Posts

Showing posts from October, 2025

ದೀಪಾವಳಿ - ಬಲಿ ಚಕ್ರವರ್ತಿ

Image
Time and tide waits for none - ಸಮಯ ನಿಂತ ನೀರಲ್ಲ... ಅದು ಯಾರಿಗೂ, ಯಾವುದಕ್ಕೂ ಕಾಯುವುದಿಲ್ಲ... ಇದು ಪ್ರಕೃತಿಗೂ ಹೊರತಲ್ಲ. ಚಲನೆಯು ಸಮಯದ ಗುಣ.  ಆಗಬೇಕಾಗಿರುವ ಘಟನೆಗಳೆಲ್ಲ ಆಯಾ ಸಮಯಕ್ಕೆ ತಾನೇ ತಾನಾಗಿ ಘಟಿಸುತ್ತಿರುತ್ತವೆ. " ಜಬ್ ಜಬ್  ಜೋ ಜೋ ಹೋನಾ ಹೈ..ತಬ್ ತಬ್  ಸೋ ಸೋ ಹೋತಾ ಹೈ" ಎನ್ನುವುದು ಒಂದು ಹಿಂದಿಯ ಹೇಳಿಕೆ. ಅದೇ ರೀತಿ , ವರ್ಷಕ್ಕೊಮ್ಮೆ ಭೂಲೋಕಕ್ಕೆ ಬಂದು ಜನರಿಂದ ಪೂಜಿಸಿಕೊಳ್ಳುವ ವರವನ್ನು, ವಿಷ್ಣುವಿನಿಂದ ಪಡೆದ ಬಲಿಚಕ್ರವರ್ತಿ, ಬರಬೇಕಾದ ದೀಪಾವಳಿಯ ಪಾಡ್ಯವೂ ಬಂತು... ಬಲಿಪಾಡ್ಯಮಿಯ ಬಲೀಂದ್ರನ ಪೂಜೆಯ ದಿನವೂ ಮುಗಿದೇ ಹೋಯಿತು.  ಬಲಿ ಚಕ್ರವರ್ತಿಯ ಕಥೆ.. ಚಿಕ್ಕಂದಿನಲ್ಲಿ ಕೇಳಿದಾಗ, ನನಗೆ ಮೂಡಿದ ಪ್ರಶ್ನೆಗೆ ಇದುವರೆಗೂ ಸಮಂಜಸವಾದ ಉತ್ತರವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ವಾಮನನ ಅವತಾರಿ ವಿಷ್ಣು ತ್ರಿವಿಕ್ರಮನಾಗಿ ಬೆಳೆದದ್ದು ಒಪ್ಪಲು ಕಷ್ಟವಾದರೂ, ಸಾಧ್ಯ ಉಂಟು ಎಂದು ನಂಬಿದೆ. (ಆಂಜನೇಯ ಆಕಾಶದೆತ್ತರಕ್ಕೆ ಬೆಳೆದು ಲಂಕೆಗೆ ಹಾರಿದ್ದ ಉದಾಹರಣೆ ಇತ್ತಲ್ಲ )  ಆದರೆ ತ್ರಿವಿಕ್ರಮ  ಇಟ್ಟ ಮೊದಲನೆಯ ಹೆಜ್ಜೆ ಭೂಮಿಯನ್ನಾವರಿಸಿದ್ದು ಒಪ್ಪಿದರೂ.. ಭೂಮಿಯ ಮೇಲಿದ್ದ ಜನರ ಪರಿಸ್ಥಿತಿ ಏನು, ಅದು ಬಿಡಿ ಬಲಿ ಚಕ್ರವರ್ತಿ ಆಗ ಎಲ್ಲಿದ್ದ ಎನ್ನುವುದು ನಿಗೂಢ. ಇಂಥ ಪ್ರಶ್ನೆ ಕೇಳಿದಾಗ, ತಲೆಹರಟೆ ಮಾಡಬೇಡ... ದೇವರ ಕಥೆ ಒಪ್ಪಿಕೋ ಬೇಕು ಅಷ್ಟೇ... ಎಂಬ ಉತ್ತರ ಸಮಾಧಾನ ತಂದಿಲ...

