Posts

Showing posts from December, 2024

ರಾವಣ - ಮಹಾ ಪಾಪ- ಮೋಸ

Image
   ಕೆಲವು ದಿನಗಳ ಹಿಂದೆ... ಸನಾತನ ಕಥನ.. ಎನ್ನುವ ಯೂಟ್ಯೂಬ್ ಚಾನಲ್ ನ ಒಂದು ಭಾಗ ನನ್ನ ವಾಟ್ಸಪ್ ಗೆ ಬಂದಿತ್ತು... ಅದರಲ್ಲಿ ಪಾಪದ ಬಗ್ಗೆ ವಿಶ್ಲೇಷಣೆಯಿತ್ತು. ಪಾಪ, ಅತಿಪಾಪ ಹಾಗೂ ಮಹಾ ಪಾಪ ಎಂಬ ಮೂರು ಬಗೆಯ ಪಾಪಗಳು. ಪಾಪ... ತಿಳಿದೋ ತಿಳಿಯದೆಯೋ ತಪ್ಪುಗಳನ್ನು ಮಾಡಿ ಅದಕ್ಕೆ ಪಶ್ಚಾತಾಪ ಪಡುವುದು. ಇದು ಕ್ಷಮಾರ್ಹ ಪಾಪ.  ಅತಿಪಾಪ ... ಎಲ್ಲ ಗೊತ್ತಿದ್ದು.. ಹಿಂಸೆ, ಕೊಲೆ ಸುಲಿಗೆ ಅಪಹರಣ ಹೀಗೆ ಪರಹಿಂಸೆ ಮಾಡುವುದು... ಜೊತೆಗೆ ಯಾವುದೇ ಪಶ್ಚಾತಾಪ ಇಲ್ಲ. ಈ ಪಾಪಕ್ಕೆ ತಕ್ಕ ಶಿಕ್ಷೆ ಅನುಭವಿಸಿದ ನಂತರ ಕ್ಷಮೆಗೆ ಅರ್ಹತೆ.  ಮಹಾ ಪಾಪ ... ನಂಬಿಸಿ ಮೋಸ ಮಾಡುವುದು.  ಮಹಾ ಪಾಪಕ್ಕೆ ಕ್ಷಮೆಯೇ ಇಲ್ಲ. ರಾವಣ ಮಹಾ ಪಾಪ ಮಾಡಿ ಮೋಕ್ಷಕ್ಕೆ ಅರ್ಹತೆಯನ್ನು ಕಳೆದುಕೊಂಡ ಎಂಬುದು ಆ ವಿಡಿಯೋದ ಸಾರಾಂಶವಾಗಿತ್ತು. ಮೋಸ  ನನ್ನ ದೃಷ್ಟಿಯಲ್ಲಿ ನಂಬಿದವರಿಗೆ ಮಾತ್ರ ಮಾಡಲು ಸಾಧ್ಯ.. ನಂಬಿಸುವುದು ಒಂದು ಕಲೆ. ನಮ್ಮ ಸುತ್ತ ತಿರುಗಿ ನೋಡಿದರೆ... ಎಲ್ಲೆಲ್ಲಿಯೂ ಮೋಸವೇ ಕಾಣಿಸುತ್ತದೆ. ವ್ಯಾಪಾರಿಗಳ ತೆರಿಗೆ ವಂಚನೆ ಚೀಟಿ ವ್ಯವಹಾರದಲ್ಲಿ ಮೋಸ. ಚೀಟಿ ವ್ಯವಹಾರದಲ್ಲಿ ಹಣ ಹೂಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡು ಕೈ ಸುಟ್ಟು ಕೊಂಡವರು ಇದ್ದಾರೆ. ಬ್ಯಾಂಕ್ ನಲ್ಲಿ ಸಾಲ ಪಡೆದು ಹಿಂತಿರುಗಿಸದ  ಮೋಸ. ಸರ್ಕಾರದ ಕೆಲಸ ಮಾಡಿಕೊಡಲು ಲಂಚ ಕೇಳುವುದು... ಇದಕ್ಕೊಂದು ನೈಜ  ಘಟನೆ ಸಾಕ್ಷಿ ..ಭಾವಿ ತೋಡಲು ಬ್ಯಾಂಕ್ ಸ...

