Posts

Showing posts from September, 2023

ಬಾಲ್ ಗ್ಲ್ಯಾಡರ್ ನಲ್ಲಿ ಕಲ್ಲು

Image
"ವಿಧಿ ಬರೆದ ಬರಹವ ತಪ್ಪಿಸಲು ಹರಿಹರ ವಿರಿಂಚಾದ್ಯರಿಗೆ ಸಾಧ್ಯವೇ.. ನಮ್ಮ ಪಾಡೇನು" ಇದು ಮಾಧ್ಯಮಿಕ ಶಾಲೆಯಲ್ಲಿ ನಾನು ಓದಿದ ನಳ ಚರಿತ್ರೆಯ ಒಂದೆರಡು ಸಾಲು.... ಹಣೆ ಬರಹಕ್ಕೆ ಹೊಣೆಯಾರು ? ಅನ್ನುವುದು ಒಂದು ಮಾತು.... ಈ ಮಾತುಗಳು ನಾವು ಉಪಯೋಗಿಸುವುದು ನಮ್ಮೆಲ್ಲ ಪ್ರಯತ್ನಗಳು ಮುಗಿದು ನಮಗೆ ಬೇಕಾದ ಗುರಿಯನ್ನು ಮುಟ್ಟಲು ಸಾಧ್ಯವಾಗದಿದ್ದಾಗ ಹೇಳುವ ಮಾತು.  ಅದು ಸಾಂತ್ವನ ಮಾಡುವ / ಮಾಡಿಕೊಳ್ಳುವ ವಿಧಾನದ ಕೊನೆಯ ಮಜಲು ಅಂತ ನನ್ನ ಅನಿಸಿಕೆ..ಹಾಗೂ ಆಪ್ತಸಮಾಲೋಚಕನಾಗಿ ನನ್ನ ಅನುಭವ. ಹಣಕಾಸಿನ ಕಷ್ಟ, ದೈಹಿಕ ಕಷ್ಟ ಇದಕ್ಕೆ ಪರಿಹಾರ ಹುಡುಕುವುದು ಅಷ್ಟು ಕಷ್ಟವಲ್ಲ... ಆದರೆ ಮಾನಸಿಕ ಕಷ್ಟಕ್ಕೆ ಪರಿಹಾರ ಅಷ್ಟು ಸುಲಭವಲ್ಲ... ಇಂಥ ಸಮಯದಲ್ಲಿ ಎಲ್ಲಾ ವೈರುಧ್ಯಗಳೊಡನೆ ಮನಸ್ಸಿನ ಸಮತೋಲನ ಕಾಪಾಡಿಕೊಳ್ಳುವುದು ಒಂದು ಸವಾಲೇ ಸರಿ.. ಒಂದು ದಶಕದ ಹಿಂದಿನ ಮಾತು... ನನಗೂ ಹೀಗೆ ಅನಿಸಿತ್ತು.... ಒಂದು ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದು.. ನೆರೆದಿದ್ದ ಒಂದಷ್ಟು ಜನರ ಜೊತೆ ಹರಟೆ ಹೊಡೆದು ಕೊಟ್ಟ ಸಿಹಿಯನ್ನು ತಿಂದು... ಎಲ್ಲರನ್ನೂ ಕಳಿಸಿಯಾದ ಮೇಲೆ... ಸ್ವಲ್ಪ ಹೊತ್ತಿನಲ್ಲೇ ಏನೋ ಕಿರಿಕಿರಿ, ಹೊಟ್ಟೆಯ ಮೇಲಿನ ಹಾಗೂ ಎದೆ ಕೆಳಗಿನ ಜಾಗದಲ್ಲಿ ಸ್ವಲ್ಪ ನೋವು... ಬರುಬರುತ್ತ ಆ ನೋವು ಜಾಸ್ತಿ ಆಯ್ತು, ಸಾಮಾನ್ಯವಾಗಿ ಇಂಥ ನೋವುಗಳಿಗೆ ನಾನು ಅಷ್ಟು ಪ್ರಾಮುಖ್ಯತೆ ಕೊಡುವುದಿಲ್ಲ.. ಆದರೆ ಆಗಿನ ನೋವು ತಾರಕ ಮುಟ್ಟುತ್ತಿತ್ತು... ತಡೆ...