ದೈವಾಧೀನನಾದ ಮೋಹನ

Image
ಇಂದು (20.10.2025) ಸುತ್ತು ಮುತ್ತಲಿನ ಜನಕ್ಕೆಲ್ಲ ದೀಪಾವಳಿಯ ಸಡಗರ. ಎಲ್ಲಾ ಕಡೆ ಪಟಾಕಿ ಹಚ್ಚುವ ಶಬ್ದ, ನನ್ನ ಮನಸ್ಸು ಮಂಕಾಗಿದೆ. ನನ್ನ ಸ್ನೇಹಿತ ಮೋಹನನ (BS ಮೋಹನ ಕುಮಾರ್) ದೇಹವನ್ನು ಅಗ್ನಿಗರ್ಪಿಸಿ, ಸ್ನಾನ ಮಾಡಿ, ಊಟ ಮಾಡಿ ಕುಳಿತಿದ್ದೇನೆ.  ಹೋದ ಲೇಖನದಲ್ಲಿ ಅವನು ಆಸ್ಪತ್ರೆಯಲ್ಲಿದ್ದ ವಿಷಯ ಬರೆದು,ಬೇಗ ಗುಣಮುಖವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೆ, ಅದಕ್ಕೆ ದೇವರ ಒಪ್ಪಿಗೆ ಸಿಗಲಿಲ್ಲ.  ನೆನ್ನೆ ಬೆಳಿಗ್ಗೆ ಅವನನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಬಂದಿದ್ದೆ. ಬಾಯೊಳಗೆ ಹಾಕಿದ್ದ ನಳಿಕೆಗಳ ಕಾರಣ, ಮಾತಾಡಲಾಗದ ಮೋಹನ, ಸಂಜ್ಞೆಯ ಮೂಲಕವೇ ತಿಂಡಿ ಆಯ್ತಾ, ಆರಾಮವಾ, ಮೊಮ್ಮಗಳು ಹೇಗಿದ್ದಾಳೆ ಎಂದು ಕೇಳಿದ್ದು ಅರ್ಥವಾಯಿತು.  ಈ ಪರಿಸ್ಥಿತಿಯಲ್ಲೂ ಅವನ ಕಾಳಜಿ, ಆಶ್ಚರ್ಯ ಉಂಟು ಮಾಡಿತು. ಆದರೆ ಹೆಬ್ಬೆಟ್ಟು ಮೇಲೆತ್ತಿದ ಮುಷ್ಟಿಯನ್ನು ನಾಲ್ಕಾರು ಬಾರಿ ತೋರಿಸಿದ ಮೋಹನ ಹೇಳಿದ್ದು ಏನೆಂದು ತಿಳಿಯಲಿಲ್ಲ. ಮಾತುಗಾರ ಮೋಹನನನ್ನು ಮಾತಿಲ್ಲದ ಮೂಕನನ್ನಾಗಿ ನೋಡಲು ಕಷ್ಟ ಎನಿಸಿತು. ಸಂಜೆ ಅವನ ಸಾವಿನ ಸುದ್ದಿ ಕೇಳಿ ಮತ್ತೆ ಆಸ್ಪತ್ರೆಗೆ ಹೋಗಿ, ಮುಂದಿನ ಕಾರ್ಯಗಳಿಗೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ನಮ್ಮ ಸ್ನೇಹಿತರ ಗುಂಪು ತಯಾರಿ ನಡೆಸಿತು.  ಮೋಹನನ ನೆನಪುಗಳು ಬಲವಾಗಿ ಕಾಡಿದವು. ಅವನ ಪ್ರಭಾವ ನನ್ನ ಮೇಲೆ ಈ ಮಟ್ಟಕ್ಕಿದೆ ಎಂದು ನನಗೆ ಅನ್ನಿಸಿರಲಿಲ್ಲ. ನನಗೆ ಮೋಹನನ ಪರಿಚಯವಾದದ್ದು...  ಸುಮಾರು 20 ವರ್...

