Posts

Showing posts from June, 2024

ಬಾಲ್ಯದ ಪ್ರಸಂಗಗಳು

Image
  ಮೊನ್ನೆ  ಶನಿವಾರ ಅಶಕ್ತ ಪೋಷಕ ಸಭಾದಲ್ಲಿ ಎಂಟನೆಯ“ಯೋಗ ದಿನಾಚರಣೆ” ಹಾಗೂ ಒಂದಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.  ಅಲ್ಲಿನ ನಿವಾಸಿಗಳು,  ಎಲ್ಲರೂ ಹಿರಿಯ ನಾಗರಿಕರು.  ಆದರೆ ಈ ಕಾರ್ಯಕ್ರಮಕ್ಕೆ ತಯಾರಿ ಮಾಡುವಾಗಿನ ಉತ್ಸಾಹ ಎಳೆಯರನ್ನು ಮೀರಿಸುತ್ತಿತ್ತು. ಒಂದು ಮಾತಿದೆ ವಯಸ್ಸಾದಂತೆ... ಮುದುಕರು ಮಕ್ಕಳಾಗುತ್ತಾರೆ ಎಂದು.  ಇದು ಅಕ್ಷರ ಸಹ ಕಣ್ಣಿಗೆ ಕಟ್ಟುವಂತೆ ಕಾಣುತ್ತಿತ್ತು. ತೊಡುವ ಬಟ್ಟೆ, ಅಲಂಕಾರ, ಅವರು ಮಾಡುವ ಕಾರ್ಯಕ್ರಮಕ್ಕೆ ತಕ್ಕ ಹಾಗೆ ಹೊಂದಿಸಿಕೊಳ್ಳುವ ಉತ್ಸಾಹ... ಅದು ಸರಿ ಇದೆಯೇ ಎಂದು ನಮ್ಮಗಳಿಂದ ತಿಳಿದುಕೊಳ್ಳುವ ಕಾತರ.... ಚಟುವಟಿಕೆಯಿಂದ ಓಡಾಡುವ ಅವರುಗಳನ್ನು ನೋಡಿ ಸಂಭ್ರಮ ಪಟ್ಟವರು ನಮ್ಮ ತಂಡದವರು.  ಅವರುಗಳ ಈ ಕ್ರಿಯಾಶೀಲತೆ ನನ್ನನ್ನು ನನ್ನ ಬಾಲ್ಯಕ್ಕೆ ಎಳೆದೊಯ್ಯಿತು.  ನನಗೆ ಇನ್ನೂ ನೆನಪಿದೆ...." ಸ್ವರ್ಗದಲ್ಲಿ ಎಲೆಕ್ಷನ್" ಎನ್ನುವ ನಾಟಕ... ಅದರಲ್ಲಿ ನಾರದನ ಪಾತ್ರ ನನ್ನದು. ಪಂಚೆ, ಶಲ್ಯ, ಜನಿವಾರ, ತಲೆಯ ಜುಟ್ಟು  ಅದಕ್ಕೆ ಹೂ, ಎಲ್ಲವೂ ಹೊಂದಿಸಿಯಾಯ್ತು.  ಚಿಟಿಕೆಯನ್ನೂ ಹೊಂದಿಸಿಯಾಯ್ತು ಆದರೆ.. ನಾರದನ ಕೈಯಲ್ಲಿನ ವೀಣೆ ಸಿಗುವುದು ಎಲ್ಲಿ?.... ನನ್ನ ಹಳ್ಳಿ ದೊಡ್ಡ ಜಾಲದಲ್ಲಿ. ಉತ್ಸಾಹದ ಮೇಲೆ ನೀರು ಚೆಲ್ಲಿದಂತಾಯ್ತು.. ಇನ್ನೇನು ಅಳುವುದೊಂದೇಬಾಕಿ... ಆಗ ಬಂದ ಸಲಹೆ.. ನೇಯ್ಗೆ ಅಜ್ಜನ ಬಳಿ ಇದ್ದ ಏಕತಾರಿ.  ಅದನ್ನೇ ವ...

