವ ಈ sensor ಗಳು ಬಹು ಪ್ರಾಮುಖ್ಯತೆ ಪಡೆದಿವೆ. ಎಲ್ಲ ಇಂದ್ರಿಯಗಳಿಗೂ ಅದರದೇ ಸ್ಥಾನವಿದೆ, ಅದರಲ್ಲೂ  ಕಣ್ಣು ಪಂಚೇಂದ್ರಿಯಗಳಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ. ನಮ್ಮ ಸುತ್ತಲಿನ ಎಲ್ಲ ಆಗುಹೋಗುಗಳನ್ನು ಮೊದಲು ಗಮನಿಸುವುದು ಕಣ್ಣು.... ಕಣ್ಣು ಸುತ್ತಲಿನ ಸೌಂದರ್ಯವನ್ನು ನೋಡಲಷ್ಟೇ ಅಲ್ಲ, ಅದು ನಮ್ಮ ಸೌಂದರ್ಯವನ್ನು ಹೆಚ್ಚಿಸುವ ಅಂಗ. ಸೌಂದರ್ಯ ಎನ್ನುವ ಪದ ಬಂದ ಕೂಡಲೇ ಅದರ ಜೊತೆ ಬರುವುದು ಹೆಣ್ಣು. ಹೆಣ್ಣಿಗೂ ಕಣ್ಣಿಗೂ ಅವಿನಾಭಾವ ಸಂಬಂಧ. ಹೆಣ್ಣು ಸಂಸಾರದ ಕಣ್ಣು ಎಂದಾಗ, ಕಣ್ಣಿಗಿರುವ ಪ್ರಾಶಸ್ತ್ಯ ಸಂಸಾರದಲ್ಲಿ ಹೆಣ್ಣಿಗೂ ಇದೆ ಎಂದು ಹೇಳಿದೆ.  ಕವಿಗಳು ಕಾದಂಬರಿ ಕಾರರು ಹೆಣ್ಣಿನ ವರ್ಣನೆಯಲ್ಲಿ ಕಣ್ಣಿಗೆ ಮೊದಲ ಸ್ಥಾನವನ್ನು ಕೊಟ್ಟಿದ್ದಾರೆ. ಇನ್ನು ಕಣ್ಣಿನ ಶಕ್ತಿಯ ವಿಷಯಕ್ಕೆ ಬಂದಾಗ " ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ" , ನಮ್ಮ ರಾಜಕುಮಾರ ಹಾಡಿದ ಹಾಡಿಗಿನ್ನ ಬೇಕೆ? " ಹೆಣ್ಣಿನ ಮೇಲೆ ಕಣ್ಣಿಡುವಾಗ ನಿಗಾ ತುಂಬಬೇಕು, ಕಣ್ಣಲ್ಲಿ ಕಣ್ಣಿಡಬೇಕು ಛಲಬೇಕು"   " ಕಣ್ಣು ಕಣ್ಣು ....."  ಇಂದ ಶುರುವಾಗುವ ಕೆಲ ಹಾಡುಗಳು,  ಇವೆಲ್ಲಾ ಕಣ್ಣಿನ ಬಣ್ಣನೆ. ಹೆಣ್ಣಿನ ಕಣ್ಣೀರು ಎಂಥ ಕಲ್ಲು ಹೃದಯದ ಗಂಡಸರನ್ನು ಕರಗಿಸುತ್ತದೆ ಎನ್ನುವುದು ಸ್ವಲ್ಪ ಉತ್ಪ್ರೇಕ್ಷೆಯ...

