Posts

Showing posts from April, 2024

ಪರೀಕ್ಷೆ- ಜೀವನ

Image
  ಮೊನ್ನೆ ಪೇಪರ್ ನಲ್ಲಿ ಬಂದ ಸುದ್ದಿ...CET ಪರೀಕ್ಷೆಯಲ್ಲಿ ಕೊಟ್ಟ ಪ್ರಶ್ನೆಗಳು... ಸಿಲಬಸ್ ನಿಂದ ಹೊರತಾಗಿತ್ತು... ಎಂದು.  ವಿದ್ಯಾರ್ಥಿಗಳು ಪೋಷಕರು ಹಾಗೂ ಕೆಲ ಕಾಲೇಜುಗಳಿಂದ ಖಂಡನೆ... ಮರು ಪರೀಕ್ಷೆಯು ನಡೆಯಬಹುದೇನೋ ಎಂಬ  ಸೂಚನೆ.  ಮರು ಪರೀಕ್ಷೆ ಅಂದಾಕ್ಷಣ ನನ್ನ ಮನಸ್ಸು ಹೋಗಿದ್ದು ನನ್ನ ಹತ್ತನೆಯ ತರಗತಿಯ ವರ್ಷಕ್ಕೆ. ನಾನು 10ನೇ ತರಗತಿ (SSLC) ಪರೀಕ್ಷೆಯನ್ನು ಎರಡು ಸಲ ಬರೆದಿದ್ದೇನೆಂಬ ಹೆಮ್ಮೆ.. ಸಾಮಾನ್ಯವಾಗಿ ಎರಡನೆಯ ಬಾರಿ ಪರೀಕ್ಷೆ ಬರೆದಿದ್ದರೆ... ಅದು ಫೇಲಾದ ಸೂಚನೆ ಹಾಗೂ ಕೆಲ ಮಟ್ಟಿಗೆ ಅವಮಾನಕರ... ಅಲ್ಲವೇ. ಆದರೆ ನನ್ನ ವಿಷಯದಲ್ಲಿ (ಆ ವರ್ಷದ ಎಲ್ಲ 10ನೇ ತರಗತಿಯ ವಿದ್ಯಾರ್ಥಿಗಳ ವಿಷಯದಲ್ಲಿ) ಹಾಗಲ್ಲ. ನಮ್ಮದೇ ವೈಶಿಷ್ಟ್ಯ. ಆಗಷ್ಟೇ ಶುರುಮಾಡಿದ್ದ ಹೊಸ ಶೈಲಿಯ... ಮೊದಲನೆಯ ತಂಡ ನಮ್ಮದು.  ಪ್ರಶ್ನೆ ಪತ್ರಿಕೆಯು ಹೊಸ ತರಹ.. new type questions ಸಮೇತ.. ಹಾಗಾಗಿ ನಮಗೆ ಒಂದಷ್ಟು ಕುತೂಹಲ ...ಸಾಕಷ್ಟು ಭಯ. ಸುದೈವದಿಂದ ಎಲ್ಲವೂ ಸರಾಗವಾಗಿ ನಡೆಯುತ್ತಿತ್ತು.... ಅಲ್ಲಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಗುಸು-ಗುಸು... ಗಣಿತದ ಪರೀಕ್ಷೆ ಎರಡು ದಿನ ಇರುವಾಗ... ನನ್ನಣ್ಣ ಒಂದು ಟೈಪ್ ಮಾಡಿದ ಪ್ರಶ್ನೆ ಪತ್ರಿಕೆ ತಂದುಕೊಟ್ಟ... ಅದು ಗಣಿತ ಪ್ರಶ್ನೆ ಪತ್ರಿಕೆಯ ತದ್ರೂಪು... ಅದು ಯಾವ ಮಟ್ಟದಲ್ಲಿ ಪ್ರಸಾರವಾಗಿತ್ತು ಎಂದರೆ ಗಾಂಧಿಬಜಾರ್ ನಲ್ಲಿ ಹಂಚುವಷ್ಟು. ನಾನು ಎಷ್ಟರ...

