Posts

Showing posts from January, 2024

ಎಲ್ಲೆಲ್ಲಿ ನೋಡಿದರೂ ಅಲ್ಲಿ ಶ್ರೀರಾಮಚಂದ್ರ

Image
2‌2.01.2024 ಈ ದಿನ ಮುಂದಿನ ಪೀಳಿಗೆಯವರಿಗೆ ಚರಿತ್ರೆಯಲ್ಲಿ ಇರಬಹುದಾದಂತ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ.  ನಾವು ಈ ದಿನದ ಕಾರ್ಯಕ್ರಮದಲ್ಲಿ ಪರೋಕ್ಷವಾಗಿಯಾದರೂ ಭಾಗವಹಿಸಿದ್ದೇವೆಂಬ ಹೆಮ್ಮೆ ಪಡ ಬಹುದಾದಂತಹ ಜನ. ಎಲ್ಲೆಲ್ಲೂ ಜೈ ಶ್ರೀ ರಾಮ್ ಎಂಬ ಘೋಷಣೆ... ಭಜನೆಗಳು ಅಲ್ಲಲ್ಲಿ...  ಹೆಣ್ಣು ಗಂಡು ಎಂಬ ಭೇದವಿಲ್ಲದೆ...ಖುಷಿಯಿಂದ ಕುಣಿಯುತ್ತಿರುವ...ಜನತೆ.... ಕಾರ್ಯಕರ್ತರ ಓಡಾಟ, ಮಾಧ್ಯಮದವರ ಉತ್ಸಾಹ.. ಎಲ್ಲದರ ನೋಟ ದೂರದರ್ಶನದಲ್ಲಿ ನೋಡಿ ಪುಳಕಗೊಂಡ ನಾವು.... ಇನ್ನು ಅಲ್ಲಿಗೇ ಹೋಗಿ ಸಂಭ್ರಮದಲ್ಲಿ ಪಾಲ್ಗೊಂಡವರ ಮನಸ್ಸಿನ ಸ್ಥಿತಿ ಹೇಗಿರಬಹುದು ಎಂದು ಊಹಿಸಿದರೆ ಮೈ ನವಿರೇಳುತ್ತದೆ. 90 ವರ್ಷ ಮೀರಿದ  ಕೆ.ಪರಾಶನ್ ಅವರನ್ನು ಕಂಡಾಗ ಭಕ್ತಿ ಭಾವ ಉಕ್ಕಿ ಬಂತು... ನ್ಯಾಯಾಲಯದಲ್ಲಿ ರಾಮನ ಪರವಾಗಿ ವಾದ ಮಂಡಿಸುವಾಗ ಬರಿಗಾಲಲ್ಲಿ ನಿಂತು ವಾದ ಮಾಡಿದ್ದನ್ನು ಕೇಳಿ ತಿಳಿದಿದ್ದೆ...ಎಂಥಾ ನಿಷ್ಟೆ.. ಮತ್ತೊಂದು ಮನಕರಗುವ ದೃಶ್ಯ... ರಾಮಮಂದಿರಕ್ಕಾಗಿ ಗುಂಡೇಟು ತಿಂದು ಬಲಿದಾನ ಮಾಡಿದ ರಾಮ್ ಕೊಠಾರಿ ಹಾಗೂ ಶರತ್ ಕೊಠಾರಿ ( ಇಬ್ಬರು 18... 20 ವರ್ಷದ ಅಣ್ಣ ತಮ್ಮಂದಿರು) ಇವರ ಅಕ್ಕ ಮಾತನಾಡಿದ ಪರಿ. ಇನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಶ್ರದ್ಧೆ ಭಕ್ತಿ ಎಷ್ಟು ಹೇಳಿದರೂ ಕಮ್ಮಿಯೇ ...ತುಂಬಾ ಮೆಚ್ಚುಗೆ ಆಯ್ತು... ಎಲ್ಲವನ್ನೂ ಹೇಳಲು ನೆನಪಿಗೆ ಬಾರದು... ಸ್ಥಳವೂ ಸಾಲದು... ಆದರೆ ಸುಮಾರು ಐದು ಗಂಟೆಗಳ ಕಾಲ ...

