Posts

Showing posts from March, 2025

ಭಿತ್ತಿಪತ್ರ-ಗೋಡೆ ಬರಹ

Image
  ಕೂಗುಮಾರಿ ಬಂದು ಬಾಗಿಲು ಬಡಿತಾಳೆ, ತಕ್ಷಣ ಬಾಗಿಲು ತೆಗೆದು ಅವಳನ್ನು ನೋಡಿದರೆ, ರಕ್ತಕಾರಿ ಸಾಯೋದು ಖಚಿತ. ಅದನ್ನ ತಪ್ಸೋಕೇ ಬಾಗಿಲ ಮೇಲೆ ಮೂರು ನಾಮ ಬರೆದು ನಾಳೆ ಬಾ ಎಂದು ಜೊತೆಗೆ ಸೇರಿಸಿದರೆ.. ಕೂಗು ಮಾರಿ ಅದನ್ನು ಓದಿ ನಾಳೆ ಬರೋಣ ಅಂತ ಹೋಗ್ತಾಳೆ,  ನಾಳೆ ಮತ್ತದೇ, ಹಾಗಾಗಿ ಸಾಯೋದು ತಪ್ಪುತ್ತೆ.  ಇದು ಚಿಕ್ಕಂದಿನಲ್ಲಿ ಕೇಳಿದ್ದ ಒಂದು ಸುದ್ದಿ . ಹಾಗಾಗಿ ಎಲ್ಲರ ಮನೆಯ ಬಾಗಿಲ ಮೇಲೆ ಇದು ಬರೆದದ್ದನ್ನು ನೋಡಿದ್ದೇನೆ... ನಮ್ಮ ಮನೆಯ ಬಾಗಿಲ ಮೇಲೂ  ಬರೆದದ್ದನ್ನು ಈಗ ನೆನೆದು ನಕ್ಕಿದ್ದೇನೆ. ಇದು ನೆನಪಾಗಲು ಕಾರಣವೇನೋ ಗೊತ್ತಿಲ್ಲ.. ಹಾಗೇ ಮನಸ್ಸಿಗೆ ಬಂತು... ಅದರ ಹಿಂದೆಯೇ ನೆನಪಿನ ಸರಮಾಲೆ. ಬಹಳ ಜನಕ್ಕೆ ವಿಷಯವನ್ನು ತಿಳಿಸಬೇಕಾದಾಗ ಅದನ್ನು  ಗೋಡೆಯ ಮೇಲಿನ ಬರಹ ಅಥವಾ ಗೋಡೆಗೆ ಅಂಟಿಸಿದ ಚೀಟಿಯ ಮೂಲಕ ಮಾಡುತ್ತಿದ್ದದ್ದು ರೂಢಿಗತ. ಅದಕ್ಕೂ ಮೊದಲು, ಓದು ಬರಹ ಬರದ ಜನ ಜಾಸ್ತಿ ಇದ್ದಾಗ, ಈ ವಿಚಾರಗಳನ್ನು ಡಂಗುರದ ಮೂಲಕ ಸಾರುತ್ತಿದ್ದರು.   ಡಂಗುರವ ಸಾರಿರಯ್ಯ ಡಿಂಗರಿಗರೆಲ್ಲರು ಭೂ-ಮಂಡಲಕ್ಕೆ ಪಾಂಡುರಂಗವಿಠ್ಠಲ ಪರದೈವವೆಂದು.. ಪುರಂದರದಾಸರು ಆಗಿನ ಕಾಲಕ್ಕೆ ಹೇಳಿದ್ದು. ಚಿಕ್ಕಂದಿನಲ್ಲಿ ನನ್ನೂರು ದೊಡ್ಡಜಾಲದಲ್ಲಿ ಕಂಡಂತಹ ಮೊದಲ ಭಿತ್ತಿ ಪತ್ರಗಳು.. ಚಿಕ್ಕಜಾಲದ ಸಿನಿಮಾ ಟೆಂಟ್ ನಲ್ಲಿ ಬರುತ್ತಿದ್ದ ಚಲನ ಚಿತ್ರಗಳ ವಿಚಾರ ತಿಳಿಸುವ ಪೋಸ್ಟರ್ ಗಳು. ನಂತರ ತುಂಬಾ ಕಣ್ಣಿಗೆ ಬಿದ್ದಂತಹ ಗ...