ಗಣೇಶ ಬಂದ ಕಾಯ್ ಕಡುಬು ತಿಂದ

Image
  ಗಣೇಶ ಬಂದ ಕಾಯ್ ಕಡುಬು ತಿಂದ  ಹೊಟ್ಟೆ ಮೇಲೆ ಗಂಧ,  ಚಿಕ್ಕ ಕೆರೇಲ್ಬಿದ್ದ ದೊಡ್ಡ ಕೆರೇಲಿ ಎದ್ದ... ಇದು ನಾವು ಗಣೇಶನಿಗೆ ಹೇಳುತ್ತಿದ್ದ ಪದ... ಯಾಕೆ ಚಿಕ್ಕ ಕೆರೆಯಲ್ಲಿ ಬಿದ್ದ, ದೊಡ್ಕೆರೇಲೀ ಎದ್ದ.. ಇವತ್ತೂ ಗೊತ್ತಿಲ್ಲ.  ಸಾಮಾನ್ಯವಾಗಿ ಹಬ್ಬ ಅಂದ್ರೆ ಎರಡು ಕಾರಣಕ್ಕೆ ಖುಷಿ ಒಂದು ಶಾಲೆ ಇಲ್ಲ ಮಜಾ, ಎರಡು ಹಬ್ಬದ ಊಟ... ಗಣೇಶನ ಹಬ್ಬ ಅಂದ್ರೆ ಕಡುಬು,ಚಿಗಳಿ, ತಂಬಿಟ್ಟು... ಹಿಂದಿನ ದಿನ ಗೌರಿ ಹಬ್ಬದ ಪ್ರಯುಕ್ತ ಮಾಡಿದ ಒಬ್ಬಟ್ಟು... ಹೀಗೆ ತಿನ್ನುವುದೇ ಒಂದು ಮೋಜು.. ಗಣೇಶನ ಹಬ್ಬದ ಸಂಭ್ರಮ, ಗೌರಿ ಪೂಜೆಯಿಂದ ಶುರು... ಗೌರಿ ಪೂಜೆಗೆ ಮಣ್ಣನ್ನು ಊರ ಕೆರೆಯಿಂದ ಸಂಗ್ರಹಿಸಿ ತರುವ ಒಂದು ಸಂಪ್ರದಾಯ... ಇದು ಓಲಗ ಬಾಜಾ ಭಜಂತ್ರಿ ಯೊಂದಿಗೆ ಊರ ಮುಖ್ಯರಸ್ತೆಯ ಮೂಲಕ ಕೆರೆಗೆ ಹೋಗಿ ಪೂಜೆ ಮಾಡಿ, ಅಲ್ಲಿಂದ ತಂದ ಮಣ್ಣಿನ ಗೌರಿ(? ಇಲ್ಲಿ ನನಗೆ ಸಂಪೂರ್ಣ ಮಾಹಿತಿ ಇಲ್ಲ)ಯನ್ನು ಪೂಜೆ ಮಾಡುವುದು ನಮ್ಮನೆಯಲ್ಲಿ ಚಾಚೂ ತಪ್ಪದೆ ನಡೆಯುತ್ತಿತ್ತು.. ಆ ದಿನಗಳಲ್ಲಿ ಮಳೆ ಸಾಮಾನ್ಯ..  ಕೆರೆಗೆ ಹೋದಾಗೆಲ್ಲ ಮಳೆ ಹನಿಯಲ್ಲಿ ನೆಂದ ನೆನಪಿದೆ.  ಇನ್ನು ಗಣೇಶನ ವಿಗ್ರಹ ಮಾಡಿಕೊಡುವುದು ನಮ್ಮ ಸುಬ್ಬಣ್ಣಯ್ಯ ( ಸಕಲ ಕಲಾವಲ್ಲಭ ಸುಬ್ರಾಯಾಚಾರ್). ಗಣೇಶನ ಹಬ್ಬದ ದಿವಸವೇ ವಿಗ್ರಹಕ್ಕೆ ಬಣ್ಣ ಹಚ್ಚುವ ಕೆಲಸ ಮುಗಿಯುತ್ತಿದ್ದದ್ದು... ಅದರೊಳಗೂ ಗಣೇಶನ ಕಣ್ಣುಬರೆಯಲು ಸುಬ್ಬಣ್ಣಯ್ಯನೇ ಆಗಬೇಕು.  ಸುಬ್ಬಣ್ಣಯ್ಯನ ಮಕ್...

