Posts

Showing posts from October, 2023

ಜೀವನ ಕಲಿಸಿದ ವ್ಯವಹಾರದ ಪಾಠಗಳು

Image
ದಸರಾ...ದೇಶಕ್ಕೆ... ಅದರಲ್ಲೂ ಕನ್ನಡ ನಾಡಿಗೆ ವಿಶೇಷ ಹಬ್ಬ.. ನಾಡ ಹಬ್ಬ ಸಹ. ಇದರ ಒಂದು ವಿಶೇಷ ಭಾಗ ಆಯುಧ ಪೂಜೆ... ನಾವು ಚಿಕ್ಕ ಕಾರ್ಖಾನೆಯನ್ನು ನಡೆಸುತ್ತಿದ್ದಷ್ಟು ದಿನವೂ ಆಯುಧ ಪೂಜೆಯನ್ನು ಆಚರಿಸಿದ್ದಿದೆ.... ಶುರುವಿನ ದಿನಗಳಲ್ಲಿ, ಹಣಕ್ಕಾಗಿ ಕಷ್ಟವಿದ್ದಾಗ ಪೂಜೆಯನ್ನು ಬಿಡದೆ ಕ್ಲುಪ್ತವಾಗಿ ಮಾಡಿ ಮುಗಿಸುತ್ತಿದ್ದೆವು. ಹಣಕ್ಕೆ ಪರದಾಡದೆ ಆಯುಧ ಪೂಜೆಯನ್ನು ಮಾಡುವ ಹಂತ ತಲುಪಲು ಸವೆಸಿದ ದಾರಿ ಬಹುದೀರ್ಘ, ಕಠಿಣ ಹಾಗೂ ಸವಾಲಿಂದ ಕೂಡಿತ್ತು. ಆ ಕಲಿಕೆ ಸುದೀರ್ಘವೂ ಮತ್ತು ದುಬಾರಿ ಖರ್ಚಿನದೂ ಆಗಿತ್ತು.  ಈ ಹಂತದಲ್ಲಿ ಆಯುಧ ಪೂಜೆ ನಿಜಕ್ಕೂ ಒಂದು ಸಂಭ್ರಮ.... ಎಲ್ಲ ಕೆಲಸಗಾರರಿಗೂ ಬಟ್ಟೆ, ಬೋನಸ್, (ಹಣ್ಣುಗಳು, ಸಿಹಿ ಹಾಗೂ ಹಣದ ಕವರನ್ನು ನಮ್ಮ ಕೆಲಸದವರಿಗೆ ಕೊಡುತ್ತಿದ್ದದ್ದು ನಮ್ಮಪ್ಪ- ಅವರಿರುವವರೆಗೂ) ಹಾಗೂ ಪೂಜೆಯ ದಿನ  ಬಂದ ಇಷ್ಟರು ಹಾಗೂ ಸ್ನೇಹಿತರು ಎಲ್ಲರೂ ಒಟ್ಟಿಗೆ ಸೇರಿ ಊಟ ಮಾಡುವುದು. ಇದೊಂದು ಸಂಪ್ರದಾಯದಂತೆ ಸುಮಾರು 30 ವರ್ಷಗಳ ಕಾಲ ಸತತವಾಗಿ ನಡೆಯಿತು. 70ರ ದಶಕದಲ್ಲಿ ಸಣ್ಣ ಕೈಗಾರಿಕೆಗಳ ಪ್ರಾರಂಭಕ್ಕೆ ಸರ್ಕಾರ, ಬ್ಯಾಂಕುಗಳಿಂದ ತುಂಬಾ ಪ್ರೋತ್ಸಾಹವಿತ್ತು. ಸಾಲಗಳನ್ನು ಸುಲಭವಾಗಿ ಕೊಡುತ್ತಾರೆ ಎನ್ನುವ ಒಂದು ಕಾರಣವೇ ಸಾಕಾಗಿತ್ತು... ನನ್ನ ಮನಸ್ಸಿಗೆ ಸಣ್ಣ ಕೈಗಾರಿಕೆ ಶುರು ಮಾಡಲು ಸಿಕ್ಕಿದ ಪ್ರೋತ್ಸಾಹ. ಆಗ ನನ್ನಲ್ಲಿ ಇದ್ದದ್ದು ಏನು ಬೇಕಾದರೂ ಸಾಧಿಸಬಲ್ಲೆ ಎಂಬ ಹುಮ್ಮಸ್ಸು... ಇದಕ್ಕೆ ಒಂದು ...

