Posts

Showing posts from April, 2023

ಅನ್ನಂ ನ ನಿಂದ್ಯಾತ್..ತದ್ ವ್ರತಂ

Image
  ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂದು ಹೇಳಿದ್ದಾರೆ ದಾಸ ವರೇಣ್ಯ ಪುರಂದರ ದಾಸರು. ಹೊಟ್ಟೆಗೆ ಮೊದಲ ಆದ್ಯತೆ.. ಹೊಟ್ಟೆ ತುಂಬಲು ಬೇಕು ಅನ್ನ / ಆಹಾರ.  ಅಗುಳು, ಅಗುಳಿನ ಮೇಲು ತಿನ್ನುವವನ ಹೆಸರು ಬರೆದಿದೆ ಎನ್ನುವುದು ಒಂದು ಜಾಣ್ನುಡಿ.  ಅನ್ನಂ ಪರಬ್ರಹ್ಮ ಎಂದು ಹೇಳಿದ್ದಾರೆ ಹಿರಿಯರು.. ಅನ್ನ ನಮ್ಮ ಜೀವನಕ್ಕೆ ಬೇಕಾದ ಶಕ್ತಿಯನ್ನು ಕೊಡುವ ಮೂಲವಸ್ತು ಹಾಗಾಗಿ ಅದನ್ನು ದೇವರಿಗೆ ಹೋಲಿಸಿದ್ದಾರೆ.  ಜೊತೆಗೆ ಅನ್ನಂ  ನ ನಿಂದ್ಯಾತ್..ತದ್ ವ್ರತಂ... ಅಂತಲೂ ಹೇಳಿದ್ದಾರೆ... ಅಂದರೆ ಅನ್ನಕ್ಕೆ       ಅಗೌರವ ತೋರಿಸಬೇಡ, ಹಾಳು ಮಾಡಬೇಡ... ಅದೊಂದು ವ್ರತ. ನಾನು ಚಿಕ್ಕವನಿದ್ದಾಗ ಊಟ ಮಾಡುವಾಗ ತಟ್ಟೆಯಲ್ಲಿ ಅನ್ನವನ್ನು/ ತಿನ್ನುವ ಪದಾರ್ಥವನ್ನು ಬಿಟ್ಟರೆ ಅದನ್ನು ನನ್ನ ತಲೆಗೆ ಕಟ್ಟುತ್ತೇನೆ ಎಂದು ನಮ್ಮಪ್ಪ ಹೇಳುತ್ತಿದ್ದರು ... ಹಾಗಾಗಿ ನನಗೆ ಆಹಾರ ಪದಾರ್ಥವನ್ನು ಚೆಲ್ಲಬಾರದು ಎಂಬ ಮಾತು ಮನಸ್ಸಿನಲ್ಲಿ ಭದ್ರವಾಗಿ ಮೂಡಿದೆ. ಅಕ್ಕಿಗೆ ಕಷ್ಟವಾಗಿದ್ದ ಕಾಲ.. ಆಗ ಮನೆಯಲ್ಲಿ ಹೇಳುತ್ತಿದ್ದ ಒಂದು ಮಾತು “ಹೊಟ್ಟೆ ತುಂಬಾ ಹಿಟ್ಟು, ಬಾಯಿ ತುಂಬಾ ಅನ್ನ" . ಅಂದಿನ ದಿನಗಳಲ್ಲಿ, ಯಾವ ಕಾರಣಕ್ಕೂ ಅನ್ನವನ್ನು ಬೀದಿಗೆ ಎಸೆಯುತ್ತಿರಲಿಲ್ಲ.... ಕಲಗಚ್ಚಿನ ಬಾನಿಯಲ್ಲಿ ಹಾಕಿದರೆ ಅದನ್ನು ಹಸು ಎಮ್ಮೆಗಳು ಕುಡಿಯುತ್ತಿದ್ದವು. ಭತ್ತಕುಟ್ಟಿದಾಗ, ಹೊಟ್ಟನ್ನು ಜರಡಿ ಮಾಡಿ ಉಳಿದ ...

