Posts

Showing posts from March, 2024

ನೀರು - ನಾಗರೀಕತೆಯ ಬೇರು

Image
 ಕಾಮದಹನವಾಯಿತು.... ರಂಗಿನಾಟ ವಾಯಿತು... ಮೈ ಮೇಲಿನ ಹಾಗೂ ಬಟ್ಟೆಗಳ ರಂಗು ತೊಳೆಯಲು ಯಥೇಚ್ಛ ನೀರು ಬೇಕಾಯಿತು... ಕಾಕತಾಳಿಯವಾಗಿ ಈ ಸಲದ ಹಬ್ಬದ ಸಮಯಕ್ಕೆ ಎಲ್ಲೆಡೆ ನೀರಿಗೆ ಹಾಹಾಕಾರ.  ಆದರೆ ಯಾವುದೂ ನಿಲ್ಲದು... ಸ್ವಲ್ಪಮಟ್ಟಿಗಾದರೂ ಹಬ್ಬ ಹರಿದಿನಗಳನ್ನು ಆಚರಿಸಲೇಬೇಕು. ನಮ್ಮ ಪರಿಸ್ಥಿತಿ ಮಳೆಗಾಗಿ ಕಾಯುವ ಜಾತಕ ಪಕ್ಷಿಗಳಂತೆ ಆಗಿದೆ. ಇನ್ನೂ ಕೆಲಕಾಲ ಮಳೆ ಬರದಿದ್ದರೆ.. ನೀರಿಗೆ ತತ್ವಾರವಾಗಬಹುದು. ಚಿಕ್ಕಂದಿನಲ್ಲಿಯೂ ಇಂಥ ಪರಿಸ್ಥಿತಿಯನ್ನು ದಾಟಿದ ನೆನಪಿದೆ. ಆಗ ಊರಿನಲ್ಲಿ ಒಬ್ಬ ವ್ಯಕ್ತಿ ತಲೆಯ ಮೇಲೆ ಹೂ ಮತ್ತು ಅಡಕೆ/ ತೆಂಗಿನ ಹೊಂಬಾಳೆಯಿಂದ ಅಲಂಕರಿಸಿದ ಕಳಶವನ್ನು ಹೊತ್ತು ಮನೆಮನೆಗೂ ಹೋಗುವುದು... ನಾವು ಮಕ್ಕಳೆಲ್ಲ ಒಕ್ಕೊರಲಿನಿಂದ " ಹುಯ್ಯೋ ಹುಯ್ಯೋ..ಮಳೆರಾಯ ಹೂವಿನ ತೋಟಕೆ ನೀರಿಲ್ಲ... ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ....." ಹೇಳುತ್ತಾ ಹೋದಾಗ ಪ್ರತಿ ಮನೆಯ ಮುಂದೂ ಕಳಸದ ಮೇಲೆ ...ಇರುವುದರಲ್ಲಿ ಸ್ವಲ್ಪ ....ನೀರು ಹಾಕುವುದು... ವರುಣನನ್ನು ಪ್ರಾರ್ಥಿಸುವ ಬಗೆ.  ತಕ್ಷಣ ಮಳೆ ಸುರಿಯಿತೋ ಇಲ್ಲವೋ ನೆನಪಿಲ್ಲ... ಆದರೆ ಮಳೆಯಂತೂ ಬಂತಲ್ಲ... ನಾವೆಲ್ಲ ಉಳಿದಿದ್ದೇವಲ್ಲ...ಅಂತೆಯೇ ಮಳೆಗಾಗಿ ಪರ್ಜನ್ಯ ಜಪ, ಕಪ್ಪೆಗಳಮದುವೆ..ಹೀಗೆ ವಿವಿಧ ಉಪಾಯಗಳು...ಹೇಗೋ ಮಳೆ ಬಂದರೆ ಸರಿ. ಒಮ್ಮೆ ಹಿಂದಕ್ಕೆ ನೋಡಿದರೆ... ಮನುಷ್ಯನ ವಸತಿ.... ನಾಗರಿಕತೆ ಪ್ರಾರಂಭವಾದದ್ದು ನೀರಿನ ತಟದಲ್ಲಿ... ನದಿಯ ಪಾತ್ರ...

