ಸಮಯಕ್ಕೊಂದು ಸಹಾಯ ಹಸ್ತ

"ಕರುಣಾಳು ಬಾ ಬೆಳಕೆ ಮುಸುಕೀದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು...." ಇದು ಪ್ರಾಯಶಃ ಇಂದಿನ ತಲೆಮಾರಿನ ಬಹು ಹಿರಿಯ ನಾಗರೀಕರ ಅಳಲು. ಯಾಕೋ ಈಚೀಚೆಗಂತೂ ಹಿರಿಯರ ಮೇಲಿನ ದೌರ್ಜನ್ಯ ಜಾಸ್ತಿಯಾಗುತ್ತಿದೆ. .. ಯುವ ಜನಾಂಗದ ದುರಾಸೆಯೋ... ಸ್ವಾರ್ಥವೋ...ಅಥವಾ ಸುಲಭವಾಗಿ ಹಣ / ಆಸ್ತಿ ದಕ್ಕಿಸಿಕೊಳ್ಳುವ ಅಭಿಲಾಷೆಯೋ...ತಿಳಿಯದಾಗಿದೆ. ಜೂನ್ ೧೫ "ಹಿರಿಯ ನಾಗರೀಕರ ಮೇಲಿನ ದೌರ್ಜನ್ಯದ ಬಗ್ಗೆ ಅರಿವು ಮೂಡಿಸುವ ದಿನ" (world eleder abuse awareness day) ಆಗಿ ಆಚರಿಸಲಾಗುತ್ತಿದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ ಒಂದು ಅಭಿಯಾನ. ಹಾಗಾಗಿ ಇದನ್ನು ನಾವೂ ಸಹ ಕೆಲ ಮಟ್ಟಿಗೆ ಆಚರಿಸಿದೆವು - ವಯೋಮಾನಸ ಸಂಜೀವಿನಿ - ಯ ಮೂಲಕ. "ವಯೋಮಾನಸ ಸಂಜೀವಿನಿ" - ಇದು Geriatric services and clinic, NIMHANS, Bengaluru ಇದರ ಒಂದು ಉಪಕ್ರಮ. ನೆನ್ನೆ ಸಂಜೆ (28.06.2021) "ವಯೋಮಾನಸ ಸಂಜೀವಿನಿ" ಒಂದು WEBINAR ಆಯೋಜಿಸಿತ್ತು. ವಿಷಯ: ಹಿರಿಯ ನಾಗರೀಕರ ಮೇಲಿನ ದೌರ್ಜನ್ಯದ ಬಗ್ಗೆ ಅರಿವು ಹಾಗೂ "Maintenace and welfare of Parents and Senior citizens Act 2007" ಇದರ ಸಾಧಕ ಭಾದಕಗಳು. ಈ ಕಾರ್ಯಕ್ರಮದಲ್ಲಿ ಶ್ರೀ. ಶಶಿಧರ್ ಶೆಟ್ಟಿ ( District Judge (OOD), Member Secretary, Karnataka State Legal Services Authority.), ಡಾ. ರವೀಂದ್ರನ...