ಹೋಟೆಲ್- ತಿಂಡಿ - ಮಸಾಲೆ ದೋಸೆ

Image
ಕೆಲವು ದಿನಗಳಿಂದ.. ದಿನಗಳೇನು ತಿಂಗಳುಗಳೇ ಕಳೆದಿವೆ... ವಿದ್ಯಾರ್ಥಿ ಭವನ್ ನಲ್ಲಿ ಮಸಾಲೆ ದೋಸೆ ತಿನ್ನಬೇಕೆಂಬುದು ನನ್ನ ಮಡದಿಯ ಆಸೆ. ಯಾಕೋ ಕಾಲವೇ ಕೂಡಿ ಬಂದಿರಲಿಲ್ಲ. ಎಲ್ಲ ಸರಿ ಇದ್ದಾಗ ಶುಕ್ರವಾರ ಹೋಟೆಲ್ ಗೆ ರಜಾ, ಶನಿವಾರ ಭಾನುವಾರ ತುಂಬಾ ಜನಸಂದಣಿ ಬೇಡ.. ಹೀಗೆ ಏನೇನೋ ಕಾರಣಗಳು. ಇದ್ದಕ್ಕಿದ್ದಂತೆ ಇಂದು (ಬುಧವಾರ) ಬೆಳಿಗ್ಗೆ ಏನೋ ಮಾತನಾಡುತ್ತಾ ಕೂತಿದ್ದಾಗ, ದಿಡೀರ್ ಅಂತ ನಿರ್ಧಾರ ಮಾಡಿ ಹೊರಟೇ ಬಿಟ್ಟೆವು ವಿದ್ಯಾರ್ಥಿ ಭವನದ ಕಡೆಗೆ.  ಅನಿರೀಕ್ಷಿತವಾಗಿ ನಮ್ಮ ಜೊತೆ ಸೇರಿದವರು ನಮ್ಮ ನೆಂಟರು ಅನಸೂಯ ಮತ್ತು ನಾಗಭೂಷಣ್ ದಂಪತಿಗಳು. ಹಳೆಯದನ್ನು ನೆನಪಿಸಿಕೊಳ್ಳುತ್ತಾ ಇಡ್ಲಿ ಮತ್ತು ದೋಸೆಗಳನ್ನು ಸವಿದಿದ್ದಾಯ್ತು. ಅಂತೂ ಬಹಳ ದಿನಗಳಿಂದ ಬಾಕಿ ಇದ್ದ ಒಂದು ಕಾರ್ಯಕ್ರಮ ಮುಗಿದಂತಾಯ್ತು. ಸಾಮಾನ್ಯವಾಗಿ ಮಸಾಲೆ ದೋಸೆ ಎಂದರೆ, ಎಲ್ಲರಿಗೂ ಇಷ್ಟವೇ. ಅದರಲ್ಲೂ ವಿದ್ಯಾರ್ಥಿ ಭವನ್ ಮಸಾಲೆ ದೋಸೆಗೆ ಒಂದು ವಿಶಿಷ್ಟ ಸ್ಥಾನ. ದೋಸೆಯ ತಟ್ಟೆಗಳನ್ನು ಕೈ ಮೇಲೆ ಜೋಡಿಸಿಕೊಂಡು ಬಂದು ಕೊಡುವ ಶೈಲಿಯೇ ಚೆನ್ನ. 60 ರ ದಶಕದ  ಉತ್ತರಾರ್ಧದಲ್ಲಿ ವಿದ್ಯಾರ್ಥಿ ಭವನ್ ನಲ್ಲಿ.. ಜಾಗ ಸಿಗದಿದ್ದಾಗ ಹಿಟ್ಟು ರುಬ್ಬುವ ಒರಳು ಕಲ್ಲು ಬಳಿ ಹಾಕಿದ್ದ ಬೆಂಚಿನ ಮೇಲೆ, ತಟ್ಟೆಯನ್ನು ಕೈಯಲ್ಲಿ ಹಿಡಿದು, ಕೂತು ತಿಂದ ಮಸಾಲೆ ದೋಸೆ, ಚಟ್ನಿಯ ರುಚಿ ಈಗಿಲ್ಲದಿದ್ದರೂ... ವಿಶಾಲವಾದ ಜಾಗದಲ್ಲಿ ಕೂತು ತಿನ್ನುವ ಅನುಕೂಲ, ಕೈ ವರೆಸಿಕೊಳ್ಳಲು ಕೊಡುತ್ತಿದ್ದ ನ...

