Posts

Showing posts from February, 2023

ಬಲು ಅಪರೂಪ ನಮ್ ಜೋಡಿ.....

Image
  ಫೆಬ್ರವರಿ 28ನೆಯ ತಾರೀಕು ನನ್ನ ಮದುವೆಯಾದ ದಿನ. ಇದು 44 ವರ್ಷಗಳ ಹಿಂದಿನ ಮಾತು. ಆದರೆ ನಾವು ಮದುವೆಯ ದಿನವನ್ನು ಆಚರಿಸುವುದು ಈ ತಾರೀಖಿನಲ್ಲಲ್ಲ... ಆದರೆ ನಮ್ಮ ಪಂಚಾಂಗದ ತಿಥಿಯ ಪ್ರಕಾರ ಅಂದರೆ ಪಾಲ್ಗುಣ ಮಾಸ ಶುಕ್ಲ ಪಕ್ಷ ಬಿದಿಗೆ. ಇದು ಹೋದ ಬುಧವಾರವೇ ಆಯಿತು.  ಈಗಿನ ಸಾಮಾಜಿಕ ಜಾಲತಾಣದ ಪ್ರಭಾವದಲ್ಲಿ ನಮಗೆ ಶುಭಾಶಯಗಳನ್ನು ಹೇಳುವವರ ಸಂಖ್ಯೆ ಜಾಸ್ತಿಯಾಗಿದೆ. ಆದರೆ ಈ ಶುಭಾಶಯಗಳು ವಿನಿಮಯ ಮಾಡಿಕೊಳ್ಳುವ ಇನ್ನೊಂದು ದಂಪತಿ ಇದೆ... ನಾವಿಬ್ಬರೂ ಪರಸ್ಪರ  thank you and same to you ಅಂತ ಹೇಳಿಕೊಳ್ಳುವ ವರು.   ( ಈಗ ನಮ್ಮ ಜೊತೆಗೆ ಇನ್ನೊಂದು ಹೊಚ್ಚ ಹೊಸ ಜೋಡಿ ಸೇರಿಕೊಂಡಿದೆ ಅದು ಸಾರ್ಥಕ ಮತ್ತು ಸುಪ್ರಿಯ.. ಈ ಜೋಡಿ ವಿಶೇಷತೆಯಿಂದ ಹೊರತು)  ನಮ್ಮ ಜೋಡಿಗಳಲ್ಲಿ ಅಪರೂಪದ ವಿಶೇಷತೆ ಇದೆ ಅದನ್ನು  " ಕಾಕತಾಳಿಯ ಸಮಾನತೆಗಳು" ಎಂದರೂ ಸರಿಯೇ. ನಾನು DC ರಂಗನಾಥ ರಾವ್ ( DCರಂಗ) , ನನ್ನ ಗೆಳೆಯ HP ರಂಗನಾಥ (HP ರಂಗ) ಇನ್ನು ನನ್ನ ಮಡದಿಯ ಹೆಸರು H K ವಿಜಯ,(ವಿಜಿ)  ನನ್ನ ಗೆಳೆಯನ ಮಡದಿಯ ಹೆಸರೂ ವಿಜಯ ..G ವಿಜಯ (ಜಿವಿಜಿ) ಇಲ್ಲಿಂದ ಶುರು ನಮ್ಮ ದಂಪತಿಗಳ ಸಮಾನತೆಗಳು. ಅನುಕೂಲಕ್ಕಾಗಿ ನಾನು ಹಾಗೂ ನನ್ನ ಗೆಳೆಯನನ್ನು      " ನಾವಿಬ್ಬರು" ಎಂದು ಹೇಳುತ್ತೇನೆ... ನಮ್ಮ ಮಡದಿಯರನ್ನು " ಅವರಿಬ್ಬರು" ಎಂದು ಸಂಭೋಧಿಸುತ್ತೇನೆ. ನಾವಿಬ್ಬರೂ ಹುಟ್ಟಿದ್ದು ...