ಎಳ್ಳು ಬೆಲ್ಲ - ಒಳ್ಳೆ ಮಾತು

Image
ಸತತವಾಗಿ ಎರಡನೆಯ ವರ್ಷವೂ ಸಂಕ್ರಾಂತಿ ಹಬ್ಬದ ಆಚರಣೆ ಇಲ್ಲ.... ಹತ್ತಿರದವರ ಸಾವಿನ ಸೂತಕದ ಛಾಯೆ ಹಬ್ಬದ ಮೇಲೆ. ಆದರೆ ನೆನಪಿನ ಓಟದ ಮೇಲೆ ಯಾವ ಸೂತಕದ ಛಾಯೆಯೂ ಬೀಳದು‌.. ಸಂಕ್ರಾಂತಿ ಎಂದರೆ  ಮೊದಲು ಹೊಳೆಯುವುದೇ.. ಎಳ್ಳು ಬೆಲ್ಲ.... ಜೊತೆ ಜೊತೆಗೆ ಸಕ್ಕರೆ ಅಚ್ಚು, ಕಬ್ಬು.... ನಂತರ.. ಕುಸುರಿ ಎಳ್ಳು, ಯಲಚೀ ಹಣ್ಣು, ಅವರೆಕಾಯಿ, ಗೆಣಸು, ಕಳ್ಳೆಕಾಯಿ‌... ಹೀಗೆ.. ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು... ಎನ್ನುವುದು ಸಾಂಪ್ರದಾಯಿಕವಾಗಿ ಹೇಳುವ ಮಾತು... ಆದರೆ ಎಳ್ಳು ಬೆಲ್ಲ ತಿಂದಾಗ ಮಾತ್ರ ಒಳ್ಳೆಯ ಮಾತೇ... ಬೇರೆಲ್ಲ ತಿಂದಾಗ ಬೇಡವೇ... ಇದು ನನ್ನನ್ನು ಕಾಡುವ ಪ್ರಶ್ನೆ... ಯಾಕೋ ಸಮಂಜಸವಾದ ಉತ್ತರ ನನಗಿನ್ನೂ ಸಿಕ್ಕಿಲ್ಲ... ಯಾರಾದರೂ ಹೇಳಬಹುದೇ.. ಎಳ್ಳು ಈ ಹವಾಮಾನಕ್ಕೆ ಬೇಕಾದ ಎಣ್ಣೆಯ ಅಂಶವನ್ನು ಹೊಂದಿರುವ ಧಾನ್ಯ... ಹಾಗಾಗಿ ಅದನ್ನು ತಿನ್ನುವುದು ಒಳ್ಳೆಯದು. "ಕೊಟ್ಟು ತಿನ್ನು" ಎನ್ನುವುದು ಹಿಂದಿನವರು ರೂಢಿಸಿಕೊಂಡಿದ್ದ ಒಂದು ಸಂಪ್ರದಾಯ. ಹಾಗಾಗಿ ಬೆಳೆದ ಎಳ್ಳನ್ನು ಬೇರೆಯವರಿಗೆ ಕೊಡಬೇಕು. ಆದರೆ ಇಲ್ಲೊಂದು ಸಂದಿಗ್ಧ... ಎಳ್ಳನ್ನು ಯಾರೂ ಸುಲಭವಾಗಿ ದಾನವಾಗಿ ತೆಗೆದುಕೊಳ್ಳಲು ಒಪ್ಪುವುದಿಲ್ಲ... ಅದು ಋಣದ ದ್ಯೋತಕವೂ ಹೌದು... ಅದಕ್ಕೆ ನಮ್ಮ ಪೂರ್ವಜರಿಗೆ ನಾವು ತಿಲತರ್ಪಣ ಕೊಡುವುದು... ಬರೀ ಎಳ್ಳು ತಿನ್ನಲು ಸಹ ರುಚಿಕರವಾಗಿರುವುದಿಲ್ಲ... ಹಾಗಾಗಿ ಅದಕ್ಕೆ ಒಂದಷ್ಟು ವ್ಯಂಜನಗಳು (ಬೆಲ್ಲ, ಒಣಕೊಬ್ಬರಿ ಚ...

