Posts

Showing posts from November, 2022

ಒಂದು ಸಾವಿನ ಸುತ್ತ..

 ಒಂದು ಸಾವಿನ ಸುತ್ತ.. ಯಾವಾಗಿನಂತೆ ನನ್ನ ಸರದಿ ಯಾದ ಸೋಮವಾರದಂದು ಅಶಕ್ತ ಪೋಷಕ ಸಭಾಗೆ ಹೋದೆ. ಪ್ರವೇಶ ದ್ವಾರದಿಂದಲೇ ವಾತಾವರಣ ಗಂಭೀರವಾಗಿದ್ದು... ಅಲ್ಲೊಂದು ಆಂಬುಲೆನ್ಸ್ ಬಂದು ನಿಂತಿತ್ತು.  ಯಾರಿಗೋ ಆರೋಗ್ಯ ತಪ್ಪಿರಬಹುದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ವಾಹನ ಬಂದಿರಬಹುದು ಅಂದುಕೊಂಡು ಹತ್ತಿರ ಹೋಗಿ ನೋಡಿದಾಗ ಅದು ಶವವನ್ನು ಸಾಗಿಸುವ ವಾಹನವಾಗಿತ್ತು. ವಿಚಾರಿಸಿದಾಗ ಒಬ್ಬ ಹೆಣ್ಣು ಮಗಳು ಸಾವನ್ನಪ್ಪಿದ್ದಾರೆಂದು ತಿಳಿಯಿತು. ಹೆಸರು ನಾಗರತ್ನಮ್ಮ ಒಂದು ಕ್ಷಣ ನನಗೆ ಮುಖದ ನೆನಪು ಬರಲಿಲ್ಲ. ಒಂದೆರಡು ಮಾತುಗಳ ನಂತರ ನನಗೆ ಹೊಳೆಯಿತು ಅದು ಬಿ ಆರ್ ನಾಗರತ್ನಮ್ಮ ಅಂತ. ಸಾಕಷ್ಟು ಬಾರಿ ಮಾತನಾಡಿದ ನೆನಪಾಯಿತು. ಇಚೀಚೆಗೆ ನೋಡಿರಲಿಲ್ಲ. ಇಂಥ ಸಮಯದಲ್ಲಿ ಲೋಕಾಭಿರಾಮವಾಗಿ ಮಾತನಾಡುವುದು ಸರಿ ಅನ್ನಿಸಿ ನಿವಾಸಿಗಳೊಡನೆ ಅವರ ಭಾವನೆಗಳನ್ನು ತಿಳಿಯಲು ಪ್ರಯತ್ನಿಸಿದೆ. ಕೆಲ ಅಭಿಪ್ರಾಯಗಳು ಹೀಗಿತ್ತು: " ತುಂಬಾ ಸಕ್ಕರೆ ಕಾಯಿಲೆ ಇತ್ತು.. ಆದರೆ ಹೇಳಿದ ಮಾತು ಕೇಳುತ್ತಿರಲಿಲ್ಲ... ತಿನ್ನುವುದರ ಮೇಲೆ ಹತೋಟಿ ಇರಲಿಲ್ಲ" " ಓಡಾಡಕ್ಕೆ ಆಗ್ತಿರಲಿಲ್ಲ ತುಂಬಾ ಕಷ್ಟಪಡುತ್ತಿದ್ದರು" " ಹೋಗ್ಲಿ ಬಿಡಿ ತುಂಬಾ ನರಳಲಿಲ್ಲ.. ಗೆದ್ದಳು" " ನೆನೆಸಿಕೊಂಡರೆ ಭಯ ಆಗುತ್ತೆ ನಮಗೇನು ಕಾದಿದಿಯೋ ಅಂತ" " ಒಂದಲ್ಲ ಒಂದು ದಿವಸ ಸಾಯಬೇಕಲ್ವಾ?" "ಎಲ್ಲರೂ ಹೋಗೋದೇ.. ಅವರು ಇವತ್ತು ...

