Posts

Showing posts from October, 2022

ಸೂರ್ಯಗ್ರಹಣ - ಅದರದ್ದೊಂದು ಚಿಕ್ಕ ಪುರಾಣ:

ಗ್ರಹಣ ಅಂದಾಗ ನನ್ನ ಮನಸ್ಸಿಗೆ ಬರೋದು ರಾಹುಕೇತುಗಳು ಸೂರ್ಯ ಅಥವಾ ಚಂದ್ರನನ್ನು ನುಂಗು ಹಾಕುತ್ತಾರೆ. ಆಗ ಸೂರ್ಯ ಚಂದ್ರರು ನಮಗೆ ಕಾಣುವುದಿಲ್ಲ. ಇದು ನಮಗೆ ಸಾಮಾನ್ಯವಾಗಿ ತಿಳಿದಿದ್ದ ವಿಷಯ. ನಿಧಾನವಾಗಿ ಸೂರ್ಯ ಚಂದ್ರರು ಕಾಣೆಯಾಗುತ್ತಿದ್ದರಿಂದ... ನನಗೂ ಹಾಗೆ ಅನ್ನಿಸುತ್ತಿತ್ತು. ಯಾಕೆಂದರೆ ನಾನು ಹಾವು ಕಪ್ಪೆಯನ್ನು ನುಂಗುವುದನ್ನು ನೋಡಿದ್ದೆ. ಇದನ್ನು ಮೂಢನಂಬಿಕೆಯೆಂದು ಮೂಗು ಮುರಿಯುವವರು ಇದ್ದಾರೆ. ಅದು ಸರಿಯೇ ಇರಬಹುದು. ಆದರೆ ನಮ್ಮ ಪೂರ್ವಜರು ಗ್ರಹಣ ಸಂಭವಿಸುವುದನ್ನು ಕರಾರುವಾಕ್ಕಾಗಿ ಲೆಕ್ಕಾಚಾರ ಮಾಡಿ ಪಂಚಾಂಗದಲ್ಲಿ ಕೊಡುವುದನ್ನು ಗಮನಿಸಿದಾಗ, ಅದು ಈಗಲೂ ಅನೂಚಾನವಾಗಿ ಮುಂದುವರೆದು ಬರುತ್ತಿರುವುದರಿಂದ  ನಮ್ಮ ಪೂರ್ವಜರ ಜ್ಞಾನ- ಆಕಾಶಕಾಯಗಳ ಚಲನೆಯ ವಿಚಾರವಾಗಿ - ಎಷ್ಟು ಉನ್ನತ ಮಟ್ಟದಲ್ಲಿ ಇತ್ತೆಂಬುದು ವಿಶದವಾಗುತ್ತದೆ. ಇರಲಿ, ನನ್ನ ಪುರಾಣಕ್ಕೆ ಬರುತ್ತೇನೆ.... ಬಹುಶಃ ನಾನು ನಮ್ಮ ಹಳ್ಳಿಯಲ್ಲಿ ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದೆ. ಕಾರಣ  ಗೊತ್ತಿಲ್ಲ ಅಂದು ಮನೆಯಲ್ಲಿದ್ದವರು ನಾನು ಮತ್ತು ನಮ್ಮಪ್ಪ ಶಾಮಣ್ಣ( ನಮ್ಮಪ್ಪನನ್ನು ನಾವು ಕರೆಯುತ್ತಿದ್ದುದು ಶಾಮಣ್ಣ ಎಂದೆ). ಸೂರ್ಯಗ್ರಹಣ ಅಂದು ತುಂಬಾ ಹೊತ್ತು ಇರುತ್ತದೆಂದು, ಬೆಳಿಗ್ಗೆ ಬೇಗ ಊಟ ಮಾಡಿ ನಂತರ ಸೂರ್ಯಗ್ರಹಣ ಬಿಟ್ಟ ಮೇಲೆ ಸ್ನಾನ ಮಾಡಿ ಊಟ ಮಾಡಬೇಕು ಮಧ್ಯೆ ತಿನ್ನಲು ಏನು ಕೇಳಬಾರದೆಂದು ನಮ್ಮಪ್ಪನ ಅಜ್ಞೆ ,(?) ಮನೆಯಲ್ಲಿದ್ದ ಹಾಲು ಮೊಸರು ಮು...