ಈಜು ಕಲಿಸಿದ ರಾಮಲಿಂಗಣ್ಣಯ್ಯ

Image
   ”ಈಜಕ್ಕೆ ಬರಲ್ವಾ...?” ಅಂತ ಪ್ರಶ್ನೆ ಕೇಳಿದಾಗ ಇಲ್ಲ ಅನ್ನುವುದು ಅವಮಾನಕರ ಅನ್ನುವ ಪ್ರತೀತಿ ಇತ್ತು- ನಾನು ಹಳ್ಳಿಯಲ್ಲಿದ್ದಾಗ. ಹಾಗಾಗಿ ನಾನು ಈಜು ಕಲಿಯಲು ಶುರುಮಾಡಿದ್ದು ಪ್ರಾಯಶಃ ಎರಡನೆಯ ತರಗತಿಯಲ್ಲಿ ಓದುತ್ತಿದ್ದಾಗ. ಬೇಸಿಗೆಯ ರಜಾ ಇನ್ನೇನು ಶುರು ಅಂದಾಗ, ನಮ್ಮಪ್ಪ ಹೇಳಿದ್ದು ಅವರ ಸ್ನೇಹಿತ ರಾಮಲಿಂಗಾಚಾರ್ಯ ಅವರ ಹೆಸರು...... ನಮಗೆಲ್ಲಾ ಅವರು "ರಾಮಲಿಂಗಣ್ಣಯ್ಯ" ಎಂದೆ ಪರಿಚಿತರು. ರಾಮಲಿಂಗಣ್ಣಯ್ಯ ಇದ್ದದ್ದು ನಮ್ಮ ಮನೆಯ ಮುಂದೆ.. ಬಹಳ ಸಲ ಬೆಳ್ಳಂಬೆಳಗ್ಗೆಯೇ ಅವರ ಹಾಡು ಶುರು... ಅದಕ್ಕೆ ನಮ್ಮಪ್ಪನ ವ್ಯಾಖ್ಯಾನ.... ಉದಯರಾಗ ಶುರುವಾಯಿತು ಎಂದು. ರಾಮಲಿಂಗಣ್ಣಯ್ಯ ವೃತ್ತಿಯಲ್ಲಿ ಅಕ್ಕಸಾಲಿಗರು- ಚಿನ್ನ ಬೆಳ್ಳಿಯ ಕೆಲಸಗಾರರು. ತಮ್ಮದೇ ಹೊಲಗದ್ದೆಗಳನ್ನು ಹೊಂದಿದ್ದವರು.  ಸರಿ, ನಮ್ಮ ಪಟಾಲಮ್ಮು ( ನಾನು ನನ್ನಣ್ಣ ಸತ್ತಿ, ಮುಕುಂದ, ಮೂರ್ತಿ ಹಾಗೂ ಇತರರು) ರಾಮಲಿಂಗಣ್ಣಯ್ಯನ ಹಿಂದೆ ಬಿದ್ದೆವು. ದಿನ ಬೆಳಗ್ಗೆ ಸಾಯಂಕಾಲ ಅವರನ್ನು  ಕಾಡಿಸುವುದು ಪೀಡಿಸುವುದು.. ಅವರು ಕೆಲಸ ಮಾಡುತ್ತಿದ್ದರೆ ಸಣ್ಣಪುಟ್ಟ ಸಹಾಯ ಮಾಡುವುದು, ತಿದಿ ಒತ್ತುವುದು, ಅವರಿಗೆ ಬೀಡಿ ತಂದು ಕೊಡುವುದು, ಹೀಗೆ ಅವರ ಮನಮೆಚ್ಚಿಸಲು ಮಾಡುತ್ತಿದ್ದ ಕೆಲಸಗಳು. ತುಂಬಾ ಕಾಡಿಸಿದಾಗ " ಅಸ್ಸಿಸ್ಸಿ.... ಹೋಗಯ್ಯ ಅತ್ತಾಗೆ" ಅಂತ ಬೈಸಿಕೊಂಡದ್ದು ಉಂಟು. ಏನೇ ಆದರೂ ನಮ್ಮ ಉತ್ಸಾಹಕ್ಕೆ ಭಂಗ ಬರಲಿಲ್ಲ. ಅಂತೂ ಕೊನೆಗೊಂದು ದಿನ  " ತ...

ಶಿವರಾತ್ರಿ ಹಬ್ಬವೂ... ಗೊಟ್ಟಿಗೆರೆ ಜಾತ್ರೆಯೂ..