ಇಬ್ಬರ ಜಗಳ ಮೂರನೆಯವನಿಗೆ ಲಾಭ

Image
ಕೋತಿ ಕಜ್ಜಾಯಕ್ಕಾಗಿ ಜಗಳವಾಡುತ್ತಿದ್ದ ಎರಡು ಬೆಕ್ಕುಗಳಿಗೆ ನ್ಯಾಯ ಕೊಡುವ ಸೋಗಿನಲ್ಲಿ ಕಜ್ಜಾಯವನ್ನು ತಾನೇ ತಿಂದ ಕಥೆ ನಾನು ಚಿಕ್ಕಂದಿನಲ್ಲಿದ್ದಾಗ ಓದಿದ್ದೆ. ಬಹುತೇಕ ನೀವೆಲ್ಲರೂ ಓದಿದ್ದೀರಿ ಅಥವಾ ಕೇಳಿದ್ದೀರಿ.  ನೆನ್ನೆ ಭಾನುವಾರ ನನಗೊಂದು ವಿಶಿಷ್ಟ ಅನುಭವವಾಯಿತು ಅದಕ್ಕಾಗಿ ಈ ಕಥೆ ಹಾಗೂ ನುಡಿಗಟ್ಟು ನೆನಪಿಗೆ ಬಂತು.  ಬಹು ಅಪರೂಪವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಬೇಕಾದ ಪ್ರಸಂಗ ನಡೆಯಿತು. ಮೂಲ ಕಾರಣ ನನ್ನ ಕಾರಿನ ಚಕ್ರದ ಗಾಳಿಯನ್ನು ನಾನು ನಿಲ್ಲಿಸಿದ್ದ ಜಾಗದಲ್ಲಿ ಯಾರೋ ತೆಗೆದಿದ್ದು.. ಅದೂ ನಾನು ಹೋದ ನಮ್ಮ ಇಷ್ಟರ ಮನೆಯ ಬಳಿ. ನನ್ನ ಕಾರಿನ ಜೊತೆಗೆ ಮತ್ತೆರಡು ಕಾರುಗಳ ಗಾಳಿಯನ್ನು ತೆಗೆಯಲಾಗಿತ್ತು. ಈ ವಿಚಾರವಾಗಿ ನನ್ನ ಇಷ್ಟರ ಮನೆಯ ಮಕ್ಕಳು ಹಾಗೂ ಅವರ ನೆರೆಯವರು (ನೆರೆ ಹೊರೆ ಎನ್ನಲೇ?) ಮತ್ತು   ಇತರ ಕಾರಿನವರ ಮಧ್ಯೆ ವಾದ ವಿವಾದಗಳಾಯ್ತು.. ಅದು ನಮ್ಮನ್ನು ಪೊಲೀಸ್ ಠಾಣೆಯವರೆಗೂ ಕರೆದು ಕೊಂಡು ಹೋಯಿತು. ಜಗಳ ಎಂದ ಮೇಲೆ ಎಲ್ಲರೂ ಅವರವರನ್ನು ಸಮರ್ಥಿಸಿಕೊಳ್ಳುವುದು ಸಹಜ.. ಇಲ್ಲೂ ಅದೇ ನಡೆಯಿತು.. ಪೊಲೀಸ್ ಠಾಣೆಯಲ್ಲೂ ಮುಂದುವರೆಯಿತು. ಠಾಣೆಗೆ ಹೋದ ಎರಡು ಬಣಗಳು ಯಾವುದಕ್ಕೂ ಜಗ್ಗದೆ ತಮ್ಮದೇ ವಾದಗಳನ್ನು ಮುಂದಿಟ್ಟು ಮಾತನಾಡಿದ್ದಾಯ್ತು. ನಾನು ಅರ್ಧಪ್ರೇಕ್ಷಕ ಮತ್ತು ಅರ್ಧ ಭಾಗಿದಾರ. ಆ ಸಂದರ್ಭದಲ್ಲಿ ಬಾಯೊಣಗಿ ಮಾತಾಡಲಾಗದ ಪರಿಸ್ಥಿತಿ.. ಸ್ವಲ್ಪ ನೀರು ಕುಡಿದು ಚೇತರಿಸಿಕೊಂಡೆ. ಠಾಣಾಧಿಕಾರಿಯ ನ...

