Posts

Showing posts from February, 2024

ಮದುವೆ - ಒಂದು ಚಿಂತನೆ

Image
  Marriages are made in heaven ಅನ್ನುವುದು ಇಂಗ್ಲೀಷಿನ ಚಿರಪರಿಚಿತ ನಾಣ್ಣುಡಿ. ನಮ್ಮ ಸಂಸ್ಕೃತಿಯಲ್ಲಿ ಅದನ್ನು " ಋಣಾನುಬಂಧಂ ರೂಪೇಣ ಪಶು ಪತ್ನಿ ಸುತಾಲಯಃ" ಎಂದು ವಿಶಾಲ ತಳಹದಿಯಲ್ಲಿ ಹೇಳಿದ್ದಾರೆ. ಈ ಹೇಳಿಕೆ ಗಂಡಿನ ಕೇಂದ್ರಿತವಾದರೂ... ಪತಿ ಪತ್ನಿಯ ಸಂಬಂಧ ಮೊದಲೇ ನಿರ್ಧಾರವಾದಂತೆ ಸೂಚಿಸುತ್ತದೆ... ಏಳೇಳು ಜನ್ಮದ ಸಂಬಂಧ ಅಂತಾರಲ್ಲ.. ಹಾಗೆ ( ಏಳೇ ಯಾಕೋ ಗೊತ್ತಿಲ್ಲ...ಕೆಲ ಸಲ ನನ್ನಹೆಂಡತಿ ಏಳೇಳು ಜನ್ಮಕ್ಕೂ ನೀವೇ ನನ್ನ ಗಂಡ ಎಂದು ಹೇಳಿದಾಗ.. ನಾನು ದೇವರನ್ನು ಕೇಳಿದ್ದಿದೆ....ಇದೇ 7 ನೇ ಜನ್ಮ ಆಗಲೀಂತ...ಇದು ನನ್ನಾಕೆಗೆ ಇಷ್ಟವಾಗದ್ದು..ಮುನಿಸು ತರುವಂತದ್ದು...ಅದಕ್ಕೇ.. ನನಗೆ ಇಷ್ಟವಾಗುವುದು). ಎಲ್ಲಿಯೋ ಇದ್ದ ಹೆಣ್ಣು... ಇನ್ನೆಲ್ಲಿಯೋ ಇದ್ದ ಗಂಡಿನೊಡನೆ ಒಂದಾಗಿ ಬಾಳುವ ಈ ಮದುವೆ ಎನ್ನುವ ಸಂಬಂಧ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ... ಎತ್ತಣ ಮಾಮರ ಎತ್ತಣ ಕೋಗಿಲೆ .. ಎಷ್ಟು ಸೂಕ್ತ ಅಲ್ಲವೇ? ಕೆ.ಎಸ್. ನ.  ಹೇಳಿದಂತೆ... ಒಂದು ಗಂಡು ಒಂದು ಹೆಣ್ಣು ಹೇಗೋ ಸೇರಿ ಹೊಂದಿಕೊಂಡು, ಕಾಣದೊಂದ ಕನಸು ಕಂಡು..... ಜೀವನ ಮುಂದುವರಿಸೋದು.... ಈ ಚಿಂತನೆ ನನ್ನ ಮನಸ್ಸಿನಲ್ಲಿ ಬರಲು ಕಾರಣ ಫೆಬ್ರವರಿಯಲ್ಲಿ ನಾನು ಭಾಗವಹಿಸಿದ ಎರಡು ಮದುವೆಗಳು.... ಎರಡರಲ್ಲೂ ಒಂದಷ್ಟು ಸಾಮ್ಯ.... ಹೆಣ್ಣು ಗಂಡು ಇಬ್ಬರೂ ವಿದೇಶದಲ್ಲಿ ನೆಲೆಸಿರುವವರು...    ಒಂದು ಜೋಡಿ ನೆಲೆಸಿರುವುದು ಇಂಗ್ಲೆಂಡ್ ನಲ್ಲಿ... ಇಬ್ಬರೂ ಕ...