ನನಸಾಗದ ಕನಸುಗಳು... ಕೈಗೂಡದ ಆಸೆಗಳು.

Image
  ನನ್ನ ಲೇಖನಕ್ಕೆ ಪ್ರತಿಕ್ರಯಿಸುತ್ತ... ಸ್ನೇಹಿತ ನಾಗೇಂದ್ರ ಬಾಬು ಬರೆದ ಒಂದು ಸಾಲು ಹೀಗಿತ್ತು...   ' ನಿಮ್ಮ ಮುಂದಿನ ಲೇಖನ...ನಿಮಗೆ ಇಚ್ಛೆ ಇದ್ದು ಅನುಭವಕ್ಕೆ ಬಾರದ ಘಟನೆ ಬಗ್ಗೆ ಬರಲಿ ಎಂದು ನನ್ನ ಅಪೇಕ್ಷೆ....'  ಎಲ್ಲೋ ಒಂದು ಎಳೆ ಮನಸ್ಸಿನಲ್ಲಿದ್ದರೂ ಬರೆಯಲು ಬೇಕಾದಷ್ಟು ಸ್ಪೂರ್ತಿ ಇರಲಿಲ್ಲ... ಮೇಲಿನ ಸಾಲು ಓದಿದ ಮೇಲೆ.. ಮನಸ್ಸು ಮಥಿಸಿತು... ಆಗ ಹೊಳೆದದ್ದೇ ಶೀರ್ಷಿಕೆ   " ನನಸಾಗದ ಕನಸುಗಳು... ಕೈಗೂಡದ ಆಸೆಗಳು." ಪರಿಣಾಮವೇ ಈ ಲೇಖನ...  Dreams that came true ಎಂಬ ಹೆಸರಿನ ಇಂಗ್ಲೀಷ್ ಪಾಠ ಹೈಸ್ಕೂಲ್ ನಲ್ಲಿ ಇತ್ತು. ವೈಜ್ಞಾನಿಕ ಆವಿಷ್ಕಾರಗಳು.. ಶುರುವಾದದ್ದು ಕನಸು/ ಕಲ್ಪನೆಗಳ ಮೂಲಕ... ಜಾನ್ ಲೋಗೀ ಬೇರ್ಡ್.. ಟೆಲಿವಿಷನ್  ಕನಸನ್ನು ನನಸಾಗಿದ್ದ ವಿಷಯ ಆ ಪಾಠದಲ್ಲಿತ್ತು.  ಎಷ್ಟೋ ಕನಸುಗಳು / ಕಲ್ಪನೆಗಳು / ಆಸೆಗಳು ನಾನಾ ಕಾರಣಗಳಿಂದ ಕೈಗೂಡದೆ ಇರುವುದು.. ಎಲ್ಲರ ಜೀವನದಲ್ಲೂ ಸಾಮಾನ್ಯ. ಅವಶ್ಯಕತೆಯೇ ಅನ್ವೇಷಣೆಗೆ ಅಮ್ಮ ( necessity is the mother of invention) ಎನ್ನುವ ಮಾತಿನಂತೆ, ಮನುಷ್ಯನಿಗೆ ಅನುಕೂಲವಾಗಲು ಬೇಕಾದ ಪರಿಕರಗಳನ್ನು ಅನ್ವೇಷಿಸುವುದೇ ಸಾಮಾನ್ಯ ಗುಣ. ದುರ್ದೈವವೆಂದರೆ ಈ ಅನ್ವೇಷಣೆಗಳ ನೈಜ ಉಪಯೋಗಕ್ಕಿಂತ ಅಡ್ಡ ಪರಿಣಾಮ ಬೀರುವ ಭಾಗವೇ ಹೆಚ್ಚು ಉಪಯೋಗವಾಗುತ್ತಿದೆ. ನಮ್ಮ ಮಾಜಿ ರಾಷ್ಟ್ರಪತಿ APJ ಅಬ್ದುಲ್ ಕಲಾಮ್ ಅವರು ಮಕ್ಕಳಿಗೆ ಕೊಡ...