ಪಂಚವಟಿಯಲ್ಲಿ ...ಕೃಷ್ಣ...

Image
  ಹೋದ ಭಾನುವಾರ ವೈಯಕ್ತಿಕ ಕಾರ್ಯನಿಮಿತ್ತ ಮೈಸೂರಿಗೆ ಹೋಗಬೇಕಾಗಿತ್ತು... ಸಾಮಾನ್ಯವಾಗಿ ಮೈಸೂರಿಗೆ ಹೋದಾಗ ಅಣ್ಣನ ಮನೆಯಲ್ಲಿ( ಸತ್ತಿ ಸರ್) ಊಟ ಉಪಚಾರ... ಆದರೆ ಈ ಬಾರಿ ಅತ್ತಿಗೆ ಊರಲ್ಲಿರದ ಕಾರಣ ಹೋಟೆಲ್ ಗೆ ಹೋಗುವುದೆಂದು ಮೊದಲೇ ನಿರ್ಧಾರವಾಗಿತ್ತು. ಹಾಗಾಗಿ ನಾವು ಊಟಕ್ಕೆ ಬಂದಿದ್ದು ಪಂಚವಟಿಗೆ... ವಾತಾವರಣ / ಪರಿಸರ ಚೆನ್ನಾಗಿತ್ತು... ಒಳಗೆ ಹೋದಾಕ್ಷಣ ಕಣ್ಣಿಗೆ ಕಂಡದ್ದು ಸುಂದರವಾದ ಕೃಷ್ಣನ ವಿಗ್ರಹ. ಊಟಕ್ಕೆ ಕೂತಾಗ ಮತ್ತೊಮ್ಮೆ ಅದೇ ವಿಗ್ರಹ ಕಣ್ಣಿಗೆ ಬಿತ್ತು... ಆಗ ಬಂದ ಯೋಚನೆ ಪಂಚವಟಿಗೂ ಕೃಷ್ಣನಿಗೂ ಹೇಗೆ ಸಂಬಂಧ??.... ನನ್ನ ರಾಮಾಯಣ ಮಹಾಭಾರತದ ಜ್ಞಾನಕ್ಕೆ ಹಾಗೂ ನನ್ನ ಬುದ್ಧಿವಂತಿಕೆಗೆ ನಾನೇ ಮೆಚ್ಚಿಕೊಂಡೆ.. ಹೇಳಿಕೊಂಡೆ ಪಂಚವಟಿಯಲ್ಲಿ ಕೃಷ್ಣ ಹೇಗೆ.... ಅದು ರಾಮಾಯಣದ ರಾಮ ಸೀತೆ ಲಕ್ಷ್ಮಣ ಇದ್ದ ಜಾಗ.... ಕಬ್ಬಿಣದ ಅಂಗಡಿಯಲ್ಲಿ ನೊಣಕ್ಕೇನು ಕೆಲಸ... ತಕ್ಷಣ ಇನ್ನೊಂದು ಮನಸ್ಸು ಹೇಳಿತು.. ಅಯ್ಯಾ.. ರಂಗನಾಥ ಪಂಚವಟಿ ಹೋಟೆಲ್ ನ ಹೆಸರು... ಕೃಷ್ಣ.... ದೇವರ ವಿಗ್ರಹ.. ಬಹುಶಃ ಹೋಟೆಲ್ ಯಜಮಾನರ ಆರಾಧ್ಯ ದೈವ ಇರಬಹುದಲ್ಲವೇ..???. ಯೋಚಿಸಬೇಕಾದ್ದೆ...  ಸಾಮಾನ್ಯವಾಗಿ ಅಚ್ಚ ಸಸ್ಯಾಹಾರಿ ಹೋಟೆಲ್ ನಡೆಸುವ ಕಲೆ ಉಡುಪಿ ಮಂಗಳೂರು ಕಡೆಯವರಿಗೆ ಕರಗತವಾಗಿದೆ... ಸಹಜವಾಗಿ ಉಡುಪಿ  ಕೃಷ್ಣ.. ಪೊಡವಿಗೊಡೆಯ... ಅವರಿಗೆ ಅಚ್ಚುಮೆಚ್ಚು... ಅದಲ್ಲದೆ ಹೆಸರು ಅವರ ಇಷ್ಟಕ್ಕೆ ಸಂಬಂಧಪಟ್ಟವಿಷಯ..ಅವರ ಆಯ್ಕೆ... ಅದ...

