Posts

Showing posts from June, 2025

ವಸಂತವನ್ನೇ ಕಾಣದ ವಸಂತಲಕ್ಷ್ಮಿ

Image
ನನ್ನ ಕಛೇರಿಯಲ್ಲಿ ಯಾವುದೋ Technical discussion  ನ್ನಲ್ಲಿದ್ದೆ. ಫೋನ್ ರಿಂಗಣಿಸಿತು.. ಉತ್ತರಿಸದೆ ನಿರಾಕರಿಸಿದೆ.  ಮತ್ತೆರಡು ಸಲ  ಅದೇ ಫೋನ್  ಕರೆ... ಅಪರಿಚಿತ ನಂಬರ್ ನಿಂದ. ಪ್ರಾಯಶಃ ಯಾವುದೋ ಗಹನವಾದ ವಿಷಯವೇ ಇರಬಹುದೆಂದು ಕರೆಯನ್ನು ಸ್ವೀಕರಿಸಿದೆ. ' ಸರ್ ಕ್ಷಮಿಸಿ, ಮತ್ತೆ ಮತ್ತೆ ಫೋನ್ ಮಾಡಿದ್ದಕ್ಕೆ. ನಾನು ವಸಂತ ಲಕ್ಷ್ಮಿಯ ತಂಗಿ, ಅಕ್ಕನ ಆರೋಗ್ಯ ತುಂಬಾ ಹದಗೆಟ್ಟಿದೆ, ಪದೇ ಪದೇ ನಿಮ್ಮ ಹೆಸರು ಹೇಳ್ತಾಳೆ, ನೀವು ಒಂದು ನಿಮಿಷ ಬಂದು ಅಕ್ಕನನ್ನು ಮಾತಾಡಿಸಲು ಸಾಧ್ಯವಾ ಎಂದು ಅಪ್ಪ ಕೇಳಿದ್ದಾರೆ, ಬರ್ತೀರ ಅಲ್ವಾ?' ಮನೆಯ ವಿಳಾಸ ಕೇಳಿ ತಿಳಿದುಕೊಂಡೆ, ನಡೆಯುತ್ತಿದ್ದ ಮಾತುಕತೆಯನ್ನು ಬೇಗ ಮುಗಿಸಿ, ಹೊರಡಲನುವಾದೆ. ಮನೆ ಸಮೀಪಿಸಿದಾಗ, ಅಳು ಕೇಳಿ ಬಂತು, ಅನುಮಾನವಾಯಿತು, ನನ್ನ ಕಂಡೊಡನೆ ಅವರ ಅಪ್ಪ ಹೇಳಿದ್ದು "ನೋಡಿ ಸರ್ ಹೆಂಗ್ ಮಲಗವಳೆ, ನನ್ ಮೇಲೆ ಕೋಪ ಬಂದಾಗ ರಂಗನಾಥ್ ರಾವ್ ಸರ್ ಗೆ ಹೇಳ್ತೀನಿ ಅಂತ ಹೆದರಿಸುತ್ತಿದ್ದೋಳು ಈಗ ತೆಪ್ಪಗೆ ಮಲಗವಳೆ.. ನಮ್ಮನ್ನ ಬಿಟ್ಟು ಹೋಗ್ಬಿಟ್ಲು' . ನನಗೆ ಆಘಾತವಾಯಿತು, ಇಷ್ಟು ಬೇಗ ಹೀಗಾಗುತ್ತದೆ ಎಂದು ನಾನು ಎಣಿಸಿರಲಿಲ್ಲ. ಸ್ವಲ್ಪ ಹೊತ್ತು ಇದ್ದು ಸಮಾಧಾನದ ಮಾತಾಡಿ, ಅಲ್ಲಿಂದ ಹೊರಟೆ... ಮನಸ್ಸು ಹಿಂದಕ್ಕೆ ಓಡಿತು. ಆಗಿನ್ನು ಆಪ್ತ ಸಮಾಲೋಚಕನಾದ ಹೊಸತು, ಬುಧವಾರ ಸಂಜೆ ಹೋದೊಡನೆ, ಪ್ರಸನ್ನ ಆಪ್ತ ಸಲಹಾ ಕೇಂದ್ರದ ಬಾಗಿಲು ತೆಗೆದು,  ಬಂದಿರುವ ಎಲ್ಲರ ಹೆ...