Image
  ಇವತ್ತು ಶಿವರಾತ್ರಿ ಹಬ್ಬ.. ಆದರೆ ನಮ್ಮ ಕುಟುಂಬಕ್ಕೆ ಹಬ್ಬದ ಆಚರಣೆ ಇಲ್ಲ ಕಾರಣ - ನನ್ನ ದೊಡ್ಡಣ್ಣ ತೀರಿಕೊಂಡ ವರ್ಷ. ಇದರೊಡನೆ ಇನ್ನೊಂದು ಅಣ್ಣನ ನೆನಪು ಕಾಡಿತು. ಇಂದು ಬೆಳಿಗ್ಗೆ ವಾಕಿಂಗ್ ಸಮಯದಲ್ಲಿ ಗೆಳೆಯರು ನೆನೆಸಿಕೊಂಡ ವ್ಯಕ್ತಿ ಈ ಇನ್ನೊಂದು ಅಣ್ಣ.. ಜಿ.ಎನ್. ಶ್ರೀನಿವಾಸ ಮೂರ್ತಿ, ಹಾಗೂ ಶಿವರಾತ್ರಿ ಯೊಂದಿಗಿನ ಅವನ ನಂಟು. ಮೂರ್ತಿ ಗೊಟ್ಟಿಗೆರೆಯ ಮೂಲದವನು( ಗೊಟ್ಟಿಗೆರೆಯ ಮಾಜಿ ಜಮೀನ್ದಾರ ಹಾಗೂ ಅವನೇ ಹೇಳುತ್ತಿದ್ದಂತೆ ಒಬ್ಬ ಹೆಸರುವಾಸಿ ಸಂಗೀತ ಗಾಯಕಿಯ ಮದುವೆ ಪ್ರಪೋಸಲ್ ಬಂದಿದ್ದ ಮಾಜಿ ವರ). ಶಿವರಾತ್ರಿ ಅಂದೊಡನೆ ನನಗೆ ಸಹಜವಾಗಿ ನೆನಪಿಗೆ ಬರುವುದು ಶಿವರಾತ್ರಿ ಮಾರನೆಯ ದಿನದ ಗೊಟ್ಟಿಗೆರೆ ಸೋಮೇಶ್ವರ ದೇವರ ಜಾತ್ರೆ. ಈ ಜಾತ್ರೆಗೆ ನಾವು ವಾಕಿಂಗ್ ಸ್ನೇಹಿತರೆಲ್ಲ ತಪ್ಪದೇ ಬಹಳಷ್ಟು ವರ್ಷಗಳ ಕಾಲ ಹೋಗಿ, ತೇರಿನ ಸಂಭ್ರಮ, ಬಾಳೆಹಣ್ಣು ಧವನ ಎಸೆಯುವುದು, ಪಾನಕ ಪನ್ಯಾರ, ಭರ್ಜರಿ ಊಟ ಸವಿದು ಬರುವುದು ಒಂದು ಸಂಪ್ರದಾಯವೇ ಆಗಿತ್ತು. ಅಣ್ಣನ ಕುಟುಂಬದವರ ಆತ್ಮೀಯತೆ , ಆದರ , ಸತ್ಕಾರ ಇವೆಲ್ಲ ಸ್ಮರಣೀಯ. ಕೋವಿಡ್ ಕಾಲದಲ್ಲಿ ನಿಂತ ಸಂಪ್ರದಾಯ ನಿಂತೇ ಹೋಯಿತು, ಅಣ್ಣನ ನಿಧನದಿಂದ. ನನ್ನ ಜೀವನದ ಸರಿಸುಮಾರು 18 ವರ್ಷಗಳ ಕಾಲ ಒಡೆನಾಡಿದ ಆತ್ಮೀಯ ಗೆಳೆಯ. ಅದೇನೋ ಪ್ರೀತಿ ಅಭಿಮಾನ ಅವನನ್ನು ಕಂಡರೆ. ಬೆಳಿಗ್ಗೆ ವಾಕಿಂಗ್ ಸಮಯದಲ್ಲಿನ ಮಾತು, ತಲೆ ಹರಟೆ, ಹಳ್ಳಿ ಭಾಷೆಯ ಸೊಗಡು ಹಾಗೂ ಅದರಲ್ಲಿನ ರಸಿಕತೆ, ಹಾಡಿನ ಗುನುಗಾಟ ಹೀಗೆ ...