ಪದ್ಮಶ್ರೀ Dr. CRC

Image
60 ವರ್ಷದ ಹಿಂದೆ ನಾನು ಓದಿದ ಬಸವನಗುಡಿ ನ್ಯಾಷನಲ್ ಕಾಲೇಜ್ ಅಂಗಳದೊಳಗೆ - ಹೋದ ಭಾನುವಾರ, ಕಾಲಿಟ್ಟ ಕ್ಷಣ ಮನಸ್ಸು ಪುಳಕಗೊಂಡಿತು... ಹಳೆಯ ನೆನಪುಗಳಿಂದ. ಹೋದ ಸಂದರ್ಭವೂ ಅಷ್ಟೇ ಮುಖ್ಯವಾಗಿತ್ತು. ಡಾಕ್ಟರ್ ಸಿಆರ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಕೆಲಸ ಮಾಡುತ್ತಿರುವ ಸಮಾಧಾನ ಆಪ್ತ ಸಲಹಾ ಕೇಂದ್ರದ 17ನೆಯ ವಾರ್ಷಿಕೋತ್ಸವ ಹಾಗೂ ಡಾಕ್ಟರ್ ಅವರ ಮಡದಿ ರಾಜೇಶ್ವರಿಯವರ ಒಂಬತ್ತನೇ ವರ್ಷದ  ಸ್ಮರಣೆ ಕಾರ್ಯಕ್ರಮ.... ಈ ವರ್ಷ ಇದರ ಜೊತೆಗೆ ಒಂದು ವಿಶೇಷ ಸೇರ್ಪಡೆ... ಅದು... Dr.CRC  ಅವರು ಪದ್ಮಶ್ರೀ ಪ್ರಶಸ್ತಿ ಪಡೆದದ್ದಕ್ಕಾಗಿ  ಅಭಿನಂದನೆ ಸಲ್ಲಿಕೆಯ ಸಡಗರ. ಒಳಗೆ ಹೋಗುತ್ತಿದ್ದಂತೆ ಕಂಡದ್ದು ಹಬ್ಬದ ವಾತಾವರಣ... ಬಹಳ ಜನ ಪರಿಚಯದವರ ಭೇಟಿ... ಉಭಯ ಕುಶಲೊಪರಿ... ಹಾಗೆ ಕೆಲ ಹೊಸಬರ ಪರಿಚಯ ಸಹ. Dr.CRC  ಅವರನ್ನು ಭೇಟಿ ಮಾಡಿ... ಅಭಿನಂದಿಸಿ ಒಂದೆರಡು ಮಾತಾಡಿ.... ಮತ್ತೆ ಬೇರೆಯವರೊಡನೆ ಮಾತಾಡುತ್ತಿದ್ದೆ.... ಆ ಸಮಯದಲ್ಲಿ ನನ್ನ ಕಣ್ಣಿಗೆ ಬಿದ್ದದ್ದು.. ಒಳಗೆ ಹೆಜ್ಜೆ ಹಾಕುತ್ತಿದ್ದ ಹಿರಿಯರು ಡಾಕ್ಟರ್. G. ನಾರಾಯಣ ರೆಡ್ಡಿ ಅವರು. ಇವರನ್ನು ಬಹುತೇಕ ಸಮಾಧಾನ ಕೇಂದ್ರದ ಕಾರ್ಯಕ್ರಮಗಳಲ್ಲಿ.. ಹಾಗೂ ರಾಮನಗರದ ನೆಮ್ಮದಿ ಆಶ್ರಮದ ಕಾರ್ಯಕ್ರಮಗಳಲ್ಲಿ ಕಂಡಿದ್ದೆ... ಅವರ ಪರಿಚಯ ನನಗಿದೆ... Dr.CRC   ಹೇಳಿದಂತೆ.... ಅವರು ಮನೋವೈದ್ಯರಾಗಲು ಕಾರಣರಾದವರು ಹಾಗೂ ಗುರು ಸ್ಥಾನದಲ್ಲಿರುವವರು ಡಾಕ್ಟರ್...