ಎಂಟು ವರ್ಷಕ್ಕೆ ಮಗ... ದಂಟು ಅಂದ

Image
 ಎಂಟು ವರ್ಷಕ್ಕೆ ಮಗ... ದಂಟು ಅಂದ ಏನಿದು ಶೀರ್ಷಿಕೆ ಅನಿಸ್ತಾ?   ಹೌದು ರೀ.. ನನ್ನ ಪರಿಸ್ಥಿತೀನು ಈಗ ಹಾಗೆ ಇದೆ. ಇದು ನನ್ನ 48ನೇ ಬ್ಲಾಗ್. ... ಎಂಟು ಅಂತ ಕೊನೆಗೆ ಬಂದಾಗ ನನಗೆ ನೆನಪಾಗಿದ್ದೇ ಈ ಶೀರ್ಷಿಕೆ... ವರ್ಷ ಎಂಟಕ್ಕೆ ಅಂದ ಮಗ ದಂಟು 48 ಮುಟ್ಟಕ್ಕೆ ನಾ ತಗೊಂಡೆ ತಿಂಗಳು 68...  ಸ್ವಂತ ಮನೆ ಕಟ್ಟಿದಾಗ ನನ್ನ ವಯಸ್ಸು 48 ಈಗ ತಕ್ಕಮಟ್ಟಿಗೆ ಅರ್ಥ ಆಯ್ತಾ ಯಾಕೆ ಈ ಶೀರ್ಷಿಕೆ ಅಂತ... 48 ಸಂಭ್ರಮಿಸಲು ಯಾವ ಮಾನದಂಡ? ಸಾಮಾನ್ಯವಾಗಿ 25, 50, 60, 75, 100 ಹೀಗೆ ಸಂಭ್ರಮಿಸುವ ಘಟ್ಟಗಳು.... ನನ್ನ ಮೆಚ್ಚಿನ ಲೇಖಕರು ಬೀchi ಹೇಳಿದಂತೆ.....60 ವರ್ಷಕ್ಕೆ ಸಂಭ್ರಮಿಸಲಿಕ್ಕೆ ಏನಿದೆ ರೀ...59ಕ್ಕೆ ಸಾಯ್ಲಿಲ್ಲ ಅದಕ್ಕೆ 60 ಆಗಿದೆ.. ಅದರಲ್ಲಿ ಏನು ವಿಶೇಷ ಇಲ್ಲ....  ಅಂಥಹವರ ಮಾತನ್ನ ಇಟ್ಕೊಂಡು ನಾನು 48 ನ್ನ ಗುರ್ತಿಸ್ದೆ, ಹೌದಲ್ಲ ಅನ್ನಿಸ್ತು... ಅಷ್ಟೇ.. 48 ಬ್ಲಾಗ್ ಬರ್ದಿದಿನಿ ಅಂತ  ಜಂಭ ಕೊಚ್ಕೊಳ್ತಿದೀನ... ಗೊತ್ತಾಗ್ತಾ ಇಲ್ಲ... ಯೋಚನೆ ಮಾಡಿದಾಗ ದೊಡ್ಡವರು ಹೇಳಿದ್ದ ಮಾತು ನೆನಪಿಗೆ ಬಂತು... ಒಂದು - ನಿನ್ನ ಬಗ್ಗೆ ನೀನೇ ಹೆಚ್ಚಿಗೆ ಹೇಳಬೇಡ.. ನಿನ್ನ ಕೆಲಸ ಹೇಳ್ಬೇಕು ಅದನ್ನ ಬೇರೆಯವರು ಮೆಚ್ಚಿ ಹೇಳ್ಬೇಕು..  ಇನ್ನೊಂದು ಮಾತು  - ನಿನ್ನ ಶಕ್ತಿ / ಪ್ರತಿಭೆ ಬಗ್ಗೆ ನೀನೇ ಹೇಳದಿದ್ದರೆ ನಿನ್ನ ಪರವಾಗಿ ಬೇರೆಯವರು ಯಾಕೆ ಹೇಳ್ತಾರೆ... ಸ್ವಲ್ಪ ತುತ್ತೂರಿ ಊದಬೇಕು.. ಆ ...

