Posts

Showing posts from October, 2024

ತಪ್ಪು- ಶಿಕ್ಷೆ- ಪಶ್ಚಾತ್ತಾಪ

Image
ಮೊನ್ನೆ ಒಂದು ದಿನ... ಯೂಟ್ಯೂಬ್ ನಲ್ಲಿ ನನಗೆ ತುಂಬಾ ಪ್ರಿಯವಾದ ಮುಖೇಶ್ ಹಾಡಿದ ಗೋಳು ಗೀತೆಗಳ(sad songs) ಹುಡುಕಾಟದಲ್ಲಿದ್ದಾಗ... ಧುತ್ತೆಂದು ಮುಂದೆ ಬಂದಿದ್ದು..ZEE TVಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಒಂದು ಸಂಚಿಕೆ... ಅದು ಚಿತ್ರನಟ ಅನಂತನಾಗ್ ಅವರದ್ದಾದ್ದರಿಂದ... ಕುತೂಹಲ ಮೂಡಿ ಪೂರ್ಣ ಸಂಚಿಕೆಯನ್ನು  ಸುಮಾರು ಒಂದು ಗಂಟೆಗೂ ಮೀರಿ ತುಂಬಾ ಇಷ್ಟದಿಂದ ನೋಡಿದೆ.  ಅದು  #ಅನಂತನಾಗ್ ಅವರ " ಸಿಹಿ ಕಹಿ  ನೆನಪುಗಳು" ಆಗಿತ್ತು ಎನ್ನುವ ಅನಿಸಿಕೆ( ಇದು ಒಂದು ತರಹ ತಿಕ್ಕಲುತನ ಎನ್ನಲೇ?) ನನ್ನದಾಯಿತು. #Ananthanag  ನಾನು ಮೆಚ್ಚಿದ ನಟರಲ್ಲಿ ಒಬ್ಬರು. ನನ್ನ ದೃಷ್ಟಿಯಲ್ಲಿ ಕನ್ನಡ ಚಿತ್ರರಂಗದ #versatile ನಟರು ಎಂದರೆ ಬಾಲಕೃಷ್ಣ ಹಾಗೂ #ಅನಂತ್ ನಾಗ್ ಅವರು. ಈ ನನ್ನ ಅಭಿಪ್ರಾಯವನ್ನು ಒಪ್ಪದೇ ಇರುವ, ವಿರೋಧಿಸುವ ಒಂದು ದೊಡ್ಡ ದಂಡೇ ನನ್ನ ಅತ್ತೆಯ ಮನೆ ಕಡೆ ಇದೆ... ನನ್ನ ಹೆಂಡತಿ ವಿಜಯ ಆ ಗುಂಪಿನ ಮಂಚೂಣಿಯಲ್ಲಿದ್ದಾಳೆ.. ಅವರಿಗೆಲ್ಲ ಅಣ್ಣಾವ್ರು  (ರಾಜಕುಮಾರ್) ಅಚ್ಚು ಮೆಚ್ಚು...ನನಗೂ #ರಾಜಕುಮಾರ್ ಎಂದರೆ ಇಷ್ಟವೇ... ವಿಷಯ ಪಲ್ಲಟವಾಯಿತು... ಇರಲಿ ಅದು ಒಂದು ಕಡೆ. #ಅನಂತ್ ನಾಗ್ ಅವರು ನಿರರ್ಗಳವಾಗಿ ಹಾಡಿದ ಒಂದು ನೀಳ ಗೀತೆ... ಪ್ರಾರ್ಥನೆಯ ರೂಪದಲ್ಲಿ ಚಿಕ್ಕಂದಿನಲ್ಲಿ ಕಲಿತದ್ದು... ವಿಶೇಷವಾಗಿತ್ತು, ಜೊತೆಯಲ್ಲೇ ಹೇಳಿದ ಮಾತು " ಯಾವ ಚಿತ್ರದ ಮಾತುಗಳೂ ನೆನಪಿಲ್ಲ" ... ಚಿಕ್...

