Posts

Showing posts from December, 2022

ಯೋಗಾ ಯೋಗ - Narrow gauge train ಇಂದ ವಿಮಾನಯಾನದ ವರೆಗೆ

Image
30 Dec 2022  2022ರ ಕೊನೆಯ ವಾರ ಒಂದು ವಿಶಿಷ್ಟ ಅನುಭವ. 33 ಜನರೊಡನೆ... ಅದರಲ್ಲೂ ಅಕ್ಕತಂಗಿಯರು ಅಣ್ಣ ತಮ್ಮಂದಿರು ಮತ್ತು ಅವರ ಮಕ್ಕಳು ಮೊಮ್ಮಕ್ಕಳೊಡನೆ ವಿಮಾನಯಾನ. ಸಂದರ್ಭ ನಮ್ಮಪ್ಪನ ಹಿರಿಯ ಮೊಮ್ಮಗ ರವಿ ಹಾಗೂ ವಿನುತಾ ದಂಪತಿಯ ಮೊದಲ ಮಗಳ ಮದುವೆಯ ನಿಶ್ಚಿತಾರ್ಥ ದೂರದ ಕಲ್ಬುರ್ಗಿಯಲ್ಲಿ. ಮೈಸೂರಿನ ಹುಡುಗಿ... ಕಲ್ಬುರ್ಗಿಯ ಹುಡುಗ.. ಇದೇ ಅಲ್ಲವೇ ಋಣಾನುಬಂಧ. ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತ ಣಿಂದೆತ್ತ ಸಂಬಂಧವಯ್ಯಾ.. ಎಷ್ಟು ಸತ್ಯ ಅಲ್ಲವಾ? ಮೂರು ದಿನದ ನಮ್ಮ ಕಾರ್ಯಕ್ರಮ ವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದವರು ರವಿ ವಿನುತಾ ದಂಪತಿ.... ಅತ್ತ ಕಲ್ಬುರ್ಗಿಯ ಶ್ರೀಮತಿ ಆರತಿ ಹಾಗೂ ಡಾಕ್ಟರ್ ಅರುಣ್ ಕುಮಾರ್ ಕುಲಕರ್ಣಿ ದಂಪತಿಗಳ ಆದರ ಆತಿಥ್ಯವು ಕಲ್ಬುರ್ಗಿಯ ಬಿಸಿಲಿನ ನಡುವೆಯೂ ನಮ್ಮನ್ನು ತಂಪಾಗಿರಿಸಿತ್ತು. ಇಷ್ಟು ದೊಡ್ಡ ನಮ್ಮವರ ಗುಂಪಿನಲ್ಲಿ ಪ್ರಯಾಣ ಮಾಡಿದ ಅನುಭವ ಬಹು ವರ್ಷಗಳ ನಂತರ ಸಿಕ್ಕಿತ್ತು. ಕಾರ್ಯಕ್ರಮ ಮುಗಿದು ನೆನ್ನೆ ಬೆಂಗಳೂರಿಗೆ ಬಂದೆವು... ವಿಮಾನ ನಿಲ್ದಾಣದಿಂದ ನಾನು ಮತ್ತು ನನ್ನಾಕೆ ವಿಜಯ, ನಮ್ಮ ಮನೆಗೆ ಬರುವ ಹಾದಿಯಲ್ಲಿ ಮತ್ತೆ ಸಿಕ್ಕಿದ್ದು ನನ್ನೂರು, ನಾ ಹುಟ್ಟಿದ ಊರು ದೊಡ್ಡ ಜಾಲ. ಈ ಸಲ ಸಮಯ ನನ್ನ ಪರವಾಗಿತ್ತು.. ಜೊತೆಯಲ್ಲಿದ್ದ taxi driver ಸಹ ನನ್ನ ಪರವಾಗಿದ್ದ,  ಹಾಗಾಗಿ ನನ್ನೂರಿನಲ್ಲಿ ಸಮಯ ಕಳೆಯುವ ಒಂದು ಅವಕಾಶ ಸಿಕ್ಕಿತ್ತು.  ಕೆಲ ಬೀದಿಗಳಲ್ಲಿ ಓಡಾಡಿ ಹಳೆಯ ...