ಇನ್ನೊಂದು ಪಯಣ - ಬೇರೆಯೇ ದಿಕ್ಕು

Image
  ಈ ಭಾನುವಾರ ಡಾ ಸಿ ಆರ್ ಚಂದ್ರಶೇಖರ್ ಅವರು ಬರೆದ " ನಾನು ಕಂಡ ನಾಡಿನ ನಕ್ಷತ್ರಗಳು" ಪುಸ್ತಕದ ಬಿಡುಗಡೆ ಸಮಾರಂಭ ನ್ಯಾಷನಲ್ ಕಾಲೇಜ್ ಸಭಾಂಗಣದಲ್ಲಿ ನಡೆಯಿತು.  ನಾನು ಓದಿದ ಕಾಲೇಜಿನ ಆವರಣಕ್ಕೆ ಹೊಕ್ಕಾಗ ಅಲ್ಲಾಗಿದ್ದ ಬದಲಾವಣೆಗಳು, ಕಣ್ಣಿಗೆ ಬಿದ್ದ ಹಳೆಯ ಕುರುಹುಗಳು ಮನಸ್ಸನ್ನು ಪುಳಕಗೊಳಿಸಿತು. ಕಾರ್ಯಕ್ರಮದಲ್ಲಿ ಸಾಕಷ್ಟು ಮಂದಿ ಹಳೆಯ ಮುಖಗಳ ಭೇಟಿ ಉಭಯಕುಶಲಾಪರಿ ಆಯಿತು. ಈ ಮಧ್ಯೆ ರಾಜೇಶ್ವರಿ (ನನ್ನನ್ನು ಅಪ್ಪ ಎಂದು ಅಭಿಮಾನದಿಂದ ಸಂಭೋಧಿಸುವ ಹೆಣ್ಣು  ಮಗಳು) ಕೊಟ್ಟ ಆಹ್ವಾನ ಹಾಗೂ ಅದರ ಹಿಂದಿರುವ ಕಾರಣವನ್ನು ತಿಳಿದಾಗ ಆಗದು ಎನ್ನುವ ಮನಸ್ಸು ಬರಲಿಲ್ಲ... ಹಾಗಂತ ಸಂಪೂರ್ಣ ಒಪ್ಪಿಗೆಯೂ ಇರಲಿಲ್ಲ. ಮನೆಯಲ್ಲಿ ಮಡದಿಗೆ ಈ ಕಾರ್ಯಕ್ರಮದ ಬಗ್ಗೆ ತಿಳಿಸಿದಾಗ ಸಿಕ್ಕ ಪ್ರತಿಕ್ರಿಯೆಯಲ್ಲಿ ಅಸಮಾಧಾನದ ಹೊಗೆಯಾಡುತ್ತಿತ್ತು.. ಸಹಜವೇ.... ಕಾರ್ಯಕ್ರಮಕ್ಕೆ ಹೋಗುವಾಗ ಮನಸ್ಸು ಅರಳಿರಲಿಲ್ಲ. ಇದಕ್ಕೆ ಎರಡು ಕಾರಣ ಇರಬಹುದು  ಮೊದಲನೆಯದು ನಾನು ಹೋಗುತ್ತಿದ್ದದ್ದು ಕಾರ್ಯಕ್ರಮದ ಮುಖ್ಯಅತಿಥಿಯಾಗಿ...ಎರಡನೆಯದು ನನ್ನಾಕೆಯನ್ನು ಒಂಟಿಯಾಗಿ ಬಿಟ್ಟು ಬಂದ ಅಪರಾಧೀ ಭಾವ. Omkar Nagar residents welfare Association ಅವರ ವಾರ್ಷಿಕ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳುವಾಗ ಖುಷಿಯ ಅನುಭವ. ಮಕ್ಕಳಿಂದ ಹಿಡಿದು ಹಿರಿಯ ನಾಗರೀಕರ ತನಕ ಎಲ್ಲಾ ವಯಸ್ಸಿನ, ಬೇರೆ ಬೇರೆ ಭಾಷೆಯ ಜನರ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿಗೆ ಮುದ ...