ಸಾವು - ನೋವು - ಮರೆವು

Image
ನನ್ನ ಬ್ಲಾಗ್ ಹೆಸರು ಸಿಹಿ ಕಹಿ ನೆನಪುಗಳು ಎಂದಾದರೂ.... ಇಂದು ನಾನು ಯೋಚಿಸುತ್ತಿರುವ ವಿಚಾರ ಮರೆವಿನ ಬಗ್ಗೆ... ಮರೆವೂ ಸಹ ನೆನಪಿನ ಇನ್ನೊಂದು ಮುಖ ತಾನೇ.... ಬಾರದ ನೆನಪು. ಒಂದು ಕುಟುಂಬಕ್ಕೆ ಹಾಗೂ ಅವರ ಸುತ್ತು ಮುತ್ತಿನವರಿಗೆ ತುಂಬಾ ನೋವು ತರುವುದು ಸಾವು.... ಸಾವು ಸಹಜ ... ಕಟ್ಟಿಟ್ಟ ಬುತ್ತಿ ಎಂದು ಗೊತ್ತಿದ್ದರೂ..... ಸಾವಿಗೆ ತುಂಬಾ ಹತ್ತಿರ ಆಗುತ್ತಿದ್ದಾರೆ ಎಂದು ತಿಳಿದ ನಂತರವೂ.... ವ್ಯಕ್ತಿಯ ಕೊನೆಯನ್ನು ಬಹುಭಾಗ ಒಪ್ಪಿಕೊಂಡಿದ್ದರೂ ಸಹ.... ಸಾವು ಸಂಭವಿಸಿದಾಗ ಅದನ್ನು ಒಪ್ಪಿ ಜೀರ್ಣಿಸಿಕೊಳ್ಳುವುದು ಸ್ವಲ್ಪ ಕಷ್ಟವೇ.... ಸಾವು ಸಂಭವಿಸಿದಾಗ, ದುಃಖ... ಅದರ ಪರಿಣಾಮವಾಗಿ ಅಳು ಸಾಮಾನ್ಯ... ಅದರಲ್ಲೂ ಜನ ಬರುತ್ತಿದ್ದಂತೆ... ಅಳುವಿನ ಅಲೆ ಅಪ್ಪಳಿಸುತ್ತದೆ. ಹಾಗಾಗಿ ಶವವನ್ನು ಆದಷ್ಟು ಬೇಗ ಸ್ಮಶಾನಕ್ಕೆ ಕಳಿಸುವುದು... Out of sight is out of mind ಎನ್ನುವುದು ಎಷ್ಟು ಸತ್ಯ ಅಲ್ಲವೇ? ತಲೆಯ ಮೇಲೆ ನೀರು ಬಿದ್ದಾಗ ದುಃಖವೂ ಸಾಕಷ್ಟು ಶಮನವಾಗುತ್ತದೆ...  ಇಲ್ಲಿ ಈಗ ನಮ್ಮೊಂದಿಗೆ ಇಲ್ಲದ ಸ್ನೇಹಿತ ಶ್ರೀನಿವಾಸ್ ನಟನೆಯೊಂದಿಗೆ ತಮಾಷೆಯಾಗಿ  ಹೇಳುತ್ತಿದ್ದ ಪ್ರಸಂಗ ಪ್ರಸ್ತುತವೆನಿಸುತ್ತದೆ.... ಮನೆಯಲ್ಲಿ ಯಜಮಾನರ ಸಾವು.... ಯಜಮಾನಿಗೆ ಅತೀವ ದುಃಖ... ಸತ್ತ ಮೇಲೆ ಸುಮಾರು 20 ಗಂಟೆಗಳ ನಂತರ ಶವ ಮನೆಯಿಂದ ಹೋಯಿತು ....ತಲೆಯ ಮೇಲೆ ನೀರು ಬಿತ್ತು.. ಅಷ್ಟು ಹೊತ್ತೂ ನೀರನ್ನೂ ಕುಡಿಯದ ಯಜಮಾನಿಗೆ ಮನೆಯವರೆಲ...

