Posts

Showing posts from June, 2023

ಹಣ್ಣುಗಳ ರಾಜ - ಮಾವು

Image
 ಹಣ್ಣುಗಳ ರಾಜ - ಮಾವು ಇದು ಮಾವಿನ ಹಣ್ಣಿನ ಕಾಲ... ಎಲ್ಲಿ ನೋಡಿದರೂ ರಾಶಿ ರಾಶಿ ವಿಧವಿಧವಾದ ಮಾವಿನ ಹಣ್ಣುಗಳು. ನೋಡಲು ಚೆನ್ನ ತಿನ್ನಲ್ಲಂತೂ ಬಹು ಚೆನ್ನ. ಮಾವಿನ ಹಣ್ಣನ್ನ ಹಣ್ಣುಗಳ ರಾಜ ಅಂತ ಹೇಳ್ತಾರೆ. ಎಲ್ಲ ಹಣ್ಣುಗಳು ತಿನ್ನಲು ಅದರದೇ ಆದ ವಿಶೇಷ ರುಚಿಯನ್ನು ಹೊಂದಿದ್ದರೂ, ನನಗೆ ಅನ್ನಿಸಿದ ಹಾಗೆ ಮಾವಿನ ಕಾಯಿ ಹಾಗೂ ಮಾವಿನ ಹಣ್ಣುಗಳಲ್ಲಿ ಮಾಡುವ ವೈವಿಧ್ಯ ತಿನಿಸುಗಳು ಮಾವಿನ ಹಣ್ಣಿನ ಸ್ಥಾನಕ್ಕೆ ಒಂದು ಮೆಟ್ಟಿಲು ಮೇಲೆ ಕೊಟ್ಟಿರಬಹುದು. ಈ ವೈವಿಧ್ಯ ಹೇಳಲು ಒಂದು ಆರು ಸಾಲಿನ ಪದ್ಯ ನನಗೆ ತೋಚಿದ್ದು... ಗೀಚಿದ್ದು.. (ಬೀchiಯವರ ಮಾತಿನಂತೆ ತೋಚಿದ್ದು ಬೀಚಿದ್ದು) ನಿಮಗಾಗಿ.. ಚಿತ್ರಾನ್ನದ ಜೊತೆ ಹಣ್ಣಿನ ಪಾಯಸ,  ರುಚಿ ರುಚಿ ಹಣ್ಣು ಅದರದ್ದೇ ರಸ ಅಪ್ಪೆಸಾರು ಉಪ್ಪಿನಕಾಯಿ ಕೋಸಂಬರಿಗೆ ಮಾವಿನಕಾಯಿ  ಚಟ್ಣೀ ಗೊಜ್ಜು ಸಿಕರಣೆ ದೇವರೇ ನಿನಗೆ ಆರೋಗಣೆ ನಾನು ಹಳ್ಳಿಯಲ್ಲಿ ತಿಂದಂಥ ಒಂದೆರಡು ವಿಧವಾದ ಮಾವಿನ ಹಣ್ಣು ಹೊರತುಪಡಿಸಿದರೆ, ಈಗಿರುವ ವೈವಿಧ್ಯ ಮಾವಿನ ಹಣ್ಣಿನ ತಳಿಗಳು ನಿಜವಾಗಲೂ ಗೊತ್ತಾದದ್ದು ಬಹಳ ತಡವಾಗಿ, ಕೆಲವಂತೂ ಈಚೀಚೆಗೆ.... ಯಾವುದರ ರುಚಿ ಹೇಗೆ ಎನ್ನುವ ಸಂಪೂರ್ಣ ಅರಿವಿಲ್ಲ.  ಬೇಸಿಗೆಯ ರಜ, ನಮಗೆಲ್ಲ ಈಜುವ, ಆಟವಾಡುವ ಹಾಗೂ ಸಿಕ್ಕಸಿಕ್ಕ ಹಣ್ಣುಗಳನ್ನು( ಕಾಯಿ, ಪಿಂದೆ, ದೊರೆಗಾಯಿ, ಹಣ್ಣು ಎಲ್ಲವೂ ಸೇರಿ) ತಿನ್ನುವುದೇ ಒಂದು ಮೋಜು. ಯಾವಾಗಲೂ ನಮ್ಮ ಚಡ್ಡಿಯ ಜೇಬಿನಲ್ಲಿ ಉಪ್ಪು ಮೆಣಸಿನ ಪುಡಿ...

