Posts

Showing posts from July, 2024

ಗುರುಪೂರ್ಣಿಮೆ

Image
  ಮೊನ್ನೆ ಭಾನುವಾರ ಗುರುಪೂರ್ಣಿಮೆಯ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಗುರುಪೂರ್ಣಿಮೆಯ ಶುಭಾಶಯಗಳು ಹಾಗೂ ಸಂಬಂಧಪಟ್ಟ ವಿಷಯಗಳ ಬಗ್ಗೆ ಮೆಸೇಜುಗಳ ಮಹಾಪೂರವೇ ಹರಿದು ಬಂತು. ಗುರುಪೂರ್ಣಿಮೆಯ ಆಚರಣೆ ಹಿಂದಿನಿಂದ ಇತ್ತಾದರೂ... ಅದು ಜನಮಾನಸದ ಎಲ್ಲ ಸ್ತರದ ಜನರನ್ನು ಮುಟ್ಟಿರಲಿಲ್ಲ.... ಸಾಮಾಜಿಕ ಜಾಲತಾಣದ ಕೃಪೆಯಿಂದಾಗಿ.. ಇಂದು ಬಹು ಜನರನ್ನು ಮುಟ್ಟಿದೆ... ಹಾಗೂ ಈ ವಿಷಯ ಜನಜನಿತವಾಗಿದೆ. ಇದೊಂದು ಧಾರ್ಮಿಕ ಆಚರಣೆಯೇ ಆಗಿಲ್ಲದೆ... ಸಾಮಾಜಿಕವಾಗಿಯೂ ಆಚರಣೆಯಲ್ಲಿ ಇದೆ... ತಮಗೆ ಇಷ್ಟವಾದ ಗುರುಗಳನ್ನು ಆದರಿಸಿ ಸತ್ಕರಿಸಿ ಗೌರವ ತೋರಿಸಿ, ಕೃತಜ್ಞತೆ ಸಲ್ಲಿಸುವ ಮೂಲಕ. ಅದರಲ್ಲೂ ಸಂಗೀತ ಕ್ಷೇತ್ರದಲ್ಲಿ ಗುರು ವಂದನೆಗೆ ಹೆಚ್ಚಿನ ಪ್ರಾಮುಖ್ಯತೆ. ನಮ್ಮ ಸಂಸ್ಕೃತಿಯಲ್ಲಿ... ಅಪ್ಪ ಅಮ್ಮನ ನಂತರದ ಸ್ಥಾನ ಗುರುವಿಗೆ. " ಮಕ್ಕಳಿಸ್ಕೂಲ್ ಮನೇಲಲ್ವೇ" ಎಂಬ ಕೈಲಾಸಂ ಮಾತಿನಂತೆ.. ತಾಯಿಯೇ ಮೊದಲ ಗುರು. " ಅಜ್ಞಾನಾತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ" ಅಜ್ಞಾನದಿಂದ ಕುರುಡಾದವನ ಕಣ್ಣುಗಳನ್ನು ಜ್ನಾನಾಂಜನ ಎಂಬ ಸಲಾಕೆಯಿಂದ.. ಕಣ್ಣನ್ನು ತೆರೆಸಿದವನೇ ಗುರು. ವರ್ಣಮಾತ್ರಂ ಕಲಿಸಿದಾತಂ ಗುರು ಎನ್ನುವ ಹೇಳಿಕೆಯೂ ಇದೆ. ಗುರುವಿನ ಬಗ್ಗೆ ಇಂತಹ ಸಾಲುಗಳು ಅನೇಕವು.. ಬಗೆದಷ್ಟೂ ಸಿಗುವಂತಹವು. ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರದ ಶಿವನನ್ನು ಆದಿ ಗುರು ಎಂದು ಕರೆಯುವು...

