ಹಿಂದು ಮುಂದಾದರೂ ಒಂದಾಗಬೇಕು

ಇದೀಗ ಬಂದ ಸುದ್ದಿಯಲ್ಲಿ ಕಾಶ್ಮೀರದಲ್ಲಿ... ಹಿಂದುಗಳನ್ನೇ ಗುರುತಿಸಿ ಕೊಲ್ಲುವಾಗ.... ಉಗ್ರರು ಯಾವ ಜಾತಿಯೆಂದು ಯಾರನ್ನೂ ಕೇಳಲಿಲ್ಲ... ಹಿಂದುಗಳೆಂದು ಮಾತ್ರ ಗುರುತಿಸಿ ಗುಂಡಿಕ್ಕಿದ್ದು . ಅಲ್ಲಿಗೆ ಜಾತಿ ಜಾತಿ ಎಂದು ನಮ್ಮಲ್ಲೇ ನಾವು ಕಚ್ಚಾಡುತ್ತಿರುವ... ಅದನ್ನೇ ದಾಳವಾಗಿ ಉಪಯೋಗಿಸಿಕೊಂಡು ತಮ್ಮ ಕುರ್ಚಿಯನ್ನು ಭದ್ರ ಮಾಡಿಕೊಳ್ಳುವ ದುರುಳ ರಾಜಕಾರಣಿಗಳ ಹುನ್ನಾರದಿಂದ ಹೊರಬರಲು ಇನ್ನಾದರೂ ನಿರ್ಧಾರ ಮಾಡಬೇಕು. ಈಗಲಾದರೂ ನಾವು ಜಾತಿ ಪಂಗಡಗಳಿಂದ ಹೊರಬಂದು ನಾವೆಲ್ಲಾ ಹಿಂದುಗಳು ಎಂಬ ಭಾವನೆಯಿಂದ ಒಂದುಗೂಡಿದರೆ ಮಾತ್ರ, ನಾವೆಲ್ಲರೂ ಹಾಗೂ ನಮ್ಮ ಮುಂದಿನ ಪೀಳಿಗೆಯವರು ಸುರಕ್ಷತೆಯಿಂದ ಇರಬಹುದು. ಕೋಟ್ಯಾಂತರ ರೂಪಾಯಿಗಳನ್ನು ಗಳಿಸಿ ಆಸ್ತಿ ಮಾಡಿ ಅದನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋದರೆ, ನಾವಂದುಕೊಂಡಂತೆ ಅವರು ಅದನ್ನು ಅನುಭವಿಸಿಕೊಂಡು ಸುಖವಾಗಿರಲಾರರು. ಅದನ್ನು ದುರುಳ ಉಗ್ರವಾದಿಗಳು ಕಿತ್ತುಕೊಂಡು, ಮತಾಂತರ ಮಾಡಿ, ಒಪ್ಪದಿದ್ದರೆ ಕೊಂದು, ಹೆಣ್ಣು ಮಕ್ಕಳನ್ನು ಅವಮಾನಿಸಿ, ಹಿಂಸಿಸಿ ಅವರನ್ನು ಹೊತ್ತೊಯ್ಯುತ್ತಾರೆ. ಇದನ್ನು ತಪ್ಪಿಸಬೇಕೆಂದರೆ, ನಾವೆಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಹೋರಾಡಿ ಆ ದುರುಳ ಸಂತತಿಯನ್ನು ಎದುರಿಸಿ, ಅವರ ಶಕ್ತಿಯನ್ನು ನಿರ್ನಾಮ ಮಾಡುವುದೊಂದೇ ದಾರಿ. ಈಗಿನ ದಿನಗಳಲ್ಲಿ ಯಾವುದೇ ಮಾಧ್ಯಮದಲ್ಲಿ ನೋಡಿದರೂ ದೇಶದಲ್ಲಿ ನಡೆಯುತ್ತಿರುವ ಗಲಭೆಗಳ ಬಗ್ಗೆಯೇ ಕಾಣುತ್ತೇವೆ. ಅದರಲ...