ಒಡಪು - ವೈಯಾರ- ಹೆಸರು

Image
ಇದೇನಿದು ಶೀರ್ಷಿಕೆಯೇ ಒಂದಕ್ಕೊಂದು ಸಂಬಂಧವಿಲ್ಲದಂಗೆ ಇದೆಯೆಂದು ಯೋಚಿಸುತ್ತಿದ್ದೀರಾ? ಬನ್ನಿ ನೋಡೋಣ.  ಒಡಪು ಎಂದರೆ ಒಗಟು ಸಹ, ಸಮಸ್ಯೆ ಎಂಬ ಅರ್ಥವೂ ಇದೆ. ಇನ್ನು ವೈಯಾರಕ್ಕೆ ಬಂದರೆ.. ಹಾವ ಭಾವಗಳು, ನಡೆ ನುಡಿ, ಮಾತಿನ ಶೈಲಿ ಎಲ್ಲವೂ ಮಿಳಿತವಾದ ಹೆಣ್ಣಿನ ಸೌಂದರ್ಯವನ್ನು ವರ್ಣಿಸುವಾಗ ಉಪಯೋಗಿಸುವ ಪದ ವಯ್ಯಾರ.. ಹಾಗಾಗಿ ವೈಯಾರಗಿತ್ತಿ / ಬಿನ್ನಾಣಗಿತ್ತಿ ಎಂದು ಹೇಳುವ ವಾಡಿಕೆ. ಇನ್ನು ಹೆಸರಿನ ಬಗ್ಗೆ ನಾನು ಹೇಳುವುದು ಏನೂ ಇಲ್ಲ... ನಿಮಗೆಲ್ಲ ತಿಳಿದಿರುವಂತೆ ಗುರುತಿಸಲು ಉಪಯೋಗಿಸುವ ಒಂದು ಪದ, ನಾಮಪದ. ಬಹು ಪಾಲು ಉತ್ತರ ಕರ್ನಾಟಕದ ಹೆಂಗಸರು ಸಂತೋಷ ಸಮಾರಂಭಗಳಲ್ಲಿ ಅದರಲ್ಲೂ ಮದುವೆಯಂತಹ ಕಾರ್ಯಕ್ರಮಗಳಲ್ಲಿ,  ಗಂಡನ ಹೆಸರು ಹೇಳುವಾಗ ಪದ ವಯ್ಯಾರದಿಂದ, ಪ್ರಾಸ ಬದ್ಧವಾಗಿ, ಪ್ರಾಸಂಗಿಕವಾಗಿ, ಹಾಸ್ಯ ರೂಪದಲ್ಲಿ, ಬಹು ಪಾಲು ಸೂಚ್ಯವಾಗಿ ಹೇಳುವ ವಿಧಾನವನ್ನು ವಡಪು ಎಂದು ಹೇಳುತ್ತಾರೆ. ಪದಗಳ ಉಪಯೋಗ ಅವರೋಹಣ ಕ್ರಮದಲ್ಲಿ ಇದೆ ಬಿಟ್ಟರೆ ಎಲ್ಲವನ್ನು ಹೇಳಿದ್ದೇನೆ ಎನ್ನುವ ನಂಬಿಕೆ ನನ್ನದು. ಹಾಯ್.. ದಿಸ್ ಇಸ್ ಮುಳ್ (ಮುಳ್ಳು?) ಎಂದುತನ್ನ  ಭಾವೀ ಪತಿ ಮುರಳಿಧರನನ್ನು ಪರಿಚಯಿಸುವ ಅತ್ಯಾಧುನಿಕ ಹುಡುಗಿಯೂ ಸಹ ಮದುವೆ ಮನೆಯಲ್ಲಿ ನಾಚಿಕೊಂಡು ಹೀಗೆ ಹೇಳಬಹುದೇನೋ... ಹೆಸರಾಗೇನದೇ ಬರೀ ಐದಕ್ಷರ ಕೂಗಿದ ಕೂಡಲೇ ಓ ಅಂತಾರಾ ಕಡೆಗಣ್ಣಲ್ಲೇ ಹುಡುಗೀರ್ನ ನೋಡ್ತಾರ ನನ್ನವ ಕೃಷ್ಣನ ಅಪರಾವತಾರ ಕಲ್ಪನೆಗೆ, ಕ್ರಿಯಾಶೀಲತ್ವಕ್ಕೆ, ಪ...