ಹೊಸ ವರ್ಷ- ನಿರ್ಣಯಗಳು

Image
ಸಾಮಾನ್ಯವಾಗಿ ಹೊಸ ವರ್ಷದ ಶುರುವಿನಲ್ಲಿ ಏನಾದರೂ ಮಾಡಬೇಕು ಎನ್ನುವ ನಿರ್ಣಯ ಬಹಳ ಜನ ಮಾಡುತ್ತಾರೆ.... ನಾನೇನೂ ಹೊರತಲ್ಲ...New Year resolutions ...ಬ್ರಿಟಿಷರು ಕೊಟ್ಟ ಕೊಡುಗೆ ಎಂದು ನನ್ನ ಭಾವನೆ... ಆದರೆ ಹೀಗೆ ಮಾಡುವೆ ಎಂದು ಶಪಥ ಮಾಡುವುದು.... ಹಾಗೂ ಪ್ರತಿಜ್ಞೆ ಮಾಡುವುದು ನಮಗೇನು ಹೊಸದಲ್ಲ.... ತನಗೆ ಅವಮಾನ ಮಾಡಿದವರು ಸಾಯುವ ತನಕ ತನ್ನ ಮುಡಿಯನ್ನು ಕಟ್ಟುವುದಿಲ್ಲವೆಂದು ನಿರ್ಧಾರ ಮಾಡಿದ ದ್ರೌಪದಿ..... ಅದಕ್ಕೆ ದುಶ್ಯಾಸನನ ರಕ್ತವನ್ನು ಎಣ್ಣೆಯಾಗಿ ಹಚ್ಚುವೆನೆಂದು ಶಪಥ ಮಾಡಿದ ಭೀಮ...... ದ್ರೌಪದಿಗೆ ಅವಮಾನ ಆಗುತ್ತಿದ್ದರೂ, ಅಸಹಾಯಕನಾಗಿ ತನ್ನ ಯಾವುದೋ ಪ್ರತಿಜ್ಞೆಗೆ ಕಟ್ಟು ಬಿದ್ದು, ಅವಳ ಸಹಾಯಕ್ಕೆ ಮುಂದಾಗದ ಭೀಷ್ಮ ಪಿತಾಮಹ..( ಭೀಷ್ಮ ಪ್ರತಿಜ್ಞೆ ಎನ್ನುವುದು ಜನಜನಿತ) ಇವರೆಲ್ಲ ನಮ್ಮ ಮಹಾಭಾರತದ ಕಾಲದವರು. ಇದಲ್ಲದೆ ಇಂತಹ ಪ್ರತಿಜ್ಞೆಗಳನ್ನು ಮಾಡಿ ಉಳಿಸಿಕೊಂಡವರು , ಸೋತವರು ಬಹಳಷ್ಟು ಮಂದಿ ಇದ್ದಾರೆ... ಬಡತನವನ್ನು ಭಾರತದಿಂದ ತೊಲಗಿಸುತ್ತೇವೆ ಎಂದು ನಿರ್ಧಾರ ಮಾಡಿ... ಜನಗಳಿಗೆ ಆಶ್ವಾಸನೆಯನ್ನು ಇತ್ತ ನಮ್ಮ ರಾಜಕಾರಣಿಗಳು.... ಈಗ ಆ ನಿಟ್ಟಿನಲ್ಲಿ ಸಾಕಷ್ಟು ವಸ್ತುಗಳನ್ನು ಬಿಟ್ಟಿಯಾಗಿ ಕೊಟ್ಟು.. (ಏನೂ ಕೆಲಸ ಮಾಡದೆ ಗಳಿಸಿದ್ದು...) ಜನರನ್ನು ಸೋಮಾರಿಗಳಾಗಿ ಮಾಡುತ್ತಿರುವ ಇಂದಿನ ಪರಿಸ್ಥಿತಿಯನ್ನು ಗಮನಿಸಿದಾಗ...... ವಿದೂಷಕರಂತೆ ಕಾಣುತ್ತಾರೆ. ಇರಲಿ ಅದು ರಾಜಕೀಯ ಕಸರತ್ತು. ಕ್ಷಮಿಸಿ... ವಿಷಯ ಸ್ವಲ್ಪ ...