Posts

Showing posts from May, 2025

ಸುಳ್ಳು - ಸತ್ಯ - ಆಣೆ

Image
ಸುಳ್ಳು ಯಾಕೆ ಹೇಳಲೀ ನಾನು.... ಮೊನ್ನೆ ವಾಕಿಂಗ್ ನಲ್ಲಿ ಯಾರೋ ಒಬ್ಬರು ಹೇಳ್ತಿದ್ರು  “ನನ್ನ ಜೀವಮಾನದಲ್ಲಿ ಒಂದು ಸುಳ್ಳು ಹೇಳಿಲ್ಲ" ಅಂತ.... ಅವರ ಮುಖ ನೋಡಿ ಸಣ್ಣ ನಗೆ ಬೀರಿದೆ... ಯಾಕ್ರೀ ನಗ್ತೀರಾ ಅಂತ ತಮಾಷೆಯಾಗಿ ಧಮ್ಕಿ ಹಾಕಿದರು. ಮನಸ್ಸಿಗೆ ಬಂತು ಅವರು ಹೇಳಿದ್ದು ಸರಿ ಅಂತ... ಯಾಕಂದ್ರೆ ಒಂದೋ ಅವರು ಹೇಳಿದ್ದು ಒಂದು ಸುಳ್ಳು ಹೇಳಿಲ್ಲ ಅಂತ... ನೂರಾರು ಹೇಳಿರಬಹುದಲ್ಲ... ಅಥವಾ ಅವರು ಹೇಳಿದ್ದು ಹಸಿ ಸುಳ್ಳು ಇರಬಹುದಲ್ಲ.  ಚೆನ್ನಾಗಿ ಪರಿಚಯವಿಲ್ಲದಿದ್ದ ಕಾರಣ ಇದನ್ನು ಅವರಿಗೆ ಹೇಳುವ ಧೈರ್ಯ ಬರಲಿಲ್ಲ.. ಸುಮ್ನೆ ಮುಂದೆ ಹೆಜ್ಜೆ ಹಾಕ್ದೆ.   ಗೊದ್ದ ಗೋಡೆ ಹಾಕಿದ್ ಕಂಡೆ                             ಇಲಿ ಬೆಕ್ಕಿನ್ ತಿನ್ನೋದ್ ಕಂಡೆ                     ಕಂಡೇನಕ್ಕ ಮುಂಗ್ ಸೀಯ                         ಕಡಾಯಿ ಗಾತ್ರವ... ಇದು ನಾನು ಚಿಕ್ಕಂದಿನಲ್ಲಿ ಕಲಿತ ದಾಸರ ಪದ. ಆಗ ಅದು ಅರ್ಥವೇ ಇಲ್ಲದ ತಮಾಷೆಯಾಗಿ ಮಾತ್ರ ಕಾಣುತ್ತಿತ್ತು.  ಸುಳ್ಳು ನಮ್ಮಲ್ಲಿಲ್ಲವಯ್ಯ,  ಸುಳ್ಳು ನಮ್ಮಲ್ಲಿಲ್ಲ.    ಸುಳ್ಳೇ ನಮ್ಮನೆ ದೇವರು . .......

ಸೋದರ ಮಾವ - ಊರ ಹಬ್ಬ

Image
ನಮ್ಮ ಸಮಾಜದ ಕೂಡು ಕುಟುಂಬದ ವ್ಯವಸ್ಥೆಯಲ್ಲಿ ಸೋದರ ಮಾವನಿಗೆ ವಿಶಿಷ್ಟ ಸ್ಥಾನವಿತ್ತು. ಅಮ್ಮನ ನಂತರದ ಪ್ರೀತಿ ಪಾತ್ರ ವ್ಯಕ್ತಿ ಸೋದರ ಮಾವ ಎಂಬುದು ಪ್ರತೀತಿ.  ಈಗಲೂ ಮದುವೆಯ ಸಮಯದಲ್ಲಿ.... ವಧುವನ್ನು ಕರೆ ತರಲು / ಹೊತ್ತು ತರಲು ಸೋದರ ಮಾವ / ಮಾವಂದಿರೇ  ಬೇಕು... ಇದು ಶಾಸ್ತ್ರದ ರೂಪ ತಳೆದಿದೆ. ಬಾಣಂತನಕ್ಕಾಗಿ ಹೆಣ್ಣು ಮಕ್ಕಳು,  ತವರು ಮನೆಗೆ ಹೋಗುವುದು ಸಾಮಾನ್ಯ, ಜೊತೆಗೆ ಈಗಾಗಲೇ ಇರುವ ಚಿಕ್ಕ ಮಕ್ಕಳು. ಇಷ್ಟೆಲ್ಲವನ್ನು ಸಂಭಾಳಿಸಲು ತವರು ಮನೆಯಲ್ಲಿನ ಅಣ್ಣ ತಮ್ಮಂದಿರು ಹಾಗೂ ಮದುವೆಯಾಗದ ತಂಗಿಯರು ಸದಾ ಸಿದ್ಧ.  ಮಕ್ಕಳಿಗೆ ಇವರೊಡನೆ ಸಲಿಗೆ ಜಾಸ್ತಿ... ಹಾಗಾಗಿ ಅವರ ಜೊತೆ ಆಟ, ಊಟ, ನಿದ್ದೆ ಎಲ್ಲವೂ. ಆಗಿನ ಕಾಲದಲ್ಲಿ ಚಿಕ್ಕ ವಯಸ್ಸಿಗೇ ಮದುವೆ ಮಾಡುತ್ತಿದ್ದದ್ದು.... ಮದುವೆಯ ಹೆಣ್ಣು... ಎಲ್ಲೋ ಇರುತ್ತಿದ್ದದ್ದು ಸೋದರ ಮಾವಂದಿರ ಜೊತೆ, ಬಹುಶಃ ಆಟವಾಡುತ್ತಾ. ಹಾಗಾಗಿ ಮುಹೂರ್ತದ ಸಮಯಕ್ಕೆ... ಸೋದರ ಮಾವ ಮಗುವನ್ನು ಕರೆ ತರುವುದು / ಎತ್ತಿಕೊಂಡು ಬರುವುದು... ಅನಿವಾರ್ಯವಾಗಿತ್ತು... ಅದೇ ಸಂಪ್ರದಾಯವಾಗಿರಬೇಕು... ಶಾಸ್ತ್ರದ ರೂಪ ತಳೆದಿರಬೇಕು... ಸೋದರ ಮಾವನನ್ನೇ ಮದುವೆಯಾಗುತ್ತಿದ್ದ ಸಂಗತಿಗಳು ನಡೆಯುತ್ತಿದ್ದವು... ಆಗೊಂದು ತೆಲುಗಿನ ಮಾತು " ಮಾಮಾ ಮಾಮಾ... ಮಗುಡಾಯ" ಚಾಲ್ತಿಯಲ್ಲಿತ್ತು. ಸೋದರ ಮಾವಂದಿರು ಅಂದಾಗ ನನಗಿದ್ದದ್ದು ಭಯ ಮಿಶ್ರಿತ ಗೌರವ. ಅಮ್ಮ ಕೊಟ್ಟ ಚಿತ್ರಣದಂತೆ.. ಅವರು 'ಉಳ್ಳವರ...