Walking - ನಡೆದಾಟ

Image
ವಾಕಿಂಗ್ ಎಂದರೆ.. ಈಗ ಅರ್ಥ ಮಾಡಿಕೊಳ್ಳುವುದು... ಬೆಳಿಗ್ಗೆ ಅಥವಾ ಸಂಜೆ ಯಾವುದಾದರೂ ಉದ್ಯಾನವನದಲ್ಲೋ... ಜನ ಸಂದಣಿ ಇಲ್ಲದ ರಸ್ತೆಯಲ್ಲೋ... ಸ್ವಚ್ಛ ಗಾಳಿಯನ್ನು ಕುಡಿದು ನಡೆದಾಡುವ ಕ್ರಿಯೆ ಎಂದು. ಅಷ್ಟರಮಟ್ಟಿಗೆ ಅದು ಕನ್ನಡದ ಪದವಾಗಿ ಬಳಕೆಯಲ್ಲಿದೆ. 2004 ರಿಂದ ಕರೋನಾ ಮಾರಿ ಬಂದು ಕಾಡುವ ತನಕ ನಿರಂತರವಾಗಿ ನಾನು ಹರಿಹರ ಗುಡ್ಡಕ್ಕೆ ವಾಕಿಂಗ್ (ವಾಕಿಂಗ್ ಗೂ ಮಿಕ್ಕಿ talking ಇರುತ್ತಿತ್ತು) ಹೋಗುತ್ತಿದ್ದೆ. ಕರೋನಾ ನನ್ನನ್ನು ಮನೆಯಲ್ಲಿ ಹಿಡಿದಿಟ್ಟಿತ್ತು,  ಹಾಗಾಗಿ ಮನೆಯಲ್ಲಿ ವಾಕಿಂಗ್.... ನಂತರದಲ್ಲಿ ಹರಿಹರ ಗುಡ್ಡಕ್ಕೆ ವಾಕಿಂಗ್ ಶುರುವಾದರೂ... ನಿಯಮಿತವಾಗಿ ಹೋಗುತ್ತಿಲ್ಲ.. ಈಗ ಮನೆಯ ಹತ್ತಿರದ ಉದ್ಯಾನವನದಲ್ಲಿ ವಾಕಿಂಗ್ ಮಾಡುತ್ತೇನೆ. ಈಗೀಗ ವಾಕಿಂಗ್ ಮಾಡುವ ಜನ ಜಾಸ್ತಿಯಾಗುತ್ತಿದ್ದಾರೆ.... ಕೆಲವರು ಕಾಲ ಕಳೆಯಲು, ಕೆಲವರು ಆರೋಗ್ಯದ ದೃಷ್ಟಿಯಿಂದ, ಯುವಕ ಯುವತಿಯರು ತಮ್ಮ ದೇಹದ fitness ಗಾಗಿ, ಇನ್ನೂ ಕೆಲ ಅಗೋಚರ ಕಾರಣಗಳಿಗಾಗಿಯೂ ಇರಬಹುದು. ಲೋಕಾರೂಢಿಯಾಗಿ ಮಾತಾಡ್ತಾ... ಯಾವಾಗ ವಾಕಿಂಗ್ ಶುರು ಮಾಡಿದ್ದು ಅಂದಾಗ......" ಸುಮಾರು ನನಗೆ ಒಂದು ವರ್ಷವಾದಾಗಲಿಂದ ವಾಕಿಂಗ್ ಮಾಡುತ್ತಿದ್ದೇನೆ" ಎಂಬ ತಲೆಹರಟೆ / ತಮಾಷೆ ಉತ್ತರ ಕೊಟ್ಟಿದ್ದೇನೆ... ಹೌದಲ್ವಾ walking ನ ನಿಜಾರ್ಥದಲ್ಲಿ ಅದುವೇ ಸರಿ...  ಮಗುವಿನ ಮೊದಲ ಹೆಜ್ಜೆಯನ್ನು ಇಟ್ಟ ಕ್ಷಣ... ಅಪ್ಪ ಅಮ್ಮನಿಗೆ ಸಂಭ್ರಮ.. ಮಗುವನ್ನು ಅಪ್ಪಿ ಮುದ್ದಾಡುವ...

