Posts

Showing posts from January, 2025

ಕೊನೆಯ ಆಸೆ - Last wish

Image
  ಕೊನೆಯ ಆಸೆ - Last wish (will) ನನ್ನ ಬ್ಲಾಗ್  ಲೇಖನ “ನನಸಾಗದ ಕನಸುಗಳು.. ಕೈಗೂಡದ ಆಸೆಗಳು” ಓದಿದ ಶ್ರೀಮಾನ್ ಗುಂಡೂರಾಯರ ಪ್ರತಿಕ್ರಿಯೆ ಕೆಳಗಿನಂತಿತ್ತು: ಕೆಲ ದಿನಗಳ ನಂತರ ಮತ್ತೊಮ್ಮೆ ನಾ ಬರೆದ ಲೇಖನವನ್ನು... ನಾನೇ ಓದಿದೆ.. ಅಮ್ಮನ ಬಗ್ಗೆ ಬರೆದದ್ದನ್ನು ಬಿಟ್ಟರೆ... ಭಾವವನ್ನು ಪ್ರಚೋದಿಸುವ ಯಾವ ಅಂಶವು ಬೇರೆಲ್ಲೂ ನನಗೆ ಕಾಣಲಿಲ್ಲ.. ಅಂದಿನ ಕಾಲಕ್ಕೆ ಕೆಲವು ವಿಚಾರದಲ್ಲಿ ನಿರಾಶೆಯಾಗಿದ್ದರೂ... ಕಾಲಕ್ರಮೇಣ ವಸ್ತು ಸ್ಥಿತಿಯನ್ನು ಒಪ್ಪಿಕೊಂಡದ್ದರಿಂದ ನಿರ್ಲಿಪ್ತ ಭಾವನೆ ಇತ್ತು. ಇನ್ನು ಕೆಲವೊಂದು ತಿಕ್ಕಲುತನಗಳು.. ಯಾವ ಭಾವ ಹೊಮ್ಮಲು ಸಾಧ್ಯ ಇತ್ತು? ಲೇಖನ ಬರೆದ ಆಗಿನ ಭಾವನೆಗಳು ಮಾತ್ರ ಅಲ್ಲಿ ಹೊರ ಹೊಮ್ಮಿದೆ.  ಗುಂಡೂರಾಯರ ಅಭಿಪ್ರಾಯಕ್ಕೆ ನನ್ನ ಸಂಪೂರ್ಣ ಗೌರವವಿದೆ.. ಅದನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಆಶ್ವಾಸನೆ ಕೊಡಬಲ್ಲೆ. ನಿಮ್ಮ ಅಭಿಪ್ರಾಯಕ್ಕೆ ನನ್ನ ನಮನಗಳು ಸರ್. ಇನ್ನು ಎರಡನೆಯ ಭಾಗಕ್ಕೆ ಬಂದಾಗ..  ಇದೇ ಶೀರ್ಷಿಕೆಯಲ್ಲಿ ಎರಡನೇ ಪ್ರಬಂಧ  ಬರೆಯುವ ಸಲಹೆ. ಇದು ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿತು. “once more ಎಂದರೆ ಹಾಡುವುದು ಪಾತ್ರದಾರನ ಮರ್ಜಿ" ಎಂದು ಪ್ರಕಟಿಸಿದ್ದ ನಾಟಕದ ಕರಪತ್ರ... ಶಹಾಬಾದಿನಲ್ಲಿ ಓದಿದ್ದು ನೆನಪಿಗೆ ಬಂದು.. ಆ ಸಾಲನ್ನೇ ಉಪಯೋಗಿಸಿ ಎರಡನೇ ಪ್ರಬಂಧವನ್ನು ಬರೆಯಲು ತಪ್ಪಿಸಿಕೊಳ್ಳೋಣವೇ ಎಂದು ಯೋಚಿಸಿದ್ದು ಉಂಟು. ಹಾಗೆ ಮಾಡಲು ಮನಸ...