ಅಬಲೆ - ಅಮ್ಮ - ದುರ್ಗೆ

Image
  ಪಹಲ್ಗಾಮ್ ಘಟನೆಯ, ಸುದ್ದಿ ಚಿತ್ರಗಳು ಹೊರ ಬರುತ್ತಿದ್ದಂತೆ, ಮನಸ್ಸು ವ್ಯಗ್ರಗೊಂಡಿತು. ಹಿಂದುಗಳೆಂದು ಖಚಿತಪಡಿಸಿಕೊಂಡು, ಅಸಹಾಯಕ ಹೆಣ್ಣು ಮಕ್ಕಳ ಮುಂದೆ ಗಂಡ, ಅಪ್ಪ, ಅಣ್ಣ, ತಮ್ಮ ಎಂದು ನೋಡದೆ, ಗುಂಡಿಟ್ಟು ಕೊಂದ ಆ ಕ್ರೂರ ಮನಸ್ಸಿನ ಪಾತಕಿಗಳನ್ನು ಸದೆ ಬಡಿಯಲೇ ಬೇಕು... ಎಂಬುದು  ಆಶಯವಾಗಿತ್ತು. ಅದರಲ್ಲೂ " ಮೋದಿಗೆ ಹೋಗಿ ಹೇಳಿ" ಎಂಬ ಉದ್ಧಟತನದ ಮಾತು ರಕ್ತ ಕುದಿಯುವಂತೆ ಮಾಡಿತ್ತು. ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡರು ಎಂದು ಅನಿಸಿದ್ದು ಸಹಜವಾದರೂ... ಜವಾಬ್ದಾರಿ ಸ್ಥಾನದಲ್ಲಿ ಕುಳಿತವರು, ಎಲ್ಲ ದೃಷ್ಟಿಯಿಂದಲೂ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ, ಆಗಬಹುದಾದ ಪರಿಣಾಮಗಳು ಅದಕ್ಕೆ ಬೇಕಾದ ತಯಾರಿಗಳು ಎಲ್ಲವನ್ನೂ ಮಾಡಿಕೊಂಡು  "ಆಪರೇಷನ್ ಸಿಂಧೂರ" ಹೆಸರಿನ ಕಾರ್ಯಾಚರಣೆ ಮಾಡಿ, ಅದರಿಂದ ಸಾಕಷ್ಟು ಉಗ್ರಗಾಮಿಗಳನ್ನು ಹತಗೊಳಿಸಿದ ವಿಷಯ ಮನಸ್ಸಿಗೆ ಒಂದಷ್ಟು ನೆಮ್ಮದಿಯನ್ನು ಕೊಟ್ಟಿತು. ಅದಕ್ಕೂ ಹೆಚ್ಚು ಸಂತೋಷ ಕೊಟ್ಟಿದ್ದು, ಈ ವಿಚಾರವಾಗಿ ನಡೆದ ಪತ್ರಿಕಾಗೋಷ್ಠಿ. ಅದರಲ್ಲಿ ವಿವರಗಳನ್ನು ಕೊಡಲು, ಮಿಲಿಟರಿ ಉಡುಗೆ ತೊಟ್ಟು, ಟೋಪಿಯೊಂದಿಗೆ ಕಂಗೊಳಿಸುತ್ತಿದ್ದ ಧೀರ ಮಹಿಳೆಯರು... colonel ಸೋಫಿಯಾ ಖುರೇಶಿ ಹಾಗೂ wing commander ವ್ಯೋಮಿಕಾ ಸಿಂಗ್. ಅಸಹಾಯಕ ಮಹಿಳೆಗೆ ಹೇಳಿದ   "ಮೋದಿಗೆ ಹೇಳು" ಎಂಬ ಸಂದೇಶಕ್ಕೆ ಪ್ರತಿಕ್ರಿಯೆಯಾಗಿ ಮಾಡಿದ ಆಪರೇಷನ್ ಸಿಂಧೂರದ ವಿವರಣೆಯನ್ನು ಉಗ್ರಗಾಮಿ ಸಂ...