ಬಾಲ್ಯದ ಸೊಗಸು

Image
ಬೆಳಿಗ್ಗೆ ವಾಕಿಂಗ್ ಹೋದಾಗ ನಡೆದ ಒಂದು ಪ್ರಸಂಗ... ಗಂಡ ಹೆಂಡತಿಯ ಜೋಡಿ ಒಟ್ಟಾಗಿ ಸ್ಕೂಟರ್ ಮೇಲೆ ಬಂದು... ಪಾರ್ಕಿನಲ್ಲಿ ತಮ್ಮಷ್ಟಕ್ಕೆ ತಾವು ಬೇರೆ ಬೇರೆಯಾಗಿ ವಾಕಿಂಗ್ ಮಾಡುತ್ತಿದ್ದರು. ತಕ್ಕಮಟ್ಟಿಗೆ ಪರಿಚಯವಿದ್ದ ಗಂಡನೊಡನೆ ಲೋಕಾ ರೂಢಿಯಾಗಿ ಮಾತನಾಡಿದಾಗ ಹೇಳಿದ್ದು.." ಅವರು ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡಿತಾರೆ... ಅವರ ಜೊತೆ ನನ್ನ ವಾಕಿಂಗು ಸರಿಯಾಗಲ್ಲ". ಹೌದು ತಕ್ಕಮಟ್ಟಿಗೆ ಇದು ನನ್ನ ಅನುಭವವೂ ಹೌದು.. ಒಂದೇ ವ್ಯತ್ಯಾಸ ಹೇಗೋ ಜೊತೆಯಲ್ಲಿ ನಡೆಯುತ್ತೇನೆ (ವಾಕಿಂಗ್ ಹೋಗುವುದು ಅಪರೂಪ ಆದ್ದರಿಂದ ಅದು ಅಷ್ಟಾಗಿ ಪ್ರಾಮುಖ್ಯತೆ ಪಡೆದಿಲ್ಲ.) ಹೆಜ್ಜೆ ಮೇಲೆ ಹೆಜ್ಜೆ ಇಟ್ಟು.. ಅನ್ನುವ ಪದ ಪುಂಜ ಮತ್ತೆ ಮತ್ತೆ ನನ್ನ ತಲೆಯಲ್ಲಿ ಓಡಿತು.. ತಕ್ಷಣ ಅದರ ಕಾರಣವೂ ತಿಳಿಯಿತು... ನೆನಪಿಗೆ ಬಂದದ್ದು ಆ ಶಿಶು ಗೀತೆ... ಅಥವಾ ಜಾನಪದ ಹಾಡು ಎನ್ನಲೇ?  ಇದೋ ಕೆಳಗಿದೆ ಆ ಸಾಲುಗಳು... ಸಾಧ್ಯವಾದರೆ ಪದ್ಯದ ಧಾಟಿಯಲ್ಲಿ ಓದುವ ಪ್ರಯತ್ನ ಮಾಡಿ... ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆದಳು ಸೀತೆ ಸೀತೆಕಾಲೊಳಗೆ ಪದ್ಮ ರೇಖೆ ನೋಡೆ ಪದ್ಮ ರೇಖೆಯೊಳಗೆ ಚಿನ್ನ ಮೊಳ ನೋಡೆ ಚಿನ್ನ ಮೊಳದೊಳಗೆ ತಿಳಿ ನೀರ್ ನೋಡೆ ತಿಳಿ ನೀರು ಕುಡಿಯಕ್ ಬಂತು ಆನೆಯ ನೋಡೆ ಆನೆಯ ಮೇಲೆ ಅಂಬಾರಿ ನೋಡೆ ಅಂಬಾರಿಯೊಳಗೆ ಅರಸನ್ ಮಕ್ಕಳ್ ನೋಡೆ ಅರಸನ ಮಕ್ಕಳ ಕೈಲಿ ಬೆಳ್ಳಿ ಬಟ್ಲು ನೋಡೇ ಬೆಳ್ಳಿ ಬಟ್ಟಲೊಳಗೆ ಹಾಲು ತುಪ್ಪ ನೋಡೆ ಹಾಲು ತುಪ್ಪ ಕುಡಿಯಕ್ ಬಂತು ಮಾಳ್ ಬೆ...