ಜೀವನದ ಸಹ ಪ್ರಯಾಣಿಕರು

Image
ಸಾವಿನ ಚಿಂತನೆಯ ಬಳಿಕ ಜೀವನದ ಬಗ್ಗೆ ಮುಖ ಮಾಡುವುದು ಅನಿವಾರ್ಯ... ಅಪೇಕ್ಷಣೀಯ  ಸಹ. ಆ ಗುಂಗಿನಲ್ಲಿ.. ಸತ್ತ ಹಿರಿಯರು ಹಾಗೂ ಸಮಕಾಲೀನರ ನೆನಪುಗಳೇ ಒಂದರ ಹಿಂದೆ ಒಂದು ಓಡುತ್ತಿದ್ದವು.. ಅದನ್ನು ಹತೋಟಿಗೆ ತರಲು ಹೆಣಗಾಡುತ್ತಿದ್ದಾಗ, ಪ್ರಯತ್ನಪೂರ್ವಕವಾಗಿ ನೆನೆಸಿಕೊಂಡದ್ದು ಬದುಕಿರುವ ವ್ಯಕ್ತಿಗಳನ್ನು... ಜೊತೆ ಜೊತೆಗೆ ಬಂದದ್ದು ನನ್ನ ಜೀವನದ ಪಯಣದಲ್ಲಿ ಇಣುಕಿ ಹೋದ ಕೆಲ ವ್ಯಕ್ತಿಗಳ ನೆನಪು. ಅವರ ಜೊತೆ ಕಳೆದ ಕ್ಷಣಗಳು ಕೆಲವೇ ಆದರೂ.. ನನ್ನ ಮನಸಿನಲ್ಲಿ  ಅಚ್ಚಳಿಯದೆ ಉಳಿದಿರುವ  ಅವರುಗಳ ನೆನಪು ಬಂತು. ಇಲ್ಲಿದೆ ಅಪರೂಪದ ವ್ಯಕ್ತಿಗಳ ಪರಿಚಯ... . ಚನ್ನಬಸಪ್ಪ: ನನ್ನೂರು ದೊಡ್ಡಜಾಲ ಬಿಟ್ಟು ಬೆಂಗಳೂರಿಗೆ ಬಂದು... ರಾಷ್ಟ್ರೀಯ ವಿದ್ಯಾಲಯ ಹೈಸ್ಕೂಲಿಗೆ ಸೇರಿದ ಹೊಸದು. ವಾತಾವರಣವೂ ಹೊಸದು, ಜನಗಳೂ ಹೊಸಬರು.  "ಢಣ ಢಣ ಢಣಾ" ಎಂದು ಶಬ್ದ ಬರುತ್ತಿದ್ದ ಶಾಲೆಯ ಗಂಟೆಯ ಪರಿಚಯವಿದ್ದ ನನಗೆ  "ಡುಂಟ ಢಾಂಠು ಢಾಣ್  ಢಾಣ್...ಡುಂಟ ಢಾಂಠು ಢಾಣ್  ಢಾಣ್" ಎಂದು ಲಯಬದ್ಧವಾಗಿ ಹೊಡೆಯುವ ಗಂಟೆಯ ಸದ್ದು ಸಹ ಹೊಸದೇ. ಈ ಘಂಟೆಯ ಬಗ್ಗೆ ನನಗೆ ಕುತೂಹಲ... ಇನ್ನೂ ಸರಿಯಾಗಿ ಪರಿಚಯವಾಗದವರನ್ನು ಕೇಳಲು ಮಖೇಡಿತನ. ಒಂದು ದಿನ ಇದ್ದಕ್ಕಿದ್ದಂತೆ ಕಣ್ಣಿಗೆ ಬಿದ್ದದ್ದು ....ಹಿಡಿ ಇರುವ ಗಂಟೆಯನ್ನು ಕೈಯಲ್ಲಿ ಹಿಡಿದು, ಕೈಯನ್ನು ಮೇಲೆ ಕೆಳಗೆ ಆಡಿಸುತ್ತಾ, ಸ್ವಲ್ಪ ಮುಂಗೈಯನ್ನು ತಿರುಗಿಸುತ್ತಾ... ಲಯಬದ್ಧವಾಗಿ... ...