ಚಿಕ್ಕಂದಿನಲ್ಲಿ ಕಂಡ ಪಾತ್ರಗಳು, ವ್ಯಕ್ತಿಗಳು

Image
  ಚಿಕ್ಕಂದಿನಲ್ಲಿ ಕಂಡ ಪಾತ್ರಗಳು, ವ್ಯಕ್ತಿಗಳು ಹರಿ ಭಜನೆಯಾನಂದ ಕಿರು ಶಿಶುವಿನಾನಂದ... ಹೀಗೊಂದು ಪದ್ಯದ ಸಾಲು... ನಿಜಕ್ಕೂ ಚಿಕ್ಕ ಮಕ್ಕಳ ಒಡನಾಟ ದೇವರ ಭಜನೆಯಷ್ಟೇ ಆನಂದ ಕೊಡುವುದು.. ಈಗಂತೂ ನನ್ನ ಮೊಮ್ಮಗಳ ಒಡನಾಟದಿಂದ ನನ್ನ ಜೀವನ ಶೈಲಿಯೇ ಸಾಕಷ್ಟು ಬದಲಾವಣೆಯಾಗಿದೆ... ಅದರಲ್ಲೂ ಅವಳು ನಮ್ಮ ಮನೆಯಲ್ಲಿ ಬಂದಿದ್ದಾಗ, ನನ್ನ ದಿನಚರಿಯೆಲ್ಲ ಅವಳ ಸುತ್ತ ಸುತ್ತುತ್ತಿರುತ್ತದೆ.  ಅವಳ ಜೊತೆ ಕಣ್ಣ ಮುಚ್ಚಾಲೆ, ಗಿಡಗಳಿಗೆ ನೀರು ಹಾಕುವುದು, ಇಸ್ಪೀಟ್, ಮೊಬೈಲ್ ಗೇಮ್ಸ್, ಜೊತೆಯಲ್ಲಿ ಊಟ, ಮಧ್ಯಾಹ್ನದ ನಿದ್ದೆ, ಬೆಳಿಗ್ಗೆ ಸ್ಕೂಲ್ ವ್ಯಾನಿಗೆ ಬಿಡುವುದು... ಇದೆಲ್ಲಾ ಅವಳು ನನ್ನನ್ನು ಪುಸಲಾಯಿಸಿ, ಮಾಡಿಸುವ ಕೆಲಸಗಳು.  ಅವಳ ಆ ಪ್ರೀತಿಯ ಕರೆಗೆ ಇಲ್ಲ ಅನ್ನಲು ಮನಸ್ಸೇ ಬರುವುದಿಲ್ಲ... ಕೆಲ ಸಲ  ನನ್ನ ಮೈ ಹಾಗೂ ಮನಸ್ಸು  ಸಹಕರಿಸದಿದ್ದರೂ... ನಿದ್ದೆ ಮಾಡುತ್ತಿದ್ದಾಗ ಬಂದು ಮೆತ್ತಗೆ ಕಾಲ್ಕೆರೆಯುವುದು, ಕಿವಿಯಲ್ಲಿ ಏನಾದರೂ ಪಿಸುಗುಟ್ಟುವುದು ಹೀಗೆ ಕೆಲ ಚೇಷ್ಟೆಗಳು .  Click here ಈಚೆಗೆ ಅವಳು ಹಾಕಿದ ಕಿತ್ತೂರು ಚೆನ್ನಮ್ಮನ ವೇಷ ಹಾಗೂ ಅವಳಾಡಿದ ಮಾತುಗಳು...  ಆ ತಯಾರಿಯಲ್ಲಿ ಅವಳು ಪಟ್ಟ ಸಂಭ್ರಮ, ನನ್ನನ್ನು ಎಲ್ಲದಕ್ಕೂ ಒಳಗೊಳ್ಳುವಂತೆ ಮಾಡಿದ್ದು, ನನ್ನ ಚಿಕ್ಕಂದಿನ ದಿನಗಳಲ್ಲಿ ನಾನು ಸಡಗರಿಸಿದ, ಸಂಭ್ರಮಿಸಿದ ಕ್ಷಣಗಳನ್ನು ನೆನಪು ಮಾಡಿಸಿತು... ನನ್ನ  ಹಳ್ಳಿಯ ದಿನಗಳ ಜೀವನದಲ್ಲ...