ನಾಟಕದ ಪ್ರಸಂಗಗಳು....

Image
  ನಾಲ್ಕಾರು ದಿನಗಳ ಹಿಂದೆ ನನ್ನ ಮಗಳು ಹಳೆಯ ಫೋಟೋ ಆಲ್ಬಮ್ ಹರಡಿಕೊಂಡು ಖುಷಿಪಡುತ್ತಿದ್ದಳು, ನನ್ನನ್ನು ಕರೆದು ಒಂದು ವಿಶೇಷ ಆಲ್ಬಮ್ ಅನ್ನು ಕೊಟ್ಟಳು.... ಅದು ಸುಮಾರು ಹತ್ತು ವರ್ಷಕ್ಕೂ ಹಿಂದಿನದು, ನಾವು ಮಾಡಿದ ಒಂದು ನಾಟಕದ ಚಿತ್ರಗಳು. ನನ್ನ ಗೆಳೆಯ ವಾಸುವಿನ  "ಮಾವಿನಕೆರೆ ಬಬ್ಬೂರು ಕಮ್ಮೆ ಅಸೋಸಿಯೇಷನ್" ಅವರ ಒಂದು ಮಿಲನದ ಸಂದರ್ಭ.  ಅಮೆರಿಕದಲ್ಲಿ ವಾಸವಾಗಿರುವ ಶ್ರೀ ಶಂಕರನಾರಾಯಣ್,  ಶ್ರೀ ಪ್ರಸಾದ್  ಹಾಗೂ ನಮ್ಮ ವಾಕಿಂಗ್ ಗೆಳೆಯರು ಸೇರಿ ಮಾಡಿದ ಒಂದು ನಾಟಕ "ಶ್ರೀಕೃಷ್ಣ ಸಂಧಾನ". ಆ ದಿನಗಳು ತುಂಬಾ ಸಂತೋಷದಾಯಕವಾಗಿತ್ತು. ಆ ಫೋಟೋಗಳನ್ನು ನೋಡುತ್ತಾ ನನ್ನ ಮನಸ್ಸು ಹಳೆಯ ಕಾಲದ ನಾಟಕಗಳ ಸಂದರ್ಭಗಳನ್ನು ನೆನೆಸಿಕೊಳ್ಳಲು ಪೂರಕವಾಗಿತ್ತು... ಮುದ ಕೊಟ್ಟಿತ್ತು. ಆ ನೆನಪುಗಳ ಸರಮಾಲೆಯನ್ನು ಅಕ್ಷರ ರೂಪದಲ್ಲಿ ಇಳಿಸುವ ಪ್ರಯತ್ನ ನನ್ನದು. " ಮೂರುವರೆ ನಾಟಕದ ಕಲಾವಿದರು" ಎಂಬ ಹೆಸರು ಪಡೆದ ನಮ್ಮ ಶಹಾಬಾದ್ ಬ್ರಹ್ಮಚಾರಿಗಳ ತಂಡ. ನಮ್ಮ ತಂಡ ಶಹಾಬಾದಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಮಾಡಬೇಕೆಂದು ನಿರ್ಧರಿಸಿ ಪ್ರತಿ ವರ್ಷ ನಾಟಕ ಮತ್ತಿತರ ಮನರಂಜನೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದೆವು. ಹೀಗಿದ್ದಾಗ ಶಹಾಬಾದಿನ ಪಟ್ಟಣದ ನಾಡಹಬ್ಬದ ಕಾರ್ಯಕ್ರಮದಲ್ಲಿ ನಮ್ಮ ತಂಡಕ್ಕೆ ಭಾಗವಹಿಸಲು ಹೇಗೋ ಒಂದು ಅವಕಾಶ ಸಿಕ್ಕಿತ್ತು. ನಮಗೆ ಅತಿ ಉತ್ಸಾಹ, ಜನಸ್ತೋಮ ನೋಡಿ ಆ ಉತ್ಸಾಹಕ್ಕೆ ಮತ್ತಷ್ಟು ಇ...