Posts

Showing posts from December, 2025

ಭಗವದ್ಗೀತೆ - ಗೀತೋತ್ಸವ

Image
ಭಗವದ್ಗೀತೆಯ ಪ್ರಭಾವ ವಿಶ್ವದೆಲ್ಲೆಡೆ ಪಸರಿಸುತ್ತಿದೆ. ಗೀತಾ ಅಭಿಯಾನಗಳು ನಿರಂತರವಾಗಿ ಎಲ್ಲೆಲ್ಲೂ ನಡೆಯುತ್ತಿವೆ. ಭಗವದ್ಗೀತಾ ಅಭಿಯಾನ- 2025 ಇನ್ನೇನು ಸಂಪನ್ನಗೊಳ್ಳಲಿದೆ. ಉಡುಪಿಯಲ್ಲಿ ನಡೆದ ಒಂದು ಲಕ್ಷ ಜನರ ಭಗವದ್ಗೀತಾ  ಸಾಮೂಹಿಕ ಕಂಠಪಾಠ, ವಿಶಿಷ್ಟವಾಗಿತ್ತು. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವತಃ ಭಾಗವಹಿಸಿದ್ದು ಕಾರ್ಯಕ್ರಮಕ್ಕೆ  ಮೆರುಗು ನೀಡಿತ್ತು . ಈ ವರ್ಷದ ಭಗವದ್ಗೀತಾ ಅಭಿಯಾನದಲ್ಲಿ.. ವಿಶೇಷವಾಗಿ ಶಾಲಾ ಮಕ್ಕಳಿಗೆ ಭಗವದ್ಗೀತೆಯನ್ನು ಪರಿಚಯಿಸಿ, ಅದರ ಬಗ್ಗೆ ಆಸ್ತೆ ಮೂಡಿಸಲು  ಒತ್ತುಕೊಡಲಾಗಿತ್ತು. ಇದರ ಅಂಗವಾಗಿ, ನಾನು ಒಡನಾಟ ಇಟ್ಟುಕೊಂಡಿರುವ  "ಸ್ನೇಹ ಸೇವಾ ಟ್ರಸ್ಟ್" ಈ ವರ್ಷ ಪ್ರೌಢಶಾಲೆಯ ಮಕ್ಕಳಿಗೆ ಭಗವದ್ಗೀತೆ ಸ್ಪರ್ಧೆ “ ಗೀತೋತ್ಸವ” ಹೆಸರಿನಲ್ಲಿ ನಡೆಸಿ 19.12.2025 ರಂದು ಸಮಾರೋಪ ಕಾರ್ಯಕ್ರಮವನ್ನು  ಆಯೋಜಿಸಲಾಗಿತ್ತು. ವಾಸವಿ ಕನ್ವೆನ್ಷನ್ ಹಾಲಿನಲ್ಲಿ , ಮಧ್ಯಾಹ್ನ ಸುಮಾರು 3 ಘಂಟೆಗೆ ಸೇರಿದ ಕಾರ್ಯಕರ್ತರು, ಸಮರೋಪಾದಿಯಲ್ಲಿ ಮಾಡಿದ, ಪ್ರಾಂಗಣದ ಅಲಂಕಾರ, ಮುಖ್ಯ ವೇದಿಕೆ, ಬಹುಮಾನ ವಿತರಣೆಗಾಗಿ ಮತ್ತೆ ಮೂರು ವೇದಿಕೆಗಳು, ಅತಿಥಿಗಳಿಗೆ ಗೌರವ ಸಮರ್ಪಣೆಗೆ ಬೇಕಾದ ಸಲಕರಣೆಗಳು ಹಾಗೂ ಬಹುಮಾನಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳುವ ಕೆಲಸಗಳು,  ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಮಾಡಿದ ಸಂಭ್ರಮವನ್ನು  ನೋಡುತ್ತಾ ನಾನೂ ಸಂಭ್ರಮಿಸಿದ್ದ...