ಪ್ರಕೃತಿಯ ಕೋಪ - ಮನುಷ್ಯನಿಗೆ ಶಾಪ

 ಪ್ರಕೃತಿಯ ಕೋಪ - ಮನುಷ್ಯನಿಗೆ ಶಾಪ ಈ ಕೆಳಗಿರುವ ವಿಡಿಯೋ ಲಿಂಕ್ ಅನ್ನು ಓಪನ್ ಮಾಡಿ ನೋಡಿ. ಇದು ವಾಟ್ಸಪ್ ಮೂಲಕ ಬಂದ ಒಂದು ವಿಡಿಯೋ ತುಣುಕು. https://drive.google.com/file/d/19oncxtl8jndBDDrjkXBbzYss06nW-kxD/view?usp=drivesdk     ಇದು ಇಂಡೋನೇಷ್ಯಾದಲ್ಲಿ ಆದ ಭೂಕಂಪವನ್ನು ಸ್ಯಾಟಿಲೈಟ್ ಮೂಲಕ ತೆಗೆದ ಚಿತ್ರಣ. ಇದರಲ್ಲಿ ಸಾಲು ಸಾಲು ಮನೆಗಳು ಕೊಚ್ಚಿಕೊಂಡು ಹೋಗುವ ದೃಶ್ಯ ಮನ ಕಲಕುವಂತಿದೆ. ವಿಡಿಯೋ ಚಿತ್ರಣ ತುಂಬಾ ಸ್ಪಷ್ಟವಾಗಿ ಕಾಣುತ್ತದೆ. ಇಲ್ಲಿ ನನಗೆ ಕಂಡದ್ದು ಪ್ರಕೃತಿಯ ಕೋಪದ ಒಂದು ಮುಖ ಹಾಗೂ ಮನುಷ್ಯನು ಸಾಧಿಸಿರುವ ಟೆಕ್ನಾಲಜಿಯ ಆವಿಷ್ಕಾರದ ಇನ್ನೊಂದು ಮುಖ. ವಿಪರ್ಯಾಸ ಎಂದರೆ ಈ ಪ್ರಕೃತಿಯ ಕೋಪಕ್ಕೆ ಕಾರಣ ಬಹುತೇಕ ಮನುಷ್ಯನ ದುರಾಸೆ... ಹಾಗೂ ಅವನು ಪ್ರಕೃತಿಯ ಮೇಲೆ ಮಾಡುತ್ತಿರುವ ಹಲ್ಲೆ.. ಹಾಗೆ ಮನುಷ್ಯನು ತನ್ನ ಜ್ಞಾನ/ ವಿಜ್ಞಾನ ಬೆಳವಣಿಗೆಯ ಸಹಾಯದಿಂದ ತನ್ನಿಂದಾದ ಅನಾಹುತವನ್ನು ತಾನೇ ಚಿತ್ರಣ ಮಾಡಿ ಜಗತ್ತಿಗೆ ತೋರಿಸುತ್ತಿರುವ ಪರಿ. ಮನುಷ್ಯನ ಜೀವನವು ಒಂದಲ್ಲ ಒಂದು ರೀತಿಯಲ್ಲಿ ಪ್ರಕೃತಿಯ ಜೊತೆಗೆ ಬೆಸೆದುಕೊಂಡಿದೆ. ನೀರು, ಗಾಳಿ, ಕಾಡುಗಳು, ಭೂಗರ್ಭದಲ್ಲಿರುವ ಖನಿಜಗಳು, ಇವೆಲ್ಲವೂ ಮನುಷ್ಯನ ಬೆಳವಣಿಗೆಗೆ ಪೂರಕವಾಗಿವೆ. ಮನುಷ್ಯ ಇದನ್ನು ಅತಿಯಾಗಿ ಬಳಸಿ ಸಮತೋಲನವನ್ನು ಹಾಳು ಮಾಡಿ ತನ್ನ ನಾಶಕ್ಕೆ ತಾನೇ ಕಾರಣನಾಗುತ್ತಿದ್ದಾನೆ. ಕಾಡನ್ನು ಕಡಿದು ನಾಡನ್ನು ಮಾಡುವ ಕೆಲಸ ಇಂದು ನೆನ...