Air India - ಕೃತಕ ಬುದ್ದಿಮತ್ತೆ

Image
ಜೂನ್ ಹನ್ನೆರಡರಂದು ಅಹಮದಾಬಾದ್ ನಲ್ಲಿ ನಡೆದ     A ir  I ndia ದ  ನಂಬರ್   A   I - 117  ವಿಮಾನದ ಅಪಘಾತದ ಸುದ್ದಿ ನಮ್ಮನ್ನೆಲ್ಲ ಬೆಚ್ಚಿಬೀಳಿಸಿತು. 250 ಕ್ಕೂ ಹೆಚ್ಚು ಜನರು ಸತ್ತಿದ್ದು ನೋವಾಯಿತು. ಅದರಲ್ಲೂ ಹಾಸ್ಟೆಲ್ ನಲ್ಲಿ ಊಟ ಮಾಡುತ್ತಿದ್ದ ಅಮಾಯಕ ವಿದ್ಯಾರ್ಥಿಗಳು ಸತ್ತದ್ದು ವಿಧಿಯಾಟವೇ ಸರಿ.  .... ವಿಶ್ವ ಕುಮಾರ್ ರಮೇಶ್ ಎಂಬ ಒಬ್ಬರೇ ವ್ಯಕ್ತಿ ಬದುಕುಳಿದದ್ದು ಸಹ ವಿಧಿಯಾಟವೇ. ಈ ಸುದ್ದಿಯನ್ನು ಓದುವಾಗ ನನಗೆ ಎದ್ದು ಕಂಡದ್ದು  A   I.   ಪ್ರಸಕ್ತ ಕಾಲಮಾನದಲ್ಲಿ    A   I - ಕೃತಕ ಬುದ್ದಿಮತ್ತೆ , ಮುಂಚೂಣಿಯಲ್ಲಿರುವ ವಿದ್ಯಮಾನ. ಎಲ್ಲ ಸ್ತರಗಳಲ್ಲೂ ಅದರ ಉಪಯೋಗ ಅನಿವಾರ್ಯವೋ ಎಂಬಂತೆ ಬೆಸೆದುಕೊಂಡಿದೆ.  ಜೊತೆಗೆ ಅದರಿಂದ ಆಗಬಹುದಾದ  ಅನಾಹುತಗಳ ಬಗ್ಗೆ ಚರ್ಚೆ, ಚಿಂತನೆಗಳು...  ಮನುಷ್ಯನ ಬುದ್ಧಿಮತ್ತೆಯ ಕಣ್ಗಾವಲು ತಪ್ಪಿದರೆ, ಮನುಷ್ಯನನ್ನೇ ನುಂಗುವ ಪರಿಸ್ಥಿತಿ ಬರಬಹುದು ಎನ್ನುವ ವಿಚಾರ ಚಾಲ್ತಿಯಲ್ಲಿವೆ.   ತನ್ನ ಕೈಯನ್ನು ಬೇರೆಯವರ ತಲೆಯ ಮೇಲೆ ಇಟ್ಟು ಸುಡುವ ಶಕ್ತಿಯ ವರವನ್ನು  ಶಿವನಿಂದ  ಪಡೆದ ಭಸ್ಮಾಸುರ, ಶಿವನ ಮೇಲೆ ಪ್ರಯೋಗ ಮಾಡಲು ಹೊರಟಂತೆ, ಕೊನೆಗೆ ವಿಷ್ಣು ಮೋಹಿನಿ ರೂಪದಲ್ಲಿ ಬಂದು ಭಸ್ಮಾಸುರನನ್ನು ಕೊಂದಂತೆ... ಕೃತಕ ಬುದ್ಧಿಮತ್ತೆ...

ಮಂತ್ರಾಲಯಕೆ ಹೋಗೋಣ...

