Posts

Showing posts from May, 2023

ನನ್ನಮ್ಮ...

Image
ಇವತ್ತು ನನ್ನ ಆತ್ಮೀಯ ಪದ್ಮನಾಭ ಅವರ ಮೊಮ್ಮಗನ ಮದುವೆಯ ಮನೆಯ ಊಟ. ಪಾಯಸದ ವಿಚಾರಣೆ ಸಮಯ. ನಾನು ಪಾಯಸವನ್ನು ಸ್ವಲ್ಪವೇ ಹಾಕಿ ಅಂತ ಕೇಳಿದೆ... ಅದಕ್ಕೆ ಬಡಿಸುವವರು  ಎರಡೇ ತೊಟ್ಟು ಬೀಳುವಂತೆ ಬಡಿಸಿ ತಮಾಷೆಯಾಗಿ ಸಾಕ ಸರ್ ಅಂದರು... ತುಂಬಾ ಖುಷಿಯಾಯಿತು ಅವರ ಹಾಸ್ಯ ಪ್ರಜ್ಞೆಯಿಂದ. ಪಕ್ಕದ ಸ್ನೇಹಿತ ಕೇಳಿದ ಅಷ್ಟೇ ಹಾಕಿಸಿಕೊಳ್ಳುವ ಅವಶ್ಯಕತೆ ಏನಿತ್ತು ಎಂದು ? ಅದಕ್ಕೆ ನನ್ನ ಉತ್ತರ  "ಅಮ್ಮ " .  ಹೌದು ನಾನು ಎಲ್ಲೇ  ಊಟ ಮಾಡಲಿ, ಪಾಯಸ ಬಂದಾಗ ಬೇಡ ಅನ್ನುವುದೇ ಇಲ್ಲ... ಇದಕ್ಕೆ ಕಾರಣ ನನ್ನಮ್ಮ.  ಯಾವ ಸಮಯದಲ್ಲಿ ಹೇಳಿದ್ದೋ ಗೊತ್ತಿಲ್ಲ ಆದರೆ ಅದು ನನ್ನಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ. " ಪಾಯಸ ಬೇಡ್ವಾ , ಅಮ್ಮನ ಮೇಲೆ ಪ್ರೀತಿ ಇಲ್ವಾ, ಪಾಯಸ ಬೇಡ ಅಂದ್ರೆ ನಿಮ್ಮಮ್ಮ ಸತ್ತೋಗ್ತಾಳೆ" ಯಾಕೆ ಹಾಗೆ ಹೇಳಿದಳೋ... ಪ್ರಾಯಶಃ ಮಗ ಪಾಯಸ ತಿನ್ನಲಿ ಎಂದಿರಬೇಕು.... ನನಗೆ ಕೋಪ ಬಂದಿತ್ತು, ದುಃಖ ಆಗಿತ್ತು, ಪಾಯಸ ಹಾಕಿಸಿಕೊಂಡು ತಿಂದದ್ದು ನೆನಪಿದೆ. ಕೋಪ ಮತ್ತು ದುಃಖ ಅಳುವಿನ ರೂಪದಲ್ಲಿ ಅಮ್ಮನ ಮುಂದೆ ಹೊರಹಾಕಿದ್ದು, ಅಮ್ಮ ಮುದ್ದು ಮಾಡಿದ್ದು ಸಹ ನೆನಪಿದೆ... ಇದು ಪಾಯಸದ ಹಿಂದಿನ ಪ್ರಸಂಗ. ಮಾತು ಮುಂದುವರಿದು ಇವತ್ತು mother's day ಅನ್ನುವ ವಿಚಾರ ಹೊರಕ್ಕೆ ಬಂತು. ನನಗೆ ವರ್ಷಕ್ಕೊಮ್ಮೆ ಆಚರಣೆ ಮಾಡುವ ಇಂತಹ ದಿನಗಳು ಅಷ್ಟೇನೂ ಪ್ರಭಾವ ಬೀರಿಲ್ಲ. ಹಾಗಂತ ನಾನು ವಿರೋಧಿಯಲ್ಲ. ಹಾಗಾಗಿ ಅಮ್ಮನ ನೆನಪುಗಳ ಈ...

