ಗೌರಿ ಹಬ್ಬ- ಬಾಂಧವ್ಯ ಬೆಸುಗೆ
ಆಗಸ್ಟ್ 15 ಸ್ವಾತಂತ್ರ್ಯೋತ್ಸವದ ದಿನ, ಭಾರತದಲ್ಲೆಲ್ಲಾ ಅದರದೇ ಸಂಭ್ರಮ. ಈ ಸಂಭ್ರಮದ ಜೊತೆಗೆ ನಾನು ಪಾಲ್ಗೊಂಡದ್ದು ಇನ್ನೊಂದು ಸಂಭ್ರಮ. ಅದು “ ಹೂವಿನ ಕಟ್ಟೆ ಹೆಣ್ಣು ಮಕ್ಕಳ ಸಂಭ್ರಮ” ಎನ್ನುವ ಹೆಸರಿನಲ್ಲಿ ಸಂಭ್ರಮಿಸಿದ್ದು. ಕಬ್ಬಿಣದ ಅಂಗಡಿಯಲ್ಲಿ ನೊಣಕ್ಕೇನು ಕೆಲಸ ಎಂದು ನಿಮಗೆ ಅನಿಸಿದ್ದರೆ ತಪ್ಪೇನಿಲ್ಲ... ಕಾರಣ ಆ ಹೆಣ್ಣು ಮಕ್ಕಳ ಸಂಭ್ರಮದಲ್ಲಿ ಸಂಬಂಧಪಟ್ಟ ಗಂಡಸರಿಗೂ ಭಾಗವಹಿಸಲು ಆಹ್ವಾನವಿತ್ತು. ನಾನು ಹೂವಿನ ಕಟ್ಟೆ ಮನೆತನಕ್ಕೆ ದೊಡ್ಡ ಅಳಿಯ ಆದ ಕಾರಣದಿಂದ ನಾನೂ ಅರ್ಹನೇ. ಈ ಕಾರ್ಯಕ್ರಮ ಸುಮಾರು 18 ವರ್ಷಗಳಿಂದ ನಡೆಯುತ್ತಿದ್ದರೂ, ನನ್ನ ಸ್ಪಷ್ಟ ನೆನಪಿನಂತೆ ನಾನು ಪೂರ್ಣ ಪ್ರಮಾಣದಲ್ಲಿ ಭಾಗವಹಿಸಿದ್ದು ಇದೇ ಮೊದಲು. ಈ ಕಾರ್ಯಕ್ರಮಕ್ಕೆ ಮೂಲ ಸ್ರೋತವೇ ಎಚ್ ಪಿ ರಂಗನಾಥ್ ಮತ್ತು ಜಿ ವಿಜಯ ದಂಪತಿ.( #ಬಲು ಅಪರೂಪ ನಂಜೋಡಿ ) ಈ ಕಾರ್ಯಕ್ರಮ ಅವರು 25 ವರ್ಷದಿಂದ ವಾಸವಾಗಿದ್ದ ಮನೆಯಲ್ಲಿ ಸದ್ಯದ ಮಟ್ಟಿಗೆ ಕೊನೆಯ ಕಾರ್ಯಕ್ರಮ... ಅವರು ಬೇರೊಂದು ಹೊಸ ಮನೆಗೆ ವಾಸ್ತವ್ಯವನ್ನು ಬದಲಾಯಿಸುತ್ತಿದ್ದಾರೆ. ಇದೂ ನಾನು ಭಾಗವಹಿಸಲು ಮುಖ್ಯ ಕಾರಣವಾಗಿತ್ತು. ಗೌರಿ ಹಬ್ಬಕ್ಕೆ ಹೆಣ್ಣು ಮಕ್ಕಳಿಗೆ ಅರಿಶಿನ ಕುಂಕುಮ ಕೊಡುವ ಸಂಪ್ರದಾಯವನ್ನು, ಭಿನ್ನವಾಗಿ ಆಚರಿಸಲು ಸಂಬಂಧಪಟ್ಟ ಎಲ್ಲ ಹೆಣ್ಣು ಮಕ್ಕಳನ್ನು (ಬಹುಶಃ ಅಕ್ಕತಂಗಿಯರಿಂದ ಪ್ರಾರಂಭವಾದ ಈ ಚಿಂತನೆ ಕ್ರಮೇಣ ವಿಸ್ತಾರಗೊಂಡು, ಅವರಿಬ್ಬರ ...