ನೀರು - ನಾಗರೀಕತೆಯ ಬೇರು
ಕಾಮದಹನವಾಯಿತು.... ರಂಗಿನಾಟ ವಾಯಿತು... ಮೈ ಮೇಲಿನ ಹಾಗೂ ಬಟ್ಟೆಗಳ ರಂಗು ತೊಳೆಯಲು ಯಥೇಚ್ಛ ನೀರು ಬೇಕಾಯಿತು... ಕಾಕತಾಳಿಯವಾಗಿ ಈ ಸಲದ ಹಬ್ಬದ ಸಮಯಕ್ಕೆ ಎಲ್ಲೆಡೆ ನೀರಿಗೆ ಹಾಹಾಕಾರ. ಆದರೆ ಯಾವುದೂ ನಿಲ್ಲದು... ಸ್ವಲ್ಪಮಟ್ಟಿಗಾದರೂ ಹಬ್ಬ ಹರಿದಿನಗಳನ್ನು ಆಚರಿಸಲೇಬೇಕು. ನಮ್ಮ ಪರಿಸ್ಥಿತಿ ಮಳೆಗಾಗಿ ಕಾಯುವ ಜಾತಕ ಪಕ್ಷಿಗಳಂತೆ ಆಗಿದೆ. ಇನ್ನೂ ಕೆಲಕಾಲ ಮಳೆ ಬರದಿದ್ದರೆ.. ನೀರಿಗೆ ತತ್ವಾರವಾಗಬಹುದು. ಚಿಕ್ಕಂದಿನಲ್ಲಿಯೂ ಇಂಥ ಪರಿಸ್ಥಿತಿಯನ್ನು ದಾಟಿದ ನೆನಪಿದೆ. ಆಗ ಊರಿನಲ್ಲಿ ಒಬ್ಬ ವ್ಯಕ್ತಿ ತಲೆಯ ಮೇಲೆ ಹೂ ಮತ್ತು ಅಡಕೆ/ ತೆಂಗಿನ ಹೊಂಬಾಳೆಯಿಂದ ಅಲಂಕರಿಸಿದ ಕಳಶವನ್ನು ಹೊತ್ತು ಮನೆಮನೆಗೂ ಹೋಗುವುದು... ನಾವು ಮಕ್ಕಳೆಲ್ಲ ಒಕ್ಕೊರಲಿನಿಂದ " ಹುಯ್ಯೋ ಹುಯ್ಯೋ..ಮಳೆರಾಯ ಹೂವಿನ ತೋಟಕೆ ನೀರಿಲ್ಲ... ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ....." ಹೇಳುತ್ತಾ ಹೋದಾಗ ಪ್ರತಿ ಮನೆಯ ಮುಂದೂ ಕಳಸದ ಮೇಲೆ ...ಇರುವುದರಲ್ಲಿ ಸ್ವಲ್ಪ ....ನೀರು ಹಾಕುವುದು... ವರುಣನನ್ನು ಪ್ರಾರ್ಥಿಸುವ ಬಗೆ. ತಕ್ಷಣ ಮಳೆ ಸುರಿಯಿತೋ ಇಲ್ಲವೋ ನೆನಪಿಲ್ಲ... ಆದರೆ ಮಳೆಯಂತೂ ಬಂತಲ್ಲ... ನಾವೆಲ್ಲ ಉಳಿದಿದ್ದೇವಲ್ಲ...ಅಂತೆಯೇ ಮಳೆಗಾಗಿ ಪರ್ಜನ್ಯ ಜಪ, ಕಪ್ಪೆಗಳಮದುವೆ..ಹೀಗೆ ವಿವಿಧ ಉಪಾಯಗಳು...ಹೇಗೋ ಮಳೆ ಬಂದರೆ ಸರಿ. ಒಮ್ಮೆ ಹಿಂದಕ್ಕೆ ನೋಡಿದರೆ... ಮನುಷ್ಯನ ವಸತಿ.... ನಾಗರಿಕತೆ ಪ್ರಾರಂಭವಾದದ್ದು ನೀರಿನ ತಟದಲ್ಲಿ... ನದಿಯ ಪಾತ್ರ...