ಉತ್ಥಾನ ದ್ವಾದಶಿ ಟ್ರಿಪ್.

 ಉತ್ಥಾನ ದ್ವಾದಶಿ ಟ್ರಿಪ್. ಹೆಸರಲ್ಲೇ ಏನೋ ವಿಶೇಷ ಕಾಣಿಸ್ತಾ... ಹೌದು ಕಾರಣ ಇದೆ. ದೊಡ್ಡಪ್ಪ (ನನ್ನ ಮಾವನವರ ಅಣ್ಣ)... ನಮಗೆಲ್ಲ ತುಂಬಾ ಪ್ರೀತಿ ಪಾತ್ರರಾಗಿದ್ದವರು... ಅವರು ಶಿವನಪಾದ ಸೇರಿ ಒಂದು ವರ್ಷ  ಕಳೆದು ಶ್ರಾದ್ಧ ಕಾರ್ಯಕ್ರಮಗಳು ನಡೆದಾಗ ಎಲ್ಲಾ ಕುಟುಂಬದ ಸದಸ್ಯರು ಒಟ್ಟಿಗೆ ಸೇರಿದ್ದೆವು. ಆಗಿನ ಮಾತುಕತೆಯ ವೇಳೆ ಆದ ನಿರ್ಧಾರ ...ಎಲ್ಲರೂ ಒಟ್ಟಿಗೆ ಹೋಗಿ ವರ್ಷಗಳೇ ಕಳೆದಿವೆ, ಏನಾದರೂ ಮಾಡಬೇಕು ಅನ್ನುವ ಒಂದು ಅಭಿಪ್ರಾಯ ಹೊಮ್ಮಿತು. ತಕ್ಷಣವೇ ಕಿರಿಯರ ಒಂದು ಗುಂಪು ಕಾರ್ಯಪ್ರವೃತ್ತವಾಯಿತು ಮತ್ತು ನವಂಬರ್ ಐದು ಮತ್ತು ಆರನೇ ತಾರೀಕು ಹೋಗಲು ನಿಶ್ಚಯಿಸಿತು. ಹಿರಿಯ ತಲೆಗಳು ಒಂದೆರಡು ಯೋಚಿಸಿ ಅದು ಉತ್ಥಾನ ದ್ವಾದಶಿ ದಿನವಾದ್ದರಿಂದ ತುಳಸಿ ಪೂಜೆ ಮಾಡಬೇಕು.. ಹಾಗಾಗಿ ಕಷ್ಟ ಎಂಬ ಸಬೂಬು  ಬಂತು. ತಕ್ಷಣವೇ ತುಳಸಿಯ ಗಿಡವನ್ನು ತೆಗೆದುಕೊಂಡು ಹೋಗಿ ಅಲ್ಲಿಯೇ ಪೂಜೆ ಮಾಡುವುದೆಂದು ತರಲೆ ಸೂಚನೆಯೊಂದು ಬಂತು. ಹೇಗೋ ಎಲ್ಲರೂ ಒಪ್ಪಿದ್ದಾಯಿತು ತಕ್ಷಣವೇ ಕೊಟ್ಟ ಹೆಸರು  "ಉತ್ಥಾನ ದ್ವಾದಶಿ ಟ್ರಿಪ್"... ಆಗಲೇ ವಾಟ್ಸಪ್ ಗ್ರೂಪೊಂದು ಶುರುವಾಯಿತು.. ಏನೆಲ್ಲ ಮಾತುಕತೆಗಳು... ತರಲೆಗಳು ಸೇರಿ... ಸಂವಾದ ಗಳು ನಡೆದು ಕೊನೆಗೂ ಸಂಭವಿಸಿದ್ದೇ "ಉತ್ಥಾನ ದ್ವಾದಶಿ ಟ್ರಿಪ್." ನವಂಬರ್ ಐದನೆಯ ತಾರೀಕು ಬೆಳಿಗ್ಗೆ 9:30 ಗಂಟೆಗೆ  PES  ಹತ್ತಿರ ನೈಸ್ ರಸ್ತೆಯ ಟೋಲ್ ಎದುರು ಎಲ್ಲರೂ ಸೇರಬೇಕೆಂದು  ನಿರ...