ಜಾತ್ರೆ -ತೇರು -ರಥೋತ್ಸವ

Image
  ಈಗ ಎಲ್ಲ ಕಡೆಯೂ ಜಾತ್ರೆ.. ರಥೋತ್ಸವ ... ತೇರನ್ನೆಳೆಯುವ ಸಂಭ್ರಮ. ಬೆಳಗಾದರೆ ಪೇಪರ್ ನಲ್ಲಿ ಅಲ್ಲಲ್ಲಿ ನಡೆದ ಜಾತ್ರೆಯ ವಿಷಯ ಬಂದಿರುತ್ತೆ. ಬೇಸಿಗೆ ಕಾಲ ಬಂತೆಂದರೆ ರೈತರಿಗೆ ವ್ಯವಸಾಯಕ್ಕೆ ಒಂದಷ್ಟು ಬಿಡುವು... ಜೊತೆಗೆ ಮಳೆ ಗಾಳಿಯ ತೊಡಕು ಇಲ್ಲದ ಸಮಯ... ಹಾಗಾಗಿ ಜನ ಸೇರುವ ಕಾರ್ಯಕ್ರಮಗಳಿಗೆ ಇದು ಸೂಕ್ತ ಸಮಯ. ಹಾಗಾಗಿ ಜಾತ್ರೆ, ಊರಿನ ದೇವಸ್ಥಾನದ ದೇವರ ರಥೋತ್ಸವ / ತೇರು ಕಾರ್ಯಕ್ರಮಗಳು. ಇದಕ್ಕೆ ಬಹಳಷ್ಟು ಮನೆಗಳಿಗೆ ಅವರ ನೆಂಟರು ಇಷ್ಟರು ಬಂದು ಭಾಗವಹಿಸುವುದು ಒಂದು ಸಂಪ್ರದಾಯ.  ಈಗ ಅದೇ ಪದ್ಧತಿ ಮುಂದುವರಿದು ಜಾತ್ರೆಯಂಥಾ ಕಾರ್ಯಕ್ರಮಗಳು ನಡೆಯುವುದು ಬೇಸಿಗೆ ಸಮಯದಲ್ಲೇ. ಜಾತ್ರೆ/ ರಥೋತ್ಸವ ಎಂದರೆ ಅದು ಶ್ರದ್ಧೆ ,ಭಕ್ತಿ ಸಡಗರ, ಸಂಭ್ರಮ , ಮನರಂಜನೆ ಎಲ್ಲಾ ಒಟ್ಟುಗೂಡಿರುವ ಒಂದು ಕಾರ್ಯಕ್ರಮ. ಹಳ್ಳಿ , ಪಟ್ಟಣ,  ನಗರ,.. ಹಾಗೇ ಚಿಕ್ಕವರು - ದೊಡ್ಡವರು ಹೆಣ್ಣು- ಗಂಡು   ಎಂಬ ಭೇದ ಭಾವವಿಲ್ಲದೆ ಎಲ್ಲ ಕಡೆಯೂ ಜಾತ್ರೆಯಲ್ಲಿ ಉತ್ಸಾಹದಿಂದ ಭಾಗವಹಿಸುವುದು ಸಾಮಾನ್ಯ. ಚಿಕ್ಕ ಮಕ್ಕಳು... ಅಲ್ಲಿ ಸಿಗುವ ಬಣ್ಣ ಬಣ್ಣದ ಆಟದ ಸಾಮಾನುಗಳು, ವಿವಿಧ ಆಟಗಳು ಹಾಗೂ ತಿನ್ನುವ ಆಸೆಯಿಂದ ಜಾತ್ರೆಗೆ ಬಂದರೆ... ಯುವಕ ಯುವತಿಯರು ಅಂದ ಚಂದವಾಗಿ ಸಿಂಗರಿಸಿಕೊಂಡು, ತಮ್ಮದೇ ಲೋಕದಲ್ಲಿ ವಿಹರಿಸಲು, ಖುಷಿಪಡಲು ಬರುತ್ತಾರೆ. ನವ ದಂಪತಿಗಳು ಕೈ ಕೈ ಹಿಡಿದು ಓಡಾಡುತ್ತಾ.. ಹೊಸತನವನ್ನು ಅನುಭವಿಸುತ್ತಾರೆ. ಮಕ್ಕಳ ತಂದ...

