Posts

Showing posts from March, 2023

ಬೇವು - ಬೆಲ್ಲ... ಜೀವನವೆಲ್ಲ

Image
  ಯುಗ ಯುಗಾದಿ ಕಳೆದರೂ,  ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ  ಹೊಸತು ಹೊಸತು ತರುತಿದೆ..... ಬೇಂದ್ರೆ ಅಜ್ಜನ ಈ ಹಾಡು ಎಷ್ಟೋ ಯುಗಾದಿಗಳಿಂದ ಕೇಳುತ್ತಿದ್ದೇನೆ, ಅದು ಯುಗಾದಿಯಂತೆಯೇ ಹೊಸತು ಹೊಸದಾಗಿಯೇ ಇದೆ. ಯುಗಾದಿ ಕನ್ನಡಿಗರಿಗೆ ಹೊಸ ವರ್ಷದ ಹಬ್ಬ. ವಸಂತ ಋತುವಿನಲ್ಲಿನ ಬಹು ಮುಖ್ಯ ಹಬ್ಬ. ವಸಂತ ... ಋತುಗಳ ರಾಜ... ಎಲ್ಲೆಲ್ಲಿಯೂ ಹಸಿರು ಚಿಗುರು ಒಡೆದು ಮರ-ಗಿಡಗಳೆಲ್ಲಾ ನಳನಳಿಸುವ ಸಮಯ. ಅದರಲ್ಲೂ ಮಾವಿನ ಮತ್ತು ಅರಳಿ ಮರದ ಚಿಗುರು ಎಲೆಗಳ ಕೆಂಪು ಮಿಶ್ರಿತ ಬಣ್ಣ ಚಿಕ್ಕಂದಿನಿಂದಲೂ ನನಗೆ ಬಲುಮೆಚ್ಚುಗೆ. ಯುಗಾದಿಗೆ ಹೊಸ ಬಟ್ಟೆ ಒಂದು ಸಂಭ್ರಮ.... ನನಗಂತೂ ವಿಶೇಷ ಸಂಭ್ರಮ... ನಾನು ಹುಟ್ಟಿದ್ದು ಯುಗಾದಿಯ ಆಸು ಪಾಸಿನಲ್ಲಿ.. ಹಾಗಾಗಿ ನನ್ನ ಹುಟ್ಟಿದ ಹಬ್ಬ ಆಚರಿಸುವ ದಿನ ಯುಗಾದಿ.  ಹೇಗೂ ಮನೆಯಲ್ಲಿ ಒಬ್ಬಟ್ಟು ಮಾಡಿರುತ್ತದೆ, ಎಣ್ಣೆ ನೀರು ಹಾಕಿಕೊಂಡು, ದೇವರಿಗೆ ನಮಸ್ಕರಿಸಿ, ಒಂದು ಲೋಟ ಹಾಲು ಕುಡಿದರೆ ಅದು ಹುಟ್ಟಿದ ಹಬ್ಬದ ಆಚರಣೆ. ಮನೆ ತುಂಬಾ ಮಕ್ಕಳು ಜೊತೆಗೆ ಒಂದಷ್ಟು ಬಡತನ, ಹೀಗಿರುವಾಗ ಮಕ್ಕಳ ಹುಟ್ಟಿದ ಹಬ್ಬದ ಸಂಭ್ರಮ ಎಲ್ಲಿ ಬರಬೇಕು.. ಜೊತೆಗೆ ಅದೊಂದು ದೊಡ್ಡ ಸಂಗತಿ ಏನೂ ಆಗಿರಲಿಲ್ಲ.. ಅಂದಿನ ಕಾಲಕ್ಕೆ. ಹೊಸ ಬಟ್ಟೆ ಎಂದರೆ ಸಾಮಾನ್ಯವಾಗಿ ನಮ್ಮೂರಿನ ಪರಿಣತ ಟೈಲರ್ ಆಗಿದ್ದ ಅಚ್ಚಪ್ಪನವರು ಹೊಲಿದುಕೊಟ್ಟದ್ದು . ಬಟ್ಟೆ ಅಂಗಡಿಗೆ ಹೋದಾಗ ಸಾಮಾನ್ಯವಾದ ಮಾತು- ಸ್ವಲ್ಪ ದೊಡ್ಡ ದೊಡ್...