ಮನೆ...

Image
  ಆಟ ಪಾಠ ಮನೆ ಕಡೆ ಓಟ... ಚಿಕ್ಕಂದಿನಲ್ಲಿ ಹೇಳುತ್ತಿದ್ದ ಈ ವಾಕ್ಯ... ಆಗ ಪದಗಳ ಗುಂಪು... ಈಗ ಯೋಚಿಸಿದರೆ.. ಮನೆ ಕಡೆ ಓಟ.... ಎಲ್ಲ ಕೆಲಸದ ನಂತರ ಇರುವ ಗುರಿ. ಮನೆ ಸೇರಿದಾಗ ಸಿಗುವ ಒಂದು ತೃಪ್ತಿ... ಪ್ರಾಯಶಃ ಪದಗಳಲ್ಲಿ ವರ್ಣಿಸಲು ನನಗಿರುವ ಮಿತಿಯಲ್ಲಿ ಅಸಾಧ್ಯ.  ಅದನ್ನು ಅನುಭವಿಸಿಯೇ ತೀರಬೇಕು.  ಮೊದಲಿನಿಂದಲೂ ನನಗೆ ಮನೆಯ ವ್ಯಾಮೋಹ. ಕತ್ತಲಾಗುವುದರೊಳಗೆ ಮನಗೆ ಬರಬೇಕು ಎಂಬ ನಿಯಮದ ಕಾರಣ ಬೇಗ ಮನೆ ಸೇರಬೇಕು ಎನ್ನುವ ತವಕ ಹಾಗೂ ಭಯ. ಮೊದಲು ಅಮ್ಮ ಅಜ್ಜಿಯ ಸೆಳೆತ ...ನಂತರ ಮಡದಿ ಮಗಳ ಸೆಳೆತ... ಮನೆ ಒಂದು ನಾವಿರಲು ಬೇಕಾದ ಕಟ್ಟಡ ಮಾತ್ರವೇ? ಮೊದಲ ಹಂತಕ್ಕೆ... ಅದು ನಮ್ಮನ್ನು ಬಿಸಿಲು ಮಳೆ ಗಾಳಿ ಎಲ್ಲದರಿಂದ ರಕ್ಷಿಸುವ ತಾಣ ಹೌದು. ಇಷ್ಟೇ ಆಗಿದ್ದರೆ... ನಾವು ಉಳಿಯುವ ಹೋಟೆಲ್ ರೂಂ, ಛತ್ರ ಹೀಗೆ ಎಲ್ಲವೂ ಮನೆಯಾದೀತು. ಆದರೆ ಇವೆಲ್ಲವೂ ಮನೆಯಲ್ಲ. ಮನೆ ಎಂದರೆ ದೈಹಿಕ ರಕ್ಷಣೆ ಮಾತ್ರವಲ್ಲ.... ಮಾನಸಿಕ ಸಾಂತ್ವನ ನೆಮ್ಮದಿ ಹಾಗೂ ಮನೆಯವರಿಂದ ಸಿಕ್ಕುವ ಪ್ರೀತಿ, ರಕ್ಷಣೆ... ಮನೆಯ ಕಲ್ಪನೆಯ ಜೊತೆ ಜೊತೆಗೆ ಮನೆಯಲ್ಲಿರುವವರ ಪ್ರೀತಿ ಭಾಂದವ್ಯ ಎದ್ದು ತೋರುತ್ತದೆ( ಕೆಲಸಮಯ ಬೇರೆ ಬೇರೆ ಕಾರಣಗಳಿಂದ ಪ್ರೀತಿ ವಾತ್ಸಲ್ಯದ ತಾತ್ಕಾಲಿಕ ಕೊರತೆಯಾಗಬಹುದು.) ಇದಕ್ಕೇ ಇರಬಹುದು   "ಹಂಗಿನರಮನೆಗಿಂತ ಅಂಗಣದ ಗುಡಿ ಲೇಸು..." ##ಎಂಬ ನುಡಿಗಟ್ಟಿನ  ಪ್ರಯೋಗ. ನಮ್ ಕೈಲಾಸಂ ಹೇಳಿದಂತೆ... "ಮಕ್ಕಳಿಸ್ಕೂಲ್ ...