ಮೂರ್ಖರ ದಿನಾಚರಣೆ

Image
ಈಗೀಗ ಎಲ್ಲದಕ್ಕೂ ಒಂದು ಅಂತರರಾಷ್ಟ್ರೀಯ ದಿನ ಉಂಟು. ಇದನ್ನು ಪಾಲಿಸಿದಾಗ ಮನುಕುಲಕ್ಕೆ ಉಪಯೋಗ ಉಂಟು ಎನ್ನುವ ಭಾವನೆಯಿಂದ.  ಎಷ್ಟೋ ಸಲ ಅದು ಘೋಷ ವಾಕ್ಯಗಳಲ್ಲೇ ಮುಗಿಯುತ್ತದೆ.  ವಿಶೇಷವೆಂದರೆ ಏಪ್ರಿಲ್ ಒಂದನ್ನು ಅಂತರರಾಷ್ಟ್ರೀಯ ಮೂರ್ಖರ ದಿನ ಅಂತ ಇದುವರೆಗೂ ಯಾವ ಸಂಸ್ಥೆಯೂ (UNESCO ಸೇರಿ) ಘೋಷಣೆ ಮಾಡಿರದಿದ್ದರೂ... ಈ ದಿನವನ್ನು ಶ್ರದ್ಧೆಯಿಂದ ಆಚರಿಸುವ ಜನಸಂಖ್ಯೆ ಸುಮಾರು. ಅದರಲ್ಲೂ ಮಕ್ಕಳು ಹಾಗೂ ಯುವ ಜನತೆ ಸ್ವಪ್ರೇರಣೆಯಿಂದ ಆಚರಿಸುವ ದಿನ ಇದು ಮಾತ್ರ ಎಂದು ನನ್ನ ಅನಿಸಿಕೆ. ಅಷ್ಟೇ ಏಕೆ ವರ್ಷಪೂರ್ತಿ.. ಮೂರ್ಖರಾಗುವ / ಆಗಿಸುವ ಕಾಯಕ ನಡೆಯುತ್ತಲೇ ಇರುತ್ತದೆ. ಮನುಷ್ಯನ ಒಂದು ಸ್ವಭಾವ( Sadistic behaviour).. ಬೇರೊಬ್ಬರನ್ನು ಮುಜುಗರಕ್ಕೆ ಸಿಕ್ಕಿಸಿ/ ನೋಯಿಸಿ ಸಂತೋಷಪಡುವುದು. ನಾನಾಗ ಹೈ ಸ್ಕೂಲ್ ನಲ್ಲಿ ಓದುತ್ತಿದ್ದೆ... ಬೆಂಗಳೂರಿಗೆ ಬಂದು ವರ್ಷ ವಾಗಿತ್ತು.... ಒಂದಷ್ಟು  ಸಂಕೋಚ ಕಳೆದಿತ್ತು. ಬೇಸಿಗೆಯ ರಜಕ್ಕೆ ದೊಡ್ಡಜಾಲಕ್ಕೆ ಹೋಗಬೇಕು.... ಖುಷಿ.....ಏಪ್ರಿಲ್ ಒಂದು...ನನಗೇನೂ ತಿಳಿಯದು.  ನನ್ನ ಸ್ನೇಹಿತ TR ಶ್ರೀನಿವಾಸ ರಾವ್ ಮನೆಗೆ ಹೋಗಿ ಹೇಳಿ ಹೊರಡುವ ಮನಸು....ಯಾವ ಮಾಯದಲ್ಲೋ ಒಂದು plastic ಚೇಳನ್ನು ನನ್ನ ಮೇಲೆಸೆದ... ಗಾಬರಿಯಿಂದ ನಾನು ಒದ್ದಾಡುತ್ತಿದ್ದಾಗ ಅವನ ಅಕ್ಕ ಬಂದು ತೋರಿಸಿ ಸಮಾಧಾನ ಮಾಡುತ್ತಿದ್ದಾಗ ಅವನು ಹೇಳಿದ್ದೆ ” ಏಪ್ರಿಲ್ ಫೂಲ್ ... ಏಪ್ರಿಲ್ ಫೂಲ್.." ಇದು ಏಪ್ರ...