ತ್ಯಾಗರಾಜರ ಆರಾಧನೆ.. ರುದ್ರಪಟ್ಟಣ

Image
  ಎಂದರೋ ಮಹಾನುಭಾವಲು ಅಂದರಿಕಿ ವಂದನಮು.... ಇದು ನಾನು ಬಹಳ ಸಲ ನೆನೆಸಿಕೊಳ್ಳುವುದು... ನನ್ನ ಜೀವನದಲ್ಲಿ ಬಂದು ಪ್ರಭಾವ ಬೀರಿದ ವ್ಯಕ್ತಿಗಳನ್ನು ಸ್ಮರಿಸಿದಾಗ.  ತ್ಯಾಗರಾಜರ ಈ ಕೀರ್ತನೆ ನನ್ನ ಹೃದಯಕ್ಕೆ ಬಲು ಹತ್ತಿರ (ಅದರ ಅರ್ಥವೂ ಸರಿಯಾಗಿ ಗೊತ್ತಿಲ್ಲದ ಸಮಯದಿಂದ).... ಇದು ನೆನ್ನೆ ಮೊನ್ನೆಯದಲ್ಲ ಸುಮಾರು ಅರ್ಧ ಶತಮಾನಕ್ಕೂ ಮಿಕ್ಕಿ ವರ್ಷಗಳಿಂದ. ಅದು 60ರ ದಶಕ.... ನಾನು ಬೆಂಗಳೂರಿಗೆ ಬಂದ ಹೊಸದು.... ಚಿಕ್ಕಮಾವಳ್ಳಿಯಲ್ಲಿ ಚಂದ್ರಾ ಕಲಾವಿದರು( ನನ್ನಣ್ಣಂದಿರು ಇದರ ಭಾಗ) ನಡೆಸುತ್ತಿದ್ದ ತ್ಯಾಗರಾಜರ ಆರಾಧನೆಯ ದಿನಗಳು.... ತ್ಯಾಗರಾಜರು ಯಾರೆಂದು ತಿಳಿಯದಿದ್ದರೂ...  ತ್ಯಾಗರಾಜರ ಫೋಟೋದ ಮೆರವಣಿಗೆ ಹಾಗೂ ಪಂಚರತ್ನ ಕೀರ್ತನೆಗಳ ಗಾಯನ ನನಗೆ ಮೆಚ್ಚುಗೆ. ಇದು ಸುಮಾರು ವರ್ಷ ನಡೆಯಿತು... ಯೋಗಾ ಯೋಗವೇನೋ.... ಆ ಫೋಟೋ ಇಂದಿಗೂ ನಮ್ಮ ಮನೆಯಲ್ಲಿದೆ, ಅದು ನನ್ನಲ್ಲಿರುವ ಒಂದು ಅಮೂಲ್ಯ ವಸ್ತು.  ಮನೆ ಕಟ್ಟುವಾಗ ಸಹ ಅದಕ್ಕಾಗಿಯೇ ಸ್ಥಳ ಮೀಸಲು ಮಾಡಿದ್ದು... ಅಲಂಕರಿಸಿದ್ದು, ತ್ಯಾಗರಾಜರ ಮೇಲಿನ ಭಕ್ತಿಯಿಂದ ಅಭಿಮಾನದಿಂದ. ಹಲವು ಬಾರಿ ಟಿವಿಯಲ್ಲಿ ಪ್ರಸಾರವಾದ... ತಿರುವೈಯಾರುವಿನಲ್ಲಿ ನಡೆದ ತ್ಯಾಗರಾಜರ ಆರಾಧನೆ ನೋಡಿ ಕೇಳಿ ಸಂತೋಷಪಟ್ಟಿದ್ದೇನೆ. ಆ ಹಾಡುಗಳಲ್ಲಿ ನನಗೆ ತುಂಬಾ ಇಷ್ಟವಾದದ್ದು ...ಎಂದರೋ ಮಹಾನುಭಾವುಲು... ಎರಡನೆಯದು ಸಾಧಿಂಚನೆ ಹಾಡಿನ... "ಸಮಯಾನಿಕಿ ತಗು ಮಾಟಲಾಡೆನೇ" ಭಾಗ. ನನ್ನ ವ್ಯವಹಾರಿಕ ...