ಸರಸ್ವತಿ ಪೂಜೆ

Image
  ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ// ಯಾಕುಂದೇಂದು ತುಷಾರ ಹಾರ ಧವಳಾ ಯಾ ಶುಭ್ರ ವಸ್ತ್ರಾನ್ವಿತ ಯಾ ವೀಣಾ ವರದಂಡ ಮಂಡಿತಕರ ಯಾ ಶ್ವೇತ ಪದ್ಮಾಸನಾ ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿಃ ದೇವೈ ಸದಾ ಪೂಜಿತಾ ಸಾಮಾಂಪಾತು ಸರಸ್ವತಿ ಭಗವತಿ  ನಿಃಶೇಷ ಜಾಡ್ಯಾಪಃ// ಇದು ಪ್ರತಿದಿನ ಸಂಜೆ ಮನೆಯ ದೀಪ ಹಚ್ಚಿದ ಮೇಲೆ ಓದಲು ಕುಳಿತಾಗ ಕೈ ಮುಗಿದು ಮಾಡುತ್ತಿದ್ದ ಮೊದಲ ಪ್ರಾರ್ಥನೆ. ಅದರ ಅರ್ಥವೂ ತಿಳಿಯದಿದ್ದ ಕಾಲ.. ಆದರೆ ಶ್ರದ್ಧೆ ಭಕ್ತಿ ನಂಬಿಕೆ ಮಾತ್ರ ಗಟ್ಟಿಯಾಗಿತ್ತು.  ಈ ಕರಿಷ್ಯಾಮಿ ಪದ ನನಗೆ ಒಂದು ಅನುಮಾನ ಮೂಡಿಸುತ್ತಿತ್ತು. ನಮ್ಮಪ್ಪನನ್ನು ಅಜ್ಜಿ " ಶಾಮಿ" ಎಂದು ಕರೆಯುತ್ತಿದ್ದದ್ದು.. ನಮ್ಮಪ್ಪ ಅಷ್ಟೇನೂ  ಬೆಳ್ಳಗಿಲ್ಲದಿದ್ದದ್ದು... ಎರಡು ಸೇರಿ ಕರಿಶ್ಯಾಮಿ ಆಗಿ ಇಲ್ಲಿ ಹೇಗೆ ಬಂತು ಎಂದು. ಅದಕ್ಕೆ ಉತ್ತರ ಸಿಕ್ಕಿದ್ದು ನಾನು ಹೈಸ್ಕೂಲ್ ನಲ್ಲಿ ಸಂಸ್ಕೃತ ಓದಲು ಆಯ್ಕೆ ಮಾಡಿದಾಗ .... ಸಂಸ್ಕೃತದ ಪಂಡಿತರು ವೆಂಕಟದಾಸಶರ್ಮ ಅವರಿಂದ. ಸರಸ್ವತಿ ಪೂಜೆ ನವರಾತ್ರಿ ಸಂಭ್ರಮದ ಒಂದು ಮುಖ್ಯ ಭಾಗ...  ಮನೆಯಲ್ಲಿ ಬೊಂಬೆಗಳನ್ನು ಜೋಡಿಸುವಾಗಲೇ... ನನ್ನೆಲ್ಲ ಪುಸ್ತಕಗಳನ್ನು ಸರಸ್ವತಿ ಪೂಜೆಗೆ ಇಡುತ್ತಿದ್ದದ್ದು.. ಅದರ ಹಿಂದಿನ ಕಾರಣ ಸುಮಾರು 12 ದಿನಗಳ ಕಾಲ ಪುಸ್ತಕ, ಓದು ಎನ್ನುವ ಜಂಜಾಟವೇ ಇಲ್ಲದ್ದು.  ಸರಸ್ವತಿ ಪೂಜೆಯ ದಿನ... ದೇವರಿಗೆ ನಮಸ್ಕಾ...