ಶಾಮಣ್ಣನ ಶತಾಭ್ಧಿ ಸಂಭ್ರಮ...

Image
ಹೋದ ಭಾನುವಾರ ನನ್ನ ಮಾವ ಶ್ರೀ. ಹೆಚ್. ಪಿ. ಕೃಷ್ಣಮೂರ್ತಿಯವರ 96 ನೇ ಹುಟ್ಟು ಹಬ್ಬದ  ಪ್ರಯುಕ್ತ ಅವರ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು, ಅಳಿಯಂದಿರು, ಸೊಸೆಯಂದಿರು...ಎಲ್ಲ ಒಟ್ಟಾಗಿ ಸೇರಿ UD Residency ಹೋಟೆಲ್ ನಲ್ಲಿ ಸಂಭ್ರಮಿಸಿದೆವು. ವಿಶೇಷ ಅಂದರೆ ನಮಗೆಲ್ಲಾ ಭರ್ಜರಿಯಾಗಿ ಭೋಜನ ಕೊಡಿಸಿದ್ದು ನಮ್ಮ ಮಾವ. ಸಾಮಾನ್ಯವಾಗಿ ಇದು ನಾವು ಮಾಡಬೇಕಾದ್ದು.....ಇನ್ನೊಂದು ವಿಶೇಷ...ಕೇಕ್ ಜೊತೆಗೆ...ನನ್ನ ನಾದಿನಿ ಮಣಿ ಕೈಯ್ಯಾರ ಮಾಡಿ ತಂದಿದ್ದ  ಹಾಲ್ ಬಾಯಿಯನ್ನು ಕತ್ತರಿಸಿ ಎಲ್ಲರೂ ತಿಂದಿದ್ದು.  ತಕ್ಕಮಟ್ಟಿನ ಹರಟೆ, photo session, ಪುಷ್ಕಳವಾದ ಊಟ, ಉಡುಗೊರೆ ಕೊಡುವುದು ಎಲ್ಲಾ  ಸಾಂಗೋಪಾಂಗವಾಗಿ ನಡೆಯಿತು.  ಅದರಲ್ಲಿ  ನನ್ನ ಮೊಮ್ಮಗಳು ವಿಸ್ಮಯ ಕೊಟ್ಟ greeting card  ಸಹ ಒಂದು.   ಈ greeting card ಮಾಡಲು ನನ್ನ ಮೊಮ್ಮಗಳ (ನನ್ನ  ಮಾವನ ಮರಿ ಮಗಳು) ತಯಾರಿ, ತಾತನ ಹೆಸರಿನ ಸ್ಪೆಲ್ಲಿಂಗ್ ಕೇಳಿ ಬರೆದದ್ದು, ಹೀಗೆ...ಉತ್ಸಾಹಕ್ಕೆ ಎಣೆಯಿರಲಿಲ್ಲ.... ಇದನ್ನು ನೋಡುತ್ತಾ...ನನ್ನ ನೆನಪಿಗೆ ಬಂದದ್ದು .. ನನ್ನಣ್ಣನ ಮೊಮ್ಮಗಳು... ಮುರಳಿಯ ಮಗಳು ಮಾಧುರಿ(ನಮ್ಮಪ್ಪನಿಗೆ ಮರಿ ಮಗಳು). ನಮ್ಮಪ್ಪನ 100 ನೇ ವರ್ಷದ ಹುಟ್ಟು ಹಬ್ಬದ ಸಮಯದಲ್ಲಿ, ನಾವು ಹೊರ ತಂದ ಸ್ಮರಣ ಸಂಚಿಕೆಗೆ ಮಾಧುರಿ ಬರೆದ ಲೇಖನ. ಒಂದಕ್ಷರವೂ ಬರೆಯಲು ಬರದ, ಆದರೆ ಬರೆಯುವ ಉತ್ಸಾಹ ತುಂಬಿದ.. ಮಗುವಿ...