ಮುದ ನೀಡಿದ ಮನಸ್ಸುಗಳು

Image
ಮುದ ನೀಡಿದ ಮನಸ್ಸುಗಳು ಶನಿವಾರ ಬೆಳಿಗ್ಗೆ ವಾಕಿಂಗ್ ಮಾಡುವಾಗ, ಯಾವಾಗಲಾದರೂ ಒಮ್ಮೆ ಸಿಗುವ  ಹೇಮಾ   ( ನನ್ನ ಭಾವ ಮೈದುನನ ಹೆಂಡತಿ), ಒಬ್ಬ ಸ್ನೇಹಜೀವಿ. ವಾಕಿಂಗ್ ಮಾಡುತ್ತಾ ಟಾಕಿಂಗ್ ಮಾಡುವುದು ಸಾಮಾನ್ಯ... ವಿಷಯ ಇಂತದೇ ಆಗಿರಬೇಕೆಂದೇನೂ ಇಲ್ಲ. ಇಂದು ಮಾತನಾಡುವಾಗ ಬಂದ ವಿಷಯ- ಚಿಕ್ಕಂದಿನಲ್ಲಿ ರಜೆಯ ಕಾಲದಲ್ಲಿ ಬೇರೆಯವರ ಮನೆಗೆ ಹೋಗಿ ಇರುತ್ತಿದ್ದ ವಿಷಯ. ಆಗ ನೆನಪಿಗೆ ಬಂದಿದ್ದೆ ನಾನು ಕುಣಿಗಲ್ ಗೆ ಹೋಗಿದ್ದದ್ದು.  ನೆಂಟರಲ್ಲದ, ಹೆಚ್ಚು ಪರಿಚಯವಿಲ್ಲದವರಾದರೂ, ಪ್ರತಿಫಲಾಪೇಕ್ಷೆ ಇಲ್ಲದ ಪ್ರೀತಿ ತೋರಿಸಿದವರ ನೆನಪು ಮನಸ್ಸಿಗೆ ಬಂತು. ಅಂತ ಮನಸ್ಸುಳ್ಳ ವ್ಯಕ್ತಿಗಳ ಜೊತೆ ನನ್ನ ಒಡನಾಟದ ನೆನಪುಗಳ ಚಿತ್ರಣವೇ ಈ ಲೇಖನದ ವಿಷಯ. ಕುಣಿಗಲ್ ಭಾವ - ಹನುಮಂತ ರಾಯಪ್ಪನವರು: ನಾನು ಹೈಸ್ಕೂಲ್ ನಲ್ಲಿ ಓದುತ್ತಿದ್ದ ಹುಡುಗ, ಗವಿಪುರದ ನಮ್ಮ ವಠಾರದಲ್ಲಿ ಇದ್ದ ಎಂ ಎನ್ ಸುಮಿತ್ರ,  ( ಈಗ ಅವರು ನನಗೆ ಸುಮಿತ್ರ ಅತ್ತಿಗೆ)ಅವರ ಜೊತೆ ಸಲಿಗೆ... ನನ್ನಕ್ಕ ಗಿರಿಜಾಂಬನ ಮದುವೆಯಲ್ಲಿ ಅವರ ಜೊತೆ ಸೇರಿ ಹಾಡುಗಳನ್ನು ಹಾಡಿದ್ದೆ. ಅವರ ಅಕ್ಕ ಶಾಂತಾ ..ಅವರನ್ನು ಒಂದು ಸಲ ನೋಡಿದ್ದೆ. ಮಾಗಡಿ ಜಾತ್ರೆಗೆ ಹೋಗಿದ್ದಾಗ... ಈ ಶಾಂತ ಅಕ್ಕ ಸಿಕ್ಕರು.. ಹಾಗೆ ಕುಣಿಗಲ್ಲಿಗೆ ಹೋಗೋಣ ಬಾ ಅಂತ ಕರೆದರು... ಸ್ವಲ್ಪ ಸಂಕೋಚವಾದರೂ ಹೋಗುವ ಆಸೆ ಇತ್ತು.. ಅವರ ಗಂಡ ಸಹ (ನಾನು ಮೊದಲು ಬಾರಿ ನೋಡಿದ ಆದರೆ ಕೇಳಿದ್ದ "ಕುಣುಗುಲು ಭಾವ"), ನಡಿ ಹೋಗೋ...