ಅಪಘಾತ- ಸಾವು- ನೋವು

Image
  ಬೀchi ಯವರ ಮಾತುಗಳು.. ಅವರದೇ ಪದಗಳಲ್ಲಿ ಅಲ್ಲವಾದರೂ ಭಾವ ಮಾತ್ರ  ಬರೆಯುತ್ತೇನೆ... ಬೆಳಿಗ್ಗೆ ಪತ್ರಿಕೆ ಓದುವಾಗ ತಲೆಬರಹ ದಲ್ಲಿ ಇದ್ದದ್ದು... ಚೀನಾದಲ್ಲಿ ಭಾರಿ ಭೂಕಂಪ... ಅಪಾರ ಮಂದಿಯ ಸಾವು.. ತ್ಚ್..ತ್ಚ್..ತ್ಚು.... ಎಂದು ಮುಂದಿನ ಸುದ್ದಿಗೆ ಹೋಗುತ್ತೇವೆ.. ಅದೇ ಭೂಕಂಪ ಭಾರತದ ಉತ್ತರದಲ್ಲಿ ಆದರೆ... ನಮ್ಮ ಬಾಯಿಂದ 'ಅಯ್ಯೋ ಪಾಪ.. ಎಷ್ಟು ಕಷ್ಟ ಆಗಿರುತ್ತೋ' ಅನ್ನುವ ಮಾತು ಬರಬಹುದು. ಅದೇ ಒಂದು ಅಪಘಾತ ನಮ್ಮ ರಾಜ್ಯದಲ್ಲಾದರೆ... ನಮ್ಮೂರಿನವರು/ ನಮ್ಮ ಹತ್ತಿರದವರು ಯಾರಾದರೂ ಇದ್ದಾರಾ ಎಂದು ಹುಡುಕುತ್ತೇವೆ, ಅವರಿಗೆ ಫೋನ್ ಮಾಡಿ ಸಮಾಧಾನ ಮಾಡುವ ಪ್ರಯತ್ನ ಮಾಡುತ್ತೇವೆ. ಅಕ್ಕ ಪಕ್ಕದ ಮನೆಯವರಿಗೆ ಈ ತರಹ ಕಷ್ಟ ಬಂದಾಗ ಅವರಲ್ಲಿ ಹೋಗಿ, ಸಮಾಧಾನ ಮಾಡಿ, ಕೈಲಾದ ಸಹಾಯ ಮಾಡುತ್ತೇವೆ... ಈ ಎಲ್ಲ ಹಂತದಲ್ಲಿ ನಮಗಾಗುವ ನೋವು /ದುಃಖ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯೇ. ಅದೇ ಆ ಕೆಟ್ಟ ಘಟನೆ ನಮ್ಮ ಮನೆಯಲ್ಲಿ ನಡೆದರೆ ಆಗುವ ನೋವು,ದುಃಖ, ಅನುಭವಿಸಬೇಕಾದ ಸಂದಿಂಗ್ಧ, ಮತ್ತು  ತುಮುಲ ಹೇಳತೀರದು.   ಈ ಮಾತಿನ ಸತ್ಯ ಅರಿವಾದದ್ದು 25-12-2024 ರ ಸಂಜೆ. ನನ್ನಣ್ಣನ ಮಗ ರವಿ ಕಲ್ಬುರ್ಗಿಯಿಂದ ಫೋನ್ ಮಾಡಿ ತಿಳಿಸಿದ ಸುದ್ದಿ. ....ಒಂದು ಅಪಘಾತದಲ್ಲಿ ಆದ ಅವನ ಹೆಂಡತಿ ವಿನುತಳ ಸಾವು. ಸುದ್ದಿಯನ್ನು ಅರಗಿಸಿಕೊಳ್ಳಲು ಕೆಲ ನಿಮಿಷಗಳೇ ಬೇಕಾಯಿತು. ಮೈಸೂರಿನ ವಿನುತಾ... ದೂರದ ಘಾಣಗಾಪುರದ ದೇವರ ದರ್ಶನ ಮಾಡಿಕ...