Image
  ಮಳೆ ಹನಿಗಳ ಸಿಂಚನ ಮೈ ಮೇಲೆ, ಮಂತ್ರಾಲಯಕೆ ಹೋಗೋಣ.. ಗುರುರಾಯರ ದರುಶನ ಮಾಡೋಣ.. ಎಂಬ ಹಾಡು ಕಿವಿಯ ಮೇಲೆ, ಝಗಮಗಿಸುವ ದೀಪಾಲಂಕಾರ ಕಣ್ಣಿಗೆ, ಮಳೆಯಲ್ಲೇ ಸಡಗರದಿಂದ ಓಡಾಡುತ್ತಿದ್ದ ಜನಸಾಗರ... ಇದು  ಮೊನ್ನೆ ಭಾನುವಾರ ಮಂತ್ರಾಲಯದ ನೆಲದ ಮೇಲೆ, ಮಗಳು, ಮೊಮ್ಮಗಳೊಡನೆ ಕಾಲಿಟ್ಟಾಗ ನನಗಾದ ಅನುಭವ. ಪ್ರಯಾಣ ಮಾಡಿ ದಣಿದಿದ್ದ ಕಾರಣ, ಕೈಕಾಲು ಮುಖ ತೊಳೆದು ಬರಲೂ ಸಹ ಸಮಯ ಇಲ್ಲದಂತೆ ದರ್ಶನದ ಸಮಯ ಕೊನೆಯ ಹಂತದಲ್ಲಿತ್ತು. ಹೊರಗಿಂದಲೇ ಕೈಮುಗಿದು, ನಮ್ಮ ಕೋಣೆಗೆ ಬಂದು ವಿರಮಿಸಿದ್ದಾಯ್ತು.  ಕಾಲ ಸರಿದಂತೆ ಜೀವನಶೈಲಿಯಲ್ಲಿ ಬದಲಾವಣೆಗಳು ಬಂದು... ಸೆಖೆಯನ್ನು ನೀಗಲು  ಫ್ಯಾನ್ ಹಾಗೂ AC ಯ ಅನುಕೂಲತೆಗಳು ನಮ್ಮ ಕೋಣೆಯಲ್ಲಿದ್ದವು. ಮಗಳು ಮೊಮ್ಮಗಳ ಜೊತೆಯಲ್ಲಿ ಒಂದಿಷ್ಟು ಮಾತು ಆಟ ಆಡಿ ಮಲಗಲು ಅಣಿಯಾದರೂ... ತಕ್ಷಣ ನಿದ್ರೆ ಬರಲಿಲ್ಲ.... ನೆನಪಿಗೆ ಬಂದದ್ದೇ ಕಷ್ಟದಿಂದ ಕಳೆದ ಆ ರಾತ್ರಿ..... ಮದುವೆಯಾದ ಹೊಸತು... ಮಂತ್ರಾಲಯಕ್ಕೆ ಹೋಗಬೇಕೆಂದು ನಿರ್ಧರಿಸಿ ನಾವಿಬ್ಬರೂ ಹೊರಟೇ ಬಿಟ್ಟೆವು. ಮಂತ್ರಾಲಯವನ್ನು ಮುಟ್ಟಿದಾಗ ಮಧ್ಯಾಹ್ನ... ಸುಡುವ ಬಿಸಿಲು, ಹೇಗೋ ನಮ್ಮ ಹಣಕಾಸಿನ ನಿಲುಕಿನಲ್ಲಿದ್ದ ಒಂದು ಕೋಣೆಯನ್ನು ಆಯ್ಕೆ ಮಾಡಿ ದೇವರ ದರ್ಶನ ಮಾಡಿ... ಆಗೆಲ್ಲಾ ಕೋಣೆಯ ಬಳಿ ಬಂದು ಮಾರುತ್ತಿದ್ದ ಇಡ್ಲಿಯನ್ನು ತಿಂದು ದಿನದ ಕೊನೆಗೆ ಬಂದೆವು. ಫ್ಯಾನಿನ ಗಾಳಿ ಪ್ರಖರ ಸೆಖೆಯೊಡನೆ ಗುದ್ದಾಡಿ  ಸೋಲುತ್ತಿತ್ತು, ಗೆಲ್ಲುವ ಪ...