ಮದುವೆಯ ಸಡಗರ - ಅಭಿಮಾನದ ಮಹಾಪೂರ

Image
ಈಗೀಗ ಮದುವೆಯ ಮನೆಯ ಸಮಾರಂಭಗಳು ವ್ಯವಹಾರಿಕವಾಗಿವೆ. ನಮ್ಮ ಪಾತ್ರ  / ಒಳಗೊಳ್ಳುವಿಕೆ ಇಲ್ಲವೇ ಇಲ್ಲ ಎನ್ನುವಷ್ಟು. ಪರಿಚಯದ ಕೆಲವರನ್ನು ಮಾತಾಡಿಸಿ ವಧೂವರರಿಗೆ ಕೈಕುಲುಕಿ ಊಟ ಮಾಡಿ ಬಂದರೆ ಮುಗಿಯಿತು. ಇನ್ನು ಕೆಲ ಕಡೆಗಳಲ್ಲಂತೂ ಜನಸಂದಣಿಯನ್ನು ಗಮನಿಸಿ ಮೊದಲು ಊಟ ಮಾಡಿ ನಂತರ ಕೈ ಕುಲುಕಿ ಬರುವುದೂ ಇದೆ. ಎಲ್ಲವೂ.... ಎಲ್ಲಕ್ಕೂ  event management ಕಡೆಯಿಂದ ತಯಾರಿ.   ಬಂದವರನ್ನು ಸತ್ಕರಿಸುವ ಯೋಚನೆಯೂ ಇಲ್ಲದಿರುವಷ್ಟು ಅನುಕೂಲಗಳು. ನಾವು ಚಿಕ್ಕವರಿದ್ದಾಗ ಮದುವೆ ಮನೆ ಅಂದರೆ ಕೈ ತುಂಬಾ ಕೆಲಸ. ಸಾಮಾನುಗಳು , ಪಾತ್ರೆ, ಸೌದೆ, ಆಮಂತ್ರಣ ಪತ್ರಿಕೆ ಹಂಚುವುದು, ಬಂದವರಿಗೆ ಆತಿಥ್ಯ , ಅಡಿಗೆ ಮಾಡುವವರಿಗೆ ಬೇಕಾದ ಸಾಮಾನುಗಳನ್ನು ಕೊಡುವುದು , ಕೆಲ  ಸಮಯದಲ್ಲಿ ಊಟಕ್ಕೆ ಬಡಿಸುವುದು ಸಹ ನಮ್ಮ ಮೇಲಿನ ಜವಾಬ್ದಾರಿಯಾಗಿತ್ತು. ಕೆಲಸದ ಮಧ್ಯಯೂ ಸಡಗರ ಸಂಭ್ರಮ ಇರುತ್ತಿತ್ತು... ಎಂಥಾ ಬದಲಾವಣೆ ಅಲ್ವಾ...  ಇದೆಲ್ಲಾ ನೆನಪಿಗೆ ಬರಲು ಕಾರಣ ಈಚೆಗೆ ನಾನು ಭೇಟಿ ನೀಡಿದ ಒಂದು ಮದುವೆ. ಇಂದಿನ ಮದುವೆಯಲ್ಲಿ ನನಗೆ ತಕ್ಕಮಟ್ಟಿಗೆ ಪರಿಚಯವಿದ್ದವರು ಮೂರೇ ಜನ, ಅದರಲ್ಲಿ ಒಬ್ಬಳು ಮದುಮಗಳು. ನಾನು ಮದುವೆ ಮನೆ ಪ್ರವೇಶಿಸುತ್ತಿದ್ದಂತೆ ತುಂಬಾ ಆತ್ಮೀಯತೆಯಿಂದ ಬರಮಾಡಿಕೊಂಡು ಸಂತೋಷವನ್ನು ವ್ಯಕ್ತಪಡಿಸಿದವರು ಇನ್ನಿಬ್ಬರು. ಅವರ ಪ್ರೀತಿ ಆದರಗಳು ಪರ್ವತದಷ್ಟು. ಈಚಿನ ದಿನಗಳಲ್ಲಿ ನಾನು ಕಂಡು ಕೇಳರಿಯದ ಆತ್ಮೀಯ ಭಾವ ಅ...