ನಿರಾಕರಣ - ಮನಸ್ಸಿನ ಅನಾವರಣ

Image
ನಾನು ನನ್ನ ಮಡದಿ ಇಬ್ಬರೂ ಓದುವ ಹವ್ಯಾಸ ಉಳ್ಳವರು, ಹಾಗಾಗಿ ನಮ್ಮ ಮನೆಯಲ್ಲಿ ಸಾಕಷ್ಟು ಪುಸ್ತಕಗಳ ಸಂಗ್ರಹವಿದೆ. ಭೈರಪ್ಪನವರ ಕಾದಂಬರಿಗಳ ಸಂಗ್ರಹವೂ ಇದೆ. ಆದರೆ " ನಿರಾಕರಣ" ಕಾದಂಬರಿ ಮಾತ್ರ ನಮ್ಮಲ್ಲಿ ಇರಲಿಲ್ಲ.  ಕೆಲ ದಿನಗಳ ಹಿಂದೆ ನಿರಾಕರಣ ಪುಸ್ತಕವನ್ನು ತಂದು ಕೈಗಿಟ್ಟಳು ವಿಜಯ. ಓದಿ ಮುಗಿಸಿದಾಗ  " ನರಹರಿ ರಾಯರ " ತುಮುಲಗಳು ನನ್ನ ಮನಸ್ಸನ್ನು ಚಿಂತನೆಗೆ ದೂಡಿತ್ತು. ಸಾಮಾನ್ಯವಾಗಿ ಮನುಷ್ಯ ಕಷ್ಟ ಬಂದಾಗ , ಮನಸ್ಸಿಗೆ ತೀವ್ರ ನೋವಾದಾಗ,  ನಿರಾಶೆಯಾದಾಗ, ಏನೂ ತೋಚದೆ ಗೊಂದಲದಲ್ಲಿದ್ದಾಗ ಬರುವ ಭಾವನೆಗಳು,  " ಸಾಕಪ್ಪ ಈ ಜೀವನ " " ಎಲ್ಲ ಬಿಟ್ಟು ಎಲ್ಲಾದರೂ ಓಡಿ ಹೋಗೋಣ ಅನ್ಸುತ್ತೆ  " " ಸಾಯ್ಬೇಕು ಅನ್ಸುತ್ತೆ - ಆದರೆ ಧೈರ್ಯ ಇಲ್ಲ". ಹೀಗೆ.... ಈ ಭಾವನೆಗಳು / ಮಾತುಗಳು ಸಂದಿಗ್ಧ ಸಮಯದಲ್ಲಿ ಬರುವಂತ ತತ್ ಕ್ಷಣದ ಭಾವನೆಗಳು.. ಅದರಿಂದ ಪ್ರೇರಿತವಾದ ನಿರ್ಧಾರಗಳು ಸಹ.  ಬಹಳಷ್ಟು ಸಲ ಇವು ಕೆಲ ದಿನಗಳ ಕಾಲ ಧಾಳಿ ನಡೆಸುವಂಥಹವು.  ಆಪ್ತ ಸಮಾಲೋಚನೆಗಾಗಿ ನನ್ನಲ್ಲಿ ಬರುವ ವ್ಯಕ್ತಿಗಳಿಗೆ ಇಂಥ ನಿರಾಶಾ ಸ್ಥಿತಿಯಲ್ಲಿ ಸಮಾಧಾನ ಮಾಡಿ, ಕಷ್ಟಗಳು ಸಹಜ ಆದರೆ ಅವು ನಿರಂತರವಲ್ಲ, ಒಳ್ಳೆಯ ದಿನಗಳು ಬರುತ್ತವೆ ಅದಕ್ಕಾಗಿ ಸ್ವಲ್ಪ ಸಮಯ ಸಹನೆಯಿಂದ ಇರಬೇಕು, ನಮ್ಮ ಯೋಚನಾ ಲಹರಿಯನ್ನು ಸಾಧ್ಯವಾದಷ್ಟು ಬದಲಾಯಿಸಿಕೊಳ್ಳಬೇಕು, ಕತ್ತಲೆಯ ನಂತರ ಬೆಳಕು, ಬದಲಾವಣೆ ಜಗದ ನಿಯಮ... ಹೀಗ...