ಸವಿ ನೆನಪುಗಳು ಬೇಕು-ಸವಿಯಲೀ ಬದುಕು

Image
    ಫೆಬ್ರವರಿ 3ನೇ ವಾರ ನನ್ನಣ್ಣನ ಮಗಳು ವಾಣಿ ಮತ್ತು ಶಶಿಧರ್ ದಂಪತಿಗಳ ಮಗ ಆಕಾಶನ ಮದುವೆ... ಚೆನ್ನೈಯಲ್ಲಿ.  ಮದುವೆ ಆಧುನಿಕತೆ ಹಾಗೂ ಪರಂಪರೆ ಎರಡರ ಮಿಳಿತವಾಗಿತ್ತು. ಸಂತೋಷದಿಂದ ಕೂಡಿತ್ತು.. ಹಾಗೇ ಒಂದಷ್ಟು ನೆನಪುಗಳನ್ನು ಮೇಲುಕುಹಾಕುವಂತೆ ಮಾಡಿತು. ಚೆನ್ನೈ ( ಅಂದಿನ ಮದರಾಸು) ನನ್ನ  ಓದು ಮುಗಿದ ನಂತರ(1967) ಮೊದಲ ಬಾರಿಗೆ ನನ್ನ ಕಾರ್ಯಕ್ಷೇತ್ರವಾದ ಕಾರ್ಖಾನೆಯ ಸಂಪರ್ಕ ಕೊಟ್ಟ ಊರು. ಪೆರಂಬೂರಿನಲ್ಲಿರುವ ದಕ್ಷಿಣ ರೈಲ್ವೆಯ ಕಾರ್ಖಾನೆಯಲ್ಲಿ ಭಾರತ ಸರ್ಕಾರ ಪ್ರಾಯೋಜಿತ apprentice ಯೋಜನೆಯಲ್ಲಿ ಕೆಲಸ, ಯಾವ ಅರ್ಜಿಯೂ ಸಲ್ಲಿಸದೆ, ಸಂದರ್ಶನವೂ ಇಲ್ಲದೆ, ಕೇವಲ ಅರ್ಹತೆಯ ಆಧಾರದ ಮೇಲೆ ಸಿಕ್ಕ ಅವಕಾಶ. ತಿಂಗಳಿಗೆ 150 ರೂಪಾಯಿ ವೇತನ ಪಡೆದು, ಒಂದಷ್ಟು ಹೊಸದನ್ನು ಕಲಿತು, ಒಂದಷ್ಟು ಕಾಲಹರಣವನ್ನು ಮಾಡಿ ವರ್ಷ ಪೂರೈಸಿದ್ದು. ಆಗ ಪರಿಚಯವಾಗಿ ಈಗಲೂ ಉಳಿದಿರುವ ಸ್ನೇಹ ಅಂದರೆ ಅದು S ರಾಮನ್ ನದು.  ವಾಣಿ ಲಗ್ನ  ಪತ್ರಿಕೆ ಕೊಟ್ಟಿದ್ದು ಪ್ರಾಯಶಃ ಡಿಸೆಂಬರ್ ಮೊದಲ ವಾರದಲ್ಲಿ... ಆಗಲೇ ರಾಮನಿಗೆ ವಿಷಯ ತಿಳಿಸಿದ್ದೆ. ಆಗ ಅವನು ಆಸ್ಟ್ರೇಲಿಯಾದಲ್ಲಿದ್ದ... ಮದುವೆಯ ಹೊತ್ತಿಗೆ ವಾಪಸ್ ಬರುವನೆಂದೂ ಖಂಡಿತವಾಗಿಯೂ ಭೇಟಿಯಾಗುವುದೆಂದು ನಿರ್ಧಾರ ಮಾಡಿದೆವು. ನಮ್ಮ ಭೇಟಿಯು ನಿಯಮಿತವಾಗಿಲ್ಲದಿದ್ದರೂ, ಸಂಪರ್ಕ ಮಾತ್ರ ತಕ್ಕಮಟ್ಟಿಗೆ ಇತ್ತು. ಚೆನ್ನೈಗೆ  ಮೊದಲ ಮದುವೆಗೆ ಹೋದದ್ದು ರಾಮನ್ ದಂಪತಿಗಳ ಮಗಳ ...