ಹದಿ ವಯಸು - ಕುತೂಹಲ

Image
  ಅವತ್ತು ಬುಧವಾರ ಸಂಜೆ ಯಾವಾಗಿನಂತೆ ಆಪ್ತ ಸಲಹಾ ಕೇಂದ್ರಕ್ಕೆ ಬಂದೆ...  ಹಿರಿಯ ಶ್ರೀನಿವಾಸ್ ಅವರು .. ರಂಗನಾಥ್ ನಿಮಗಾಗಿ ಒಂದು ಕೇಸ್ ಕಾಯ್ತಾ ಇದೆ.. ಬೇರೆ ಊರಿಂದ ಬಂದಿದ್ದಾರೆ... ಕಳಿಸ್ತೀನಿ  ಅಂದ್ರು. ಗಂಡ ಹೆಂಡತಿ ಒಂದು ಹೆಣ್ಣು ಮಗುವನ್ನು ಕರ್ಕೊಂಡು ರೂಮಿನ ಒಳಗೆ ಬಂದರು..  'ನನ್ನ ಸ್ನೇಹಿತ ನಿಮ್ಮನ್ನ ಭೇಟಿ ಮಾಡಕ್ಕೆ ಹೇಳಿದ...' ' ಕೂತ್ಕೊಳ್ಳಿ... ನಿಮ್ಮ ಹೆಸರು?' ' ನಾನು ರಮೇಶ್... ನನ್ ಹೆಂಡ್ತಿ ಸುಮತಿ'...  ಏನ್ ಮಗು  ನಿನ್ನ ಹೆಸರು  ಅಂತ ಕೇಳಿದೆ... "ಸುಮಾ” ಅಂತ ಅಮ್ಮ ಹೇಳಿದ್ದು.  ' ಬಂದ ವಿಷಯ?'  'ಏನ್ ಹೇಳ್ಬೇಕು ಎಲ್ಲಿಂದ ಶುರು ಮಾಡಬೇಕು ಗೊತ್ತಾಗ್ತಾ ಇಲ್ಲ' ಅಂದಾಗ... ನಿಮಗೆ ಏನು ಹೇಳಬೇಕು ಅನ್ಸುತ್ತೆ ಮನಸ್ಸು ಬಿಚ್ಚಿ ಹೇಳಿ, ಎಲ್ಲಿಂದ ಬೇಕಾದರೂ ಶುರು ಮಾಡಿ  ಎಂದೆ.. ಗಂಡ ಹೆಂಡತಿಯ ಮಧ್ಯೆ ಒಂದೆರಡು ಪಿಸುಮಾತು.. ನಂತರ ಗಂಡ ಹೇಳಿದ್ದು... ಅವಳೇ ಮಾತಾಡ್ತಾಳೆ ನಾನು ಮಗುನ ಕರ್ಕೊಂಡು ಆಚೆ ಕಡೆ ಇರ್ತೀನಿ.. ಅಂತ ಹೊರಗೆ ಹೋದರು. ಮಾತು ಮುಂದುವರಿತು 'ನಂಗೆ ತುಂಬಾ ಭಯ ಆಗುತ್ತೆ ಸರ್.. ನನ್ ಮಗಳದೇ ನನಗೆ ಚಿಂತೆಯಾಗಿದೆ' ' ಮಗು ಆರೋಗ್ಯದಲ್ಲಿ ಏನಾದ್ರೂ ತೊಂದರೆ ಇದೆಯೇನಮ್ಮ?'  'ಹಾಗೇನಿಲ್ಲ' ' ಮಗು ಯಾವ ಕ್ಲಾಸು' ' ಒಂದನೇ ಕ್ಲಾಸು' ' ಮಗು ಬೆಳವಣಿಗೆಯಲ್ಲಿ ಏನಾದ್ರೂ ತೊಂದರೆ ಇದೆಯಾ' ' ...