ಸುಖದ ಪರಿಕಲ್ಪನೆ

Image
  ಹೋದ ಗುರುವಾರ NIMHANS ನ ಅಂಗ ಸಂಸ್ಥೆಯಾದ ವಯೋಮಾನಸ ಸಂಜೀವನಿಯ ಸ್ಪೂರ್ತಿ ತಂಡದ.. ವಾರದ online ಕಾರ್ಯಕ್ರಮದಲ್ಲಿ ಮಾತನಾಡುವ ಅವಕಾಶವನ್ನು ಮಾಡಿಕೊಟ್ಟಿದ್ದರು ಶ್ರೀಮತಿ ರತ್ನಪ್ರಭಾ ಅವರು. ವಿಷಯ ಇಂದಿನ ನನ್ನ ಶೀರ್ಷಿಕೆಯೇ... ಸುಖದ ಪರಿಕಲ್ಪನೆ.  ಮೊದಲ ಹಂತದಲ್ಲಿಯೇ ಭಾಗಿಗಳಾಗಿದ್ದ ಜನರನ್ನು.. ಅವರ ದೃಷ್ಟಿಯಲ್ಲಿ.. ಸುಖ ಎಂದರೆ ಏನು? ಎಂಬ ಪ್ರಶ್ನೆಗೆ ಸಿಕ್ಕ ಉತ್ತರಗಳು ಹೀಗಿತ್ತು * ತೃಪ್ತಿಯಿಂದ ಇರುವುದು * ಆಸೆಯೇ ದುಃಖಕ್ಕೆ ಕಾರಣ * ನಮಗೆ ಬೇಕಾದ್ದು ಸಿಕ್ಕಾಗ * Acceptance.. ಒಪ್ಪಿಕೊಳ್ಳುವುದು * Balancing of life. ಹೊಂದಾಣಿಕೆ  * ಬೇರೆಯವರಿಗೆ ಸಂತೋಷ  ಹಂಚುವುದು * ಸಮಾಜ ಸೇವೆ * ಆರೋಗ್ಯ * ಕಷ್ಟವಿಲ್ಲದ್ದು.... ಸುಖ * ಶಾಂತಿ * ಖುಷಿ * ನೆಮ್ಮದಿ * ಚಿಂತೆ ಇಲ್ಲದ ಜೀವನ * ಸುಖವಾದ ಮರಣ * ಹೊಗಳಿಕೆ ಸಿಕ್ಕಾಗ * ಸಂಬಂಧಗಳು ಚೆನ್ನಾಗಿದ್ದಾಗ * ಗೆಲುವು / ಯಶಸ್ಸು * Expectations * ತಿನ್ಕೊಂಡು ಉಂಡ್ಕೊಂಡು    ಹಾಯಾಗಿರೋದು * ಬೆಚ್ಚನಾ ಮನೆಯಿರಲು..... ಸರ್ವಜ್ಞ ಸುಖ ಅನ್ನುವುದು... ಅವರವರ ಭಾವನೆ/ ಕಲ್ಪನೆ.... ಸಾಮಾನ್ಯವಾಗಿ ಅವರಿಗೆ ಆ ಸಮಯದಲ್ಲಿ ಕಷ್ಟ ಅನ್ನಿಸಿದ್ದು ಇಲ್ಲವಾದಾಗ ಅದು ಸುಖ.  ಮೇಲಿನ ಎಲ್ಲಾ ವಿಷಯಗಳನ್ನು ಸ್ವಲ್ಪ ಮಟ್ಟಿಗೆ ಒಳಗೊಂಡು ನನ್ನದೇ ಆದ ವಿಶ್ಲೇಷಣೆಯನ್ನು ಸೇರಿಸಿ, ಮಾತನಾಡಿ ಕಾರ್ಯಕ್ರಮ ಮುಗಿಸಿದೆ. ನಂತರ.. ನನ್ನ ಜೀವನದ ಒಂದು ಸಿಂಹಾವಲೋ...