ಅಂದು ....... ನಾನೂ ಮಂತ್ರಿಯಾಗಿದ್ದೆ

Image
  ನಾಲ್ಕನೆಯ ಕ್ಲಾಸಿನ ತನಕ ನಾನು ಓದಿದ್ದು ನಮ್ಮೂರು ದೊಡ್ಡಜಾಲದ ಪ್ರಾಥಮಿಕ ಶಾಲೆಯಲ್ಲಿ. ಮುಂದಿನ ಓದಿಗೆ ಐದನೇ ಕ್ಲಾಸಿಗೆ ಅನಿವಾರ್ಯವಾಗಿ ನಾವು ಹೋಗಬೇಕಾಗಿದ್ದು ನಮಗೆ (ಮೂರು ಮೈಲಿ)  ಹತ್ತಿರವಿದ್ದ  “ ವಿದ್ಯಾನಗರದ ಮಾಧ್ಯಮಿಕ ಶಾಲೆಗೆ.  ಅಲ್ಲಿಗೆ ಹೋಗಿಬರುವುದೇ ಒಂದುಸಂಭ್ರಮ.   ಶಾಲೆಗೆ ಹೋಗಲು ಶುರು ಮಾಡಿ ಮೂರು ನಾಲ್ಕು ತಿಂಗಳು ಆಗಿರಬಹುದು, ನಮ್ಮ ದೊಡ್ಡ ಜಾಲದ ಶಾಲೆಗೆ ಮಾಧ್ಯಮಿಕ ತರಗತಿಗಳನ್ನು ಶುರು ಮಾಡಲು ಅಪ್ಪಣೆ ಸಿಕ್ಕಿತು ಹಾಗಾಗಿ ಮತ್ತೆ ದೊಡ್ಡಜಾಲಕ್ಕೆ ಹಿಂತಿರುಗಿದೆವು.... ಮತ್ತೇನು ಕಾರಣವೋ ಪ್ರಾಯಶಃ ಏಳನೇ ತರಗತಿಗೆ ಮತ್ತೆ ವಿದ್ಯಾನಗರಕ್ಕೆ ಮರಳುವ ಪರಿಸ್ಥಿತಿ ಬಂತು. ವಿದ್ಯಾನಗರ ಮೊದಲು ಮಿಲಿಟರಿ ತಾಣವಾಗಿತ್ತು, ಹಾಗಾಗಿ ಅದು ವಿಶಾಲವಾಗಿಯೂ ಅಚ್ಚುಕಟ್ಟಾಗಿ ಕಟ್ಟಿದ ಕಟ್ಟಡಗಳು ಹಾಗೂ ಅದರ ಮಧ್ಯದಲ್ಲಿ ಹೂವು ಹಣ್ಣುಗಳ ಗಿಡಗಳು ಬೆಳೆದಿದ್ದವು. ನಲ್ಲಿಯ ನೀರಿನ ಸೌಕರ್ಯವೂ ಇತ್ತು , ಹಾಗಾಗಿ ನಮ್ಮ ಪಾಲಿಗೆ ಅದು ಸ್ವರ್ಗ. ಶಾಲೆಯಲ್ಲಿ ಗಾಂಧಿ ಪ್ರಣೀತ ಶಿಸ್ತು.   ದಿನದ ಕಾರ್ಯಕ್ರಮ ಶುರುವಾಗುವುದು " ಸಫಾಯಿ" ಯಿಂದ.  ಶಾಲೆಯ ಎಲ್ಲಾ ಮಕ್ಕಳು ಇದರಲ್ಲಿ ಭಾಗವಹಿಸಬೇಕು. ಅದು ಪೊರಕೆ ಹಿಡಿದು ಕಸ ಗುಡಿಸುವುದಾಗಲಿ, ಗಿಡಗಳಿಗೆ ಪಾತಿ ಮಾಡುವುದಾಗಲಿ, ಬಿದ್ದಿರುವ ಕಸ ಕಡ್ಡಿಗಳನ್ನು ಕೈಯಿಂದ ಹೆಕ್ಕುವುದಾಗಲಿ, ಕೊನೆಗೆ ಇಬ್ಬರು ಮಂಕರಿಯನ್ನು ಹಿಡಿದು ಕಸ ಕಡ್ಡಿಗಳನ್ನು  ...