ಠುಸ್ ...ಪಟಾಕಿ...

 ಅಪ್ಪನ ಜೇಬಿನ ದುಡ್ಡುಗಳೆಲ್ಲ ಚಟಪಟ ಗುಟ್ಟುತ ಸಿಡಿಯುವುವು... ಒಪ್ಪದ ನೀತಿಯ ಮಾತುಗಳೆಲ್ಲ ಥಟ್ಟನೆ ಹಾದಿಯ ಹಿಡಿಯುವುವು... ಇದು ನಾನು ಚಿಕ್ಕವನಾಗಿದ್ದಾಗ ಹೇಳಿಕೊಳ್ಳುತ್ತಿದ್ದ ಪದ್ಯದ ಸಾಲು.   ಆದರೆ ನಿಜ ಜೀವನದಲ್ಲಿ ದೀಪಾವಳಿಯ ಸಂದರ್ಭದಲ್ಲಿ ನನ್ನಪ್ಪನ ಜೇಬಿನ ದುಡ್ಡು ಹೊರಕ್ಕೆ ಬರುತ್ತಲೇ ಇರಲಿಲ್ಲ. ಪಟಾಕಿ ಸಿಡಿಸುವ ಸಂಭ್ರಮ ಅಷ್ಟು ಸುಲಭವಾಗಿ ನಮ್ಮ ಕೈಗೆ ಎಟುಕುತ್ತಿರಲಿಲ್ಲ. ಊರಿನ ಉಳ್ಳವರ ಮಕ್ಕಳು ಹಬ್ಬಕ್ಕೆ ಬಹಳ ಮುಂಚೆಯೇ ಪಟಾಕಿಗಳನ್ನು , ಸುರ್ಸುರ್ ಬಾಣಗಳನ್ನು ಸಿಡಿಸುತ್ತಿದ್ದರೆ, ಅದನ್ನು ಆಸೆ ಕಂಗಳಿಂದ ನೋಡಿ ನೋಡಿ ಸಂತೋಷಪಡುತ್ತಿದ್ದದ್ದೂ ಉಂಟು. ನನ್ನ ದೊಡ್ಡಣ್ಣ... ಚೂಡಣ್ಣ ತರುತ್ತಿದ್ದ ಪಟಾಕಿಗಾಗಿ ಹಬ್ಬದ ದಿನದವರೆಗೂ ಎದುರು ನೋಡುತ್ತಿದ್ದೆವು ನಮ್ಮ ಭಾಗದ ಪಟಾಕಿಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವುದೇ ಒಂದು ಸಂಭ್ರಮ. ಕಡಿಮೆ ಇರುತ್ತಿದ್ದರಿಂದ ಯಾವುದನ್ನು ಯಾವಾಗ ಹೊಡೆಯಬೇಕು ಎನ್ನುವ ಜಿಜ್ಞಾಸೆ - ಅದಲ್ಲದೆ ಉತ್ಥಾನ ದ್ವಾದಶಿ ದಿನಕ್ಕೆ ತುಳಸಿ ಹಬ್ಬಕ್ಕೆ ಒಂದಷ್ಟು ಇಡಬೇಕೆಂಬ ಅಮ್ಮನ ತಾಕಿತು ಬೇರೆ ನನ್ನನ್ನು ಗೊಂದಲಕ್ಕೀಡು ಮಾಡುತ್ತಿತ್ತು. ನರಕ ಚತುರ್ದಶಿಯ ದಿನ ಬೆಳಗ್ಗೆ ಬೇಗ ಎದ್ದು ತಲೆಗೆ ಮೈಕೈಗೆ ಅಮ್ಮನ ಆಶೀರ್ವಾದಪೂರ್ವಕ ಎಣ್ಣೆ ಒತ್ತುವಿಕೆ ಮುಗಿಯಲು ಕಾಯುತ್ತಿದ್ದ ನಾವು ಪಟಾಕಿ ಹೊಡೆಯಲು ಸಂಪೂರ್ಣ ತಯಾರು. ಹೀಗೊಂದು ದೀಪಾವಳಿಯ ದಿನ ತುಂಬಾ ಮಳೆಯಿದ್ದ ಕಾರಣ ಬಹಳಷ್ಟು ಪಟಾಕಿಗಳು ಠುಸ್ ಎಂದ...