ವರ - ಶಾಪವಾಯಿತೇ?

Image
ಅಂದು ಪ್ರಸನ್ನ ಆಪ್ತ ಸಲಹಾ ಕೇಂದ್ರದಲ್ಲಿ ನನ್ನನ್ನು ಭೇಟಿಯಾಗಲು ಬಂದವರು ಗಿರೀಶ್. ಪರಿಚಯದ ನಂತರ ಅವರು ಹೇಳಿದ್ದು..." ನನ್ನ ಆತ್ಮೀಯ ಗೆಳೆಯನ ಬಗ್ಗೆ ಒಂದಷ್ಟು ಮಾತಾಡುವುದಿದೆ, ಅವನ ಸಮಸ್ಯೆಗೆ ಪರಿಹಾರ ಬೇಕಾಗಿದೆ... ಮಾತಾಡಬಹುದೇ?" ತನ್ನ ಸ್ನೇಹಿತನ  ಸಮಸ್ಯೆಗೆ ಪರಿಹಾರ ಹುಡುಕಲು ಬಂದ ಗಿರೀಶ್ ಬಗ್ಗೆ ನನಗೆ ಅಭಿಮಾನವೆನಿಸಿತು, ಮಾತು ಮುಂದುವರೆಯಿತು. ನನ್ನ ಬಾಲ್ಯ ಸ್ನೇಹಿತ ತುಷಾರ್... ನಮ್ಮ ಒಡನಾಟ ಶುರುವಾಗಿದ್ದು ಬಹುಶಃ ಎರಡನೇ ತರಗತಿಯಿಂದ.. ಸುಮಾರು 45 ವರ್ಷಗಳಿಂದ ನಮ್ಮ ಒಡನಾಟ ಸತತವಾಗಿ ನಡೆದಿದೆ. ಚಿಕ್ಕಂದಿನ ಠೂ ಬಿಡುವ ಕಾರ್ಯಕ್ರಮಗಳು, ದೊಡ್ಡವರಾದ ಮೇಲೂ ಆಗಾಗ್ಯೆ ನಡೆದರೂ, ಅದು ಬಹಳ ಬೇಗ ಸೇ ಮಾಡುವುದರೊಂದಿಗೆ  ಮುಕ್ತಾಯವಾಗುತ್ತದೆ. ಅವನು ಹೇಳಿದ್ದನ್ನು ನಾನು ಒಪ್ಪದೇ ವಿರೋಧಿಸಿದಾಗ, ಬಹುಬೇಗ ಅಸಹನೆ ತೋರುತ್ತಾನೆ, ಮೌನಕ್ಕೆ ಜಾರುತ್ತಾನೆ... ಅವನ ಒಡನಾಟ ನನಗೆ ಇಷ್ಟವಾದ್ದರಿಂದ, ನಾನು ಯಾವ ಸಂಕೋಚವಿಲ್ಲದೆ ಮಾತನಾಡಿಸುತ್ತೇನೆ, ಅವನು ಸಹ ಸಹಜವಾಗಿ ಬಿಡುತ್ತಾನೆ. ಅವನಿಂದ ಎಲ್ಲರೂ ದೂರವಾಗುತ್ತಿದ್ದಾರೆ ಹಾಗೂ ಅವನನ್ನು ತಿರಸ್ಕರಿಸುತ್ತಿದ್ದಾರೆ ಎನ್ನುವ ಭಾವನೆ ಬಲವಾಗಿ ಬೇರೂರುತ್ತಿದೆ. ತುಂಬಾ ಪ್ರೀತಿಯಿಂದ ಒಡನಾಡಿದ ಹಳೆಯ ಸ್ನೇಹಿತರೆಲ್ಲರಲ್ಲೂ ಅವನಿಗೆ ಕುಂದು ಕಾಣುತ್ತಿದೆ. ಈಗೀಗ ಅವರೊಡನೆ ಒಡನಾಟವನ್ನು ಕಳಚಿಕೊಂಡು ತಾನೇ ಒಂಟಿಯಾಗುತ್ತಿದ್ದಾನೆ ಹಾಗೂ ಒಳಗೊಳಗೆ ಕೊರಗುತ್ತಿದ್ದಾನೆ ಎಂದು ನನಗನ್ನಿಸುತ್ತ...