ಎಮ್ಮೆ ಹಾಲು- ಮೊದ್ದುರಂಗ

Image
  "ಎಮ್ಮೆ ಹಾಲು ಕುಡಿದು ಕುಡಿದು ರಂಗ ಮೊದ್ದಾಗ್ತಾನೆ" ಇದು ನನ್ನ ಕೆಲ ಸ್ನೇಹಿತರು ನನಗೆ ಛೇಡಿಸುತ್ತಿದ್ದ ರೀತಿ. ನಾನು ಪಾಠ ಹೇಳಿಕೊಡಲು ಹೋಗುತ್ತಿದ್ದ ಆ ಮನೆಯ ಅಜ್ಜಿ ಕೊಡುತ್ತಿದ್ದ ಎಮ್ಮೆಯ ಹಾಲನ್ನು ಕುಡಿಯುತ್ತಿದ್ದದ್ದು ಸತ್ಯ... ಆದರೆ ನನ್ನ ಬುದ್ಧಿ ಮೊದ್ದಾಗಿತ್ತಾ.... ಅದು ಅವರ ಅಭಿಪ್ರಾಯ.... ನನ್ನದು ಅದೇ ಆಗಿರಬೇಕಿಲ್ಲ ಅಲ್ಲವೇ? ಪಾಠ ಹೇಳಿ ಕೊಡುವುದು ನನಗೆ ಚಿಕ್ಕಂದಿನಿಂದ ಬಂದ ಒಂದು ಹವ್ಯಾಸ... ನಾನು 5ನೇ ಕ್ಲಾಸಿನಲ್ಲಿ ಓದುತ್ತಿದ್ದಾಗಿನಿಂದ ನನ್ನ ಜೊತೆಯವರಿಗೆ / ನನಗಿಂತ ಚಿಕ್ಕವರಿಗೆ ಪಾಠ ಹೇಳಿ ಕೊಡುತ್ತಿದ್ದೆ.... ಅಂಥವರಲ್ಲಿ ನನ್ನೂರ ರಾಮದಾಸನೂ ಒಬ್ಬ. ಒಂದು ದಿನ ರಾಮದಾಸ ಕೈಯಲ್ಲಿ ಏನೋ ತೋರಿಸುತ್ತಾ ರಂಗಣ್ಣಾ.. ರಂಗಣ್ಣಾ.. ಎಂದು ಕೂಗಿದ... ಹತ್ತಿರ ಬಂದಾಗ ಅವನ ಕೈಯಲ್ಲಿ ಕಂಡದ್ದು ನಾಲ್ಕಾಣೆಯ ನಾಣ್ಯ. ಅದನ್ನು ನನಗೆ ಕೊಟ್ಟು... "ನಮ್ಮಮ್ಮ ಕೊಟ್ಟಳು... ನಿನಗೆ.... ಪಾಠ ಹೇಳಿ ಕೊಟ್ಟಿದ್ದಕ್ಕೆ..." ಅಂದ....  ನನಗೂ ಖುಷಿ... ತಂದು ನಮ್ಮಮ್ಮನಿಗೆ ಹೆಮ್ಮೆಯಿಂದ ತೋರಿಸಿ ಹೇಳಿದೆ.... ನಮ್ಮಮ್ಮನ ತಕ್ಷಣದ ಪ್ರತಿಕ್ರಿಯೆ.." ನಾಲ್ಕಕ್ಷರ ಹೇಳಿಕೊಟ್ಟು.. ದುಡ್ಡು ಇಸ್ಕೊಂಡ್ಯಾ... ರಂಗಪ್ಪಾ....." .. ಅಲ್ಲಿ ಅಸಮ್ಮತಿಯಿತ್ತು... ನಂತರ ತಿಳಿ ಹೇಳಿದ್ದು.... ನಾನು ಅರ್ಥ ಮಾಡಿಕೊಂಡಿದ್ದು....ಪಾಠ ಹೇಳಿಕೊಟ್ಟು ದುಡ್ಡು ತಗೋಬಾರದು ಅಂತ. ಅಂದಿನಿಂದ ಇದುವರೆಗೂ ಅದನ್ನು ಪಾಲಿಸಿಕೊಂ...