ಅಧಿಕ ಮಾಸ - Leap year

Image
  ತಾರೀಕು 29 ಫೆಬ್ರವರಿ ಅಂತ ದೊಡ್ಡದಾಗಿ  ಬರೆದು ,  ಬೇರೆ ದಿನಾನೇ ಈ ಲೇಖನ ಬರ್ದಿದ್ದಂಗೆ ಇದೆಯಲ್ಲ ಅನ್ಸಿದ್ರೆ ನಿಮ್ಮ ಅನಿಸಿಕೆ ಸರಿಯಾಗಿದೆ.... ಹಾಗೇ.... "29 ಫೆಬ್ರವರಿ"  ಈ ಲೇಖನದ ವಿಷಯ ಅನ್ಸಿದ್ರೆ ಅದೂ ಸರಿಯಾಗಿದೆ.... "ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ " ಎಂಬಂತೆ. 29, ಫೆಬ್ರವರಿ ಒಂದು ವಿಶೇಷ ದಿನ... ಪ್ರತಿ ವರ್ಷ ಸಿಗುವುದಲ್ಲ... ಸಿಗುವುದೇ ಅಪರೂಪಕ್ಕೆ ನಾಲ್ಕು ವರ್ಷಕ್ಕೆ ಒಂದು ಸಲ. ಆ  ವರ್ಷದ 366 ನೇ  ದಿನ.  ಆ ವರ್ಷವನ್ನು ಲೀಪ್ ಇಯರ್ (ಅಧಿಕ ವರ್ಷ) ಎಂದು ಕರೆಯುತ್ತಾರೆ....ಎಂದು ನಾನು ಕಲಿತದ್ದು ಈ ಕೆಳಗಿನ ಸಾಲುಗಳಿಂದ... 30 days in september, april, June and November, all the rest are 31, except february 28 and 29 in a leap year. ಬಹುಶಃ ನಾನು ಐದನೆಯ ತರಗತಿಯಲ್ಲಿದ್ದಾಗ ನಮ್ಮ ಶಂಕರನಾರಾಯಣರಾವ್ ಮೇಷ್ಟ್ರು.. ಹೇಳಿ ಕೊಟ್ಟದ್ದು....  ಮುಷ್ಟಿಯನ್ನು ಉಪಯೋಗಿಸಿ 30 ಹಾಗೂ 31 ದಿನ ಇರುವ ತಿಂಗಳುಗಳನ್ನು ಗುರುತಿಸುವ ಬಗೆ. ಹಾಗೇ.... ಲೀಪ್ ಇಯರ್ ಗುರುತಿಸಲು.. ಆ ವರ್ಷದ ಸಂಖ್ಯೆಯನ್ನು ನಾಲ್ಕರಿಂದ ಭಾಗಿಸಿ... ಶೇಷ ಏನೂ ಉಳಿಯದಿದ್ದರೆ ಅದು ಲೀಪ್ ಇಯರ್ ಎಂದು... ಮುಂದೆ ಹೈಸ್ಕೂಲ್ನಲ್ಲಿ ಕಲಿತದ್ದು... ಇಸವಿ...1700, 1800 ಹೀಗೆ ಬಂದಾಗ ಅದು 400 ರಿಂದ ಸಂಪೂರ್ಣ ಭಾಗವಾಗಬೇಕೆಂದು. ನಾನು ಇಂ...