ಕಾರ್.ಕಾರ್..ಕಾರ್ ಪುರಾಣ

Image
" ಏ....ತಾತ ಸುಮ್ನೆ ಮನೇಲಿ ಇರೋಕೆ ಆಗಲ್ವಾ.... ಎಲ್ಲಾ ಬೀದಿಗಿಳೀತಾರೆ... ಕಾರ್ ಓಡಿಸಿಕೊಂಡು..." ಇದು ಇತ್ತೀಚೆಗೆ ಒಬ್ಬ angry young man ನನಗೆ ಕೊಟ್ಟ ಉಡುಗೊರೆ.... ಸಿಗ್ನಲ್ ನಲ್ಲಿ ಹಸಿರು ದೀಪ ಬರುವ ಕೆಲ ಕ್ಷಣಗಳ ಮುಂಚೆ ಹಾರ್ನ್ ಮಾಡಿ.. ಅದಕ್ಕೆ ನಾನು ಸ್ಪಂದಿಸದೆ ಇದ್ದಾಗ ದೊರೆತದ್ದು. ಇನ್ನು ಕೆಲವರು ಕೆಲ ಸಮಯದಲ್ಲಿ ನನ್ನ ಮುಖವನ್ನು ತಾತ್ಸಾರದಿಂದ ನೋಡಿರಬಹುದು ಎನ್ನುವ ಅನಿಸಿಕೆ ನನ್ನದು. ಕಾರಣ ನನಗೆ ಗೊತ್ತು... ನಾನು ಈ ದಿನಗಳಲ್ಲಿ ಕಾರ್ ಡ್ರೈವ್ ಮಾಡುವಾಗ ನನ್ನ reflexes ಕಡಿಮೆ ಯಾಗಿರುವುದು. ಅದು ವಯೋ ಸಹಜವೂ ಆಗಿರಬಹುದು, ಸ್ವಲ್ಪ ನನ್ನ ಮನಸ್ಸಿನ ಪ್ರಭಾವವು ಇರಬಹುದು. ಈಗೀಗ ನನಗೆ ಕಾರನ್ನು ಓಡಿಸುವ ಉತ್ಸಾಹ ಸಾಕಷ್ಟು ಕಡಿಮೆಯಾಗಿದೆ. ರಸ್ತೆಯಲ್ಲಿ ಓಡಾಡಲು ಅಥವಾ ಕಾರು ನಡೆಸಲು ಜಾಗವೇ ಇಲ್ಲವೇನೋ ಅನ್ನುವಷ್ಟು ವಾಹನಗಳ ದಟ್ಟಣೆ. ಎಲ್ಲರಿಗೂ ಅದೇನೋ ಧಾವಂತ. ತಮ್ಮ ಗುರಿ ಮುಟ್ಟಲು ಎಲ್ಲಿಲ್ಲದ ಅವಸರ. ಹಾಗಾಗಿ ಒಂದು ಸೆಕೆಂಡ್ ಸಹ ಕಾಯುವ ತಾಳ್ಮೆ ಇಲ್ಲ. ಹಾರನ್ ಬಾರಿಸುವುದು, ಸಂದಿಯಲ್ಲಿ ನುಗ್ಗಿ ಮುನ್ನಡೆಯುವುದು, ಯಾವ ಕಡೆಯಿಂದ ಬೇಕಾದರೂ ನಮ್ಮನ್ನು ಹಿಂದಕ್ಕಿ ಓಡುವ ಸಾಹಸಿಗರು, ಅದರಲ್ಲೂ ದ್ವಿಚಕ್ರವಾಹನಗಳ ಯುವ ಜನಾಂಗ ಶರವೇಗದಲ್ಲಿ ಮುನ್ನುಗುವ ಪರಿ ನನಗೆ ಗಾಬರಿ ಹುಟ್ಟಿಸುವಂತದ್ದು. ಎಷ್ಟೋ ಸಲ... ನಾನು ಬೇರೆಯವರಿಗೆ ಡಿಕ್ಕಿ ಹೊಡೆದು ಬಿಟ್ಟೆನೇನೋ ಎಂದು ಭಯ ಪಟ್ಟದ್ದಿದೆ. ಆ ಸನ್ನಿವೇಶಗಳನ್ನು ನಿಭಾಯ...