ಯೋಗ ದಿನದ ಆಚರಣೆ @ ಅಶಕ್ತ ಪೋಷಕ ಸಭಾ

Image
 ಯೋಗ ದಿನದ ಆಚರಣೆ @ ಅಶಕ್ತ ಪೋಷಕ ಸಭಾ ನೆನ್ನೆಯ ದಿನದ ಕಾರ್ಯಕ್ರಮದ ಗುಂಗಿನಲ್ಲೇ ಬೆಳಗ್ಗೆ ಎದ್ದೆ... ಈಗೀಗ ಎದ್ದು ಬೆಳಗಿನ ಶುಚಿ ಕಾರ್ಯ ಕ್ರಮಗಳು ಮುಗಿದ ಕೂಡಲೇ ಫೋನ್ ಕೈಗೆತ್ತಿಕೊಳ್ಳುವುದು ಒಂದು ಚಟವೇ ಆಗಿದೆ. ಎಂದಿನಂತೆ ಫೋನ್ ಕೈಗೆತ್ತಿಕೊಂಡಾಗ ಅದರ ವಾಟ್ಸಪ್ ಮೆಸೇಜುಗಳ ಒಂದು ಪಟ್ಟಿ.. ಅಶಕ್ತ ಪೋಷಕ ಸಭಾ ಸಮೂಹ ಎಂಬ ಗ್ರೂಪ್ನಲ್ಲಿ ಚಿತ್ರಗಳು ಹಾಗೂ ವೀಡಿಯೋಗಳ ಸುರಿಮಳೆ... ಈ ಚಿತ್ರಗಳು ಹಾಗೂ ವಿಡಿಯೋಗಳು ನೆನ್ನೆಯ ದಿನ ಅಶಕ್ತ ಪೋಷಕ ಸಭಾ ದಲ್ಲಿ ನಡೆದ ಯೋಗ ದಿನದ ಕಾರ್ಯಕ್ರಮಕ್ಕೆ ಸಂಬಂಧ ಪಟ್ಟಿದ್ದು.... ಅದನ್ನು ನೋಡುತ್ತಾ ಸಭಾದ ನಿವಾಸಿಗಳು ನಡೆಸಿಕೊಟ್ಟ ಕಾರ್ಯಕ್ರಮ... ಹಾಗೂ ಅವರಲ್ಲಿ ಆದ ಬದಲಾವಣೆಗಳ ನೆನಪಿನ ಓಟ ಮನಸ್ಸಿನಲ್ಲಿ ಮೂಡಿತು. ಅಶಕ್ತ ಪೋಷಕ ಸಭಾ ಒಂದು ವೃದ್ಧಾಶ್ರಮ, ಬೆಂಗಳೂರಿನ ವಿಶ್ವೇಶ್ವರಪುರ ದಲ್ಲಿ ಇದೆ. ಇದು ಶತಮಾನ ಕಂಡಿರುವ ಒಂದು ಸಂಸ್ಥೆ. ಇದರಲ್ಲಿ 120ಕ್ಕೂ ಹೆಚ್ಚು ಜನ ನಿವಾಸಿಗಳಿದ್ದಾರೆ. ಎಲ್ಲವೂ ಅಚ್ಚುಕಟ್ಟು ಹಾಗೂ ಎಲ್ಲವೂ ಉಚಿತ.... ಇದು ಈ ಸಂಸ್ಥೆಯ ವಿಶೇಷತೆ. ಒಂದು ಸಂಸ್ಥೆ ಒಂದು ಶತಮಾನದ ಕಾಲ ನಡೆದು ಬಂದಿದೆ ಎನ್ನುವುದೇ ಒಂದು ವಿಶೇಷ... ಇದಕ್ಕೆ ಮೂಲತಃ ಅಡಿಪಾಯ ಹಾಕಿದ ಮಹನೀಯರ ಧ್ಯೇಯ, ನಿಸ್ವಾರ್ಥ ಮನೋಭಾವ ಹಾಗೂ ಬದ್ಧತೆ... ಅದನ್ನು ಉಳಿಸಿ ಪೋಷಿಸಿ ಬೆಳೆಸಿದ ಮುಂದಿನ ತಲೆಮಾರಿನ ಮಹನೀಯರು ಹಾಗೂ ಇಂದಿನ ಆಡಳಿತ ವರ್ಗ ಹಾಗೂ ಸಿಬ್ಬಂದಿಯ ಮುಂದುವರಿದ ಅದೇ ಧ್ಯೇಯ, ನಿಸ್ವಾರ್ಥ ಮನೋಭಾವ ಹಾಗ...