ಅತಿಥಿ

 ಅತಿಥಿ ದೇವೋಭವ, ಇದು ಒಂದು ಪ್ರಮುಖವಾದ ನಾಣ್ಣುಡಿ. ಮನೆಗೆ ಬಂದ ಅತಿಥಿ ದೇವರ ಸ್ವರೂಪ ಎಂದು ನಂಬುವುದು ನಮ್ಮ ಹಿಂದಿನ ಕಾಲದಿಂದಲೂ ಬಂದ ಒಂದು ಸಂಪ್ರದಾಯ.  ಅತಿಥಿಸತ್ಕಾರ ನಮ್ಮ ಸಂಸ್ಕೃತಿಯ ಒಂದು ಭಾಗ. ನಾವುಗಳೂ ಸಹ ಭೂಮಿಗೆ ಬಂದ ಅತಿಥಿಗಳು ಎಂದು ನಂಬುವರು. ಅದರ ಅರ್ಥ ನಾವು ಇಲ್ಲಿ ಕೆಲಕಾಲ ಮಾತ್ರ ಇರುವವರು ಎಂದು. ಸಾಮಾನ್ಯವಾಗಿ ನಾವು ಬೇರೆಯವರ ಮನೆಗೆ ಅತಿಥಿಗಳಾಗಿ ಹೋದಾಗ ಅಲ್ಲಿನ ಪರಿಸರಕ್ಕೆ ತಕ್ಕಾಗಿ ಹೊಂದಿಕೊಂಡು ಹೋಗುವುದು ನಮ್ಮ ಸ್ವಭಾವ. ಅಲ್ಲಿ ನಮ್ಮ ಬೇಕು ಬೇಡಗಳಿಗೆ ಕೊನೆಯ ಸ್ಥಾನ.  ನಮಗೆ ಅವರು ನೀಡುವ ಆದರ ಗೌರವಗಳನ್ನು ಸ್ವಲ್ಪ ಸಂಕೋಚದಿಂದಲೇ ಸ್ವೀಕರಿಸುತ್ತೇವೆ.  ಅತಿಥಿಗಳಾಗಿ ನಾವು ನಮ್ಮ ಪರಿಮಿತಿಯಲ್ಲಿದ್ದಾಗ, ನಮ್ಮ ಅತಿಥೇಯರು ಸಹ ಅನುಕೂಲಕರವಾಗಿ, ಪ್ರೀತಿಯಿಂದ ನಡೆಸಿಕೊಳ್ಳುತ್ತಾರೆ.  ಹಾಗಾಗಿಯೇ " ಹಾಕ್ಮಣೆ, ತೋರ್ಮಣೆ, ನೂಕ್ಮಣೆ" ಎಂಬ ಮಾತು ಹುಟ್ಟಿರಬಹುದು. ಅತಿಥಿಗಳಾಗಿ ನಾವು ಅನುಕೂಲಕರವಾಗಿದ್ದರೆ - ಇನ್ನೂ ಸ್ಪಷ್ಟವಾಗಿ ಅವರ ಜೀವನಶೈಲಿಯಲ್ಲಿ ಪ್ರವೇಶಿಸದಿದ್ದರೆ ಮಣೆಯನ್ನು ಹಾಕಿ ಆದರಿಸುತ್ತಾರೆ. ಸ್ವಲ್ಪ ವ್ಯತ್ಯಾಸವಾದರೆ ಮಣೆಯನ್ನು ತೋರಿಸಿ ಕೂಡಲು ಹೇಳುತ್ತಾರೆ, ಅತಿಥಿಗಳಾಗಿ ಹೋದವರು ತಮ್ಮ ಮಿತಿಯನ್ನು ಮೀರಿದರೆ ಮಣೆಯನ್ನು ನೂಕಿ ನಮಗೆ ಜಾಗವನ್ನು ತೋರಿಸುತ್ತಾರೆ. ಅದು ತಿರಸ್ಕಾರದ ಒಂದು ಮುಖ. ಹಾಗಾಗಿ ಅತಿಥಿಗಳಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದು ನಮಗೆ ಚೆನ್ನಾಗಿ ಗೊ...