ಭಾವ - ಬಾಂಧವ್ಯ

Image
ನವರಾತ್ರಿಯ  ಕೊನೆಯ ದಿನ ವಿಜಯದಶಮಿ,ಮೈಸೂರಿನ  ಜಂಬೂ ಸವಾರಿಯ  ಸಡಗರ. ಹಿಂದಿನ ಕಾಲದ ರಾಜ ಮಹಾರಾಜರ ಜೈತ್ರ ಯಾತ್ರೆಯ ದಿನ.  ನನ್ನ ಭಾವ ಕರಲಮಂಗಲದ ರಾಮರಾವ್ ಅವರ ಅಸ್ತಿ ತುಂಬಿದ ಕುಂಡವನ್ನು ಹೊತ್ತು ತಿರುಮಕೂಡಲು ನರಸೀಪುರದ ಕಡೆಗೆ ಅಸ್ತಿ ವಿಸರ್ಜನೆ ಮಾಡಲು ಕಾರಿನಲ್ಲಿ ಸವಾರಿ ಹೊರಟಿದ್ದೇವೆ, ಭಾವನ ಮಗ,ಮೊಮ್ಮಗ, ಇಬ್ಬರು ಅಳಿಯಂದಿರೊಂದಿಗೆ ನಾನು. ಜೀವನದ ಕಷ್ಟ ಕೋಟಲೆಗಳನ್ನು  ಜಯಿಸಿ, ಜೀವನ್ಮುಕ್ತರಾದ ನನ್ನ ಭಾವನ ಭೌತಿಕ ಶರೀರದ ಭಸ್ಮವಾಗದೇ ಉಳಿದ ಭಾಗಗಳ ಜೈತ್ರ ಯಾತ್ರೆ ಎನ್ನಲೇ? ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು  ತಿಂದು ನಿನ್ನನ್ನ ಋಣ ತೀರುತಲೇ ಪಯಣ ಹಿಂದಾಗದೊಂದು ಚಣ ಮುಂದಕುಂ ಕಾದಿರದು ಸಂದಲೆಕ್ಕವದೆಲ್ಲ ಮಂಕುತಿಮ್ಮ. ಡಿವಿಜಿಯವರ ಮಂಕುತಿಮ್ಮನ ಕಗ್ಗದ ಈ ಸಾಲುಗಳು ಎಷ್ಟು ಸಮಂಜಸ ಅಲ್ಲವೇ? ಭೂಲೋಕದ ಅನ್ನದ ಋಣ ತೀರಿದ ಕ್ಷಣವೇ ಪರಲೋಕಕ್ಕೆ ಮುಂದಿನ ಪಯಣ. ಸ್ವಲ್ಪವೂ ಹಿಂದು ಮುಂದಾಗುವುದಿಲ್ಲ, ಅದರ ಲೆಕ್ಕವು ಈಗಾಗಲೇ ಬರೆದಾಗಿದೆ. ಅದನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ. ಇದು ಎಲ್ಲರಿಗೂ ಎಲ್ಲ ಕಾಲಕ್ಕೂ ಅನ್ವಯಿಸುವ ವಿಷಯ. ರಾಮರಾಯರ ಮದುವೆ ನನ್ನ ಅಕ್ಕ ಗಿರಿಜಾಂಬನೊಡನೆ ನಡೆದದ್ದು  1962ನೇ ಇಸವಿಯಲ್ಲಿ. ನಾನಾಗ ಹೈಸ್ಕೂಲ್ ವಿದ್ಯಾರ್ಥಿ. ಯಾಕೋ ಕಾಣೆ ನನಗೆ ಮತ್ತು ನನ್ನಣ್ಣ ಸತ್ತಿಗೆ ಅವರು ಹಿಡಿಸಿರಲಿಲ್ಲ. ನಾವಿಬ್ಬರೂ ಮಾತಾಡಿಕೊಂಡಿದ್ದೆವು. ಆದರೆ ವಿಧಿ ನಿ...