ಕೃತಜ್ಞತೆ - ತೃಪ್ತಿ - ಅಭಿಲಾಷೆ

Image
    ದೇವ ನಿನ್ನ ರಾಜ್ಯದ ನ್ಯಾಯವಿದೇನಾ? ಲೋಕಕೆಲ್ಲ ಒಬ್ಬ ಸೂರ್ಯ ಒಬ್ಬನೇ ಚಂದಿರ ಎಲ್ಲರಿಗೂ ಒಂದೇ ಭೂಮಿ ಇರುವುದೊಂದೇ ಅಂಬರ, ಆದರೇನು ಜಗದಲಿ ಭೇದ ಭಾವನಾ, ಈ ಭೇದ ಭಾವನಾ...  ಇದು ಚಿಕ್ಕಂದಿನಲ್ಲಿ ಕೇಳಿದ್ದ ಒಂದು ಹಾಡು. ಹೌದು... ಮನುಕುಲಕ್ಕೆಲ್ಲ ಇರುವುದು ಒಂದು ಭೂಮಿ, ಒಂದು ಆಕಾಶ, ಒಂದು ಸೂರ್ಯ, ದಿನದಲ್ಲಿ 24 ಗಂಟೆ... ಇದರಲ್ಲಿ ಭೇದ ಭಾವವಿಲ್ಲ... ಆದರೆ ಮನುಷ್ಯನ ಬೆಳವಣಿಗೆ ....ಎಲ್ಲರದೂ ಒಂದೇ ರೀತಿ ಇರುವುದಿಲ್ಲ... ಸಾಕಷ್ಟು ವ್ಯತ್ಯಾಸಗಳು... ಅಜಗಜಾಂತರ... ಇದು ಯಾಕಿರಬಹುದೆಂದು ಯೋಚಿಸಿದಾಗ ಅನಿಸಿದ್ದು.... ಸಮಾನ ಅವಕಾಶಗಳಿದ್ದಾಗಲೂ ಸಹ ...ಆಯಾ ವ್ಯಕ್ತಿಯ ಸಾಮರ್ಥ್ಯಕ್ಕೆ ತಕ್ಕಂತೆ ಅವರವರ ಬೆಳವಣಿಗೆ. ಒಂದೇ ಸಾಮರ್ಥ್ಯ ಇರುವಂತಹ ವ್ಯಕ್ತಿಗಳಲ್ಲೂ ಸಹ.. ಬೆಳವಣಿಗೆಗಳು ವ್ಯತ್ಯಾಸವಾಗಬಹುದು... ಇದಕ್ಕೆ ಕಾರಣ ಅದೃಷ್ಟ ಎನ್ನಬಹುದೇ? ಅಥವಾ ಕಾಣದ ಕೈಗಳ ಪ್ರಭಾವವೇ? ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದಂತೆ ...ನಿನ್ನ ಕೆಲಸ ನೀ ಮಾಡು....ಫಲಾಫಲಗಳು ನಿನ್ನ ಭಾಗ್ಯದಂತೆ.....ಅಂದರೆ ಬಂದ ಫಲವನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುವುದು ನೆಮ್ಮದಿಯ ಜೀವನದ ಲಕ್ಷಣ. ಇದನ್ನೇ ಇದ್ದುದರಲ್ಲಿ ತೃಪ್ತಿ ಹೊಂದುವುದು ಎನ್ನುವುದು. ಇದು ಸಾಧ್ಯವಾಗದಿದ್ದಾಗ... ಬೇರೆಯವರಲ್ಲಿರುವುದನ್ನು... ನೋಡಿ ನನಗಿಲ್ಲ ಎಂದು ಹಳಹಳಿಸುವುದು... ನಮ್ಮ ಜೀವನ ಶೈಲಿಯನ್ನೇ ತಲೆಕೆಳಗು ಮಾಡುತ್ತದೆ. ಇಲ್ಲಿ ಋಣಾತ್ಮಕ ಭಾವನೆಗಳು ಹೆಚ್ಚಾಗಿ ...