ದಸರಾ ಸಂಭ್ರಮ

ದಸರಾ ಹಬ್ಬ ಎಂದರೆ ನನಗೆ  ಜ್ಞಾಪಕ ಬರುವುದು  ರಜಾ ಮತ್ತು ಅದರೊಂದಿಗಿನ ಮಜಾ. ಚಿಕ್ಕಂದಿನಲ್ಲಿ ನಾವು ಮಕ್ಕಳು ರಜಕ್ಕಾಗಿ ಹಾತೊರೆಯುವುದು ಸಾಮಾನ್ಯವಾಗಿತ್ತು ಹಾಗಾಗಿ ದಸರಾ ಹಬ್ಬ ನಮಗೆ ಯಾವಾಗಲೂ ಆಸೆಯಿಂದ ಕಾಯುವ ಹಬ್ಬ ವಾಗಿರುತ್ತಿತ್ತು. ಇನ್ನೂ ಒಂದು ಮುಖ್ಯಕಾರಣವೆಂದರೆ ದಸರಾ ಹಬ್ಬದಲ್ಲಿ ನಾವೆಲ್ಲ ಒಟ್ಟಾಗಿ ಎಲ್ಲರ ಮನೆಗಳಿಗೂ ಹೋಗಿ ಗೊಂಬೆ ಕೂಡಿಸಿದ್ದಾರಾ ನೋಡಿ ಅಲ್ಲಿ ಹಾಡು-ನೃತ್ಯ ಹೀಗೆ ನಮಗೆ ಬಂದ ಎಲ್ಲಾ ವಿದ್ಯೆಗಳನ್ನು ಪ್ರದರ್ಶಿಸಿ ಅವರು ಕೊಡುವ ಬೊಂಬೆ ಬಾಗಿನಕ್ಕೆ ಕಾಯುವುದು ನಮಗೆ ಎಲ್ಲಿಲ್ಲದ ಖುಷಿ. ಬೊಂಬೆ ಬಾಗಿನಕ್ಕಾಗಿ ಕೊಡುತ್ತಿದ್ದುದು ಮೂರು ಅಥವಾ ನಾಲಕ್ಕು ಚಿಕ್ಕ ಚಿಕ್ಕ ಕೋಡುಬಳೆ, ಚಕ್ಕುಲಿ, ಬಿಸ್ಕತ್ತು ಹೀಗೆ ನಾನಾ ವ್ಯಂಜನಗಳು. ಅದನ್ನು ಸವಿಯಲು ನಮಗೆ ಎಲ್ಲಿಲ್ಲದ ಸಂತೋಷ. ರಜದ ಶುರುವಿನಲ್ಲೇ ಬೊಂಬೆಯ ಪೆಟ್ಟಿಗೆಯನ್ನು ತೆಗೆದು ಅದರಲ್ಲಿರುವ ಬೊಂಬೆಗಳನ್ನು ಒಂದೊಂದಾಗಿ ನೋಡಿ ತೆಗೆದಿರಿಸಿ ಅದರ ಅಂದವನ್ನು ಹೆಚ್ಚಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೆವು. ಈ ಸಮಯದಲ್ಲಿ ನಮ್ಮ ಅತಿ ಉತ್ಸಾಹದಿಂದ ಕೆಲ ಎಡವಟ್ಟುಗಳನ್ನು ಮಾಡಿ ಬೈಸಿಕೊಂಡದ್ದೂ  ಇದೆ. ಬೊಂಬೆಗಳಲ್ಲಿ ಪ್ರಾಮುಖ್ಯವಾದದ್ದು ಪಟ್ಟದ ಬೊಂಬೆಗಳು. ಇದಕ್ಕೆ ವಿಶೇಷ ಅಲಂಕಾರಗಳು ಹಾಗೂ ವಿಶೇಷ ಸ್ಥಾನಮಾನ. ನಾವುಗಳು ಆ  ಗೊಂಬೆಗಳನ್ನು ಚೆನ್ನಗೀರಪ್ಪ ಹಾಗೂ ಚೆನ್ನಗೀರಮ್ಮ ಎಂದು ಕರೆಯುತ್ತಿದ್ದೆವು. ಕಾರಣ ಮಾತ್ರ ಇಂದಿಗೂ ಗೊತ್ತಿಲ್ಲ. ಇನ್ನ...