ದಾಂಪತ್ಯ - ವೈಪರೀತ್ಯ

Image
  ದಾಂಪತ್ಯ - ಸಾಂಗತ್ಯ  ಲೇಖನವನ್ನು ಓದಿದ ನಂತರ ಬಂದ ಅಭಿಪ್ರಾಯ...." ಯಾಕೋ ಪೂರ್ಣ ಎನಿಸಲಿಲ್ಲ.." ಎಂದು. " ಪೂರ್ಣಮದಃ.. ಪೂರ್ಣಮಿದಂ.. ." ಶ್ಲೋಕದಂತೆ ಪೂರ್ಣ ಎಂಬುದು ಅನಂತತೆ. ಪೂರ್ಣಕ್ಕೆ ಪೂರ್ಣ ಸೇರಿಸಿದರೆ ಮತ್ತದು ಪೂರ್ಣವೇ,  ಪೂರ್ಣದಿಂದ ಪೂರ್ಣ ತೆಗೆದರೆ ಅದೂ ಪೂರ್ಣವೇ... ಅದೇ ಇಂಗ್ಲಿಷಿನ infinity. ದಾಂಪತ್ಯದ ಬಗೆಗಿನ ವಿಷಯಗಳು.. ಹಾಗೇ ಅಕ್ಷಯ ಪಾತ್ರೆ ಇದ್ದಂತೆ. ಮೊಗೆದಷ್ಟೂ ಕಮ್ಮಿಯಾಗದ.. ಮತ್ತೆ ತುಂಬಿಕೊಳ್ಳುವ ತರಹ. ಹಾಗಾಗಿ ನನ್ನ ಓದುಗ ಮಿತ್ರರ ಅಭಿಪ್ರಾಯವನ್ನು ಸಂಪೂರ್ಣ ಗೌರವಿಸಿ...  ಪೂರ್ಣಮಾಡಲು ಯೋಚಿಸಿದೆ. ನನ್ನ ವೈಯುಕ್ತಿಕ ಅನುಭವ,  ಆಪ್ತಸಮಾಲೋಚನೆಯ ಸಮಯ, ಹಾಗೂ ಒಡನಾಡಿದ ದಂಪತಿಗಳ ಅಭಿಪ್ರಾಯಗಳನ್ನು, ಮತ್ತೊಮ್ಮೆ ಮೆಲುಕು ಹಾಕಿದೆ.   ಮತ್ತೆ  ಲೇಖನದ ಶೀರ್ಷಿಕೆಯನ್ನು ಓದಿದಾಗ... ಸಾಂಗತ್ಯಕ್ಕೆ ಸೀಮಿತವಾದ ಬರಹವಾದ ಕಾರಣ ಕೊರತೆ ಇರಬಹುದು ಎಂದು ಗಮನಿಸಿ.. ಹೊಸ ಶೀರ್ಷಿಕೆ ಬರೆದೆ.. ದಾಂಪತ್ಯ - ವೈಪರೀತ್ಯ.. ಅದೇ ಈ ಲೇಖನ. ಗಂಡ ಹೆಂಡತಿ ಬದುಕಿನ ಬಂಡಿಗೆ ಎರಡು ಚಕ್ರಗಳಿದ್ದಂತೆ. ಯಾವ ಚಕ್ರ ಹಾಳಾದರೂ ಬಂಡಿಯ ಓಟ ಕುಂಠಿತವಾಗುತ್ತದೆ. ಚಕ್ರ ಹಾಳಾಗಲು ನಾನಾ ಕಾರಣಗಳು... ಅಹಮಿಕೆ,  ಅನುಮಾನ, ಅಸಮಾಧಾನ, ಅತೃಪ್ತಿ, ಅಸೂಯೆ, ಅಗಲಿಕೆ, ತಾರತಮ್ಯ, ಸುಳ್ಳು, ಸ್ವತ್ವ / ಸ್ವಾಮಿತ್ವ  (posessiveness)..... ಹೀಗೆ ನೂರಾರು. ಹಣಕಾಸಿನ ವಿಚಾರದಲ್ಲಂತೂ ಗಂ...