ಅನಂತ ಸುಬ್ಬರಾಯರು

Image
  ಬೆಳಗಿನ ಜಾವ 5 ಘಂಟೆಯ ಸುಮಾರಿಗೆ ...ಬಕೆಟ್ ಗೆ ನೀರು ಬಿಡುವ ಶಬ್ದ...ಮೇಲಿಂದ ನೀರು ಸುರಿವ ಶಬ್ದ...ಕೇಳಿಸಿದರೆ.. ಸುಬ್ಬರಾಯರು ಊರಲ್ಲಿದ್ದಾರೆ, ಅವರ  ದಿನಚರಿ ಶುರುವಾಯಿತು ಎಂದು ಅರ್ಥ. ಇದಾದ ನಂತರ ಛಕ್ ಛಕ್ ಛಕ್....ಛಕ್ ಛಕ್ ಛಕ್ ಅಂತ ಲಯಬದ್ಧವಾಗಿ ಬಟ್ಟೆ  ಕಸಕುವ ಶೈಲಿ ಸುಬ್ಬರಾಯರ ಹೆಗ್ಗುರುತು. ಇನ್ನು ಅವರು ಬಟ್ಟೆ  ಒಗೆದು..ಪಂಚೆಗಳನ್ನು ಮಡಿಸಿ... ಕೈಯಿಂದ ತಟ್ಟಿ  ಮಟ್ಟಸಮವಾಗಿ ಒಣಗಲು ಹಾಕಿದ್ದನ್ನು ನೋಡಲು ಸೊಗಸು. ಶಿಸ್ತಿನ ಅಪರಾವತಾರ ಸುಬ್ಬರಾಯರು.  ಸುಬ್ಬರಾಯರು, ನಾವು ಶ್ರೀನಗರದಲ್ಲಿ ಬಾಡಿಗೆಗೆ ಇದ್ದ ಮನೆಯ ಮಾಲಿಕರು, ಅದಕ್ಕೂ ಹೆಚ್ಚು  ಅವರು ನಮ್ಮ ಹಿತೈಷಿಗಳು.   ನನ್ನ ಹೆಂಡತಿಯ ತವರು ಮನೆಯ ಹತ್ತಿರವೇ ಇದ್ದ ಸುಬ್ಬರಾಯರ ಬಗ್ಗೆ ಕೇಳಿ ತಿಳಿದಿದ್ದೆ. (ನಮ್ಮ ಮದುವೆಗೆ  ಬಂದಿದ್ದರೆಂದು ಗೊತ್ತು...ಆದರೆ ನೆನಪಿಲ್ಲ.   ಮದುವೆಯ Reception ನಲ್ಲಿ ನಾವಿಬ್ಬರೂ ಓಡಾಡಿಕೊಂಡು ಬಂದವರೊಡನೆ ಮಾತಾಡುತ್ತಿದ್ದದ್ದನ್ನು ಸುಬ್ಬರಾಯರು ನನಗೆ ಮೆಚ್ಚುಗೆ ಸೂಚಿಸಿದ್ದರು....ಈ ಮನೆಗೆಬಂದಮೇಲೆ...)    ತಮ್ಮ ಇಬ್ಬರು ಗಂಡು ಮಕ್ಕಳ ಜೊತೆ ಒಂದು ಸುತ್ತು ಹಾಗೂ ಅವರ ಹೆಂಡತಿ ಶಾಂತಮ್ಮ ಅವರ ಜೊತೆ ಒಂದು ಸುತ್ತು ವಾಕಿಂಗ್ ಪ್ರತಿದಿನ ಹೋಗುತ್ತಾರೆ..ತುಂಬಾ ಶಿಸ್ತಿನ ಮನುಷ್ಯ ಎಂದು.  ಅವರನ್ನು ಭೇಟಿ ಮಾಡುವ ಅವಕಾಶ  ಬಂದಿದ್ದು...ಅವರ ಮನ...