ಮತದಾನ ನಮ್ಮ ಹಕ್ಕು ಮತ್ತು ಕರ್ತವ್ಯ

Image
  ಇದು ಚುನಾವಣೆಯ ಸಮಯ ಎಲ್ಲೆಲ್ಲೂ ಅದೇ ವಿಷಯ. ಟಿವಿಯಲ್ಲಿ ಅಂತೂ 24 ಗಂಟೆಯೂ ಅದರ ಬಗ್ಗೆಯೇ ಮಾತುಕತೆ. ಇನ್ನು ಜನಸಾಮಾನ್ಯರ ಮಾತಿನಲ್ಲಿ ಚುನಾವಣೆಯ ವಿಚಾರ ಬರದೇ ಇರುವುದು ಸಾಧ್ಯವೇ ಇಲ್ಲ. ರಾಜ ಯಾರಾದರೇನು ರಾಗಿ ಬೀಸುವುದು ತಪ್ಪಲಿಲ್ಲ ಎನ್ನುವುದು ಒಂದು ನಾಣ್ಣುಡಿ... ಆದರೆ ಪ್ರಜಾಪ್ರಭುತ್ವದಲ್ಲಿ ರಾಜನನ್ನು ಆರಿಸುವುದು ನಮ್ಮ ಜವಾಬ್ದಾರಿ.  ಈಚೆಗೆ ಸ್ನೇಹ ಸೇವಾ ಟ್ರಸ್ಟ್ ನಡೆಸಿದ ಮಕ್ಕಳಿಗಾಗಿ ಬೇಸಿಗೆ ಶಿಬಿರದಲ್ಲೂ ಸಹ ಚುನಾವಣೆಯ ವಿಷಯ ರಿಂಗಣಿಸಿತು.  ಆದರೆ ಮಕ್ಕಳು ಮಾಡಿದ್ದು ಚುನಾವಣೆಯ ಬಗ್ಗೆ ಜಾಗೃತಿ. ಮಕ್ಕಳಿಗೆ ಈ ವರ್ಷವೂ ಒಂದು ಕಿರು ನಾಟಕವನ್ನು ಮಾಡಲು ಉಮೇದು. ಕಿರು ನಾಟಕದ ವಿಷಯ " ಮತದಾನ ನಮ್ಮ ಹಕ್ಕು ಮತ್ತು ಕರ್ತವ್ಯ,  ಆಮಿಷಕ್ಕೆ ಒಳಗಾಗಿ ಮತದಾನ ಮಾಡಬಾರದು".  ದಿವ್ಯ ಮತ್ತು ಅಶ್ವಿನಿ ಪಿಯುಸಿ ಓದುತ್ತಿರುವ ಹುಡುಗಿಯರು, ಈ ವಿಷಯವನ್ನು ತಮ್ಮದೇ ರೀತಿಯಲ್ಲಿ ರೂಪ ಕೊಟ್ಟು ಮಕ್ಕಳನ್ನು ತಯಾರಿ ಮಾಡಿದರು.  ಮಕ್ಕಳ ಉತ್ಸಾಹ ಹೇಳತಿರದು. ಒಂದು ವಾರದ ಅವಧಿಯಲ್ಲಿ ಅವರು ಮಾಡಿದ ಪ್ರಯತ್ನ ಯಶಸ್ವಿ ಆಯಿತು ಎಂದು ಹೇಳಲೇಬೇಕು. ಆದರೆ ಈ ವಿಷಯ ಎಷ್ಟು ಜನದ ಮೇಲೆ ಪ್ರಭಾವ ಬೀರಿ ಬದಲಾವಣೆ ತರಲಿದೆ ಎನ್ನುವುದು ಮಾತ್ರ ಆಶಾಭಾವ. ಈ ಕಿರು ನಾಟಕ ನನ್ನ ಹಳ್ಳಿಯ ದಿನಗಳನ್ನು ನೆನಪಿಸಿತು. ನಾನು ಓದುತ್ತಿದ್ದದ್ದು 5ನೇ ತರಗತಿಯಲ್ಲಿ (1957 ರ ಸಾರ್ವತ್ರಿಕ ಚುನಾವಣೆ ಅಂತ ಈಗ ಹೇಳಬಲ್ಲೆ). ನಮ್ಮೂರಲ್ಲೂ ಚ...