ದಾಂಪತ್ಯ - ಸಾಂಗತ್ಯ

Image
  ಮನೆಯ ಹತ್ತಿರದ ಉದ್ಯಾನವನಕ್ಕೆ ಬೆಳಗಿನ ವಾಯು ವಿಹಾರಕ್ಕೆ ಹೋಗಲು ಪ್ರಾರಂಭ ಮಾಡಿ ಸುಮಾರು ಒಂದುವರೆ ವರ್ಷ ಆಗಿರಬಹುದು. ಎಲ್ಲ ಹೊಸಮುಖಗಳು, ಮಾತನಾಡಲು ಯಾರು ಜೊತೆ ಇಲ್ಲ.. ಹಾಗಾಗಿ ನನ್ನ ಗಮನ ಸುತ್ತಮುತ್ತ ನಡೆದಾಡುತ್ತಿರುವ ಜನಗಳ ಕಡೆಗೆ. ನಿಧಾನವಾಗಿ ಜನಗಳನ್ನು ಪರಿಚಯ ಮಾಡಿಕೊಳ್ಳುತ್ತಾ ಬಂದೆ.  ಹೀಗಿರುವಾಗ ಕಂಡದ್ದೆ ಒಂದು ಜೋಡಿ..( ಕ್ರೌಂಚ ಪಕ್ಷಿಗಳು ಎನ್ನಲೇ?) ಸಾಮಾನ್ಯವಾಗಿ ಇವರಿಬ್ಬರೂ ಮಾತನಾಡಿಕೊಂಡು ಸುತ್ತು ಹಾಕುತ್ತಿದ್ದದ್ದು... ಬೇರೆಯವರ ಜೊತೆ ಬೆರೆಯುವುದಿಲ್ಲವಾ? ಎಂಬ ಅನುಮಾನ ಕಾಡಿದ್ದು ಉಂಟು. ಆದರೆ ಅದು ಸತ್ಯವಲ್ಲ... ಯಾರಾದರೂ ಸಿಕ್ಕಾಗ ಅವರ ಜೊತೆಯೂ ನಾಲ್ಕು ಹೆಜ್ಜೆ ಹಾಕಿ.. ಮತ್ತೆ ಇಬ್ಬರು ಒಂದಾಗಿ ನಡೆದಾಡುವುದನ್ನು ಗಮನಿಸಿದೆ. ಕಾಲಕ್ರಮೇಣ ಅವರ ಪರಿಚಯವೂ ಆಯಿತು. ಅವರೇ ಲಕ್ಷ್ಮೀನಾರಾಯಣ ಮತ್ತು ಜಯಶ್ರೀ  ದಂಪತಿ.  ಮಾತಿನ ಮಧ್ಯೆ ಒಂದು ದಿನ ಲಕ್ಷ್ಮೀನಾರಾಯಣ ಅವರು  "ನಮ್ಮತ್ತೆಗೆ ಮಾತು ಕೊಟ್ಟಿದ್ದೇನೆ... ನಿಮ್ಮ ಮಗಳ ಜೊತೆ ಯಾವಾಗಲೂ ಇರುತ್ತೇನೆ" ಎಂದು ಹೇಳಿದರು.. ಸ್ವಲ್ಪ ತಮಾಷೆ ಮಾಡಿ ಸುಮ್ಮನಾದೆ. ಅವರ ಆ ಮಾತು ನನಗೆ ಹಿಡಿಸಿತು.   ಸಾಕಷ್ಟು ನನ್ನ ಪರಿಚಯದ ದಂಪತಿಗಳೊಡನೆ ಸಾಮಾನ್ಯವಾಗಿ ಹಾಗೂ ನನ್ನ ಆಪ್ತ ಸಮಾಲೋಚನೆಯ ಭಾಗವಾಗಿ ಮಾತನಾಡಿದ್ದೇನೆ. ದಾಂಪತ್ಯದ ವಿವಿಧ ಮುಖಗಳ ಪ್ರಸ್ತಾಪ ಮಾಡಿ  ಚರ್ಚಿಸಿದ್ದೇನೆ. ಹಾಗಾಗಿ ಇವರ ಬಳಿಯೂ ಮಾತನಾಡಲು ಬಯಸಿ ಅವರಲ್ಲಿ...