ದೇವಸ್ಥಾನದ ಊಟ - ಪ್ರಸಾದ

Image
ಹೋದ ಭಾನುವಾರ, ಕಲ್ಯಾಣಿ ತೋಟದ ರಾಯರ ಮಠದಲ್ಲಿ ಒಂದು ಸೀಮಂತ ಕಾರ್ಯಕ್ರಮ ಇತ್ತು... ಸಾಮಾನ್ಯವಾಗಿ ಸೀಮಂತ ಕಾರ್ಯಕ್ರಮದಲ್ಲಿ, ಗಂಡಸರಿಗೆ ಪ್ರಾಮುಖ್ಯತೆಯೇ ಇಲ್ಲ, ಊಟಕ್ಕೆ ಮಾತ್ರ ಲೆಕ್ಕ.  ನನಗೆ ತುಂಬಾ ಬೇಕಾದವರಾದ್ದರಿಂದ ನಾನು ಊಟಕ್ಕೇ ಹೋಗಿದ್ದೆ. ದೇವಸ್ಥಾನ, ರಾಯರ ಮಠ ಇಂಥ ಜಾಗಗಳಲ್ಲಿ ನೆಲದ ಮೇಲೆ, ಬಾಳೆ ಎಲೆ ಊಟ , ಹಾಗೂ ಉಡುಗೆ ತೊಡಿಗೆಯಲ್ಲಿ ಒಂದಷ್ಟು ಶಿಸ್ತು ಇರುತ್ತದೆ. ಆದರೆ ಇಲ್ಲಿ ಎರಡಕ್ಕೂ ಪ್ರಾಮುಖ್ಯತೆ ಇರಲಿಲ್ಲ... ಎಲ್ಲರಿಗೂ ಟೇಬಲ್ ಮೇಲೆ ಊಟ, ಅವರಿಷ್ಟ ಬಂದ ಉಡುಗೆ.  ಸ್ವಲ್ಪ ಆಶ್ಚರ್ಯ ಎನಿಸಿತು.. ಆದರೆ ಜಾಗ ಮಾಡಿಕೊಂಡು ಕುಳಿತುಕೊಳ್ಳುವ ಕಲೆ ಮಾತ್ರ  ಯಾವಾಗಿನಂತೆ ಇತ್ತು.  ಊಟ ಸೊಗಸಾಗಿತ್ತು... ಹಸಿವೆಯೂ ಜೊತೆಗೂಡಿತ್ತು... ಹೇಳಬೇಕೇ ಕಂಠಪೂರ್ತಿ ಉಂಡಿದ್ದಾಯ್ತು. ಮಾತಿನ ಮಧ್ಯೆ ನನ್ನ ಬ್ಲಾಗ್ ಬರವಣಿಗೆಯ ವಿಷಯ ಬಂತು... ಇಂದಿನ ಕಾರ್ಯಕ್ರಮದ ಬಗ್ಗೆ ಬ್ಲಾಗುಂಟಾ? ಎಂಬ ಪ್ರಶ್ನೆಯು ಎದುರಾಯಿತು.. ಆಗಿನ ನನ್ನ ಉತ್ತರ ...ಯಾವ ಸ್ಪೂರ್ತಿಯೂ ಇಲ್ಲ... ಆ ಕಾರ್ಯಕ್ರಮದ ಬಗ್ಗೆ ತಳಕು ಹಾಕುವ ನನ್ನ ಅನುಭವ / ನೆನಪು ಯಾವುದು ಗೋಚರಿಸುತ್ತಿಲ್ಲ .... ಆದರೆ ತಲೆಯಲ್ಲಿ ಹುಳಕೊರೆಯಿತು.... ದಾರಿಯೂ ಕಾಣಿಸಿತು ಹಾಗಾಗಿ ಈ ಲೇಖನ... ನನ್ನ ನೆನಪಿನಾಳದಿಂದ ಕೆದಕಿದಾಗ... ಮೊದಲ ದೇವಸ್ಥಾನದ ಸಾರ್ವಜನಿಕ ಊಟ ಮಾಡಿದ್ದು ಜಾಲದ ಅಕ್ಕಯ್ಯಮ್ಮನ ಬೆಟ್ಟದ ತಪ್ಪಲಿನಲ್ಲಿ ನಡೆದ ಪರ್ವದಲ್ಲಿ.  ನಮ್ಮಪ್ಪನ ಜೊತೆಯ...