ಯಾಕೋ ಕಾಣೆ... ಒಂದು ಆತ್ಮಾವಲೋಕನ

Image
  ಯಾಕೋ ಕಾಣೆ ರುದ್ರ ವೀಣೆ ಮಿಡಿಯುತಿರುವುದು ಜೀವದಾಣೆಯಂತೆ ತಾನೇ ನುಡಿಯುತಿರುವುದು.... ದ.ರಾ. ಬೇಂದ್ರೆ ಯವರ ಈ ಕವನದ ಸಾಲುಗಳು ನನ್ನ ಮನಸ್ಸಿನಲ್ಲಾದ ತುಮುಲದ ಪ್ರತೀಕ. ಈ ತುಮುಲವನ್ನು ಅಕ್ಷರ ರೂಪದಲ್ಲಿ ಇಳಿಸಲು ಸರಿಯಾದ ಮಾರ್ಗವೇ ಕಾಣಲಿಲ್ಲ.... ಇನ್ನೂ ಸ್ಪಷ್ಟತೆ ಬಂದಿಲ್ಲ.... ಹಾಗಂತ ಸುಮ್ಮನಿರಲು ಮನಸ್ಸು ಒಪ್ಪುತ್ತಿಲ್ಲ... ಹಾಗಾಗಿ ಈ ಪ್ರಯತ್ನ ಜಾರಿಯಲ್ಲಿದೆ. ಮನಸ್ಸಿನಲ್ಲಿ ಏನೋ ಗೊಂದಲ... ಯೋಚನೆಗಳು ಎಲ್ಲ ಕಲಸು ಮೇಲೋಗರ. ಇದ್ದಕ್ಕಿದ್ದಂತೆ ಮರೆಗುಳಿತನ, ಅಸಮಾಧಾನ, ಕೆಲಸಲ ಕೋಪ.. ಶಕ್ತಿ ಕುಂದಿತೇನೋ ಅನ್ನುವ ಭಾವ, ಜಡತ್ವ, ಸೋಮಾರಿತನ, ಕೆಲಸದಲ್ಲಿ ಅಚ್ಚುಕಟ್ಟಿನ ಕೊರತೆ, ಉತ್ಸಾಹದ ಕೊರತೆ... ಏನು ಮಾಡಲೂ ತೋಚದು...  ಓದಲು ಕುಳಿತಾಗ ಏಕಾಗ್ರತೆಯ ಕೊರತೆ... ಅಬ್ಬಬ್ಬಾ ಎಷ್ಟೊಂದು ನ್ಯೂನತೆಗಳು... ಯಾಕೋ ಕಾಣೆ ನನ್ನ ಸೋದರ ಮಾವ ರಾಮಣ್ಣಯ್ಯನ ನೆನಪು ಹಾಗೂ ಚಿತ್ರಣ ನನ್ನ ಕಣ್ಣ ಮುಂದೆ....  ಇವೆಲ್ಲವನ್ನೂ ಗುರುತಿಸಿಕೊಳ್ಳಲು ಸಾಧ್ಯವಾದದ್ದು ನನ್ನಲ್ಲಿದ್ದ ಆಪ್ತ ಸಮಾಲೋಚಕ. ಇದು ಆಪ್ತ ಸಮಾಲೋಚಕನಾಗಿ ನನಗೆ ಸಿಕ್ಕ ಬಳುವಳಿ... ಹಾಗಂತ ಏನೂ ಕೆಲಸವನ್ನೇ ಮಾಡಿಲ್ಲವಾ ಎಂದು ಯೋಚಿಸಿದಾಗ ನಾನು ಒಪ್ಪಿಕೊಂಡ ಕೆಲಸಗಳು ಎಲ್ಲಾ ನಡೆದಿವೆ... ವಿಶ್ಲೇಷಿಸಿದಾಗ ಅದಕ್ಕೆ ಬೇಕಾದಷ್ಟು ತಯಾರಿ.... ಒಳಗೊಳ್ಳುವಿಕೆ ಕಡಿಮೆ... ಹೇಗೋ ಸಂತೆಯ ಸಮಯಕ್ಕೆ 3 ಮೊಳ ನೇಯ್ದಂತೆ ಸರಿದೂಗಿಸಿದ್ದೇನೆ. ಈ ಎಲ್ಲ ನ್ಯೂನ್ಯತೆಗೆ ಕಾರಣಗಳೇನು ಎ...