ಎರಡು ದೋಣಿಯಲ್ಲಿ ಕಾಲು ಸಲ್ಲದು.

Image
ಆಪ್ತಸಮಾಲೋಚಕನಾಗಿ ಕೆಲವು ಪ್ರಸಂಗಗಳನ್ನು case history ರೂಪದಲ್ಲಿ  ಬರೆದದ್ದಿದೆ. ಕಥೆಯ ರೂಪದಲ್ಲಿ ಬರೆಯುವ ನನ್ನ ಪ್ರಯತ್ನ ಇದೇ ಮೊದಲು... ನಿಮ್ಮ ಸಲಹೆ / ಪ್ರೋತ್ಸಾಹ ಅತ್ಯಮೂಲ್ಯ.  ಗೌಪ್ಯತೆಯನ್ನು ಕಾಪಾಡಲು ಹೆಸರುಗಳನ್ನು ಬದಲಾಯಿಸಿದ್ದೇನೆ. _________________________________________ ಎರಡು ದೋಣಿಯಲ್ಲಿ ಕಾಲು ಸಲ್ಲದು. ಆಟೋದಲ್ಲಿ ಮನೆಗೆ ಹೋಗುತ್ತಿದ್ದ ಲಕ್ಷ್ಮಿಗೆ ವಿಪರೀತ ತಲೆನೋವು, ಮನಸ್ಸಿನಲ್ಲಿ ಗೊಂದಲ, ಏನೋ ಆತಂಕ... ಬರುತ್ತಿದ್ದ ಅಳುವನ್ನು ಹೇಗೋ ತಡೆದುಕೊಂಡು, ಮನೆ ತಲುಪಿದಾಗ ಮಗಳ ಪ್ರೀತಿಯ  ಅಪ್ಪುಗೆ ಇಷ್ಟವಾದರೂ ನೆಮ್ಮದಿ ತರಲಿಲ್ಲ. ಯಾಕೆ ಸಪ್ಪಗಿದ್ದೀಯಾ ಎಂದು ಕೇಳಿದ ಅತ್ತೆಗೆ ಹಾರಿಕೆ ಉತ್ತರ ಕೊಟ್ಟು.. ಅವರು ಕೊಟ್ಟ ಕಾಫಿಯನ್ನು ಕುಡಿದು ಲೋಟ ಕೆಳಗಿಟ್ಟಾಗ ಒಂದು ನಿಟ್ಟುಸಿರು ತಾನಾಗೆ ಹೊರಗೆ ಬಂತು. ಕಣ್ಣು ಮುಚ್ಚಿ ಕೂತವಳಿಗೆ ಹಿಂದಿನ ಘಟನೆಗಳ ಸರಮಾಲೆ ಮನಸ್ಸಿನಲ್ಲಿ ಮೂಡಿ ಬಂತು. ಇಂಜಿನಿಯರಿಂಗ್ ಮಾಡುವ ಆಸೆಗೆ ನೀರೆರದವನು ಅಪ್ಪ... ಅಮ್ಮ ಸಂಪ್ರದಾಯಸ್ತ ಯೋಚನೆ ಮಾಡುವವಳು... ಹಾಗಾಗಿ ಓದಿ ಏನು ಕೆಲಸ ಮಾಡಬೇಕೆ.. ಮದುವೆ ಮಾಡಿ ಗಂಡನ ಮನೆಗೆ ಕಳಿಸಿದರೆ ಸಾಕು ಎಂಬ ಮನಸ್ಸು.  ಇಂಜಿನಿಯರಿಂಗ್ ಕಾಲೇಜಿಗೆ ಹೋದ ಮೊದಲ ದಿನ ಸಂಭ್ರಮವೋ ಸಂಭ್ರಮ. ಎಲ್ಲ ಹೊಸ ಮುಖಗಳು... ಆ ದಿನಗಳಲ್ಲಿ ಪರಿಚಯವಾಗಿದ್ದು ಅವನು. ಎರಡು ವರ್ಷಗಳ ತನಕ ಹಾಯ್ ಬಾಯ್ ಅನ್ನುವಷ್ಟಕ್ಕೆ ಸೀಮಿತವಾಗಿದ್ದ ಪರಿಚಯ, ಗೆಳೆತ...